2021: ಶ್ರಾವಣ, ಭಾದ್ರಪದ, ಕಾರ್ತಿಕ, ಅಶ್ವಯುಜ ಮಾಸದ ಹಬ್ಬಹರಿದಿನ, ರಜಾದಿನಗಳ ಪಟ್ಟಿ
ಸತತವಾಗಿ ಎರಡನೇ ವರ್ಷ ಕೊರೊನಾ ವೈರಸ್ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಲೇ ಸಾಗುತ್ತಿದೆ. ಹೋದ ವರ್ಷವೂ ಕೊರೊನಾ ರಗಳೆಯಿಂದ ಯಾವುದೇ ಹಬ್ಬಗಳನ್ನು ವಿಜ್ರುಂಭಣೆಯಿಂದ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿಯೂ ಅದು ಮುಂದುವರಿಯುವುದು ಬಹುತೇಕ ನಿಶ್ಚಿತ.
ಎರಡನೇ ವೈರಸ್ ಮತ್ತೆ ಬಾಲ ಬಿಚ್ಚಿತ್ತಿರುವುದರಿಂದ, ಸಾರ್ವಜನಿಕರಿಗೂ ಅಸಡ್ಡೆ ಹೆಚ್ಚಾಗಿರುವುದರಿಂದ, ರಾಜಕೀಯ ಸಭೆಗಳು ಎಗ್ಗಿಲ್ಲದೇ ಸಾಗುತ್ತಿರುವುದರಿಂದ, ಹೊಸ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಾ ಸಾಗುತ್ತಿದೆ. ಆದರೂ, ಮೃತ ಪಡುತ್ತಿರುವವರ ಸಂಖ್ಯೆ ಹೆಚ್ಚಾಗದೇ ಇರುವುದು ಸಮಾಧಾನಕರ ವಿಷಯ.
ಸರಕಾರವೇ ಅಧಿಕೃತವಾಗಿ ಮುಂಬರುವ ಸಾಲುಸಾಲು ಹಬ್ಬಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಾಗಿದೆ. ಕೊರೊನಾ ಚೈನ್ ಅನ್ನು ತಪ್ಪಿಸಲು ಸರಕಾರಕ್ಕೆ ಇದೊಂದೇ ದಾರಿಯಾಗಿರುವಂತೆ ಕಾಣುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹಬ್ಬಗಳ ಸರದಿ ಆರಂಭವಾಗಲಿದೆ.

ಆಗಸ್ಟ್ ಎಂಟರಂದು ಭೀಮನ ಅಮವಾಸ್ಯೆಯ ಮೂಲಕ ಶ್ರಾವಣ ಮಾಸ ಆರಂಭವಾಗಲಿದೆ. ಅಲ್ಲಿಂದ ಮೂರು ತಿಂಗಳ ಕಾಲದಲ್ಲಿ ಲೆಕ್ಕವಿಲ್ಲದಷ್ಟು ಹಬ್ಬಗಳು ಸಾಲಾಗಿ ಬರಲಿದೆ. ಕಳೆದ ಬಾರಿಯಂತೇ ಈ ಬಾರಿಯೂ ಸರಳ ಆಚರಣೆಯೋ ಅಥವಾ ಫುಲ್ ಜೋಷ್ ನಲ್ಲಿ ಹಬ್ಬದ ಆಚರಣೆಯೋ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.
2021ರ ಶ್ರಾವಣ, ಭಾದ್ರಪದ, ಕಾರ್ತಿಕ, ಅಶ್ವಯುತ ಮಾಸದ ಹಬ್ಬಹರಿದಿನಗಳ ಪಟ್ಟಿ ಈ ರೀತಿಯಿದೆ:
| ದಿನಾಂಕ | ದಿನ | ಹಬ್ಬ | ರಜೆ: |
| ಆಗಸ್ಟ್ 8 | ಭಾನುವಾರ | ಭೀಮನ ಅಮಾವಾಸ್ಯಾ, ದೀವಿಗೆ ಅಮಾವಾಸ್ಯಾ, ಶ್ರಾವಣ ಮಾಸಾರಂಭ | ಇಲ್ಲ |
| ಆಗಸ್ಟ್ 10 | ಮಂಗಳವಾರ | ಮಂಗಳಗೌರೀ ವ್ರತ, ಮೊಹರಂ ಪ್ರಾರಂಭ | ಇಲ್ಲ |
| ಆಗಸ್ಟ್ 13 | ಶುಕ್ರವಾರ | ನಾಗರ ಪಂಚಮಿ, ಕಲ್ಕೀ ಜಯಂತಿ | ಇಲ್ಲ |
| ಆಗಸ್ಟ್ 15 | ಭಾನುವಾರ | ಸ್ವಾತಂತ್ರ್ಯ ದಿನಾಚರಣೆ | ಸಾರ್ವತ್ರಿಕ ರಜೆ |
| ಆಗಸ್ಟ್ 20 | ಶುಕ್ರವಾರ | ವರಮಹಾಲಕ್ಷ್ಮೀ ವ್ರತ, ಮೊಹರಂ ಕಡೇ ದಿನ | ಸರಕಾರೀ ರಜೆ |
| ಆಗಸ್ಟ್ 21 | ಶನಿವಾರ | ಚಾಂದ್ರ/ಸೌರ ಯಗುಪಾಕರ್ಮ, ತಿರು ಓಣಂ | ಇಲ್ಲ |
| ಆಗಸ್ಟ್ 22 | ಭಾನುವಾರ | ಯಜುರುಪಾರ್ಮ/ ರಕ್ಷಾ ಬಂಧನ | - |
| ಆಗಸ್ಟ್ 24 | ಮಂಗಳವಾರ | ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ | ಇಲ್ಲ |
| ಆಗಸ್ಟ್ 30 | ಸೋಮವಾರ | ಶ್ರೀಕೃಷ್ಣ ಜನ್ಮಾಷ್ಟಮಿ | ನಿರ್ಬಂಧಿತ ರಜೆ |
| ಆಗಸ್ಟ್ 31 | ಮಂಗಳವಾರ | ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ ಉತ್ಸವ | ಇಲ್ಲ |
| ಸೆಪ್ಟಂಬರ್ 5 | ಭಾನುವಾರ | ಡಾ.ರಾಧಾಕೃಷ್ಣನ್ ಜನ್ಮದಿನ, ಶಿಕ್ಷಕರ ದಿನಾಚರಣೆ | - |
| ಸೆಪ್ಟಂಬರ್ 8 | ಬುಧವಾರ | ಕನ್ಯಾಮರಿಯಮ್ಮ ಜನ್ಮದಿನ, ನೇಟಿವಿಟಿ ಹಬ್ಬ | ಇಲ್ಲ |
| ಸೆಪ್ಟಂಬರ್ 9 | ಗುರುವಾರ | ಗೌರೀ ತೃತೀಯಾ | ನಿರ್ಬಂಧಿತ ರಜೆ |
| ಸೆಪ್ಟಂಬರ್ 10 | ಶುಕ್ರವಾರ | ಗಣೇಶ ಚತುರ್ಥಿ | ರಜೆ |
| ಸೆಪ್ಟಂಬರ್ 19 | ಭಾನುವಾರ | ಅನಂತ ಚತುರ್ದಶೀ, ನೋಂಪು | - |
| ಅಕ್ಟೋಬರ್ 2 | ಶನಿವಾರ | ಗಾಂಧಿ ಜಯಂತಿ | ಸಾರ್ವತ್ರಿಕ ರಜೆ |
| ಅಕ್ಟೋಬರ್ 6 | ಬುಧವಾರ | ಮಹಾಲಯ ಅಮಾವಾಸ್ಯ | ಸರಕಾರೀ ರಜೆ |
| ಅಕ್ಟೋಬರ್ 14 | ಗುರುವಾರ | ಮಹಾನವಮಿ, ಆಯುಧಪೂಜೆ | ಸರಕಾರೀ ರಜೆ |
| ಅಕ್ಟೋಬರ್ 15 | ಶುಕ್ರವಾರ | ವಿಜಯದಶಮಿ | ಸರಕಾರೀ ರಜೆ |
| ಅಕ್ಟೋಬರ್ 20 | ಬುಧವಾರ | ವಾಲ್ಮೀಕಿ ಜಯಂತಿ/ಈದ್ ಮಿಲಾದ್/ಪೈಗಂಬರ್ ಜನ್ಮದಿನ | ಸರಕಾರೀ ರಜೆ |
| ನವೆಂಬರ್ 1 | ಸೋಮವಾರ | ಕರ್ನಾಟಕ ರಾಜ್ಯೋತ್ಸವ | ಸಾರ್ವತ್ರಿಕ ರಜೆ |
| ನವೆಂಬರ್ 3 | ಬುಧವಾರ | ನರಕ ಚತುರ್ದಶಿ | ಸರಕಾರೀ ರಜೆ |
| ನವೆಂಬರ್ 4 | ಗುರುವಾರ | ದೀಪಾವಳಿ | ನಿರ್ಬಂಧಿತ ರಜೆ |
| ನವೆಂಬರ್ 5 | ಶುಕ್ರವಾರ | ಬಲಿಪಾಡ್ಯಮಿ | ಸರಕಾರೀ ರಜೆ |
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications