Holi Vastu Tips: ಹೋಳಿಯಂದು ಈ ವಸ್ತು ಖರೀದಿಸಿ.. ಜೇಬು ಖಾಲಿಯಾಗುವುದೇ ಇಲ್ಲ....
ಪ್ರತಿಯೊಬ್ಬರು ಹೋಳಿ ಆಚರಿಸುವ ರೀತಿ ವಿಭಿನ್ನವಾಗಿರುತ್ತದೆ. ಕೆಲವರು ಈ ದಿನ ಬಹಳಷ್ಟು ಸಿಹಿತಿಂಡಿಗಳು ಮತ್ತು ಭಕ್ಷ್ಯಗಳನ್ನು ಸೇವಿಸುವ ಮೂಲಕ ಸಂತೋಷಪಡುತ್ತಾರೆ. ಇತರರು ಹೋಳಿಯಂದು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಇದು ಕೆಲವೆಡೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ನೀವು ಹೋಳಿಯನ್ನು ಹೇಗೆ ಆಚರಿಸಿದರೂ ವಾಸ್ತು ಪ್ರಕಾರ ಹೋಳಿಯಂದು ಕೆಲವು ವಸ್ತುಗಳನ್ನು ಖರೀದಿಸಲು ಮರೆಯಬೇಡಿ.
ಹೌದು.. ಹೋಳಿಯಂದು ಕೆಲ ವಸ್ತುಗಳನ್ನು ಖರೀದಿಸಿ ಮನೆಗೆ ತರುವುದು ವಾಸ್ತು ಪ್ರಕಾರ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳ ಬಗ್ಗೆ ವಾಸ್ತುಶಾಸ್ತ್ರದಲ್ಲಿ ನೀಡಲಾಗಿದೆ. ಹೋಳಿ ದಿನದಂದು ಈ ವಸ್ತುಗಳನ್ನು ಖರೀದಿಸಿದರೆ, ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ. ಜೊತೆಗೆ ಆರ್ಥಿಕ ಸಮೃದ್ಧಿಯಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವವು ಎಂದು ಈಗ ತಿಳಿಯೋಣ.

ಬಿದಿರು ಗಿಡ
ಬಿದಿರಿನ ಗಿಡವನ್ನು ಅದೃಷ್ಟದ ಸಸ್ಯವೆಂದು ಪರಿಗಣಿಸಲಾಗುತ್ತದೆ. ಹೋಳಿ ದಿನದಂದು ನೀವು ಬಿದಿರಿನ ಗಿಡವನ್ನು ಖರೀದಿಸಿದರೆ ಲಕ್ಷ್ಮಿ ದೇವಿಯು ತುಂಬಾ ಸಂತೋಷಪಡುತ್ತಾಳೆ. ವಾಸ್ತು ಪ್ರಕಾರ ಮನೆಯಲ್ಲಿ ಬಿದಿರಿನ ಗಿಡ ನೆಟ್ಟರೆ ಮನೆಯಲ್ಲಿ ಧನಾತ್ಮಕತೆ ಹೆಚ್ಚಾತ್ತದೆ. ಹೋಳಿಯಂದು ಬಿದಿರಿನ ಗಿಡ ತಂದು ಅದನ್ನು ಪೂಜಿಸುತ್ತಾರೆ.
ಬೆಳ್ಳಿ ನಾಣ್ಯ
ಹೋಳಿ ಹಬ್ಬದಂದು ಬೆಳ್ಳಿಯನ್ನು ಕೊಳ್ಳುವುದು ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಹೋಳಿ ದಿನದಂದು ಬೆಳ್ಳಿಯ ನಾಣ್ಯವನ್ನು ಖರೀದಿಸಿ ಹೋಳಿ ಪೂಜೆಯಲ್ಲಿ ಇಡಬೇಕು. ಲಕ್ಷ್ಮಿ ದೇವಿಯ ಮುಂದೆ ಬೆಳ್ಳಿಯ ನಾಣ್ಯವನ್ನು ಇರಿಸಿ, ಅದರ ಮೇಲೆ ಕುಂಕುಮ ಹಚ್ಚಿ ಮತ್ತು ಅದನ್ನು ನಿಮ್ಮ ಪರ್ಸ್ನಲ್ಲಿ ಇರಿಸಿ. ಇದನ್ನು ಮಾಡುವುದರಿಂದ ಆರ್ಥಿಕ ಸ್ಥಿತಿಯು ಬಹಳ ಸಮೃದ್ಧವಾಗುತ್ತದೆ.

ಕುಂಕುಮ
ಲಕ್ಷ್ಮಿ ದೇವಿಗೆ ಕುಂಕುಮ ತುಂಬಾ ಇಷ್ಟ. ವಿಶೇಷವಾಗಿ ಹೋಳಿ ದಿನದಂದು ಕುಂಕುಮವನ್ನು ಖರೀದಿಸಬೇಕು. ಕುಂಕುಮವನ್ನು ಖರೀದಿಸಿ ಅದನ್ನು ಲಕ್ಷ್ಮಿ ದೇವಿಯ ಮುಂದೆ ಇರಿಸಿ. ಈ ಕುಂಕುಮವನ್ನು ಸಿಹಿಯಲ್ಲಿ ಹಾಕಿ ಲಕ್ಷ್ಮಿ ದೇವಿಗೆ ಅರ್ಪಿಸಿದರೂ ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮೊಂದಿಗೆ ಇರುತ್ತದೆ. ಹೋಳಿಯಲ್ಲಿ ಕುಂಕುಮ ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಲೋಹದ ಆಮೆ
ವಾಸ್ತು ಪ್ರಕಾರ ಲೋಹದ ಆಮೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಲೋಹದ ಆಮೆಯನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಲೋಹದ ಆಮೆಯನ್ನು ಇಡುವುದು ಕ್ರಮೇಣ ಪ್ರಗತಿಯನ್ನು ತರುತ್ತದೆ. ಹೋಳಿ ದಿನದಂದು ಲೋಹದಿಂದ ಮಾಡಿದ ಆಮೆಯನ್ನು ತಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಬರುತ್ತದೆ.

ತೋರಣ
ಹೋಳಿ ಹಬ್ಬದ ದಿನದಂದು ತೋರಣವನ್ನು ಸಹ ಖರೀದಿಸಬಹುದು. ಹೋಳಿ ಹಬ್ಬದಂದು ತೋರಣವನ್ನು ಮನೆಯಲ್ಲಿ ಹಾಕುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಹೋಳಿಕಾ ದಹನದ ದಿನದಂದು ತೋರಣ ಮನೆಯಲ್ಲಿ ಇರಿಸುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಆಗಮಿಸುತ್ತಾಳೆ. ತೋರಣ ಧನಾತ್ಮಕ ಶಕ್ತಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ












Click it and Unblock the Notifications