ಮಂತ್ರಾಲಯ ಮಠದ ಉಚಿತ ಪಂಚಾಂಗ ಪಡೆಯಿರಿ

ಪ್ರತಿ ಹಿಂದೂವು ಒಂದಲ್ಲ ಒಂದು ಬಾರಿ ಪಂಚಾಂಗದ ಮೊರೆ ಹೋಗುವುದಂಟು. ಹಳ್ಳಿಗರು ರಾಹುಕಾಲ ಲೆಕ್ಕಾಚಾರ, ಯುಗಾದಿ ಸಮಯದಲ್ಲಿ ಮಳೆಬೆಳೆ, ಭವಿಷ್ಯ ತಿಳಿಯಲು ಪಂಚಾಂಗದ ಪುಟ ತಿರುವುದು ಸಾಮಾನ್ಯ. ಸೌರಮಾನ, ಚಂದ್ರಮಾನ ಪದ್ಧತಿಗನುಸಾರವಾಗಿ ಪಂಚಾಂಗಗಳಿವೆ. ಒಂಟಿಕೊಪ್ಪಲ್ ಪಂಚಾಂಗ, ಶೃಂಗೇರಿ ಮಠದ ಪಂಚಾಂಗ ಪ್ರಸಿದ್ಧವಾಗಿದೆ. ಇದರಂತೆ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಪಂಚಾಂಗದ ಲಭ್ಯತೆಯನ್ನು ಎಲ್ಲಾ ಸಾರ್ವಜನಿಕರಿಗೂ ತಲುಪಿಸುವ ನಿಟ್ಟಿನಲ್ಲಿ ಹಲವು ಯೋಜನೆ ಹಮ್ಮಿಕೊಂಡಿದೆ.
ಆಸ್ತಿಕರನ್ನು ಒಟ್ಟುಗೂಡಿಸಿ, ಸದ್ಭಾವನೆ ಬೆಳೆಸುವ ನಿಟ್ಟಿನಲ್ಲಿ ಸಾಗಿರುವ ರಾಯರ ಮಠದ ವೆಬ್ ತಾಣ ಈಗ ಚಾಂದ್ರಮಾನ ಪಂಚಾಂಗವನ್ನು ಐದು ಭಾಷೆಗಳಲ್ಲಿ ಹೊರತಂದಿದೆ. ಪ್ರತಿ ವರ್ಷ ಪಂಚಾಂಗಗಳನ್ನು ಮುದ್ರಿಸಿ,ಶ್ರೀಮಠದ ಕಚೇರಿಗಳಲ್ಲಿ , ಮಧ್ವ ಸಂಘಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ನೀಡುತ್ತಾ ಬರಲಾಗಿದೆ. ಮಠಕ್ಕೆ ಬರಲಾಗದ ದೂರದೂರಿನ ವೆಬ್ ಲೋಕ ನೆಚ್ಚಿಕೊಂಡಿರುವವರ ಅನುಕೂಲಕ್ಕೆ ರಾಯರಮಠದ ವೆಬ್ ತಾಣ ದಲ್ಲಿ (ಸದ್ಯ ವಿಕೃತಿ ನಾಮ ಸಂವತ್ಸರದ) ಪಂಚಾಂಗವನ್ನು ಡೌನ್ ಲೋಡ್ ಗೆ ನೀಡಲಾಗಿದೆ. ನೊಂದಾಯಿತ ಆಸ್ತಿಕರು ಕನ್ನಡ, ಇಂಗ್ಲೀಷ್, ತಮಿಳು, ಸಂಸ್ಕೃತ, ತೆಲುಗು ಭಾಷೆಗಳಲ್ಲಿನ ಪಂಚಾಂಗವನ್ನು ಪಡೆಯಬಹುದು. ದೃಗ್ಗಣಿತ, ಸೂರ್ಯಸಿದ್ಧಾಂತ ಸಹಿತವಾದ ಈ ಪಂಚಾಂಗವು ತಿಥಿ,ವಾರ, ಕಾಲ, ನಕ್ಷತ್ರ, ಯೋಗ ಹಾಗೂ ಕರಣ ಲೆಕ್ಕಾಚಾರಕ್ಕೆ ಅನುಕೂಲವಾಗಿದೆ ಎಂದು ರಾಯರ ಮಠದ ವೆಬ್ ತಾಣದ ವ್ಯವಸ್ಥಾಪಕ ರಘುನಂದನಾಚಾರ್ಯ ತಿಳಿಸಿದರು.
ಮಂತ್ರಾಲಯ ರಾಯರ ಮಠದ ಈ ವೆಬ್ ತಾಣದಲ್ಲಿ ಮಂತ್ರಾಲಯ ಸೇರಿದಂತೆ ಹಲವು ಶಾಖಾ ಮಠಗಳಲ್ಲಿ ನಡೆಯುವ ಪೂಜೆ ಪುನಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರವಿದೆ. ಇದಕ್ಕಿಂತ ಹೆಚ್ಚಾಗಿ ಮಂತ್ರಾಲಯಕ್ಕೆ ಬರಲಿಚ್ಛಿಸುವ ಆಸ್ತಿಕರಿಗೆ ಮಾರ್ಗಸೂಚಿ, ವಸತಿ ವ್ಯವಸ್ಥೆ, ಸೇವಾ ವಿವರಗಳು ಬೆರಳು ತುದಿಯಲ್ಲಿ ಲಭ್ಯವಿದೆ. ರಾಯರ ಪೂಜಾ ಕೈಂಕರ್ಯಗಳ ಸಚಿತ್ರಗಳ ಜೊತೆ, ಮಠ ನಡೆಸುತ್ತಿರುವ ಶಾಲೆಗಳು, ತಿರುಪತಿಯ ವೈದಿಕ ಸಂಶೋಧನಾ ಕೇಂದ್ರ, ವಧು ವರರ ಅನ್ವೇಷಣಾ ಕೇಂದ್ರದ ಬಗ್ಗೆ ಕೂಡ ಮಾಹಿತಿ ಇದೆ.
ಐದು ಭಾಷೆಗಳಲ್ಲಿ ಲಭ್ಯವಿರುವ ಪಂಚಾಂಗವನ್ನು ಡೌನ್ ಲೋಡ್ ಮಾಡಿಕೊಳ್ಳಲು ಕ್ಲಿಕ್ಕಿಸಿ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
The Principal,
Sri Gurusarvabhouma Sanskrit Vidyapeetha
Sri Raghavendra Swamy Matha,
Mantralayam - 518345
Ph: 08512-279496
Email: [email protected]
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications