Benefits of Yellow Watermelon: ಜೇನುತುಪ್ಪದಂತಹ ಸ್ವಾದ ಹಳದಿ ಕಲ್ಲಂಗಡಿ.. ಇದರ ಪ್ರಯೋಜನ ತಿಳಿದರೆ ಬಿಡುವುದೇ ಇಲ್ಲ!
ಬೇಸಿಗೆಯಲ್ಲಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚಾಗುತ್ತದೆ. ಪ್ರತಿಯೊಬ್ಬರೂ ಕೆಂಪು ರಸಭರಿತವಾದ ಕಲ್ಲಂಗಡಿಗಳನ್ನು ತಿನ್ನಲು ಬಯಸುತ್ತಾರೆ. ಅಂದಹಾಗೆ ಕಲ್ಲಂಗಡಿಯಲ್ಲೂ ನಾನಾ ಬಣ್ಣದ ಕಲ್ಲಂಗಡಿಗಳಿವೆ. ಅವುಗಳಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಕೂಡ ಒಂದು. ಹಳದಿ ಕಲ್ಲಂಗಡಿ ಕೆಂಪು ಕಲ್ಲಂಗಡಿಗಿಂತ ಹೆಚ್ಚು ಆರೋಗ್ಯಕರವಾಗಿದೆ. ಹಾಗಾದರೆ ಇದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಸಾಮಾನ್ಯವಾಗಿ ಕೆಂಪು ಕಲ್ಲಂಗಡಿಯನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಹಳದಿ ಬಣ್ಣದ ಕಲ್ಲಂಗಡಿ ಬಗ್ಗೆ ಬಹುತೇಕ ಜನರಿಗೆ ತಿಳಿದೇ ಇಲ್ಲ. ಆದರೆ ಹಳದಿ ಬಣ್ಣದ ಕಲ್ಲಂಗಡಿ ಬಗ್ಗೆ ನೀವು ತಿಳಿದರೆ ಮೊದಲು ಕೊಂಡು ತಿನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ಹಲದಿ ಬಣ್ಣದ ಕಲ್ಲಂಗಡಿಯಲ್ಲಿ ಅಂತಹದ್ದೇನಿದೆ? ಇದಕ್ಕೆ ಯಾಕೆ ಬೇಡಿಕೆ ಹೆಚ್ಚು? ಎಲ್ಲದರ ಬಗ್ಗೆ ತಿಳಿಯೋಣ.

ಹಳದಿ ಕಲ್ಲಂಗಡಿ ಎಲ್ಲಿಂದ ಬರುತ್ತದೆ?
ಹಳದಿ ಕಲ್ಲಂಗಡಿಯನ್ನು ಮೊದಲು ಆಫ್ರಿಕಾದಲ್ಲಿ ಬೆಳೆಸಲಾಯಿತು. ಆದರೆ ಕ್ರಮೇಣ ಅದು ಇಡೀ ಜಗತ್ತನ್ನು ತಲುಪಿದೆ. ಯುರೋಪಿಯನ್, ಅಮೇರಿಕನ್ ಮತ್ತು ಚೈನೀಸ್ ಮಾರುಕಟ್ಟೆಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಈಗ ಇದನ್ನು ರಾಜಸ್ಥಾನ ಸೇರಿದಂತೆ ಭಾರತದ ಅನೇಕ ಸ್ಥಳಗಳಲ್ಲಿ ಬೆಳೆಸಲಾಗುತ್ತದೆ. ಹಳದಿ ಕಲ್ಲಂಗಡಿ ಮಾರುಕಟ್ಟೆಯಲ್ಲಿ ಸುಲಭವಾಗಿ ಕಂಡುಬರುತ್ತದೆ.
ಕಲ್ಲಂಗಡಿ ಹಳದಿ ಬಣ್ಣಕ್ಕೆ ತಿರುಗಿದ್ದು ಹೇಗೆ?
ವಾಸ್ತವವಾಗಿ ವಿಜ್ಞಾನದ ಪ್ರಕಾರ, ಕಲ್ಲಂಗಡಿ ಬಣ್ಣವನ್ನು ಲೈಕೋಪೀನ್ ಎಂಬ ರಾಸಾಯನಿಕದಿಂದ ನಿರ್ಧರಿಸಲಾಗುತ್ತದೆ. ಕಲ್ಲಂಗಡಿ ಬಣ್ಣವು ಕೆಂಪು ಬಣ್ಣದ್ದಾಗಿದೆ. ಆದರೆ ಹಳದಿ ಕಲ್ಲಂಗಡಿಯಲ್ಲಿ ಲೈಕೋಪೀನ್ ಎಂಬ ರಾಸಾಯನಿಕವು ಹೆಚ್ಚು ಕಂಡುಬರುವುದಿಲ್ಲ.

ಈ ಕಾರಣಕ್ಕಾಗಿ ಅದರ ಬಣ್ಣ ಹಳದಿಯಾಗಿರುತ್ತದೆ. ಹಳದಿ ಕಲ್ಲಂಗಡಿ ಕೆಂಪು ಕಲ್ಲಂಗಡಿಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಇದರ ರುಚಿಯನ್ನು ಜೇನುತುಪ್ಪಕ್ಕೆ ಹೋಲಿಸಲಾಗುತ್ತದೆ. ವಿಟಮಿನ್ ಎ ಕೂಡ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ.
ಭಾರತದಲ್ಲಿ ಎಲ್ಲಿ ಉತ್ಪಾದಿಸಲಾಗುತ್ತದೆ?
ಹಳದಿ ಕಲ್ಲಂಗಡಿಯನ್ನು ಡಸರ್ಟ್ ಕಿಂಗ್ ಎಂದೂ ಕರೆಯುತ್ತಾರೆ. ಏಕೆಂದರೆ ಅವು ಮರುಭೂಮಿ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಆದ್ದರಿಂದ ಈ ಹಣ್ಣನ್ನು ಭಾರತದಲ್ಲಿ ಗುಜರಾತ್ ಮತ್ತು ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಉತ್ಪಾದಿಸಲಾಗುತ್ತದೆ.

ಹಳದಿ ಕಲ್ಲಂಗಡಿ ತಿನ್ನುವ ಪ್ರಯೋಜನಗಳು:-
*ಹಳದಿ ಕಲ್ಲಂಗಡಿಯಲ್ಲಿ ಬೀಟಾ ಕ್ಯಾರೋಟಿನ್ (Beta Carotene) ಹೇರಳವಾಗಿ ಕಂಡುಬರುತ್ತದೆ. ಬೀಟಾ ಕ್ಯಾರೋಟಿನ್ ಕಣ್ಣುಗಳಿಗೆ ಬಹಳ ಮುಖ್ಯ, ಇದರ ಸೇವನೆಯು ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ.
*ವಿಟಮಿನ್ ಎ ಕೂಡ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ.
*ಇದು ಜೀರ್ಣಕ್ರಿಯೆಗೆ ಒಳ್ಳೆಯದು.
*ಹಳದಿ ಕಲ್ಲಂಗಡಿ ಕಡಿಮೆ ಕ್ಯಾಲೋರಿ ಹೊಂದಿದೆ.
-
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ದ್ರಾಕ್ಷಿ ತಿನ್ನುವ ಮೊದಲು ಸ್ವಚ್ಛಗೊಳಿಸಿ: ಆರೋಗ್ಯ ಕಾಪಾಡುವ ಸರಳ ಟಿಪ್ಸ್ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications