ಸತ್ತಂತಿಹ ಇಂಥವರನ್ನು ಬಡಿದೆಚ್ಚರಿಸುವುದು ಯಾರು?

ನಮ್ಮ ರಾಜ್ಯದಲ್ಲಿ ಯಾವುದೇ ಚಿಕ್ಕ ಮಗುವಿನ ಮುಂದೆ ಒಂದಿಷ್ಟು ಪೋಟೊ ಹಿಡಿದು ಇದರಲ್ಲಿ ಕನ್ನಡ ತಾಯಿ ಭುವನೇಶ್ವರಿ ಯಾರು ಎಂದು ಕೇಳಿದ್ದಾಗ ಆ ಮಗು ತೋರಿಸುತ್ತದೆ. ಇದಕ್ಕೆ ಹೇಳುವುದು ಸ್ವಾಮೀ ಕನ್ನಡ ಅಭಿಮಾನ ಅನ್ನುವುದು. ಈ ಅಭಿಮಾನ ಯಾದಗಿರಿ ಜಿಲ್ಲಾಡಳಿತಕ್ಕೆ ಇಲ್ಲವೇ?
ಆದರೆ, ಯಾದಗಿರಿಯ ಜಿಲ್ಲಾಡಳಿತ ಮಾತ್ರ ಗಾಢ ನಿದ್ರೆಯಲ್ಲಿ ಮುಳುಗಿದೆ. ಜಿಲ್ಲಾಡಳಿತ 56ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿದೆ. ಆ ಪತ್ರಿಕೆಯ ಮುಖ ಪುಟದಲ್ಲಿ ಭುವನೇಶ್ವರಿ ತಾಯಿ ಭಾವಚಿತ್ರದ ಬದಲು ಭಾರತಾಂಬೆಯ ಭಾವಚಿತ್ರವನ್ನು ಮುದ್ರಿಸಿದ್ದಾರೆ. ಈ ಆಹ್ವಾನ ಪತ್ರಿಕೆ ಪ್ರಮುಖರ ಕೈಗೆ ಈಗಾಗಲೆ ಸೇರಿದೆ.
ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಮಾತ್ರ ಹಿಂದುಳಿದಿಲ್ಲ ಬೌದ್ಧಿಕವಾಗಿಯೂ ಹಿಂದುಳಿದಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕಚ್ಚಾಡುವವರನ್ನು ಕೂಡಿಸಿ ಒಲಿಸಬಹುದು. ಆದರೆ, ಸತ್ತಂತಿಹ ಇಂಥವರನ್ನು ಬಡಿದೆಚ್ಚರಿಸುವುದು ಯಾರು? ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ.












Click it and Unblock the Notifications