ಪುರುಷರಿಗಿಂತ ಮಹಿಳೆಯರ ಮೇಲೆ ಕೋವಿಡ್ ಪರಿಣಾಮ ಹೆಚ್ಚು: ಅಧ್ಯಯನ
ನ್ಯೂಯಾರ್ಕ್, ಜೂನ್ 21: ಪುರುಷರಿಗಿಂತ ಮಹಿಳೆಯರು ದೀರ್ಘ ಕೋವಿಡ್ನಿಂದ ಬಳಲುತ್ತಿದ್ದಾರೆ ಮತ್ತು ಗಣನೀಯವಾಗಿ ವಿಭಿನ್ನ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ ಎಂದು ಅಧ್ಯಯನ ಒಂದರಲ್ಲಿ ತಿಳಿದುಬಂದಿದೆ.
ಲಿಂಗ ಆಧಾರಿತ ಸಂಶೋಧನೆಯ ನಿರ್ಣಾಯಕ ಅಗತ್ಯವನ್ನು ಈ ಸಂಶೋಧನೆ ಒತ್ತಿಹೇಳುತ್ತದೆ. ದೀರ್ಘಕಾಲದ ಕೋವಿಡ್ ಒಂದು ರೋಗಲಕ್ಷಣ ಆಗಿದ್ದು, ಇದರಲ್ಲಿ ಕೋವಿಡ್ -19 ರ ಆರಂಭಿಕ ಸೋಂಕಿನ ನಂತರ ನಾಲ್ಕು ವಾರಗಳಿಗಿಂತ ಹೆಚ್ಚು ಕಾಲ ತೊಡಕುಗಳು ಇರುತ್ತವೆ, ಕೆಲವೊಮ್ಮೆ ಹಲವು ತಿಂಗಳುಗಳವರೆಗೆ ಕೂಡ ಇರುತ್ತದೆ ಎಂದು ಹೇಳಿದೆ.
ಸುಮಾರು 13 ಲಕ್ಷ ರೋಗಿಗಳ ದತ್ತಾಂಶದ ವಿಶ್ಲೇಷಣೆಯನ್ನು ನಡೆಸಲಾಗಿದೆ. ಜಾನ್ಸನ್ ಮತ್ತು ಜಾನ್ಸನ್ ಸಂಸ್ಥೆಯ ಮಹಿಳಾ ತಂಡದ ಮುಖ್ಯ ವೈದ್ಯಕೀಯ ಸಂಶೋಧಕರು, ದೀರ್ಘ ಕೋವಿಡ್ ಹೊಂದಿರುವ ಮಹಿಳೆಯರು ಕಿವಿ, ಮೂಗು ಮತ್ತು ಗಂಟಲಿನ ಸಮಸ್ಯೆಗಳು ಸೇರಿದಂತೆ ವಿವಿಧ ರೋಗಲಕ್ಷಣಗಳೊಂದಿಗೆ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಾನಸಿಕ ಸಮಸ್ಯೆ, ನರ ಸಂಬಂಧಿತ ಸಮಸ್ಯೆ, ಚರ್ಮ, ಜಠರಗರುಳಿನ ಮತ್ತು ಸಂಧಿವಾತ ಸಮಸ್ಯೆ, ಜೊತೆಗೆ ಸುಸ್ತಿನಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಪುರುಷ ರೋಗಿಗಳು ಮಧುಮೇಹ ಮತ್ತು ಮೂತ್ರಪಿಂಡದ ಸಮಸ್ಯೆಗಳಿಂದ ಆಂತರಿಕಸ್ರಾವ ಸಮಸ್ಯೆ ಅನುಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.
ಮಹಿಳೆಯರಿಗೆ ಸಮಸ್ಯೆ ಹೆಚ್ಚು
ಮಹಿಳೆಯರಲ್ಲಿ ದೀರ್ಘಕಾಲದ ಕೋವಿಡ್ ರೋಗಲಕ್ಷಣ ಬೆಳವಣಿಗೆಯಾಗುವ ಸಾಧ್ಯತೆಗಳು ಪುರುಷರಿಗಿಂತ ಶೇಕಡಾ 22 ರಷ್ಟು ಹೆಚ್ಚು ಎಂದು ಸಂಶೋಧಕರು 'ಜರ್ನಲ್ ಕರೆಂಟ್ ಮೆಡಿಕಲ್ ರಿಸರ್ಚ್ ಅಂಡ್ ಒಪಿನಿಯನ್'ನಲ್ಲಿ ಪ್ರಕಟಿಸಿದ ಅಧ್ಯಯನದಲ್ಲಿ ತಿಳಿಸಿದ್ದಾರೆ.

"ಮಹಿಳೆ ಮತ್ತು ಪುರುಷರ ನಡುವಿನ ರೋಗ ನಿರೋಧಕ ವ್ಯವಸ್ಥೆಯ ಕಾರ್ಯಚಟುವಟಿಕೆಯಲ್ಲಿನ ವ್ಯತ್ಯಾಸಗಳು ದೀರ್ಘ ಕೋವಿಡ್ ಲಕ್ಷಣಗಳು ಲಿಂಗ ಆಧಾರಿತವಾಗಿರುತ್ತದೆ. ಮಹಿಳೆಯರಲ್ಲಿ ಹೆಚ್ಚು ವೇಗವಾಗಿ ಮತ್ತು ದೃಢವಾದ ಸಹಜ ಮತ್ತು ಹೊಂದಾಣಿಕೆಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿರುತ್ತದೆ, ಇದು ಆರಂಭಿಕ ಸೋಂಕು ಮತ್ತು ತೀವ್ರತೆಯಿಂದ ಅವರನ್ನು ರಕ್ಷಿಸುತ್ತದೆ. ಆದಾಗ್ಯೂ, ಇದೇ ವ್ಯತ್ಯಾಸವು ದೀರ್ಘಕಾಲದ ಸ್ವಯಂ ನಿರೋಧಕ ಸಂಬಂಧಿತ ಕಾಯಿಲೆಗಳಿಂದ ಹೆಣ್ಣುಮಕ್ಕಳು ಹೆಚ್ಚು ಬಳಲುವಂತೆ ಮಾಡುತ್ತದೆ," ಎಂದು ಅವರು ಹೇಳಿದರು. ತಂಡವು 640,634 ಒಟ್ಟು ಲೇಖನಗಳನ್ನು 1,393,355 ವ್ಯಕ್ತಿಗಳನ್ನುಅಧ್ಯಯನ ಮಾಡಿ ಈ ವಿಚಾರವನ್ನು ಕಂಡುಕೊಂಡಿದೆ.
ಶುಶ್ರೂಷೆ ಮತ್ತು ಶಿಕ್ಷಣದಂತಹ ಕೆಲವು ವೃತ್ತಿಗಳಲ್ಲಿ ಮಹಿಳೆಯರು ವೈರಸ್ಗೆ ಒಡ್ಡಿಕೊಳ್ಳುವ ಹೆಚ್ಚಿನ ಅಪಾಯವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಇದಲ್ಲದೆ, "ರೋಗದ ನೈಸರ್ಗಿಕ ಇತಿಹಾಸದ ಮೇಲೆ ಪರಿಣಾಮ ಬೀರುವ ಲಿಂಗದ ಆಧಾರದ ಮೇಲೆ ಆರೈಕೆಯಲ್ಲಿ ಅಸಮಾನತೆಗಳಿರಬಹುದು, ಇದು ಹೆಚ್ಚಿನ ತೊಡಕುಗಳು ಮತ್ತು ಪರಿಣಾಮಗಳಿಗೆ ಕಾರಣವಾಗುತ್ತದೆ."
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications