IT Layoffs: 1250 ಉದ್ಯೋಗಿಗಳನ್ನು ಮನೆಗೆ ಕಳುಸಿದ ಯುಎಸ್ ಕಂಪನಿ
ನ್ಯೂಯಾರ್ಕ್, ಡಿಸೆಂಬರ್ 01: ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ ಸರಣಿ ಮುಂದುವರಿದಿದೆ. ಯುಎಸ್ ಮೂಲದ ಆನ್ಲೈನ್ ಆಹಾರ ವಿತರಣಾ ಸಂಸ್ಥೆ ಆಗಿರುವ ಡೋರ್ಡ್ಯಾಶ್ ಇಂಕ್ ಕಂಪನಿಯು ತನ್ನ ಒಟ್ಟು ಉದ್ಯೋಗಿಗಳಲ್ಲಿ ಶೇ.6ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.
ಡೋರ್ಡ್ಯಾಶ್ ಇಂಕ್ ಸಂಸ್ಥೆಯು ಒಟ್ಟು 1250 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದಕ್ಕೆ ನಿರ್ಧರಿಸಿದೆ. ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಈ ಕಂಪನಿಯು ಮನೆಯಲ್ಲಿ ಸಿಲುಕಿರುವ ಜನರಿಗೆ ತಮ್ಮ ಆರ್ಡರ್ ಅನ್ನು ತಲುಪಿಸುವ ಕೆಲಸವನ್ನು ಮಾಡುತ್ತಿತ್ತು. ಆದರೆ ಬೇಡಿಕೆಯಲ್ಲಿನ ಹಠಾತ್ ಕುಸಿತದಿಂದಂ ಕಂಪನಿಯು ವೆಚ್ಚವನ್ನು ನಿರ್ವಹಿಸುವ ಉದ್ದೇಶದಿಂದ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ಉದ್ಯೋಗಿಗಳಿಗೆ ಆಂತರಿಕ ಜ್ಞಾಪಕ ಪತ್ರದಲ್ಲಿ, ಮುಖ್ಯ ಕಾರ್ಯನಿರ್ವಾಹಕ ಟೋನಿ ಕ್ಸು ಹೇಳಿದರು, "ನಮ್ಮ ತಂಡದ ಬೆಳವಣಿಗೆಯನ್ನು ನಿರ್ವಹಿಸುವ ಕಠಿಣವಾದ ಜವಾಬ್ದಾರಿಯು ನನ್ನ ಮೇಲಿದೆ. ಇದರ ಪರಿಣಾಮವಾಗಿ ನಿರ್ವಹಣಾ ವೆಚ್ಚವು ತ್ವರಿತವಾಗಿ ಹೆಚ್ಚಾಯಿತು. "ನಾವು ಎಷ್ಟು ಬೇಗನೆ ನೇಮಕವನ್ನು ಮಾಡಿಕೊಂಡವೋ ಅಷ್ಟು ನಿರ್ವಹಣಾ ವೆಚ್ಚಗಳು ಹೆಚ್ಚಾಯಿತು. ಆದಾಯವು ಕಡಿಮೆ ಆಯಿತು," ಎಂದು ಉಲ್ಲೇಖಿಸಿದರು.

1500 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಹೆಚ್ ಆಂಡ್ ಎಂ:
ಸ್ವೀಡಿಷ್ ಫ್ಯಾಷನ್ ದೈತ್ಯ ಹೆಚ್ ಆಂಡ್ ಎಂ ಕಂಪನಿಯು ಉದ್ಯೋಗ ಕಡಿತದ ಉದ್ದೇಶದಿಂದ 1,500 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿತು. "ನಾವು ಪ್ರಾರಂಭಿಸಿದ ವೆಚ್ಚ ಮತ್ತು ದಕ್ಷತೆಯ ಕಾರ್ಯಕ್ರಮವು ನಮ್ಮ ಸಂಸ್ಥೆಯನ್ನು ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ. ನಮ್ಮ ಸಹೋದ್ಯೋಗಿಗಳು ಇದರಿಂದ ಪ್ರಭಾವಿತರಾಗುತ್ತಾರೆ ಎಂಬ ಅಂಶದ ಬಗ್ಗೆ ನಾವು ಬಹಳ ಗಮನಹರಿಸುತ್ತೇವೆ" ಎಂದು H&M CEO ಹೆಲೆನಾ ಹೆಲ್ಮರ್ಸನ್ ಹೇಳಿದ್ದರು.
ಈ ವರ್ಷ ಉದ್ಯೋಗ ಕಡಿತ ಮಾಡಿರುವ 20 ಕಂಪನಿಗಳು:
ಅಮೆಜಾನ್, ಆಪಲ್, ಸಿಸ್ಕೋ, ಚೈಮ್, ಸೇಲ್ಸ್ಫೋರ್ಸ್, ಡ್ಯಾಪರ್ ಲ್ಯಾಬ್ಸ್, ಡಿಜಿಟಲ್ ಕರೆನ್ಸಿ ಗುಂಪು, ಡೋರ್ ಡ್ಯಾಶ್, ತೆರೆದ ಬಾಗಿಲು, ಗ್ಯಾಲಕ್ಸಿ ಡಿಜಿಟಲ್, ಎಚ್ಪಿ, ಪೆಲೋಟನ್, ಇಂಟೆಲ್, ಲಿಫ್ಟ್, ಮೆಟಾ, ಟ್ವಿಟರ್, ಪಟ್ಟೆ, ಕ್ವಾಲ್ಕಾಮ್, ಅಪ್ಸ್ಟಾರ್ಟ್, ಸೀಗೇಟ್ ಇವೇ ಮೊದಲಾದವುಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಆ ಮೂಲಕ ತಮ್ಮ ಆರ್ಥಿಕ ಹೊರೆಯನ್ನು ನಿರ್ವಹಣೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿವೆ.
ಜಾಗತಿಕ ಆರ್ಥಿಕ ಕುಸಿತದಿಂದ ಜಾಹೀರಾತುದಾರರು ಖರ್ಚು ಕಡಿಮೆ ಮಾಡಿದ್ದಾರೆ. ವಿಶ್ವಾದ್ಯಂತ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ಉದ್ಯೋಗ ಕಡಿತ ಮಾಡುತ್ತಿದೆ. ಮಾಧ್ಯಮ ಉದ್ಯಮದಲ್ಲಿ ಈ ವರ್ಷದ ಅಕ್ಟೋಬರ್ವರೆಗೆ 3,000ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ. ಇನ್ನೂ ಹೆಚ್ಚಿನವುಗಳು ಉದ್ಯೋಗ ಕಡಿತ ಮಾಡಲಿವೆ. ಪ್ಯಾರಾಮೌಂಟ್ ಗ್ಲೋಬಲ್ನಿಂದ ವಾಲ್ಟ್ ಡಿಸ್ನಿ ಕಂಪನಿಯವರೆಗೆ, ಮಾಧ್ಯಮ ಕಂಪೆನಿಗಳು ವಜಾಗೊಳಿಸುವಿಕೆ, ನೇಮಕಾತಿ ಸ್ಥಗಿತ ಮತ್ತು ಇತರ ವೆಚ್ಚ ಕಡಿತ ಕ್ರಮಗಳನ್ನು ಘೋಷಿಸಿವೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications