ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1
ಫಾಲ್ಗುಣ ಮಾಸದ ಹುಣ್ಣಿಮೆಯಂದು ಎಲ್ಲ ಕಡೆಗೂ ಕಾಮ ಅಥವಾ ಮನ್ಮಥನ ಪೂಜೆ ಮಾಡಿ, ಓಕುಳಿ ಅಥವಾ ಬಣ್ಣಗಳನ್ನು ಒಬ್ಬರಿಗೊಬ್ಬರು ಹಾಕಿ ಸಿಹಿ ತಿಂಡಿಗಳನ್ನು ಮಾಡಿ ಸಂತೋಷಿಸುತ್ತಾರೆ. ಸಾಯಂಕಾಲದ ಹೊತ್ತೆಗೆ ಸೌದೆ, ಭರಣಿಗಳ ಮೂಲಕ ಕಾಮದಹನ ಮಾಡಿ ಪ್ರದಕ್ಷಿಣೆ ಬಂದು ಆ ಬೂದಿಗಳನ್ನು ಹಣೆಯಲ್ಲಿ ಧರಿಸುತ್ತಾರೆ. ಇದೊಂದು ಹಬ್ಬವಾಗಿದೆ. ಇದರ ಹಿಂದೆ ಒಂದು ಕಥೆ ಇದೆ.
ದಕ್ಷ ಬ್ರಹ್ಮನಿಗೆ ಮಗಳಾಗಿ ಹುಟ್ಟಿದ ದಾಕ್ಷಾಯಣಿಯು ಶಿವನನ್ನು ಒಲಿದು ಮದುವೆಯಾಗುತ್ತಾಳೆ. ದಕ್ಷನು ಯಜ್ಞವನ್ನು ಮಾಡಿ ತನ್ನ ಇತರ ಮಕ್ಕಳನ್ನು ಕರೆಸಿ, ದಾಕ್ಷಾಯಣಿ (ಸತಿ) ಯನ್ನು ಬಡವಳೆಂದು ಯಜ್ಞಕ್ಕೆ ಕರೆಯುಯುವುದೇ ಇಲ್ಲ.
ಆದರೂ, ಶಿವನು ಬೇಡವೆಂದು ತಡೆದರೂ ತಂದೆಯ ಮೇಲಿನ ಮೋಹದಿಂದ ದಾಕ್ಷಾಯಣಿಯು ತವರು ಮನೆಗೆ ಹೋಗುತ್ತಾಳೆ. ಅಲ್ಲಿ ತಂದೆಯಿಂದ ಅವಮಾನಿತಳಾಗಿ ದುಃಖದಿಂದ ಯಜ್ಞ ಕುಂಡವನ್ನು ಹಾರಿ ಅಸು ನೀಗುತ್ತಾಳೆ.

ಅದೇ ದಾಕ್ಷಾಯಣಿ ಅಥವಾ ಸತಿಯು ಹಿಮವದ್ ಪರ್ವತರಾಜ, ಮೇನಕೆಯ ಉದರದಿಂದ ಪುನರ್ಜನ್ಮ ಪಡೆಯುತ್ತಾಳೆ. ಪರ್ವತರಾಜನಿಗೆ ತುಂಬಾ ಸಂತೋಷವಾಗುತ್ತದೆ. ಅವಳಿಗೆ ಉಮಾ ಎಂದು ಹೆಸರಿಡುತ್ತಾನೆ. ಉಮೆ ಬೆಳೆಯುತ್ತಾ ಅನುಪಮ, ಲಾವಣ್ಯವತಿಯಾಗುತ್ತಾಳೆ. ಆಗ ಅಲ್ಲಿಗೆ ಮಹರ್ಷಿ ನಾರದರು ಬರುತ್ತಾರೆ.
ದಿವ್ಯ ತೇಜಸ್ವಿನಿಯಾದ ಉಮೆಯನ್ನು ಕಂಡು ಇವಳು ಶಿವನ ಅರ್ಧಾಂಗಿಯಾಗುವವಳೆಂದು ಹೇಳಿ, ಅವಳನ್ನು ಶಿವನು ತಪಶ್ವರ್ಯ ಮಾಡುವ ಸ್ಥಳಕ್ಕೆ ಕಳುಹಿಸಿ ಅವನ ಸೇವೆಯನ್ನು , ಪೂಜೆಯನ್ನು ಮಾಡಿಕೊಂಡಿರಲಿ ಎಂದು ಹೇಳಿ ಹೋಗುತ್ತಾರೆ. ಕೂಡಲೇ ಪರ್ವತರಾಜನು, ಉಮಾ ಮತ್ತು ಅವಳ ಸಖಿಯರನ್ನು ಕರೆದುಕೊಂಡು, ಶಿವನ ಅಪ್ಪಣೆ ಪಡೆದು ಅವನ ಸೇವೆಗೆ ನೇಮಿಸಿ ಮರಳುತ್ತಾನೆ.
ಇತ್ತ ತಾರಕಾಸುರನೆಂಬ ರಾಕ್ಷಸನು ದೇವತೆಗಳನ್ನು ಸೋಲಿಸಿ ಸ್ವರ್ಗವನ್ನು ಸೂರೆಗೊಳ್ಳುತ್ತಾನೆ. ಸ್ಪರ್ಗಾಧಿಪತಿಯಾದ ಇಂದ್ರನೇ ಮೊದಲಾದ ದೇವತೆಗಳು ದಿಕ್ಕಟ್ಟವರಂತಾಗುತ್ತಾರೆ. ಎಲ್ಲರೂ ಕಂಗಾಲರಾಗಿ ಸೃಷ್ಠಿಕರ್ತನಾದ ಬ್ರಹ್ಮನಲ್ಲಿ ಹೋಗಿ ಮೊರೆ ಇಡುತ್ತಾರೆ.
ಆಗ ಬ್ರಹ್ಮನು ಅವನು ನನ್ನಿಂದಲೆ ವರವನ್ನು ಪಡೆದಿದ್ದಾನೆ. ನನಗೇನೂ ಅವನನ್ನು ಸಂಹರಿಸಲು ಸಾಧ್ಯವಾಗುವುದಿಲ್ಲ. ತಪೋನಿರತನಾದ ಈಶ್ವರ (ಶಿವನು) ಉಮೆಯನ್ನು ಮದುವೆಯಾದರೆ ಅವನಿಂದ ಹುಟ್ಟಿದ ಕುಮಾರನು ಭಲವಂತನೂ ಸಮರ್ಥನೂ ಆಗಿರುತ್ತಾನೆ. ಅವನಿಂದಲೇ ತಾರಕಾಸುರನ ವಧೆಯಾಗುತ್ತದೆ. ಹಾಗಾಗಿ ಶಿವನನ್ನು ಪ್ರಾರ್ಥಿಸಿ ಎಂದು ಹೇಳುತ್ತಾನೆ.
ಆಗ ದೇವೆಂದ್ರನು ಯೋಚಿಸಿ, ಇದಕ್ಕೆ ಯೋಗ್ಯನಾದವನು ಮನ್ಮಥ ಅರ್ಥಾತ್ ಕಾಮನೆಂದು ನಿರ್ಧರಿಸಿ ಅವನನ್ನು ಸ್ಮರಿಸುತ್ತಾನೆ. ಕೂಡಲೇ ಮನ್ಮಥನು ಅಲ್ಲಿಗೆ ಬಂದು ನಿಂತು ಯಾವ ಕಾರ್ಯಾಥಿಯಾಗಿ ನನ್ನನ್ನು ಕರೆಯಿಸಿದೇ ಎಂದು ಕೇಳುತ್ತಾನೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications