ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ ಬಂದಿದೆ ಮರೆಯದೆ ಮರಳಿ

By Super
|
Google Oneindia Kannada News

ಕಾಡಿಗೆ ನಾಡಿಗೆ ಓಡುತ ಬಂತು
ಊರಿಗೆ ಓಣಿಗೆ ಕುಣಿಯುತ ಬಂತು
ಮನೆಮನೆಯಲ್ಲಿ ಹರುಷವ ತಂತು
ಮರೆಯದೆ ಮರಳಿ ಯುಗಾದಿ ಬಂತು

ಕಹಿಕಹಿ ಬೇವಿಗೆ ಸಿಹಿಸಿಹಿ ಬೆಲ್ಲ
ಸೇರಿಸಿ ಸವಿದವ ರುಚಿಯನು ಬಲ್ಲ
ಸಾಗರ ದುಃಖಕೆ ಹನಿಸುಖ ಚೆಲ್ಲಿ
ಜೀವನ ಸಾರವ ಕುಡಿದವ ಬಲ್ಲ

ಸುಳಿಸುಳಿದಾಡುವ ಗಾಳಿಯು ಮೃದುಲ
ಹಸಿರಲಿ ಕುಲುಕುವ ಹೂನಗು ಕೋಮಲ
ಮಾವಿನ ಮಿಡಿಗಳ ತೂಗುವ ಗೊಂಚಲ
ನೋಡಲು ನಿರ್ಮಲ ಮನವೂ ಚಂಚಲ

ಮೂಡಣ ಪಡುವಣ ತೆಂಕಣ ಕಂಕಣ
ಎಲ್ಲೆಡೆ ತುಂಬಿದೆ ಕೋಗಿಲೆ ಗಾನ
ಸುರರಿಗೂ ಇದುವೆ ಸೊಬಗಿನ ತಾಣ
ಇನ್ನೇಕವರಿಗೆ ಅಮೃತ ಪಾನ

ಹಳತನು ಕಳಚಿ ಹೊಸತನು ತರುವ
ಜೀವನದಾಸೆಯ ಚಿಮ್ಮುತಲಿರುವ

ಕಾಡಿಗೆ ನಾಡಿಗೆ ಊರಿಗೆ ಹೊರಳಿ

English summary
Ugadi matte bantu kannada poem by Mohanchanda Patil from Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X