TCS Company: 40,000 ಉದ್ಯೋಗಿಗಳ ನೇಮಕದ ಚಿಂತನೆಯಲ್ಲಿದೆ ಐಟಿ ದಿಗ್ಗಜ
ಬೆಂಗಳೂರು, ಅಕ್ಟೋಬರ್ 16: ಐಟಿ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ಟಾಟಾ ಒಡೆತನ 'ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಭರ್ಜರಿ ನೇಮಕಾತಿಯ ಚಿಂತನೆಯಲ್ಲಿದೆ. ಈ ಮೂಲಕ ಸಾಫ್ಟವೇರ್ ರಂಗಕ್ಕೆ ಕಾಲಿಡಲು ಬಯಸುವ ಫ್ರೆಶರ್ಸ್ಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
'ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 40,000 ಕ್ಯಾಂಪಸ್ ನೇಮಕಾತಿಗಳನ್ನು ಮಾಡಿಕೊಳ್ಳುವ ಚಿಂತನೆಯಲ್ಲಿದೆ. ಈ ಮೂಲಕ ಸಂಸ್ಥೆಗೆ ಹೊಸ ನೇಮಕಾತಿಗಳನ್ನು ಘೋಷಿಸಲಾಗಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎನ್.ಗಣಪತಿ ಸುಬ್ರಮಣ್ಯಂ ಹೇಳಿದ್ದಾರೆ.

ಪ್ರತಿ ವರ್ಷ ಕಂಪನಿಯು ಸಾಮಾನ್ಯವಾಗಿ 35,000 ರಿಂದ 40,000 ಪ್ರೇಶರ್ಸ್ಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಈ ಯೋಜನೆಯ ಭಾಗವಾಗಿಯೇ ಈ ವರ್ಷವು ನೇಮಕಾತಿ ಆಹ್ವಾನ ಮುಂದುವರಿಯಲಿದೆ. ಅತ್ಯುತ್ತಮ ಬ್ಯಾಚ್ ಹೊಂದಿರುವ ಕಂಪನಿಯು ಕಳೆದ ವರ್ಷ 50,000 ಫ್ರೆಶರ್ಗಳಿಗೆ ಕೆಲಸ ನೀಡಿದೆ. ನಂತರ ವರ್ಷದಲ್ಲಿ ಬೇಡಿಕೆ ಹೆಚ್ಚಾಗುವವರೆಗೆ ಕ್ಯಾಂಪಸ್ಗಳಿಗೆ ತೆರಳುವುದಿಲ್ಲ ಎಂದು ಅವರು ತಿಳಿಸಿದರು.
ವಜಾ ಮಧ್ಯೆ ನೇಮಕಾತಿ
TCS ನೇಮಕಾತಿ ಯೋಜನೆಗಳನ್ನು ಬೇಡಿಕೆಯ ದೃಷ್ಟಿಕೋನವನ್ನು ಆಧರಿಸಿ ಮಾಪನಾಂಕ ಮಾಡುತ್ತದೆ. ಇದರಲ್ಲಿ ವ್ಯತ್ಯಾಸಗಳು ಕಂಡು ಬಂದಲ್ಲಿ ಮಾತ್ರವೇ ಕಡಿಮೆ ಸಂಖ್ಯೆಯ ನೇಮಕಾತಿಗಳು ಆಗುತ್ತವೆ. ಕಳೆದ ಸುಮಾರು 14 ತಿಂಗಳುಗಳಲ್ಲಿ ದೇಶದ ಸಾಕಷ್ಟು ಕಂಪನಿಗಳ ಉದ್ಯೋಗಿಗಳ ವಜಾ (Layoff) ನೋಡಿದ್ದೇವೆ.

ಇತ್ತ ಟಿಸಿಎಲ್ ಕಂಪನಿ ಬಹುದೊಡ್ಡ ನೇಮಕಾತಿ ಮಾಡಿಕೊಂಡಿದೆ. ಉತ್ತಮ ಉದ್ಯೋಗಿ ಸಮೂಹ ನಿರ್ಮಾಣಕ್ಕಾಗಿ ಬೇಕಾದಷ್ಟು ನೇಮಕಾತಿ ಮಾಡಿಕೊಂಡಿದ್ದೇವೆ. ಹೀಗಾಗಿಯೇ ಕಂಪನಿಯ ಕಾರ್ಯನಿರ್ವಹಣೆಯು ಶೇಕಡಾ 85ರಿಂದ ಶೇಕಡಾ 87-90ರಷ್ಟು ಏರಿಕೆ ಆಗಿದೆ.
ಕಂಪನಿಗೆ ಬೇಕಾದ ಉದ್ಯೋಗಿ ಬೇಡಿಕೆಯನ್ನು ಪೂರೈಸಲು ನಾವು ಬೆಂಚ್ ಹೊಂದಿದ್ದು, ಒಟ್ಟು ಸುಮಾರು 6 ಲಕ್ಷ ಉದ್ಯೋಗಿಗಳಲ್ಲಿ ಶೇಕಡಾ 10ರಷ್ಟು ಮಂದಿ ಈ ಬೆಂಚ್ನಲ್ಲಿದ್ದಾರೆ. ಅವರನ್ನು ಸೂಕ್ತ ತರಬೇತಿ ನೀಡಿ ಸಂಸ್ಥೆ ಉನ್ನತೀಕರಣಕ್ಕೆ ಶ್ರಮಿಸುತ್ತಾರೆ ಎಂದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications