ಬೆಂಗಳೂರ ಜಾಗರಣೆಯ ಕಡಲಲಿ ನಗೆಯ ಅಲೆ
ಬೆಂಗಳೂರು : ನಗರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಮಹಾಶಿವರಾತ್ರಿ ಜಾಗರಣೆ ಸೇರಿದ್ದವರು ತಪ್ಪಿಯೂ ತೂಕಡಿಸಲಿಲ್ಲ. ಆ.ರಾ ಮಿತ್ರ ಮತ್ತು ಮಾಸ್ಟರ್ ಹಿರಣ್ಣಯ್ಯ ಸಭಿಕರ ಗಮನವನ್ನೆಲ್ಲಾ ತಮ್ಮ ನಗೆ ಚಟಾಕಿಗಳಲ್ಲಿ ಹಿಡಿದಿಟ್ಟುಕೊಂಡಿದ್ದರು. ಅದು ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಜಾಣ-ಜಾಣೆಯರ ನಗೆ ಜಾಗರಣೆ ಕಾರ್ಯಕ್ರಮ.
ಈಶ್ವರನಿಗೆ ಹಾವು ಮಫ್ಲರ್ ಇದ್ದ ಹಾಗೆ. ತಲೆಮೇಲೆ ಒವರನ ಹೆಡ್ ಟ್ಯಾಂಕ್ ಇಟ್ಟುಕೊಂಡಿರುವುದುರಿಂದ ಚಳಿಯಾಗದ ಹಾಗೆ ಹಣೆಯಲ್ಲಿ ಅಗ್ಗಿಷ್ಟಿಕೆ ಇಟ್ಟುಕೊಂಡಿದ್ದಾನೆ ಎಂದು ಆ.ರಾ. ಮಿತ್ರರು ಎಸೆದ ಜೋಕು ಕೇಳಿ ನಕ್ಕು ಮುಗಿಸುತ್ತಲೇ ಇನ್ನೊಂದು ಜೋಕು ಸಭಿಕರ ಮುತ್ತಿಕೊಂಡಿತು. ಮಾಸ್ಟರ್ ಹಿರಣ್ಣಯ್ಯನವರು ದುಃಖಕ್ಕೆ ನಗುವೇ ಮೋಕ್ಷ ಎನ್ನುತ್ತಾ ತಮ್ಮ ಜೋಕುಗಳ ಸಾಲುಗಳನ್ನೂ ಸೇರಿಸಿದರು.
ತೊಗರಿ ಬೆಲೆ ಎಷ್ಟ್ರೀ ..., 40 ರೂಪಾಯಿ . ಅದು ಇವತ್ತು ಬೆಳಿಗ್ಗೆ ಇದ್ದ ಬೆಲೆ, ಈಗ ರೇಟೆಷ್ಟು ಅಂತ ಹೇಳ್ರೀ....
ನಲ್ವತ್ತು ಮೂವತ್ತರ ಸೈಟಿನಲ್ಲಿ ಐದು ಅಡಿ ಆಚೆ ಬಿಡು, ಐದು ಅಡಿ ಈಚೆ ಬಿಡು, ಉಳಿದುದರಲ್ಲಿ ಪ್ರಾಣ ಬಿಡು... ಹೀಗೆ ಬದಲಾಗುತ್ತಿರುವ ಬದುಕಿನ ಶೈಲಿಯಿಂದಾಗಿ ಮಂದಿ ಎದುರಿಸುತ್ತಿರುವ ಸಮಸ್ಯೆಗಳ ಬಗೆಗಿನ ಹಾರಿದ ನಗೆ ಚಟಾಕಿಗಳ ನಡುವೆ ರಾತ್ರಿ ಕಳೆದದ್ದೇ ಗೊತ್ತಾಗಲಿಲ್ಲ. ಕಾರ್ಯಕ್ರಮದಲ್ಲಿ ಬಿ.ಕೆ.ಎಸ್.ವರ್ಮಾ, ಶತಾವಧಾನಿ ಆರ್. ಗಣೇಶ್ ಭಾಗವಹಿಸಿದ್ದರು.
ಇತರೆಡೆಗಳಲ್ಲಿ ಶಿವರಾತ್ರಿ : ಅಲಸೂರಿನಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಶಿವ ಪೂಜೆ ನಡೆಯಿತು. ಇಲ್ಲಿರುವ ನಂದಿ ವಿಗ್ರಹದ ಕಿವಿಯಲ್ಲಿ ಕೇಳಿಕೊಳ್ಳುವ ಬೇಡಿಕೆಗಳು ಶಿವನಿಗೆ ತಲುಪುತ್ತದೆ ಎಂಬ ಪ್ರತೀತಿ ಇರುವುದರಿಂದ ಭಕ್ತರು ನಂದಿ ಕಿವಿಯಲ್ಲಿ ತಮ್ಮ ಬೇಡಿಕೆಗಳನ್ನು ಪಿಸುಗುಟ್ಟಿದರು.
ಮೈಸೂರು ಅರಮನೆ ಆವರಣದ ತ್ರಿನಯನೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಚಿನ್ನದ ಕೊಳಗ ಧಾರಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಬಳ್ಳಾರಿಯಲ್ಲಿ ಪ್ರಜಾಪಿತ ಈಶ್ವರಿ ವಿಶ್ವ ವಿದ್ಯಾಲಯದವರು 101 ಶಿವಲಿಂಗಗಳ ಮೆರವಣಿಗೆ ನಡೆಸಿದ್ದರು. ಸಿದ್ಧಗಂಗೆ ದೇವಸ್ಥಾನದಲ್ಲಿ ರಾಸುಗಳ ಓಟದ ಸ್ಪರ್ಧೆ ನಡೆಸಿ, ಬಹುಮಾನ ವಿತರಿಸಲಾಯಿತು.
ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಹಾಲು ಒಕ್ಕೂಟದ ವತಿಯಿಂದ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಕೈದಿಗಳಿಗೆ ಡಿಐಜಿ (ಕಾರಾಗೃಹ) ಜಯರಾಮಯ್ಯ ಹಾಲು ಮತ್ತು ಪೇಡ ವಿತರಿಸಿದರು. ಹೆಜಮಾಡಿಯ ಮಹಾಲಿಂಗೇಶ್ವರ ದೇವರಿಗೆ ರಜತ ಪಲ್ಲಕಿ ಅರ್ಪಿಸಲಾಯಿತು. ಶಿವರಾತ್ರಿ ದಿನ, ರಾಜ್ಯಾದ್ಯಂತ ಎಲ್ಲ ಶಿವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಮಹಾ ಶಿವರಾತ್ರಿ-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications