Get Updates
Get notified of breaking news, exclusive insights, and must-see stories!

ನೆಮ್ಮದಿಯ ಬದುಕಿಗೆ ಏನೇನು ಬೇಕು..? ಮಾನಸಿಕ ಅನಾರೋಗ್ಯ ಉಂಟಾಗುವುದು ಹೇಗೆ..?

ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಾವೆಷ್ಟು ಕಾಳಜಿಯನ್ನು ವಹಿಸುತ್ತೇವೆಯೋ ಅಷ್ಟೇ ಕಾಳಜಿಯನ್ನು ಅಂತರ್ದೇಹದ (ಮನಸ್ಸಿನ) ಕಡೆಗೆ ನೀಡಬೇಕು. ಏಕೆಂದರೆ ಕಲುಷಿತ ಮನಸ್ಸು ನಮ್ಮದಾದರೆ ಅದರ ಪರಿಣಾಮ ಶರೀರದ ಮೇಲೆ ನೇರವಾಗಿ ಬೀರುತ್ತದೆ. ಆರೋಗ್ಯಕರ ಮನಸ್ಸನ್ನು ಹೊಂದದೆ ಹೋದರೆ ಸದಾ ವ್ಯಸನಿಯಾಗಿಯೋ ಅಥವಾ ಮಾನಸಿಕ ರೋಗಿಯಾಗಿಯೋ ಬಳಲಬೇಕಾದ ಅಪಾಯವಂತು ಇದ್ದೇ ಇದೆ.

ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಅಸೂಯೆ, ಅಹಂಕಾರದಂತಹ ರಜೋ ಗುಣಗಳು ತುಂಬಿದ್ದೇ ಆದರೆ ನಾವು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಕಾರಣ ಒಳಗೆ ಕಲ್ಮಶವನ್ನು ತುಂಬಿಕೊಂಡು ಹೊರಗಿನ ಶರೀರವನ್ನು ಎಷ್ಟೇ ಶುಭ್ರಗೊಳಿಸಿದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಮಾಡಿದ ತಪ್ಪು ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದು ಛೇ! ಎಂಥ ತಪ್ಪು ಮಾಡಿಬಿಟ್ಟೆ? ನನ್ನಿಂದ ಎಂತಹ ಅನ್ಯಾಯವಾಯಿತು ಎಂಬ ಕೊರಗು ನಮ್ಮನ್ನು ಕಾಡತೊಡಗುತ್ತದೆ.

What Do You Need For A Peaceful Life Is Beautiful Life

ಒಂದು ವೇಳೆ ಇಂತಹ ಗುಣಗಳು ನಮ್ಮಲ್ಲಿ ಕಂಡು ಬಂದರೆ ಮುಂದೆ ಅಂಥ ತಪ್ಪುಗಳಿಗೆ ನಾವು ಅವಕಾಶ ಕೊಡದೆ ತಿದ್ದಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ನಮ್ಮಲ್ಲಿ ಒಳ್ಳೆತನ ಬೆಳೆಯಲು ಸಹಕಾರಿಯಾಗುತ್ತದೆ. ನಮ್ಮ ತಪ್ಪುಗಳು ನಮಗೆ ಅರಿವಾದರೆ ಖಂಡಿತಾ ನಾವು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ತಪ್ಪುಗಳನ್ನು ಸತ್ಯ ಮಾಡುವ ಅಥವಾ ನಾವು ಮಾಡಿದ್ದೇ ಸರಿ ಎಂಬ ಮನೋಭಾವ ನಮ್ಮಿಂದ ದೂರವಾಗಿ ಬದುಕು ಸುಂದರವಾಗುತ್ತದೆ.

ಕ್ಷಮೆ ಕೇಳುವ ಮನೋಗುಣ ಬೆಳೆಸಿಕೊಳ್ಳಿ

ನಮ್ಮಲ್ಲಿ ಎಷ್ಟೇ ಸಂಪತ್ತು, ಅಧಿಕಾರವಿದ್ದರೂ ಮಾನವೀಯ ಗುಣವಿಲ್ಲದಿದ್ದರೆ ಬದುಕೇ ನಗಣ್ಯ. ಆದ್ದರಿಂದ ಮಾನವೀಯ, ಗುಣ, ಸಂಬಂಧಗಳ ಬಗ್ಗೆಯೂ ಗಮನಹರಿಸಬೇಕು. ಮೂರು ದಿನಗಳ ಬದುಕಿನಲ್ಲಿ ಕೇವಲ ನಮಗಾಗಿ ಬದುಕದೆ, ಇನ್ನೊಬ್ಬರ ಬದುಕಿಗಾಗಿ ಒಂದಷ್ಟು ಸಮಯಗಳನ್ನು ಮೀಸಲಿಡುವ, ಕಷ್ಟಸುಖಗಳಲ್ಲಿ ಭಾಗಿಯಾಗುವ ಅಷ್ಟೇ ಅಲ್ಲದೆ ನಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳುವ ಮನೋಗುಣವನ್ನು ಬೆಳೆಸಿಕೊಳ್ಳಬೇಕು.

ಒಂದು ವೇಳೆ ನಮ್ಮ ತಪ್ಪು ಅರಿವಿಗೆ ಬಂದರೂ ನಾನೇಕೆ ಅವನೊಂದಿಗೆ ಕ್ಷಮೆ ಕೇಳಬೇಕು? ನನ್ನ ಅಂತಸ್ತಿಗೆ ಇದು ಹೊಂದುವಂತದ್ದಲ್ಲ ಎಂಬ ಮನೋಭಾವದಿಂದ ತಪ್ಪನ್ನು ಸಮರ್ಥಿಸಿಕೊಂಡು ಮುನ್ನಡೆದರೆ ನಮಗರಿವಿಲ್ಲದೆಯೇ ಮತ್ತಷ್ಟು ತಪ್ಪನ್ನು ನಾವು ಮಾಡಬೇಕಾಗುತ್ತದೆ. ಇದು ಅರಿವಾಗುವಾಗ ಕಾಲ ಮಿಂಚಿ ಹೋಗಿರುತ್ತದೆ ಅಲ್ಲದೆ ಅದಕ್ಕೆ ತಕ್ಕ ಕಂದಾಯವನ್ನು ಕಟ್ಟಬೇಕಾಗುತ್ತದೆ. ತಪ್ಪುಗಳನ್ನೆಲ್ಲ ಸಮರ್ಥಿಸಿಕೊಳ್ಳುವವರು ಅದಕ್ಕೆ ಬೆಲೆ ತೆರಬೇಕಾಗುತ್ತದೆ.

What Do You Need For A Peaceful Life Is Beautiful Life

ಶ್ರೀಮಾತೆ ಶಾರದಾದೇವಿಯವರು ಹೇಳಿದ್ದೇನು?

ಆಧ್ಯಾತ್ಮಿಕತೆಯ ಮೂಲಕ ಮನಸ್ಸನ್ನು ಶುಭ್ರಗೊಳಿಸುವ, ಮನಸ್ಸನ್ನು ಒಳ್ಳೆಯ ಉದ್ದೇಶಗಳಿಗೆ ಬಳಸುವ ಸಂದರ್ಭ ಮನಸ್ಸಿನಲ್ಲಿ ದುರ್ಭಾವನೆಗಳನ್ನು ಕುಂದುಕೊರತೆಗಳನ್ನು ಅಥವಾ ತಪ್ಪು ಆವೇಗಗಳನ್ನು ಸಂಚಯಿಸಿಕೊಳ್ಳಬಾರದು. ಶ್ರೀಮಾತೆ ಶಾರದಾದೇವಿಯವರು ಹೇಳಿರುವ 'ಕ್ಷಮಾಗುಣವೇ ತಪಸ್ಸು' ಎಂಬುದನ್ನು ಮರೆಯಬಾರದು.

ಕಲುಷಿತವಾದ ಅಥವಾ ಅನಾರೋಗ್ಯಕರವಾದ ಮನಸ್ಸನ್ನು ನಿಯಂತ್ರಿಸುವುದು ಕಷ್ಟ. ಹಾಗಾಗಿ ಆರೋಗ್ಯಕರ ಮನಸ್ಸನ್ನು ಬೆಳೆಸಿಕೊಳ್ಳುವತ್ತ ಕಾರ್ಯಮಗ್ನರಾಗಬೇಕು. ಆರೋಗ್ಯಕರ ಮನಸ್ಸನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿಯೂ ಸಹಕಾರಿಯಾಗುತ್ತದೆ. ಆರೋಗ್ಯಕರ ಮನಸ್ಸಿದ್ದರೆ ಮಾತ್ರ ನಮ್ಮಲ್ಲಿ ಕ್ಷಮಾ ಗುಣ ಬೆಳೆಯಲು ಸಾಧ್ಯ. ಇಂತಹ ಕ್ಷಮಾ ಗುಣಗಳು ನಮ್ಮ ಮನಸ್ಸನ್ನು ಸದಾ ಶುಭ್ರವಾಗಿಟ್ಟಿರುತ್ತದೆ.

ನಿಜ ಹೇಳಬೇಕೆಂದರೆ ಮನಸ್ಸು ಎನ್ನುವುದು ಹುಚ್ಚು ಕುದುರೆಯಂತೆ. ಅದನ್ನು ಶುಭ್ರವಾಗಿಟ್ಟು ಕೊಳ್ಳುವುದು ಸುಲಭದ ಕೆಲಸವಲ್ಲ. ಹೀಗಾಗಿ ಅದನ್ನು ಪರಿಶುದ್ಧವಾಗಿಟ್ಟು ಕೊಳ್ಳುವತ್ತ ಗಮನಹರಿಸಬೇಕು. ಮನಸ್ಸು ಪರಿಶುದ್ಧವಾಗಿರ ಬೇಕಾದರೆ ನಾವು ಕೆಲವೊಂದು ಒಳ್ಳೆಯ ಅಭ್ಯಾಸಗಳನ್ನು ನಾವು ಕೈಗೊಳ್ಳಬೇಕು. ಜತೆಗೆ ಕೆಲವು ಶಿಸ್ತುಗಳ ಪರಿಣಾಮಕಾರಿಯಾದ ಅನುಸರಣೆಯನ್ನು ಮಾಡಬೇಕಾಗುತ್ತದೆ. ಮನಸ್ಸನ್ನು ಆರೋಗ್ಯಕರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅದು ಹಾದಿ ತಪ್ಪದಂತೆ ನೋಡಿಕೊಳ್ಳುವುದರಿಂದ ಮತ್ತು ನಿರಂತರ ಧ್ಯಾನದಿಂದ ಮನಸ್ಸನ್ನು ಶುದ್ಧೀಕರಣಗೊಳಿಸುತ್ತದೆ.

What Do You Need For A Peaceful Life Is Beautiful Life

ಆದಷ್ಟು ದೇವರ ನಾಮ ಜಪ ಮಾಡುವುದು, ದೇಗುಲಗಳಿಗೆ ತೆರಳುವುದು ಹೀಗೆ ಭಗವಂತನಲ್ಲಿ ಶರಣು ಹೋಗುವುದರೊಂದಿಗೆ ಮನಸ್ಸಿನೊಳಗಿರುವ ಆಲೋಚನೆಗಳನ್ನು ಕ್ರಮಬದ್ಧವಾಗಿ ನಿಯಂತ್ರಣಕ್ಕೆ ತಂದುಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ಮನಸ್ಸು ಶುದ್ಧವಾಗಿಟ್ಟುಕೊಂಡಿದ್ದೇ ಆದರೆ ಕೆಟ್ಟದರ ಬಗೆಗಿನ ಆಲೋಚನೆಗಳು ದೂರವಾಗುತ್ತವೆ. ಇಂತಹ ಸಂದರ್ಭಗಳಲ್ಲಿ ನಮ್ಮನ್ನು ತಪ್ಪುದಾರಿಗೆ ಎಳೆಯುವ ದುಷ್ಪವೃತ್ತಿಗಳು ಹತ್ತಿರ ಸುಳಿಯುವುದಿಲ್ಲ. ನಾವೇನು ಮಾಡುತ್ತೇವೆಯೋ ಅದೆಲ್ಲವೂ ಒಳ್ಳೆಯ ಮತ್ತು ನ್ಯಾಯ ಮಾರ್ಗದ್ದಾದರೆ ಬದುಕು ಕೂಡ ನೆಮ್ಮದಿಯಾಗಿ, ಖುಷಿಯಾಗಿ ಸಾಗುವುದರಲ್ಲಿ ಎರಡು ಮಾತಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+