Yahoo Layoffs: ಉದ್ಯೋಗಿಗಳ ವಜಾ ನಿರ್ಧಾರ, ಎಷ್ಟು ಮಂದಿಗೆ ಸಮಸ್ಯೆ?
ಅಮೇಜಾನ್, ಟ್ವಿಟರ್ ಸೇರಿದಂತೆ ಜಾಗತಿಕ ಪ್ರತಿಷ್ಠಿತ ಕಂಪನಿಗಳು ವಿವಿಧ ಕಾರಣಗಳಿಗಾಗಿ ತಮ್ಮ ನೌಕರರ ಸಾಮೂಹಿಕ ವಜಾ ಮಾಡುತ್ತಿರುವುದು ಮುಂದುವರಿದಿದೆ. ಈ ಸಾಲಿಗೆ 'ಯಾಹೂ' ಕಂಪನಿ ಸಹ ಸೇರ್ಪಡೆಯಾಗಿದೆ.
ಬೆಂಗಳೂರು, ಜನವರಿ 10: ಅಮೇಜಾನ್, ಟ್ವಿಟರ್ ಸೇರಿದಂತೆ ಜಾಗತಿಕ ಪ್ರತಿಷ್ಠಿತ ಕಂಪನಿಗಳು ವಿವಿಧ ಕಾರಣಗಳಿಗಾಗಿ ತಮ್ಮ ನೌಕರರ ಸಾಮೂಹಿಕ ವಜಾ ಮಾಡುತ್ತಿರುವುದು ಮುಂದುವರಿದಿದೆ. ಈ ಸಾಲಿಗೆ 'ಯಾಹೂ' ಕಂಪನಿ ಸಹ ಸೇರ್ಪಡೆಯಾಗಿದೆ.
ಜಾಗತಿಕ ಮಾಧ್ಯಮ ಮತ್ತು ತಂತ್ರಜ್ಞಾನ ಕಂಪನಿಯಾದ ಅಮೆರಿಕದ 'ಯಾಹೂ' ಕಂಪನಿಯು ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 20ರಷ್ಟು ಮಂದಿಯನ್ನು ತೆಗೆದು ಹಾಕಲು ನಿರ್ಧರಿಸಿದೆ. ಇದರಿಂದ ಸಾಕಷ್ಟು ಉದ್ಯೋಗಿಗಳು ಕೆಲಸವಿಲ್ಲದೇ ಪರದಾಡುವ ಸಾಧ್ಯತೆ ಇದೆ.
ಯಾಹೂ ಕಂಪನಿ ತನ್ನ ಜಾಹೀರಾತು ತಂತ್ರಜ್ಞಾನ ವಿಭಾಗದ ಪುನಃರಚನೆಯ ಭಾಗವಾಗಿ ನೌಕರರ ವಜಾಗೊಳಿಸಲು ತೀರ್ಮಾನಿಸಿದೆ. ತನ್ನ ಉದ್ಯೋಗಳಲ್ಲಿ ಒಟ್ಟು ಶೇಕಡಾ 20ರಷ್ಟು ಮಂದಿಯನ್ನು ವಜಾಗೊಳಿಸುವುದಾಗಿ ಗುರುವಾರ ತಿಳಿಸಿದೆ ಎಂದು ಘೋಷಿಸಿದೆ ಎಂದು ಸಲು ಯೋಜಿಸಿದೆ ಎಂದು ಗುರುವಾರ ಹೇಳಿದೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.

ಶೇಕಡಾ 20ರಷ್ಟು ಮಂದಿ ಅಂದರೆ ಯಾಹೂ ಸಂಸ್ಥೆಯ ಸುಮಾರು 1,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಈ ಉದ್ಯೋಗಿಗಳ ವಜಾ ಕಡಿತದ ನಿರ್ಧಾರವು ಪ್ರಸ್ತಕ ವರ್ಷದ ಅಂತ್ಯಕ್ಕೆ ಯಾಹೂನ ಜಾಹೀರಾತು ತಂತ್ರಜ್ಞಾನದ ಸುಮಾರು 50ರಷ್ಟು ಉದ್ಯೋಗಿಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಕಂಪನಿ ತಿಳಿಸಿದೆ.
2021 ನೇ ವರ್ಷದಲ್ಲಿ ಐದು ಬಿಲಿಯನ್ ಡಾಲರ್ ಖರೀದಿಯಿಂದ ಖಾಸಗಿ ಇಕ್ವಿಟಿ ಸಂಸ್ಥೆಯಾದ ಅಪೊಲೊ ಗ್ಲೋಬಲ್ ಮ್ಯಾನೇಜ್ಮೆಂಟ್ ಒಡೆತನದಲ್ಲಿ ಯಾಹೂ ಇತ್ತು. ಈ ಕ್ರಮವು ಕಂಪನಿಯು ತನ್ನ ಪ್ರಮುಖ ಜಾಹೀರಾತು ವ್ಯವಹಾರದ ಡಿಎಸ್ಪಿ ಅಥವಾ ಬೇಡಿಕೆಯ ಹಾಗೂ ಹೂಡಿಕೆಯನ್ನು ಕಡಿಮೆ ಮಾಡಬಹುದು ಎಂದು ನಂಬಿದೆ. ಈ ಕಾರಣದಿಂದ ಉದ್ಯೋಗಿಗಳ ವಜಾಗೊಳಿಸುವ ಬಗ್ಗೆಯು ಮಾತನಾಡಿದೆ.
ಲಭ್ಯ ಮಾಹಿತಿಗಳ ಪ್ರಕಾರ ಹಣದುಬ್ಬರ ಹೆಚ್ಚಳ ಮತ್ತು ಆರ್ಥಿಕ ಹಿಂಜರಿತ ಸಮಸ್ಯೆಗಳು ಮುಂದುವರಿದ ಸಾಧ್ಯತೆ ಇವೆ. ಅದಕ್ಕೆ ಪ್ರತಿಯಾಗಿ ಅನೇಕ ಜಾಹೀರಾತುದಾರರು ತಮ್ಮ ಮಾರ್ಕೆಟಿಂಗ್ ಬಜೆಟ್ ಅನ್ನು ಹಿಂತಿರುಗಿಸಿರುವುದರಿಂದ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.

ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ ಇಂಕ್ನಿಂದ ಆಲ್ಫಾಬೆಟ್ ಇಂಕ್ವರೆಗಿನ ಯುಎಸ್ ಕಂಪನಿಗಳ ರಾಫ್ಟ್ ಪ್ರಸಕ್ತ ಹೆಚ್ಚಿನ ಹಣದುಬ್ಬರ ಹಾಗೂ ಹೆಚ್ಚುತ್ತಿರುವ ಬಡ್ಡಿ ದರಗಳ ಬೇಡಿಕೆ ಕುಸಿತ ಎದುರಿಸಲು ಒಂದು ಸಾವಿರಾರು ಜನರನ್ನು ವಜಾಗೊಳಿಸುತ್ತಿರುವುದಾಗಿ ತಿಳಿದು ಬಂದಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications