ರೈಲ್ವೆ ಸ್ಟೇಷನ್ನಲ್ಲಿ ಮೂವರು ಸರ್ದಾರ್ಜಿಗಳು!
ಒಮ್ಮೆ
ಮೂವರು
ಸರ್ದಾರ್ಜಿಗಳು
ರೈಲ್ವೇ
ಸ್ಟೇಷನ್
ಕಡೆಗೆ
ಹೊರಟಿದ್ದರು.
ಮೂವರು
ತುಂಬಾ
ಗಹನವಾಗಿ
ಚರ್ಚೆ
ಮಾಡುತ್ತ
ಸ್ಟೇಷನ್ಗೆ
ಬಂದರು.
ಆದರೆ
ಅವರು
ಚರ್ಚೆಯಲ್ಲಿ
ಹೇಗೆ
ಮುಳುಗಿದ್ದರೆಂದರೆ
ರೈಲು
ಬಂದಿದ್ದು
ಸಹಾ
ಗೊತ್ತಾಗಲಿಲ್ಲ!
ಸೀಟಿ ಹೊಡೆಯುತ್ತಾ ರೈಲು ಸ್ಟೇಷನ್ ಬಿಟ್ಟು ಹೊರಟಾಗ ಎಚ್ಚೆತ್ತುಕೊಂಡ ಮೂವರು ರೈಲಿನ ಹಿಂದೆ ಓಡಿದರು. ಅಂತೂ ಇಂತೂ ಮೂವರಲ್ಲಿ ಇಬ್ಬರು ರೈಲಿನ ಒಳಹೊಕ್ಕರು. ಮೂರನೇ ಸರ್ದಾರ್ಜಿ ತುಂಬಾ ಬೇಸರದಿಂದ ಅಲ್ಲೇ ನಿಂತ. ರೈಲಿನ ಅಧಿಕಾರಿ ಇದನ್ನು ನೋಡಿ ಹೇಳಿದ ‘ಇಬ್ಬರಾದ್ರು ರೈಲು ಹತ್ತಿದರಲ್ಲ. ಹೋಗ್ಲಿ ಬಿಡಿ.’
ನಿಟ್ಟುಸಿರು ಬಿಡುತ್ತಾ ಸರ್ದಾರ್ಜಿ ಹೇಳಿದ ‘ಅದೇನೊ ನಿಜ.... ಆದರೆ ಅವರಿಬ್ಬರೂ ನನಗೆ ಕಳಿಸಲು ಸ್ಟೇಷನ್ಗೆ ಬಂದಿದ್ದವರು’!!
*
ಒಂದು ದಿನ ಸರ್ದಾರ್ಜಿ ವೈದ್ಯರ ಬಳಿಗೆ ಹೋದ. ‘ಡಾಕ್ಟ್ರೆ, ನಂಗೆ ಎಲ್ಲಾ ಕಡೆ ನೋಯುತ್ತಿದೆ. ಎಲ್ಲಿ ಮುಟ್ಟಿದರೆ ಅಲ್ಲಿ ನೋವತ್ತೆ. ಏನು ಮಾಡೋದು?’ಎಂದು ಸಮಸ್ಯೆ ಹೇಳಿಕೊಂಡ.
‘ಹೌದಾ! ಸರಿ ನಿನ್ನ ಮೊಣಕೈ ಮುಟ್ಟು ’ ಅಂದರು ವೈದ್ಯರು. ಮುಟ್ಟಿದ ತಕ್ಷಣ ನೋವಿನಿಂದ ಸರ್ದಾರ್ಜಿ ಕಿರುಚಿದ. ಇದೇ ತರಹ ಕೈ, ಕಾಲು, ಬೆನ್ನು, ಹೊಟ್ಟೆ ಸೇರಿದಂತೆ ಎಲ್ಲ ಅಂಗಗಳನ್ನು ಮುಟ್ಟಲು ವೈದ್ಯರು ಹೇಳಿದರು. ಮುಟ್ಟಿದ ತಕ್ಷಣ ಸರ್ದಾರ್ಜಿ ನೋವಿನಿಂದ ಚೀರುತ್ತಿದ್ದ.
ಇರೋ ಬರೋ ಟೆಸ್ಟ್ ಎಲ್ಲಾ ಮಾಡಿ ಮುಗಿಸಿದ ವೈದ್ಯರು, ಸರ್ದಾರ್ಜಿಗೆ ಎರಡು ದಿನ ಬಿಟ್ಟು ಬರೋಕೆ ಹೇಳಿದರು.
ಎರಡು ದಿನ ಬಿಟ್ಟು ಬಂದ ಸರ್ದಾರ್ಜಿಯನ್ನು ಕಂಡ ವೈದ್ಯರು ‘ನಿನ್ನ ಸಮಸ್ಯೆ ಏನು ಅಂತಾ ಗೊತ್ತಾಯಿತು’ ಅಂದರು.
‘ಹೌದಾ ಸಾರ್, ಏನಾಗಿದೆ ನನಗೆ’ ಎಂದು ಪ್ರಶ್ನಿಸಿದ. ‘ನಿನ್ನ ಬೆರಳಿನ ಮೂಳೆ ಮುರಿದಿದೆ ಕಣಯ್ಯಾ!’ ಎಂದು ವೈದ್ಯರು ಸಮಾಧಾನದಿಂದ ಉತ್ತರ ಕೊಟ್ಟರು!