ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ2
ದೇವತೆಗಳನ್ನು ಕಾಯುವುದಕ್ಕೆ ಈಗ ನೀನೇ ಸಮರ್ಥ. ಕೆಲಸವು ಕಠಿಣವಾದದ್ದು ಎಲ್ಲವನ್ನೂ ಮರೆತು ಸಮಾಧಿಸ್ಥನಾದ ಶಿವನನ್ನು ಎಚ್ಚರಿಸಿ, ಶಿವನನ್ನು ಸಂಸಾರಕ್ಕೆ ತರಬೇಕು. ಇದೊಂದು ಉಪಾಯದಿಂದ ನಮ್ಮ ಕಷ್ಟ ಪರಿಹಾರವಾಗುವುದು. ನಿನ್ನೊಬ್ಬನಿಂದಲೇ ನಮ್ಮ ಕಾರ್ಯ ಸಿದ್ದಿಸುವುದು.
ಜೊತೆಗೆ ನಿನ್ನ ಸತಿಯಾದ ರತಿ ದೇವಿಯನ್ನು ನಿನ್ನ ಮಿತ್ರನಾದ ವಸಂತನನ್ನು ಕರೆದುಕೊಂಡು ಹೋಗು ಎನ್ನಲಾಗಿ ಮನ್ಮಥನು, ವಸಂತನಿಂದಲೂ , ಹೆಂಡತಿಯಾದ ರತಿಯಿಂದಲೂ ಕೂಡಾ ಕಬ್ಬು, ಬಿಲ್ಲು, ಹೂಬಾಣಗಳನ್ನು ತೆಗೆದುಕೊಂಡು ಹೊರಡುತ್ತಾನೆ.
ಅವನ ಮುಂದೆ ವಸಂತನು ಹೊರಟರೆ ವನದಲ್ಲಿ ಚಳಿಯು ಓಡಿ ಹೋಗುತ್ತದೆ. ಮಾವು ಚಿಗುರುತ್ತದೆ. ಕಾಡಿನಲ್ಲಿ ಎಲ್ಲೆಲ್ಲಿಯೂ ಹೂಗಳು ಬಿಟ್ಟು ಪರಿಮಳ ಬೀರುತ್ತವೆ. ಹಿಂದಿನಿಂದ ಮಧುಪಗಳು ಝೇಂಕರಿಸುತ್ತವೆ. ಕೋಗಿಲೆ ಹಾಡುತ್ತವೆ ವನಶ್ರೀಯು ಸಂತೋಷದಿಂದ ಕುಣಿಯುತ್ತಿರುತ್ತಾಳೆ.

ಆಗ ಉಮೆಯು ಶೀತಲವಾದ ನೀರನ್ನು ಪರಿಮಳಯುಕ್ತ ಹೂಗಳನ್ನು ತೆಗೆದುಕೊಂಡು ಶಿವನ ಪೂಜೆಗೆ ಬರುತ್ತಾಳೆ. ಬಾಗಿಲಲ್ಲಿದ್ದ ನಂದಿಯು ಶಿವನ ಅಪ್ಪಣೆ ಪಡೆದು ಅವಳಿಗೆ ಹೋಗಲು ಬಿಡುತ್ತಾನೆ. ಇದೇ ಸಮಯವೆಂದು ಕಾಮನು ಉಮೆಯ ಹಿಂದಿನಿಂದ ನುಗ್ಗುತ್ತಾನೆ. ರತಿದೇವಿಯು ವನದೇವಿಯರ ಜೊತೆಗೂಡುತ್ತಾರೆ.
ಅಲ್ಲಿ ದೇವದಾರು ಪೀಠದಲ್ಲಿ ಚರ್ಮಾಂಬರಧಾರಿಯಾಗಿ ವೀರಾಸದಲ್ಲಿ ಕುಳಿತು ತನ್ನ ಪದ್ಮಕ್ರಗಳೆರಡನ್ನು ತೊಡೆಯ ಮೇಲಿರಿಸಿ, ನಾಸಾಗ್ರದಲ್ಲಿ ದ್ರುಷ್ಠಿಯನ್ನಿಟ್ಟು ತಪೋನಿರತನಾದ ಆ ಶಿವನನ್ನು ಕಂಡು ಕಾಮನಿಗೆ ಭಯವಾಗುತ್ತದೆ.
ವನದೇವತೆಯರು ಧೈರ್ಯವನ್ನು ತುಂಬಲಾಗಿ ತನ್ನ ಹೂಬಾಣಗಳಿಂದ ಶಿವನ ಎದೆಗೆ ಹೊಡೆಯುತ್ತಾನೆ. ಕ್ಷಣಮಾತ್ರ ತಪದಿಂದ ವಿಚಲಿತನದ ಶಿವನು ಕ್ರೋಧದಿಂದ ಮೂರನೆಯ ಕಣ್ಣನ್ನು ಬಿಡಲಾಗಿ ಅರೆಕ್ಷಣದಲ್ಲಿ ಕಾಮನು ದಹಿಸಿ ಬೂದಿಯಾಗುತ್ತಾನೆ.
ಪತಿಯನ್ನು ಕಳೆದುಕೊಂಡು ರತಿದೇವಿಯು ತುಂಬಾ ದುಃಖಿತೆಯಾಗಿ ಪರಿಪರಿಯಾಗಿ ಪ್ರಲಾಪಿಸುತ್ತಾಳೆ. ಕೊನೆಗೆ, ತಾನು ಅಗ್ನಿಗಾಹುತಿಯಾಗುವೆಂದು ನಿರ್ಧರಿಸಿದಾಗ ಆಕಾಶದಲ್ಲಿ ಬ್ರಹ್ಮನು ಬಂದು ಅಗ್ನಿಯನ್ನು ಪ್ರವೇಶಿಸ ಬೇಡ. ಯಾವತ್ತೂ ಉಮಾ, ಮಹೇಶ್ವರ (ಶಿವ) ಮದುವೆಯಾಗುತ್ತದೆಯೋ ಅಂದು ಪುನಃ ಕಾಮನು ಹುಟ್ಟುತ್ತಾನೆ. ಅನಂಗನಾಗಿ ಸದಾ ಇರುವವನೆಂದು ಹೇಳುತ್ತಾನೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications