ಮನೆಯಲ್ಲೇ ಗಟ್ಟಿ ಮೊಸರು ತಯಾರಿಸುವುದು ಹೇಗೆ..? ಇಲ್ಲಿದೆ ಸಿಂಪಲ್ ಟಿಪ್ಸ್
ಹಾಲಿನ ಖಾದ್ಯವಾಗಿರುವ ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರು ಇಷ್ಟಪಟ್ಟು ಮೊಸರು ತಿನ್ನುತ್ತಾರೆ. ಅನ್ನ ಮೊಸರು, ಉಪ್ಪಿಟ್ಟು ಮೊಸರು ಸೇರಿದಂತೆ ಪ್ರತಿಯೊಂದಕ್ಕೂ ಕೆಲವರು ಮೊಸರನ್ನು ಬೆರೆಸಿ ತಿನ್ನುತ್ತಾರೆ.
ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ರೈಬೋಫ್ಲಾವಿನ್, ವಿಟಮಿನ್ ಬಿ ಮುಂತಾದ ಪೋಷಕಾಂಶಗಳಿದ್ದು, ಮೂಳೆಗಳನ್ನು ಬಲಪಡಿಸಲು ಪ್ರಯೋಜನಕಾರಿ. ಮೊಸರು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಕರುಳಿನ ಕಾಯಿಲೆಗಳು ಹಾಗೂ ದೌರ್ಬಲ್ಯದಿಂದ ಬಳಲುತ್ತಿರುವವರಿಗೆ ಮೊಸರು ಉತ್ತಮ ಆಹಾರ.

ತಜ್ಞರ ಪ್ರಕಾರ ಮೊಸರು ಸೇವನೆಯಿಂದ ಅಧಿಕ ರಕ್ತದೊತ್ತಡ, ಹೃದ್ರೋಗಗಳು ಮತ್ತು ಮೂತ್ರಪಿಂಡದ ಕಾಯಿಲೆಗಳನ್ನು ತಡೆಯಬಹುದು. ಇಂತಹ ಮೊಸರನ್ನು ಹಲವರು ಮನೆಯಲ್ಲೇ ತಯಾರಿಸುತ್ತಾರೆ. ಆದರೆ ಗಟ್ಟಿ ಮೊಸರು ತಯಾರಿಸುವುದು ಹೇಗೆ ಎನ್ನುವುದು ಕೆಲವರಿಗೆ ತಿಳಿದಿರುವುದಿಲ್ಲ. ಹೀಗಾಗಿ ಮನೆಯಲ್ಲೇ ಗಟ್ಟಿ ಮೊಸರು ತಯಾರಿಸುವ ಸುಲಭ ವಿಧಾನ ಇಲ್ಲಿದೆ.
ಮನೆಯಲ್ಲೇ ಗಟ್ಟಿ ಮೊಸರು ತಯಾರಿಸುವುದು ಹೇಗೆ..?
ಮನೆಯಲ್ಲಿ ಮೊಸರು ಮಾಡಲು ಮೊದಲು ಹಾಲನ್ನು ನೀರನ್ನು ಸೇರಿಸದೆ ಕುದಿಸಿ. ಹಾಲು ನೀರಿದೆ ಎಂದು ನೀವು ಭಾವಿಸಿದರೆ ಅದನ್ನು ಹೆಚ್ಚು ನಿಮಿಷಗಳ ಕಾಲ ಕುದಿಸಿ. ಮೊಸರು ಮಾಡುವ ಮೊದಲು ಯಾವಾಗಲೂ ಹಾಲನ್ನು ಕುದಿಸಿ ಏಕೆಂದರೆ ಗಟ್ಟಿ ಮೊಸರು ತೆಗೆಯಲು ಸಹಾಯವಾಗುತ್ತದೆ.

ಹಾಲು ಕುದಿಸಿದ ಬಳಿಕ ಹಾಲು ಬೆಚ್ಚಗಾಗುವವರೆಗೆ ಕಾಯಿರಿ. ಹಾಲು ಬಿಸಿಯಾಗಿರಬಾರದು ಹಾಗಂತ ತಣ್ಣಗಾಗಬಾರದು. ಹೀಗಾಗಿ ಎಚ್ಚರಿಕೆವಹಿಸಿ. ಈಗ ಬೆಚ್ಚಗಾಗಿರುವ ಹಾಲು ಗಟ್ಟಿ ಮೊಸರಾಗಬೇಕಾದರೆ ಹಾಲಿಗೆ ಸೇರಿಸುವ ಮೊಸರಿನ ಹೆಪ್ಪಿನ ಪ್ರಮಾಣವು ಹವಾಮಾನ ಪರಿಸ್ಥಿತಿ ಮತ್ತು ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ಬದಲಾಗುತ್ತದೆ.
ನೀವು ತಂಪಾದ ಸ್ಥಳದಲ್ಲಿ ವಾಸಿಸುತ್ತಿದ್ದರೆ ಅಥವಾ ನೀವು ಸಂಸ್ಕರಿಸಿದ ಹಾಲನ್ನು ಬಳಸುತ್ತಿದ್ದರೆ 2 ಚಮಚ ಮೊಸರಿನ ಹೆಪ್ಪನ್ನು ಸೇರಿಸಿ ಇಲ್ಲದಿದ್ದರೆ 1 2 ಚಮಚ ಮೊಸರಿನ ಹೆಪ್ಪನ್ನು ಹಾಲಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಹಾಲು ಹಾಗೂ ಮೊಸರಿನ ಹೆಪ್ಪು ಹಾಕಿರುವ ಪಾತ್ರೆಯನ್ನು ಚೆನ್ನಾಗಿ ಮುಚ್ಚಿ 6-7 ಗಂಟೆಗಳ ಕಾಲ ಬಿಡಿ. ಈ ಸಮಯದಲ್ಲಿ ನೀವು ಪಾತ್ರೆಯನ್ನು ಮುಟ್ಟಬೇಡಿ ಅಲುಗಾಡಿಸಬೇಡಿ. ಅಲ್ಲದೇ ಮತ್ತೆ ಪಾತ್ರೆಯ ಮುಚ್ಚಳ ತೆಗೆದು ಮಿಶ್ರಣ ಮಾಡಬೇಡಿ. ಒಂದು ವೇಳೆ ನೀವು ಹಾಲಿಗೆ ಹೆಚ್ಚು ಮೊಸರಿನ ಹೆಪ್ಪನ್ನು ಹಾಕಿದ್ದರೆ ಸ್ವಲ್ಪ ಹೆಚ್ಚಿನ ಸಮಯ ನೀಡಿ. ಇಲ್ಲವಾದರೆ 6-7 ಗಂಟೆಗಳ ಬಿಟ್ಟು ಪಾತ್ರೆಯನ್ನು ತೆಗೆದರೆ ಮನೆಯಲ್ಲೇ ತಯಾರಿಸಿದ ಗಟ್ಟಿ ಹಾಗೂ ದಪ್ಪವಾದ ಮೊಸರು ಸಿಗುತ್ತದೆ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications