ಶ್ರೀಕೃಷ್ಣನ ಈ 50 ಹೆಸರುಗಳು ನಿಮಗೆ ಗೊತ್ತೆ?
ಭಾರತ ದೇಶದಲ್ಲಿ ವಿವೆಕಾನಂದ ಜಯಂತಿ, ಮಹಾವೀರ ಜಯಂತಿ, ಬಸವಜಯಂತಿ, ಹೀಗೆ ಅನೇಕ ಧಾರ್ಮಿಕ ಮುಖಂಡರ ಜನ್ಮದಿನವನ್ನು ಆಚರಿಸಲಾಗುತ್ತದೆ.
ಭಾರತೀಯರು ಶ್ರೀಕೃಷ್ಣನ ಜನ್ಮದಿನವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ(ಈ ವರ್ಷ ಸೆಪ್ಟೆಂಬರ್ 2)ಯಂದು ಪ್ರತಿವರ್ಷವು ವಿಜೃಂಭಣೆಯಿಂದ ಆಚರಿಸುತ್ತಾರೆ.
ಭಾರತದಲ್ಲಿ ವೃಂದಾವನ, ಮಥುರ, ದ್ವಾರಕ ಮತ್ತಿ ದೇಶ-ವಿದೇಶಗಳಲ್ಲಿ ಇರುವ ಇಸ್ಕಾನ ಮಂದಿರಗಳಲ್ಲಿ ಮುದ್ದು ಕೃಷ್ಣನ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಅನೇಕ ಸ್ಥಳಗಳಲ್ಲಿ ದಹಿ(ಮೊಸರು) ಹಂಡಿಯನ್ನಯ ಒಡೆಯುವ ಸ್ಪರ್ಧೆ ಇಟ್ಟಿರುತ್ತಾರೆ.
ಕೃಷ್ಣನ ಅನೇಕ ನಾಮಗಳು ಇವೆ. ಅದರಲ್ಲಿಯೂ ಕೃಷ್ಣನ 50 ವಿಶೇಷ ನಾಮಗಳು ಮತ್ತು ಅವುಗಳ ಅರ್ಥಗಳನ್ನು ಕೆಳಗಡೆ ಕೊಡಲಾಗಿದೆ.

ಕೃಷ್ಣ, ಗಿರಿಧರ, ಮುರಳೀಧರ, ಪಿತಾಂಬರ...
1. ಕೃಷ್ಣ : ಎಲ್ಲರನ್ನೂ ತನ್ನ ಕಡೆ ಆರ್ಕಷಿತ ಮಾಡಿಕೊಳ್ಳುವವನು.
2. ಗಿರಿಧರ: ಪರ್ವತವನ್ನು ಎತ್ತಿ ಹಿಡಿದವನು.
3. ಮುರಳಿಧರ : ಮುರಳಿಯನ್ನು ನುಡಿಸುವವನು.
4. ಪಿತಾಂಬರಧಾರಿ : ಹಳದಿ ವಸ್ತ್ರವನ್ನು ಧರಿಸಿದವನು.
5. ಮಧುಸೂದನ : ಮಧು ಎಂಬ ದೈತ್ಯನನ್ನು ಸಂಹಾರ ಮಾಡಿದವನು.
6. ಯಶೋದ ದೇವಕಿ ನಂದನ : ಯಶೋದ ಹಾಗೂ ದೇವಕಿಯರಿಗೆ ಸಂತೋಷವನ್ನು ನೀಡುವ ಪ್ರಿಯ ಪುತ್ರ.
7. ಗೋಪಾಲ : ಗೋವುಗಳು ಅಥವಾ ಪೃಥ್ವಿಯ ಪಾಲನೆ ಮಾಡುವವನು.
8. ಗೋವಿಂದ : ಹಸುಗಳ ರಕ್ಷಕ.
9. ಶ್ರೀನಾಥ : ಲಕ್ಷ್ಮಿಗೆ ಆನಂದ ಕೊಡುವವನು.
10. ಕುಂಜ ವಿಹಾರಿ : ಕುಂಜ ಎಂಬ ಹೂದೋಟದಲ್ಲಿ ವಿಹಾರ ಮಾಡುವವನು.

ಚಕ್ರಧಾರಿ, ಶ್ಯಾಮ, ಮಾಧವ...
11. ಚಕ್ರಧಾರಿ: ಸುದರ್ಶನ ಚಕ್ರ, ಜ್ಷಾನ ಚಕ್ರ, ಶಕ್ತಿ ಚಕ್ರ ಧರಿಸುವವನು.
12. ಶ್ಯಾಮ : ಕಪ್ಪು ವರ್ಣದವನು.
13. ಮಾಧವ : ಮಾಯಾಪತಿ.
14. ಮುರಾರಿ : ಮುರ ಎಂಬ ದೈತ್ಯನನ್ನು ಸೋಲಿಸಿದವನು.
15. ಅಸುರಾರಿ : ಅಸುರರನ್ನು ಸೋಲಿಸಿದವನು.
16. ಬನವಾರಿ : ಹೂದೋಟಗಳಲ್ಲಿ ವಿಹರಿಸುವವನು.
17. ಮುಕುಂದ : ನಿಧಿಗಳನ್ನು ಇಟ್ಟುಕೊಂಡಿರವವನು.
18. ಯೋಗೀಶ್ವರ : ಯೋಗಿಗಳ ಈಶ್ವರ.
19. ಗೊಪೇಶ : ಗೋಪಿಗಳ ಈಶ.
20. ಹರಿ : ದು:ಖವನ್ನು ದೂರಮಾಡುವವನು.

ಮದನ, ಮನೋಹರ, ಮೋಹನ...
21. ಮದನ : ಸುಂದರ.
22. ಮನೋಹರ : ಮನಸ್ಸನ್ನು ಆಕರ್ಷಿಸುವವನು.
23. ಮೋಹನ : ಸಮ್ಮೋಹನ ಮಾಡುವವನು.
24. ಜಗದೀಶ : ಜಗತ್ತಿನ ಮಾಲೀಕ.
25. ಪಾಲನಹಾರ : ಸರ್ವರ ಲಾಲನೆ ಪಾಲನೆ ಮಾಡುವವನು.
26. ಕಂಸಾರಿ : ಕಂಸನನ್ನು ಸಂಹರಿಸಿದವನು.
27. ರುಕ್ಮಿಣಿ ವಲ್ಲಭ : ರುಕ್ಮಿಣಿಯ ಪತಿ.
28. ಕೇಶವ : ಕೇಶ ಎಂಬ ದೈತ್ಯನ ಸಂಹಾರ ಮಾಡಿದವನು. ನೀರಿನ ಮೇಲೆ ವಾಸ ಮಾಡುವವನು.
29. ವಾಸುದೇವ : ವಸುದೇವನ ಪುತ್ರ.
30. ರಣಛೋರ : ರುದ್ರಭೂಮಿಯಲ್ಲಿ ಇರುವವನು.

ಗುಢಾಕೇಶ, ಋಷಿಕೇಶ, ಸಾರಥಿ...
31. ಗುಢಾಕೇಶ : ನಿದ್ರೆಯ ಮೇಲೆ ವಿಜಯಿಯಾದವನು.
32. ಋಷಿಕೇಶ : ಇಂದ್ರಿಯಗಳನ್ನು ಜಯಿಸಿದವನು.
33. ಸಾರಥಿ : ಅರ್ಜುನನ ರಥದ ಸಾರಥಿ.
34. ಪೂರ್ಣಪ್ರರಬ್ರಹ್ಮ : ದೇವತೆಗಳಿಗೂ ಮಾಲೀಕ.
35. ದೇವೇಶ : ದೇವಗಳ ಈಶ.
36. ನಾಗ ನಥಿಯ : ಕಲಿನಾಗವನ್ನು ಕೊಂದವನು.
37. ವೃಷ್ಣಿಪತಿ : ಆ ಕುಲದಲ್ಲಿ ಹುಟ್ಟಿದವನು.
38. ಯದುಪತಿ : ಯಾದವರ ಮಾಲೀಕ.
39. ಯದುವಂಶಿ : ಯದು ವಂಶದ ಅವತಾರ.
40. ದ್ವಾರಕಾಧೀಶ : ದ್ವಾರಕೆಯ ಮಾಲೀಕ.

ನಾಗರ, ಛಲೀಯ, ವಲ್ಲಭ...
41. ನಾಗರ : ಸುಂದರ.
42. ಛಲೀಯ : ಛಲ (ಹಠ) ಮಾಡುವವನು.
43. ಮಥುರಾ ಗೋಕುಲವಾಸಿ : ಈ ಸ್ಥಳಗಳ ನಿವಾಸಿ.
44. ವಲ್ಲಭ : ಸದಾ ಆನಂದದಲ್ಲಿ ಇರುವವನು.
45. ದಾಮೋದರ : ಹೊಟ್ಟೆಗೆ ಹಗ್ಗ ಕಟ್ಟಿಸಿಕೊಂಡವವನು.
46. ಅಘಹಾರಿ : ಪಾಪಗಳನ್ನು ಹರಿಸುವವನು.
47. ಸಖ : ಅರ್ಜುನ ಮತ್ತು ಸುದಾಮನ ಮಿತ್ರ.
48. ರಾಸರಚಯ್ಯ : ರಾಸ(ಒಂದು ಪ್ರಕಾರದ ನೃತ್ಯ) ರಚಿಸಿದವನು.
49. ಅಚ್ಯುತ : ಅವನ ಧಾಮದಿಂದ ಮರಳಿ ಹೋಗಲು ಸಾಧ್ಯವಿಲ್ಲ.
50. ನಂದಲಾಲ : ನಂದನ ಪುತ್ರ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications