2021: ಶ್ರಾವಣ, ಭಾದ್ರಪದ, ಕಾರ್ತಿಕ, ಅಶ್ವಯುಜ ಮಾಸದ ಹಬ್ಬಹರಿದಿನ, ರಜಾದಿನಗಳ ಪಟ್ಟಿ
ಸತತವಾಗಿ ಎರಡನೇ ವರ್ಷ ಕೊರೊನಾ ವೈರಸ್ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಲೇ ಸಾಗುತ್ತಿದೆ. ಹೋದ ವರ್ಷವೂ ಕೊರೊನಾ ರಗಳೆಯಿಂದ ಯಾವುದೇ ಹಬ್ಬಗಳನ್ನು ವಿಜ್ರುಂಭಣೆಯಿಂದ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿಯೂ ಅದು ಮುಂದುವರಿಯುವುದು ಬಹುತೇಕ ನಿಶ್ಚಿತ.
ಎರಡನೇ ವೈರಸ್ ಮತ್ತೆ ಬಾಲ ಬಿಚ್ಚಿತ್ತಿರುವುದರಿಂದ, ಸಾರ್ವಜನಿಕರಿಗೂ ಅಸಡ್ಡೆ ಹೆಚ್ಚಾಗಿರುವುದರಿಂದ, ರಾಜಕೀಯ ಸಭೆಗಳು ಎಗ್ಗಿಲ್ಲದೇ ಸಾಗುತ್ತಿರುವುದರಿಂದ, ಹೊಸ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಾ ಸಾಗುತ್ತಿದೆ. ಆದರೂ, ಮೃತ ಪಡುತ್ತಿರುವವರ ಸಂಖ್ಯೆ ಹೆಚ್ಚಾಗದೇ ಇರುವುದು ಸಮಾಧಾನಕರ ವಿಷಯ.
ಸರಕಾರವೇ ಅಧಿಕೃತವಾಗಿ ಮುಂಬರುವ ಸಾಲುಸಾಲು ಹಬ್ಬಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಾಗಿದೆ. ಕೊರೊನಾ ಚೈನ್ ಅನ್ನು ತಪ್ಪಿಸಲು ಸರಕಾರಕ್ಕೆ ಇದೊಂದೇ ದಾರಿಯಾಗಿರುವಂತೆ ಕಾಣುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹಬ್ಬಗಳ ಸರದಿ ಆರಂಭವಾಗಲಿದೆ.

ಆಗಸ್ಟ್ ಎಂಟರಂದು ಭೀಮನ ಅಮವಾಸ್ಯೆಯ ಮೂಲಕ ಶ್ರಾವಣ ಮಾಸ ಆರಂಭವಾಗಲಿದೆ. ಅಲ್ಲಿಂದ ಮೂರು ತಿಂಗಳ ಕಾಲದಲ್ಲಿ ಲೆಕ್ಕವಿಲ್ಲದಷ್ಟು ಹಬ್ಬಗಳು ಸಾಲಾಗಿ ಬರಲಿದೆ. ಕಳೆದ ಬಾರಿಯಂತೇ ಈ ಬಾರಿಯೂ ಸರಳ ಆಚರಣೆಯೋ ಅಥವಾ ಫುಲ್ ಜೋಷ್ ನಲ್ಲಿ ಹಬ್ಬದ ಆಚರಣೆಯೋ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.
2021ರ ಶ್ರಾವಣ, ಭಾದ್ರಪದ, ಕಾರ್ತಿಕ, ಅಶ್ವಯುತ ಮಾಸದ ಹಬ್ಬಹರಿದಿನಗಳ ಪಟ್ಟಿ ಈ ರೀತಿಯಿದೆ:
| ದಿನಾಂಕ | ದಿನ | ಹಬ್ಬ | ರಜೆ: |
| ಆಗಸ್ಟ್ 8 | ಭಾನುವಾರ | ಭೀಮನ ಅಮಾವಾಸ್ಯಾ, ದೀವಿಗೆ ಅಮಾವಾಸ್ಯಾ, ಶ್ರಾವಣ ಮಾಸಾರಂಭ | ಇಲ್ಲ |
| ಆಗಸ್ಟ್ 10 | ಮಂಗಳವಾರ | ಮಂಗಳಗೌರೀ ವ್ರತ, ಮೊಹರಂ ಪ್ರಾರಂಭ | ಇಲ್ಲ |
| ಆಗಸ್ಟ್ 13 | ಶುಕ್ರವಾರ | ನಾಗರ ಪಂಚಮಿ, ಕಲ್ಕೀ ಜಯಂತಿ | ಇಲ್ಲ |
| ಆಗಸ್ಟ್ 15 | ಭಾನುವಾರ | ಸ್ವಾತಂತ್ರ್ಯ ದಿನಾಚರಣೆ | ಸಾರ್ವತ್ರಿಕ ರಜೆ |
| ಆಗಸ್ಟ್ 20 | ಶುಕ್ರವಾರ | ವರಮಹಾಲಕ್ಷ್ಮೀ ವ್ರತ, ಮೊಹರಂ ಕಡೇ ದಿನ | ಸರಕಾರೀ ರಜೆ |
| ಆಗಸ್ಟ್ 21 | ಶನಿವಾರ | ಚಾಂದ್ರ/ಸೌರ ಯಗುಪಾಕರ್ಮ, ತಿರು ಓಣಂ | ಇಲ್ಲ |
| ಆಗಸ್ಟ್ 22 | ಭಾನುವಾರ | ಯಜುರುಪಾರ್ಮ/ ರಕ್ಷಾ ಬಂಧನ | - |
| ಆಗಸ್ಟ್ 24 | ಮಂಗಳವಾರ | ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ | ಇಲ್ಲ |
| ಆಗಸ್ಟ್ 30 | ಸೋಮವಾರ | ಶ್ರೀಕೃಷ್ಣ ಜನ್ಮಾಷ್ಟಮಿ | ನಿರ್ಬಂಧಿತ ರಜೆ |
| ಆಗಸ್ಟ್ 31 | ಮಂಗಳವಾರ | ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ ಉತ್ಸವ | ಇಲ್ಲ |
| ಸೆಪ್ಟಂಬರ್ 5 | ಭಾನುವಾರ | ಡಾ.ರಾಧಾಕೃಷ್ಣನ್ ಜನ್ಮದಿನ, ಶಿಕ್ಷಕರ ದಿನಾಚರಣೆ | - |
| ಸೆಪ್ಟಂಬರ್ 8 | ಬುಧವಾರ | ಕನ್ಯಾಮರಿಯಮ್ಮ ಜನ್ಮದಿನ, ನೇಟಿವಿಟಿ ಹಬ್ಬ | ಇಲ್ಲ |
| ಸೆಪ್ಟಂಬರ್ 9 | ಗುರುವಾರ | ಗೌರೀ ತೃತೀಯಾ | ನಿರ್ಬಂಧಿತ ರಜೆ |
| ಸೆಪ್ಟಂಬರ್ 10 | ಶುಕ್ರವಾರ | ಗಣೇಶ ಚತುರ್ಥಿ | ರಜೆ |
| ಸೆಪ್ಟಂಬರ್ 19 | ಭಾನುವಾರ | ಅನಂತ ಚತುರ್ದಶೀ, ನೋಂಪು | - |
| ಅಕ್ಟೋಬರ್ 2 | ಶನಿವಾರ | ಗಾಂಧಿ ಜಯಂತಿ | ಸಾರ್ವತ್ರಿಕ ರಜೆ |
| ಅಕ್ಟೋಬರ್ 6 | ಬುಧವಾರ | ಮಹಾಲಯ ಅಮಾವಾಸ್ಯ | ಸರಕಾರೀ ರಜೆ |
| ಅಕ್ಟೋಬರ್ 14 | ಗುರುವಾರ | ಮಹಾನವಮಿ, ಆಯುಧಪೂಜೆ | ಸರಕಾರೀ ರಜೆ |
| ಅಕ್ಟೋಬರ್ 15 | ಶುಕ್ರವಾರ | ವಿಜಯದಶಮಿ | ಸರಕಾರೀ ರಜೆ |
| ಅಕ್ಟೋಬರ್ 20 | ಬುಧವಾರ | ವಾಲ್ಮೀಕಿ ಜಯಂತಿ/ಈದ್ ಮಿಲಾದ್/ಪೈಗಂಬರ್ ಜನ್ಮದಿನ | ಸರಕಾರೀ ರಜೆ |
| ನವೆಂಬರ್ 1 | ಸೋಮವಾರ | ಕರ್ನಾಟಕ ರಾಜ್ಯೋತ್ಸವ | ಸಾರ್ವತ್ರಿಕ ರಜೆ |
| ನವೆಂಬರ್ 3 | ಬುಧವಾರ | ನರಕ ಚತುರ್ದಶಿ | ಸರಕಾರೀ ರಜೆ |
| ನವೆಂಬರ್ 4 | ಗುರುವಾರ | ದೀಪಾವಳಿ | ನಿರ್ಬಂಧಿತ ರಜೆ |
| ನವೆಂಬರ್ 5 | ಶುಕ್ರವಾರ | ಬಲಿಪಾಡ್ಯಮಿ | ಸರಕಾರೀ ರಜೆ |
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications