World premier of 'ಕೃಷ್ಣಂ ವಂದೇ ಜಗದ್ಗುರುಂ...'

ತನ್ನ ತುಂಟಾಟಗಳಿಂದ ಜಗತ್ತನ್ನೇ ಆಟವಾಡಿಸುವ ಜಗನ್ನಾಟಕದ ಸೂತ್ರಧಾರಿ ಶ್ರೀಕೃಷ್ಣನನ್ನು ಅಲ್ಲಲ್ಲಿ ಏಕೆ ಹುಡುಕುವುದು, ಬೆಣ್ಣೆ ಕಳ್ಳ ನವನೀತ ಚೋರನನ್ನು ಸೀದಾ ನಂದಗೋಕುಲಕ್ಕೇ ಹೋಗಿ ನೋಡಬಹುದು. ಅಂಥದೊಂದು ವಿಶಿಷ್ಟವಾದ ವಿಡಿಯೋವನ್ನು ಅಮೆರಿಕನ್ನಡಿಗ ಶ್ರೀವತ್ಸ ಜೋಶಿ ಅವರು ರೂಪಿಸಿದ್ದಾರೆ. ಕೃಷ್ಣನ ಬಾಲಲೀಲೆಯನ್ನು ನೋಡಿ ಪುಳಕಿತರಾಗಿ ಪುನೀತರಾಗಿರಿ. - ಸಂಪಾದಕ.
ಆಗಸ್ಟ್ 28ರಂದು ಜನ್ಮಾಷ್ಟಮಿ. ಕೃಷ್ಣನನ್ನು ಕರೆತರಲು ಈಗಲೇ ಒಮ್ಮೆ ನಂದಗೋಕುಲಕ್ಕೆ ಹೋಗಿಬರಬಹುದು. ಅಲ್ಲಿ ನಂದಕುಮಾರ ನವನೀತಚೋರನ ಬಾಲಲೀಲೆಗಳನ್ನು ನೋಡಿ ಸಂಭ್ರಮಿಸಬಹುದು. ಮೋಹನಮುರಲಿಯ ನಾದಮಾಧುರ್ಯದಿಂದ ಮುದಗೊಳ್ಳಬಹುದು. ಅದಕ್ಕೆ ಸುಲಭೋಪಾಯವಾಗಿ ಈ ಯೂಟ್ಯೂಬ್ ವಿಡಿಯೋ ನೋಡಬಹುದು!
Making of "ಕೃಷ್ಣಂ ವಂದೇ ಜಗದ್ಗುರುಂ..."
Nickelodeon ಚಾನೆಲ್ನಲ್ಲಿ ಬರುತ್ತಿದ್ದ "Little Krishna" computer-animated ಸರಣಿಯ ಆಯ್ದ ಕೆಲವು ವಿಡಿಯೋ ತುಣುಕುಗಳನ್ನು ಪೋಣಿಸಿ, ಅದರ ಮೇಲೆ "ರಾರವೇಣು ಗೋಪಬಾಲ..." ಕರ್ನಾಟಕ ಶಾಸ್ತ್ರೀಯ ಸಂಗೀತ ಕೃತಿಯ (ಕೊಡಮಲೂರು ಜನಾರ್ದನನ್ ಅವರು ಕೊಳಲಿನಲ್ಲಿ ನುಡಿಸಿದ್ದರ ಧ್ವನಿಮುದ್ರಣ) mp3 audio ಜೋಡಿಸಿ, Windows Movie-maker ತಂತ್ರಾಂಶ ಬಳಸಿ ಈ ವಿಡಿಯೋ ತಯಾರಿಸಿದ್ದೇನೆ.
ಕಾಪಿರೈಟ್ಗೆ ಧಕ್ಕೆಯಾಗದಂತೆ ಯೂಟ್ಯೂಬ್ ನಿಯಮಗಳನ್ನು ಪಾಲಿಸಿ ಇದನ್ನು ನನ್ನ ಯೂಟ್ಯೂಬ್ ವಾಹಿನಿಗೆ ಸೇರಿಸಿದ್ದೇನೆ. ಕೃಷ್ಣನನ್ನು ಕಣ್ತುಂಬಿಸಿಕೊಳ್ಳಲೆಂದೇ, ಕೃಷ್ಣನ ಕೊಳಲಗಾನ ಎಲ್ಲರ ಕಿವಿಗಳಲ್ಲೂ ತುಂಬಲೆಂದೇ ಇದನ್ನು ಸಂಯೋಜಿಸಿರುವುದು. ನಿಮ್ಮ ಮೆಚ್ಚುಗೆ, ಪ್ರತಿಕ್ರಿಯೆ, ನಿಮ್ಮ ಇಷ್ಟಮಿತ್ರಬಂಧುಬಾಂಧವರೊಡನೆ ಇದನ್ನು ಹಂಚಿಕೊಂಡು ಅವರಿಗೂ ಕೃಷ್ಣಾನುಗ್ರಹ ಸಿಗುವಂತೆ ಮಾಡುವ ಪ್ರಕ್ರಿಯೆ - ಎಲ್ಲವೂ ಶ್ರೀಕೃಷ್ಣಾರ್ಪಣಮಸ್ತು.
ನೋಡಿ ಆನಂದಿಸಿ, ನವನಿಮಿಷಗಳ ನವನೀತ "ಕೃಷ್ಣಂ ವಂದೇ ಜಗದ್ಗುರುಂ..."
[ಕೃಪೆ : ಶ್ರೀವತ್ಸ ಜೋಶಿ ಫೇಸ್ ಬುಕ್]
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications