ಪ್ರವಾಸ ಮಾಡುವಾಗ ವಾಂತಿ, ವಾಕರಿಕೆ ತಪ್ಪಿಸಲು ಸಿಂಪಲ್ ಟಿಪ್ಸ್!
ಪ್ರವಾಸ ಮಾಡಬೇಕು ಅಂತ ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ. ಆದರೆ ಪ್ರಯಾಣ ಮಾಡುವ ಸಮಯದಲ್ಲೇ ಕೆಲವರಿಗೆ ವಾಂತಿ ಬರುವುದು, ವಾಕರಿಕೆ ಹಾಗೂ ತಲೆಸುತ್ತಿದ ಅನುಭವ ಆಗುತ್ತಿರುತ್ತದೆ. ಬಸ್ ಹಾಗೂ ಕಾರುಗಳಲ್ಲಿ ಪ್ರವಾಸ ಮಾಡುವಾಗ ಹಲವರು ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದು ಇದೆ. ಈ ರೀತಿಯ ಸಮಸ್ಯೆ ಪ್ರವಾಸದ ಸುಂದರ ಅನುಭವವನ್ನೇ ಕಿತ್ತುಕೊಳ್ಳುತ್ತದೆ. ಈ ರೀತಿ ಆರೋಗ್ಯ ಸಮಸ್ಯೆ ಇರುವವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವವರಿಗೂ ಇದು ತುಸು ಕಷ್ಟದ ಕೆಲಸವೇ. ಕೆಲವು ಸರಳ ಮನೆ ಮದ್ದುಗಳನ್ನು ಬಳಸುವುದರ ಮೂಲಕ ನೀವು ಈ ಕಿರಿಕಿರಿಗಳನ್ನು ತಪ್ಪಿಸುವುದಕ್ಕೆ ಅವಕಾಶ ಇದೆ. ಅದೇನು ಎನ್ನುವ ವಿವರ ನೋಡೋಣ..
ಪ್ರವಾಸ ಮಾಡುವಾಗ ಇಲ್ಲವೇ ವಾಹನದಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಸಂದರ್ಭಗಳಲ್ಲಿ ಕೆಲವರಿಗೆ ವಾಂತಿ ಬರುವುದು, ತಲೆ ಸುತ್ತುವುದು ಹಾಗೂ ವಾಕರಿಕೆಯ ಅನುಭವ ಆಗುತ್ತದೆ. ಈ ರೀತಿ ಪದೇ ಪದೇ ಆಗುವುದರಿಂದ ನಿಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ನಿರ್ಜಲೀಕರಣ (ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವುದು) ಆಗುತ್ತದೆ. ಪ್ರವಾಸ ಮಾಡಿ ಒಳ್ಳೆ ಎಂಜಾಯ್ ಮಾಡಬೇಕು ಎನ್ನುವ ಮೂಡ್ನಲ್ಲಿ ಇರುವವರಿಗೆ ಇದು ಮತ್ತೊಂದು ತಲೆನೋವು ತರುತ್ತದೆ. ಹಾಗಂತ ಇದಕ್ಕೆ ತುಂಬಾ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನೀವು ಸಿಂಪಲ್ ಮನೆ ಮದ್ದು ಬಳಸುವ ಮೂಲಕ ಇದಕ್ಕೆಲ್ಲ ಬ್ರೇಕ್ ಹಾಕುವುದಕ್ಕೆ ಸಾಧ್ಯವಿದೆ.

ಪ್ರವಾಸ ಮಾಡುವಾಗ ಮಕ್ಕಳಲ್ಲಿ, ಗರ್ಭಿಣಿಯರಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆ ಸಾಮಾನ್ಯವಾಗಿ ಕಾಣಿಸುತ್ತೆ. ಇನ್ನು ಕೆಲವರಿಗೆ ಸಣ್ಣ ವಯಸ್ಸಿನಲ್ಲಿ ಮಾತ್ರ ಇದ್ದರೆ ಇನ್ನೂ ಕೆಲವರಿಗೆ ದೊಡ್ಡವರಾದ ಮೇಲೂ ಈ ಸಮಸ್ಯೆ ಇರುತ್ತದೆ. ಕಾರ್, ಬಸ್ಗಳಲ್ಲೇ ಕೆಲವರು ವಾಂತಿ ಮಾಡಿಕೊಳ್ಳುವುದು ಇದೆ. ಇದು ಉಳಿದ ಪ್ರಯಾಣಿಕರಿಗೂ, ವಾಂತಿ ಮಾಡಿಕೊಂಡವರಿಗೂ ಇರಿಸು ಮುರಿಸು ಆಗುವುದು ಇದೆ. ಈ ವಸ್ತುಗಳನ್ನು ಬಳಸಿದರೆ ನೀವು ಸುಖಕರ ಪ್ರವಾಸದ ಅನುಭವವನ್ನು ಪಡೆಯಬಹುದು.
ನಿಂಬೆ ಹಣ್ಣು: ನಿಂಬೆ ಹಣ್ಣು ಪ್ರವಾಸದ ಸಮಯದಲ್ಲಿ ಈ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸುವುದಕ್ಕೆ ಸಹಕಾರಿಯಾಗಿದೆ. ಇದರಲ್ಲಿನ ವಿಟಮಿನ್ ಸಿ ಅಂಶವು ಪ್ರವಾಸ ಮಾಡುವಾಗ ವಾಕರಿಕೆ ಹಾಗೂ ವಾಂತಿ ಆಗುವುದನ್ನು ತಪ್ಪಿಸುತ್ತದೆ. ವಾಕರಿಕೆ ತಪ್ಪಿಸುವುದಕ್ಕೆ ನೀವು ಪ್ರವಾಸ ಮಾಡುವ ಅರ್ಧಗಂಟೆಯ ಮುಂಚೆ ನಿಂಬೆ ಹಣ್ಣಿನ ಜ್ಯೂಸ್ ಅಥವಾ ನೀರಿನೊಂದಿಗೆ ಬೆರೆಸಿದ ನಿಂಬೆರಸವನ್ನು ಕುಡಿಯಿರಿ.
ಲವಂಗ: ಲವಂಗ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರವಾಸ ಮಾಡುವಾಗ ವಾಂತಿ ಅಥವಾ ವಾಕರಿಕೆ ಬರುವಂತೆ ಅನಿಸಿದರೆ ನೀವು ಹಸಿ ಲವಂಗವನ್ನು ಜಿಗಿಯಬಹುದು. ಲವಂಗ ಸೇವನೆಯಿಂದ ಪ್ರಯಾಣದ ಸಮಯದಲ್ಲಿ ಈ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ.
ಪುದೀನ ಹಾಗೂ ಜೀರಿಗೆ: ತಾಜಾ ಪುದೀನ ಎಲೆ ಹಾಗೂ ಜೀರಿಗೆ ಸಹ ಈ ಸಮಸ್ಯೆಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಜೀರಿಗೆಯ ಪುಡಿಯನ್ನು ನೀರಿನೊಂದಿಗೆ ಸೇರಿಸಿ, ಕುದಿಸಿ ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಕಾರಿ ಮಾತ್ರವಲ್ಲ ಪ್ರವಾಸ ಮಾಡುವಾಗ ಆಗುವ ಆರೋಗ್ಯ ಸಮಸ್ಯೆ ತಪ್ಪಿಸುವುದಕ್ಕೂ ಸಹಕಾರಿಯಾಗಿದೆ.
-
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ












Click it and Unblock the Notifications