ಅಕ್ಷಯ ತೃತೀಯ: ಚಿನ್ನದಂಗಡಿಗೆ ಹೋಗೋಣ ಚಿನ್ನ!

ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ನಲ್ಲಿ ಅಮಾವಾಸ್ಯೆ ಕಳೆದು ಬರುವ ವೈಶಾಖ ಮಾಸದ ಮೂರನೇ ದಿನ ಅಕ್ಷಯ ತೃತೀಯ. ಧಾರ್ಮಿಕ ನಂಬಿಕೆಯುಳ್ಳವರಿಗೆ ಉತ್ತರೋತ್ತರ ಯಶಸ್ಸು, ಅಭಿವೃದ್ಧಿಗೆ ನಾಂದಿ ಹಾಡುವ ದಿನ. ಸಾಮಾಜಿಕ ನಿರ್ಬಂಧ, ಧಾರ್ಮಿಕ ಬೇಧವಿಲ್ಲದೇ ಎಲ್ಲ ವರ್ಗದವರೂ ಈ ದಿನಕ್ಕೆ ವಿಶೇಷ ಪ್ರಾಧಾನ್ಯ ಕೊಡುತ್ತಾರೆ.
ಮನೆಯಲ್ಲಿ ಸಾಕಷ್ಟು ತಾಪತ್ರಯಗಳಿರಲಿ. ಬಾಡಿಗೆ ಕಟ್ಟದೇ ತಿಂಗಳು ಕಳೆದಿರಲಿ. ಹತ್ತು ಗ್ರಾಂ ಚಿನ್ನದ ದರ 23 ಸಾವಿರ ರೂಪಾಯಿ ದಾಟಿರಲಿ. ಚೂರು ಚಿನ್ನ ಖರೀದಿಸದಿದ್ದರೆ ಹೇಗೆ ಅಂತ ಎಲ್ಲರೂ ಬಯಸುತ್ತಾರೆ. ಅದೇ ಅಕ್ಷಯ ತೃತೀಯದ ಪವರ್. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾದ ಹೊಸ ಚಿನ್ನ ಖರೀದಿಯ ಟ್ರೆಂಡ್.
ಬೆಂಗಳೂರಿನವರೂ ಚಿನ್ನ ಖರೀದಿಗೆ ಎಲ್ಲಿಗೆ ಹೋಗಬೇಕೆಂದು ಲೆಕ್ಕ ಹಾಕುತ್ತಿದ್ದಾರೆ. ಆಭರಣ ಅಂಗಡಿಗಳಂತೂ ವಿಶೇಷ ಕೊಡುಗೆಗಳನ್ನು ನೀಡುವುದಾಗಿ ಗ್ರಾಹಕರ ಸಂಭ್ರಮವನ್ನು ಹೆಚ್ಚಿಸುತ್ತಿವೆ. ಚಿನ್ನ ತಯಾರಿಕಾ ವೆಚ್ಚದಲ್ಲಿ ರಿಯಾಯ್ತಿ, ವೇಸ್ಟೆಜ್ ಜಾರ್ಜ್ ಇಲ್ಲಂತ ಹೇಳಿಕೊಳ್ಳುತ್ತಿವೆ. ಟಾಟಾ ಸಮೂಹದ ಆಭರಣ ಬ್ರಾಂಡ್ ತಾನಿಷ್ಕ್ ಕೂಡ ಆಕರ್ಷಕ ಉಡುಗೊರೆ ನೀಡುವುದಾಗಿ ಹೇಳುತ್ತಿವೆ. ರಾಜೇಶ್ ಜ್ಯುವೆಲರಿ ಈಗಾಗಲೇ ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ನೀಡಿಯಾಗಿದೆ. ಅಲಿಸೆ ಜ್ಯುವೆಲರಿ, ಸುಮನ್ ಸುಧಾ ಆಭರಣ, ಗಾಜಾ ಜ್ಯುವೆಲ್ಲರಿ, ಮಹೀಂದ್ರ ಡೈಮಂಡ್ಸ್ ಮುಂತಾದ ಚಿನ್ನದಂಗಡಿಗಳು ಆಕರ್ಷಕ ರಿಯಾಯಿತಿಯನ್ನು ಘೋಷಿಸಿವೆ. ರಿಲಯೆನ್ಸ್ ಜ್ಯುವೆಲರಿ ಕೂಡ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.
ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ 'ಅಕ್ಷಯ ತೃತೀಯ"ದಂತಹ ಹಬ್ಬಗಳ ಹೆಸರಿನಲ್ಲಿ ಜನರನ್ನು ಮರುಳು ಮಾಡಲು ಅಂಗಡಿಯ ಮಾಲೀಕರು ಕಾಯುತ್ತಾರೆ. ಉಚಿತ ಕೊಡುಗೆ, ರಿಯಾಯಿತಿ ಬೆಲೆಯಲ್ಲಿ ಆಭರಣಗಳ ಮಾರಾಟ ಬಲೆ ಜೋರು. ಸಂಪ್ರದಾಯದ ಹೆಸರಿನಲ್ಲಿ ಹಬ್ಬಗಳು ವಾಣಿಜ್ಯೀಕರಣ ಆಗುತ್ತಿದೆಯೇ ಅಥವಾ ಈ ಒಂದು ಪುಣ್ಯದಿನ ಚಿನ್ನ ಪಡೆದರೆ ಅದು ವೃದ್ಧಿಯಾಗುತ್ತದೇ ಎಂಬುದು ಅವರವರ ತರ್ಕಕ್ಕೆ ಬಿಟ್ಟ ವಿಚಾರ.
ಬಂಗಾರವೇ ಬೇಕೆಂದೇನಿಲ್ಲ. ಬೆಳ್ಳಿಯನ್ನು ಪ್ಲಾಟಿನಂ ಹಾಗೂ ಚಿನ್ನಕ್ಕೆ ಪೂರಕವಾಗಿ ಬಳಸಬಹುದು. ಬೆಳ್ಳಿ ಲೋಹ, ಬಂಗಾರ ಪ್ಲಾಟಿನಂಗಳನ್ನು ಬೆಲೆ ಬಾಳುವಂತದ್ದೂ ಅಲ್ಲ. ಆದರೆ ಬೆಳ್ಳಿ ಕೂಡ ಆಕರ್ಷಕ ಲೋಹ. ಅದರಿಂದ ತಯಾರಿಸಿದ ನಾನಾ ವಿನ್ಯಾಸದ ಒಡವೆಗಳು ನಿಮ್ಮ ವ್ಯಕ್ತಿತ್ವಕ್ಕೆ ಒಂದಿಷ್ಟು ಮೆರುಗು ನೀಡುತ್ತವೆ. ಚಿನ್ನ ಎಲ್ಲರ ಚರ್ಮಕ್ಕೂ ಹೊಂದಿಕೊಳ್ಳುವುದಿಲ್ಲ. ಅಲರ್ಜಿಯೂ ಉಂಟಾಗಬಹುದು. ಹೀಗಾಗಿ ಎಂಥ ಲೋಹದ ಆಭರಣ ತಮ್ಮ ಚರ್ಮಕ್ಕೆ ಸೂಕ್ತ ಎಂಬುದನ್ನು ತಿಳಿದಿಕೊಂಡು ಆನಂತರ ಖರೀದಿಸಿ.
ಚಿನ್ನ ಖರೀದಿಸುವಾಗ ಒಂದಿಷ್ಟು ಎಚ್ಚರವಿರಲಿ
* ಹಾಲ್ ಮಾರ್ಕ್ ಉಳ್ಳ ಒಡವೆಗಳನ್ನೇ ಖರೀದಿಸಿ.
* ಚಿನ್ನದ ಅಲರ್ಜಿ ಇರುವವರು ಪ್ಲಾಟಿನಂ ಒಡವೆ ಖರೀದಿಸುವುದು ಸೂಕ್ತ.
* ಮುತ್ತು, ಹವಳ ಖರೀದಿಸುವಾಗ ಅಸಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಗುಣಮಟ್ಟದ ಸೇವೆ ಒದಗಿಸುವ ಆಭರಣ ಮಳಿಗೆಗಳಿಗೆ ಭೇಟಿ ನೀಡುವುದು ಒಳ್ಳೆಯದು.
* ಆನ್ಲೈನ್ ಮೂಲಕ ಆಭರಣ ಖರೀದಿಸಬೇಕೆಂದರೆ ಅಲ್ಲಿಯ ನಿಯಮ, ಷರತ್ತುಗಳ್ನು ಸರಿಯಾಗಿ ಓದಿಕೊಳ್ಳಿ.
* ಆಭರಣ ಶುದ್ಧೀಕರಿಸುವಾಗ ಎಚ್ಚರ ವಹಿಸಿ.
ನಗರಗಳಲ್ಲಿ ಜನಪ್ರಿಯ ಬ್ರಾಂಡ್ನ ಮಳಿಗೆಗಳಿಗೆ ತೆರಳಿದಾಗ ಅಲ್ಲಿ 'ಬಿಐಎಸ್ ಪ್ರಮಾಣೀಕೃತ" ಮತ್ತು 'ಹಾಲ್ಮಾರ್ಕ್" ಆಭರಣಗಳ ಫಲಕಗಳೂ ಗಮನ ಸೆಳೆಯುತ್ತವೆ. ಇವು ಚಿನ್ನದ ಪರಿಶುದ್ಧತೆ ಮತ್ತು ಆಭರಣ ಒಳಗೊಂಡಿರುವ ಚಿನ್ನದ ನಿಗದಿತ ಪ್ರಮಾಣದ ಬಗ್ಗೆ ಇವು ಗ್ರಾಹಕರಿಗೆ ಖಾತರಿ ನೀಡುತ್ತವೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಿರಿ. ಚಿನ್ನ ಅಂದ್ರೆ ಆಪತ್ಬಾಂದವ. ಗುಣಮಟ್ಟದ ಚಿನ್ನ ಖರೀದಿಸಿದರೆ ನಿಮಗೆ ನಷ್ಟವಿಲ್ಲ. ಶುಭವಾಗಬಹುದು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications