482763ramಶಂಕರ ರಾಮಾನುಜ 'ಸಹಜನ್ಮ'ಯೋಗ!/festivals/general/2009/0429-shankara-ramanuja-jayanti.htmlಎಂಥ ಯೋಗ! ಈ ವರ್ಷ ಶಂಕರ ಜಯಂತಿ ಮತ್ತು ರಾಮಾನುಜಾಚಾರ್ಯರ ತಿರುನಕ್ಷತ್ರ (ಜಯಂತಿ) ಎರಡೂ ಒಂದೇ ದಿನ (ಏಪ್ರಿಲ್ 29) ಬಂದಿವೆ. ಭಗವದ್ದರ್ಶನದ ತಪದಲ್ಲಿ ಭಿನ್ನ ಮಾರ್ಗಗಳನ್ನು ಅವಲಂಬಿಸಿದ ಆಚಾರ್ಯದ್ವಯರ ಜನ್ಮದಿನವು ಒಂದಾಗಿ ಬಂದಿರುವುದು ಪ್ರಕೃತಿಯು ನಮಗೆ ಒಂದುಗೂಡಿ ನಡೆಯುವಂತೆ ನೀಡಿರುವ ಸಂದೇಶವೆಂದೇ ಭಾವಿಸಬಹುದು.ಮಾರ್ಗಗಳು ಭಿನ್ನವಾಗಿದ್ದಾಗ್ಗ್ಯೂ ಶಂಕರ ಮತ್ತು ರಾಮಾನುಜರ (ಹಾಗೂ ಮಧ್ವಾಚಾರ್ಯರ) ಗುರಿ ಒಂದೇ ಆಗಿತ್ತೆನ್ನುವುದನ್ನು 36300http://kannada.oneindia.com/img/2009/04/29-shankaracharya1.jpg482763ram'ಕಾರ್ಮಿಕ ದಿನ' ಎಂಬ ಅಸಂಬದ್ಧ ಆಚರಣೆ!/festivals/general/2009/0501-should-indians-celebrate-labor-day.htmlಮೇ 1, ಕಾರ್ಮಿಕ ದಿನ. ಇದು ನಮ್ಮದಲ್ಲ. ಆದರೆ ನಮ್ಮದೆಂದು ಒಪ್ಪಿಕೊಂಡು-ಅಪ್ಪಿಕೊಂಡು ಪ್ರತಿ ವರ್ಷ ಆಚರಿಸುತ್ತಿದ್ದೇವೆ. ನಮ್ಮ ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ 'ಕಾರ್ಮಿಕ ದಿನ'ದಿಂದ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅವರಲ್ಲಿ ಬಹುಮಂದಿಗೆ ಈ ದಿನಾಚರಣೆಯ ಅರಿವೇ ಇಲ್ಲ. ಅದೇವೇಳೆ, ಸಂಘಟಿತ ವಲಯದ ಬಹುತೇಕ ಕಾರ್ಮಿಕರು ತಮ್ಮ ಎಂದೂ ಮುಗಿಯದ ಬೇಡಿಕೆಗಳನ್ನು ಪ್ರತಿಪಾದಿಸುತ್ತ 'ಕಾರ್ಮಿಕ ದಿನ'ವನ್ನು 'ಅಧಿಕೃತ 36343http://kannada.oneindia.com/img/2009/05/01-worker1.jpg482763ramದಣಿವಾರಿಸಿಕೊಳ್ಳಲು ಗೋವಾ ತೀರಕ್ಕೆ ಪುನೀತ್ /movies/hero/2009/05/08-puneeth-rajkumar-in-goa.htmlರಾಜ್ ಮತ್ತು ರಾಮ್ ಚಿತ್ರಗಳ ಬಿಡುವಿಲ್ಲದ ಕೆಲಸಗಳಿಂದ ಪುನೀತ್ ರಾಜ್ ಕುಮಾರ್ ಬಳಲಿದ್ದಾರೆ. ಚಿತ್ರೀಕರಣಕ್ಕಾಗಿ ಅಲ್ಲಿ ಇಲ್ಲಿ ಅಲೆದು ಮನೆ ಮಠಕ್ಕೆ ದೂರವಾಗಿದ್ದರು. ಈ ಎಲ್ಲಾ ಜಂಜಡಗಳಿಂದ ಒಂಚೂರು ರಿಲ್ಯಾಕ್ಸ್ ಆಗಲು, ಕುಟುಂಬದವರೊಂದಿಗೆ ಕಳೆಯಲು ಬ್ರೇಕ್ ತೆಗೆದುಕೊಂಡಿದ್ದಾರೆ. ಕುಟುಂಬದವರೊಂದಿಗೆ ಕೆಲವಾರಗಳನ್ನು ಗೋವಾ ತೀರದಲ್ಲಿ ಪುನೀತ್ ಕಳೆಯಲಿದ್ದಾರೆ. ಬೇಸಿಗೆ ಧಗೆಯನ್ನು ನಿವಾರಿಸಿಕೊಳ್ಳಲು ಗೋವಾಗಿಂತಲೂ ಪ್ರಶಸ್ತ ತಾಣ 36485http://kannada.oneindia.com/img/2009/05/08-puneet10.jpg482763ramಮಹಾನ್ ಭಾರತಕ್ಕೆ ಎಷ್ಟೊಂದು ಪ್ರಧಾನಿಗಳು!/column/humor/2009/0509-who-will-become-prime-minister-of-india.htmlಭಾರತದ ಪ್ರಧಾನಮಂತ್ರಿಯ ಹುದ್ದೆಗೆ ಈ ಸಲ ಭಾರೀ ಪೈಪೋಟಿ ಏರ್ಪಟ್ಟಿದೆ. ಜನಪ್ರತಿನಿಧಿಗಳನ್ನು ಜನರೇ ಆರಿಸಿದರೂ ಪ್ರಧಾನಿಯನ್ನು ಆರಿಸುವ ಅಧಿಕಾರ ಸಾಮಾನ್ಯನಿಗಿಲ್ಲ, ವಿಪರ್ಯಾಸ. ಯಾರು ಯಾರೊಂದಿಗೆ ಕೈಹಿಡಿದು ಯಾರನ್ನು ಪ್ರಧಾನಿ ಮಾಡುತ್ತಾರೋ ಯಾರಿಗೆ ಗೊತ್ತು. ಅಂತೂ ಪ್ರಧಾನಿ ಹುದ್ದೆಗಾಗಿ ಅಂತಿಂಥವರ ಜೊತೆ ಎಂತೆಂಥವರೂ ಪೈಪೋಟಿಗೆ ಬಿದ್ದಿದ್ದಾರೆ. ಯಾರ್ಯಾರಿದ್ದಾರೆ ನೀವೇ ನೋಡಿ.* ರಾಮ್, ಬೆಂಗಳೂರು'ಮನಮೋಹಕ'ವಾಗಿ ದೇಶ ಆಳಿದ್ದಾರೆ, ಆದ್ದರಿಂದ ಮನಮೋಹನ್ 36504http://kannada.oneindia.com/img/2009/05/09-politicians1.jpg482763ramರಾಜ್ ದ ಶೋಮ್ಯಾನ್ ಫ್ಲಾಪ್ ಆಗಿಲ್ಲ: ಪುನೀತ್ /movies/hero/2009/10/17-raj-is-not-a-flop-puneeth-rajkumar.htmlರಾಜ್ ದ ಶೋಮ್ಯಾನ್ ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಬಾಕ್ಸಾಫೀಸ್ ಗಳಿಕೆಯಲ್ಲಿ ಮುಂದಿದೆ. ರಾಜ್ ಫ್ಲಾಪ್ ಚಿತ್ರವಲ್ಲ. ಈ ಚಿತ್ರ 50ಕ್ಕಿಂತಲೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಾಣುತ್ತದೆ. ಗಳಿಕೆಯ ದೃಷ್ಟಿಯಲ್ಲೂ ಈ ಚಿತ್ರ ಗೆದ್ದಿದೆ. ಗುಣಮಟ್ಟ ವಿಚಾರದಲ್ಲಿ ರಾಜಿಯಾಗುವವನಲ್ಲ ನಾನು. ರಾಜ್ ಬಗ್ಗೆ ಯಾಕೆ ಹಾಗೆ ಬರೆದರೋ ಗೊತ್ತಿಲ್ಲ ಎಂದು ಪುನೀತ್ ರಾಜ್ ಕುಮಾರ್ 39741http://kannada.oneindia.com/img/2009/10/17-puneet-rajkumar5.jpg284125ಹಬ್ಬಹರಿದಿನಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ/recipe/sweet/2008/0403-obbattu-for-ugadi.htmlಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ 2926http://kannada.oneindia.com/img/2009/03/25-obbattu1.jpg284125ಹಬ್ಬಹರಿದಿನಉತ್ಥಾನ ದ್ವಾದಶಿಯಂದು ತುಳಸಿ ಹಬ್ಬ/literature/articles/2006/311006utthana_dwadashi.htmlದೀಪಾವಳಿ ಹಬ್ಬದ ನಂತರ ಬರುವ ಇನ್ನೊಂದು ಹಬ್ಬ ತುಳಸಿ ಹಬ್ಬ ಅಥವಾ ತುಳಸಿ ಮದುವೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಪವಿತ್ರದಿನವನ್ನು ತುಳಸಿ ಮದುವೆಯನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ.* ತಳಕು ಶ್ರೀನಿವಾಸ್‌, ಮುಂಬಯಿಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ 8765http://kannada.oneindia.com/img/2009/10/30-tulasi-maduve1.jpg284125ಹಬ್ಬಹರಿದಿನಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ/recipe/sweet/2009/0325-sajjappa-sweet-recipe-for-ugadi.htmlಕೆಂಪಗೆ ಕರಿದ ಬಿಸಿಬಿಸಿಯಾದ, ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಯುಗಾದಿಗೆ ಹೋಳಿಗೆಯನ್ನೇ ಮಾಡಬೇಕೆಂದೇನೂ ಇಲ್ಲ, ಒಮ್ಮೆ ಸಜ್ಜಪ್ಪವನ್ನೂ ಮಾಡಿ ನೋಡಿ. ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.* ವಾಣಿ ನಾಯಿಕ, ಬೆಂಗಳೂರುಬೇಕಾಗುವ ಪದಾರ್ಥಗಳುಚಿರೋಟಿ ರವೆ 1 ಬಟ್ಟಲುತುಪ್ಪ 1 ಟಿಸ್ಪೂನ್ಕಾಯಿತುರಿ 2 ಬಟ್ಟಲುಬೆಲ್ಲ 1 ಬಟ್ಟಲುಏಲಕ್ಕಿ ಪುಡಿ 1 ಟಿಸ್ಪೂನ್ದ್ರಾಕ್ಷಿ ಮತ್ತು 35501http://kannada.oneindia.com/img/2009/03/25-sajjappa2.jpg284125ಹಬ್ಬಹರಿದಿನಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ/festivals/ugadi/2009/0325-sajjappa-sweet-recipe.htmlಕೆಂಪಗೆ ಕರಿದ ಬಿಸಿಬಿಸಿಯಾದ, ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಯುಗಾದಿಗೆ ಹೋಳಿಗೆಯನ್ನೇ ಮಾಡಬೇಕೆಂದೇನೂ ಇಲ್ಲ, ಒಮ್ಮೆ ಸಜ್ಜಪ್ಪವನ್ನೂ ಮಾಡಿ ನೋಡಿ. ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.* ವಾಣಿ ನಾಯಿಕ, ಬೆಂಗಳೂರುಬೇಕಾಗುವ ಪದಾರ್ಥಗಳುಚಿರೋಟಿ ರವೆ 1 ಬಟ್ಟಲುತುಪ್ಪ 1 ಟಿಸ್ಪೂನ್ಕಾಯಿತುರಿ 2 ಬಟ್ಟಲುಬೆಲ್ಲ 1 ಬಟ್ಟಲುಏಲಕ್ಕಿ ಪುಡಿ 1 ಟಿಸ್ಪೂನ್ದ್ರಾಕ್ಷಿ ಮತ್ತು 35502http://kannada.oneindia.com/img/2009/03/25-sajjappa2.jpg284125ಹಬ್ಬಹರಿದಿನಶಂಕರ ರಾಮಾನುಜ 'ಸಹಜನ್ಮ'ಯೋಗ!/festivals/general/2009/0429-shankara-ramanuja-jayanti.htmlಎಂಥ ಯೋಗ! ಈ ವರ್ಷ ಶಂಕರ ಜಯಂತಿ ಮತ್ತು ರಾಮಾನುಜಾಚಾರ್ಯರ ತಿರುನಕ್ಷತ್ರ (ಜಯಂತಿ) ಎರಡೂ ಒಂದೇ ದಿನ (ಏಪ್ರಿಲ್ 29) ಬಂದಿವೆ. ಭಗವದ್ದರ್ಶನದ ತಪದಲ್ಲಿ ಭಿನ್ನ ಮಾರ್ಗಗಳನ್ನು ಅವಲಂಬಿಸಿದ ಆಚಾರ್ಯದ್ವಯರ ಜನ್ಮದಿನವು ಒಂದಾಗಿ ಬಂದಿರುವುದು ಪ್ರಕೃತಿಯು ನಮಗೆ ಒಂದುಗೂಡಿ ನಡೆಯುವಂತೆ ನೀಡಿರುವ ಸಂದೇಶವೆಂದೇ ಭಾವಿಸಬಹುದು.ಮಾರ್ಗಗಳು ಭಿನ್ನವಾಗಿದ್ದಾಗ್ಗ್ಯೂ ಶಂಕರ ಮತ್ತು ರಾಮಾನುಜರ (ಹಾಗೂ ಮಧ್ವಾಚಾರ್ಯರ) ಗುರಿ ಒಂದೇ ಆಗಿತ್ತೆನ್ನುವುದನ್ನು 36300http://kannada.oneindia.com/img/2009/04/29-shankaracharya1.jpg156508ರಾಮ್ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್/movies/hero/2009/01/15-ready-to-be-remade-in-kannada.htmlತೆಲುಗು ಚಿತ್ರರಂಗದ ಮತ್ತೊಂದು ಸೂಪರ್ ಹಿಟ್ ಚಲನಚಿತ್ರ 'ರೆಡಿ' ಕನ್ನಡಕ್ಕೆ ರೀಮೇಕ್ ಆಗಲು ರೆಡಿಯಾಗಿದೆ. ಕನ್ನಡದಲ್ಲಿ 'ರಾಮ್' ಎಂದು ಹೆಸರಿಡಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ರಾಮ್' ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.2007-08ನೇ ಸಾಲಿನ ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ವರಿಸಿದೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ನಾಯಕನಟ ಪುನೀತ್ 34085http://kannada.oneindia.com/img/2009/01/15-puneet10.jpg156508ರಾಮ್ಕಾಮಿಡಿಗೆ ಜೈ ರೀಮೇಕ್ ಗೂ ಸೈ ಎಂದ ಪುನೀತ್/movies/hero/2009/02/03-puneeth-rajkumars-ram-starts-rolling.htmlಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರ 'ರಾಮ್' ಸೋಮವಾರ ಸೆಟ್ಟೇರಿತು. ತೆಲುಗಿನ 'ರೆಡಿ' ಚಿತ್ರದ ರೀಮೇಕ್ ರಾಮ್. ಇದೊಂದು ಕಾಮಿಡಿ ಚಿತ್ರ ಎನ್ನುತ್ತಾರೆ ಪುನೀತ್. ಇನ್ನು ಮುಂದೆ ತಾವು ಕಾಮಿಡಿ ಚಿತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದಾಗಿ ಪುನೀತ್ ತಿಳಿಸಿದರು. ಪುನೀತ್ ಅವರಿಗೆ ಮಾದೇಶ್ ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಸಂಗೀತ ವಿ.ಹರಿಕೃಷ್ಣ ಮತ್ತು 34443http://kannada.oneindia.com/img/2009/02/03-puneet-vamshi1e.jpg156508ರಾಮ್ರಾಮ್ ಚಿತ್ರದ ನಾಯಕಿಯಾಗಿ ಅದಿತಿ ಶರ್ಮಾ/movies/heroine/2009/03/06-aditi-sharma-debuts-in-kannada-with-raam.htmlಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರಕ್ಕೆ ಬಾಲಿವುಡ್ ನಟಿ ಅದಿತಿ ಶರ್ಮಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಮ್ ಚಿತ್ರದ ನಾಯಕಿ ಪಾತ್ರಕ್ಕೆ ಜೆನಿಲಿಯಾ, ತಮನ್ನಾ ಮುಂತಾದ ಹೆಸರುಗಳು ಕೇಳಿಬಂದಿದ್ದವು. ಅಂತೂ ನಿರ್ಮಾಪಕ ಆದಿತ್ಯ ಬಾಬು ಅವರಿಗೆ ರಾಮ್ ಚಿತ್ರೀಕರಣ ಆರಂಭವಾದ ನಂತರ ನಾಯಕಿ ಸಿಕ್ಕಿದ್ದಾಳೆ. ಅದಿತಿ ಶರ್ಮಾ ಮೂಲತಃ ಪಂಜಾಬಿನವರು. ಪ್ರಸ್ತುತ ಅದಿತಿ ಮುಂಬೈನಲ್ಲಿ ವಾಸವಾಗಿದ್ದಾರೆ. ಪೋಷಕರು 35046http://kannada.oneindia.com/img/2009/03/06-aditi-sharma1.jpg156508ರಾಮ್ಪ್ರಿಯಾಮಣಿ ಕಣ್ಣಲ್ಲಿ ಪುನೀತ್, ಅಭಿಷೇಕ್/movies/heroine/2009/03/26-priyamani-lauds-puneeth-and-abhishek-bachchan.htmlಪುನೀತ್‌ಗೂ ಅಭಿಷೇಕ್ ಬಚ್ಚನ್‌ಗೂ ಇರುವ ವ್ಯತ್ಯಾಸವೇನು ಅಂತ ಗೊತ್ತಾಗಬೇಕೆ? ಉತ್ತರ ಹೇಳಲು ಬೆಂಗಳೂರಲ್ಲೇ ಇದ್ದಾರೆ ಪ್ರಿಯಾಮಣಿ. ಒಂದು ಕಾಲದಲ್ಲಿ ಇದೇ ಬೆಂಗಳೂರಲ್ಲಿ ಓದಿದ ಹುಡುಗಿ. ಆಗ ಅವಕಾಶಕ್ಕಾಗಿ ಎಷ್ಟೇ ಅಂಡಲೆದರೂ ಪ್ರಯೋಜನವಾಗಿರಲಿಲ್ಲ. ಆಮೇಲೆ ತೆಲುಗು, ತಮಿಳು ಸಿನಿಮಾ ಜಗತ್ತಿಗೆ ಈ ಹುಡುಗಿ ಹೋದದ್ದೇ ಇಲ್ಲಿಯವರಿಗೆ ಪರಕೀಯರಾದರು. ಒಂದು ರಾಷ್ಟ್ರ ಪ್ರಶಸ್ತಿ ಬೇರೆ ಸಿಕ್ಕಿತು. ಗ್ಲ್ಯಾಮರ್, ಎತ್ತರ ಹಾಗೂ 35548http://kannada.oneindia.com/img/2009/03/26-priyamani3.jpg156508ರಾಮ್ಓಂ ಪ್ರಕಾಶ್, ಪುನೀತ್ ಕಾಂಬಿನೇಷನಲ್ಲಿ ಹೊಸ ಚಿತ್ರ/movies/hero/2009/04/14-om-prakash-rao-to-direct-puneeth.htmlಪಕ್ಕಾ ಮಾಸ್ ನಿರ್ದೇಶಕ ಎಂದೇ ಖ್ಯಾತರಾದ ಓಂ ಪ್ರಕಾಶ್ ರಾವ್ ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಗೆ ಆಕ್ಷನ್, ಕಟ್ ಹೇಳಲಿದ್ದಾರೆ. ದರ್ಶನ್, ದೇವರಾಜ್, ರವಿಚಂದ್ರನ್, ಸುದೀಪ್, ಶಿವರಾಜ್ ಕುಮಾರ್, ಮಾಲಾಶ್ರೀ ಅವರ ಚಿತ್ರಗಳನ್ನು ನಿರ್ದೇಶಿಸಿ ಓಂ ಪ್ರಕಾಶ್ ಸೈ ಎನ್ನಿಸಿಕೊಂಡಿದ್ದಾರೆ. ಈಗ ಪುನೀತ್-ಓಂ ಪ್ರಕಾಶ್ ಹೊಸ ಕಾಂಬಿನೇಷನಲ್ಲಿ ಚಿತ್ರ ಬರಲಿದೆ.ಕನಕಪುರದ ಶ್ರೀನಿವಾಸ್ 35928http://kannada.oneindia.com/img/2009/04/14-puneeth9.jpgnews"> ಶಂಕರ ರಾಮಾನುಜ 'ಸಹಜನ್ಮ'ಯೋಗ! | Shankara Jayanti | Ramanuja Jayanti | Festivals - ಶಂಕರ ರಾಮಾನುಜ 'ಸಹಜನ್ಮ'ಯೋಗ! - Kannada Oneindia

ಶಂಕರ ರಾಮಾನುಜ 'ಸಹಜನ್ಮ'ಯೋಗ!

Shankaracharya
ಎಂಥ ಯೋಗ! ಈ ವರ್ಷ ಶಂಕರ ಜಯಂತಿ ಮತ್ತು ರಾಮಾನುಜಾಚಾರ್ಯರ ತಿರುನಕ್ಷತ್ರ (ಜಯಂತಿ) ಎರಡೂ ಒಂದೇ ದಿನ (ಏಪ್ರಿಲ್ 29) ಬಂದಿವೆ. ಭಗವದ್ದರ್ಶನದ ತಪದಲ್ಲಿ ಭಿನ್ನ ಮಾರ್ಗಗಳನ್ನು ಅವಲಂಬಿಸಿದ ಆಚಾರ್ಯದ್ವಯರ ಜನ್ಮದಿನವು ಒಂದಾಗಿ ಬಂದಿರುವುದು ಪ್ರಕೃತಿಯು ನಮಗೆ ಒಂದುಗೂಡಿ ನಡೆಯುವಂತೆ ನೀಡಿರುವ ಸಂದೇಶವೆಂದೇ ಭಾವಿಸಬಹುದು.

ಮಾರ್ಗಗಳು ಭಿನ್ನವಾಗಿದ್ದಾಗ್ಗ್ಯೂ ಶಂಕರ ಮತ್ತು ರಾಮಾನುಜರ (ಹಾಗೂ ಮಧ್ವಾಚಾರ್ಯರ) ಗುರಿ ಒಂದೇ ಆಗಿತ್ತೆನ್ನುವುದನ್ನು ನಾವು ಗಮನಿಸಬೇಕು. ಇಹ-ಪರಗಳ ಅರ್ಥಶೋಧ ಮತ್ತು ಜೀವನದ ಸತ್ಯಶೋಧ ಇದೇ ಇವರ ಜೀವನದ ಗುರಿಯಾಗಿತ್ತು. ಈ ಅತ್ಯುಚ್ಚ ಗುರಿಯನ್ನು ಸಾಧಿಸಿದ ಪರಮಾರ್ಥ ಸಾಧಕರು ಈ ಮಹನೀಯರು. ಶಂಕರರ ಅದ್ವೈತ, ರಾಮಾನುಜರ ವಿಶಿಷ್ಟಾದ್ವೈತ ಹಾಗೂ ಮಧ್ವರ ದ್ವೈತ ಸಿದ್ಧಾಂತಗಳು ಭಿನ್ನ ಮಾರ್ಗಗಳಲ್ಲಿ ಸಾಗಿದರೂ ಈ ದಾರ್ಶನಿಕರು ಕಂಡ ಪರಮ ಸತ್ಯವು ಒಂದೇ ಆಗಿರುವುದು ಗಮನಾರ್ಹ.

'ಬೃಹ್ಮಂ ಸತ್ಯಂ ಜಗನಿಥ್ಯಾ ಜೀವೋ ಬ್ರಹ್ಮಸ್ಯ ನಾಪರಃ'
(ಅರ್ಥ: ಬ್ರಹ್ಮವು ಸತ್ಯ, ಜಗತ್ತು ಮಿಥ್ಯೆ, ಜೀವಾತ್ಮವು ಬ್ರಹ್ಮವೇ ಹೊರತು ಬೇರಲ್ಲ) ಎಂದ ಶಂಕರರ ದೃಷ್ಟಿ,
'ಮತ್ತ ಏವ ಸರ್ವ ವೇದಾನಾಂ ಸಾರಭೂತಂ ಅರ್ಥಂ ಶ್ರುಣು' (ಶ್ರೀ ಗೀತಾ ಭಾಷ್ಯ) ಎನ್ನುವ ಮೂಲಕ,
'ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ, ಕ್ಷರಃ ಸರ್ವಾಣಿ ಭೂತಾನಿ ಕೂಟಸ್ತೋಕ್ಷರ ಉಚ್ಯತೇ' (ಭಗವದ್ಗೀತೆ) (ಅರ್ಥ: ನಶ್ವರ, ಶಾಶ್ವತ ಇವೆರಡು ಈ ಲೋಕದಲ್ಲಿ ಪುರುಷರೂಪಗಳು; ಎಲ್ಲ ದೇಹಗಳೂ ನಶ್ವರ, ಜೀವಾತ್ಮ ಶಾಶ್ವತ) ಎಂದ ಶ್ರೀಕೃಷ್ಣನ ಮಾತನ್ನು ಸಮರ್ಥಿಸಿದ ರಾಮಾನುಜರ ದೃಷ್ಟಿ ಮತ್ತು, 'ಜೀವೇಶ್ವರ ಭಿದಾ ಚೈವ ಜಡೇಶ್ವರ ಭಿದಾ ತಥಾ....' ಎಂದು ಜೀವ-ಈಶ್ವರ, ಜಡ-ಈಶ್ವರ ಮುಂತಾಗಿ ಪ್ರಪಂಚದ ಭೇದಪಂಚಕವನ್ನು ಸಾರಿದ 'ಪರಮಶ್ರುತಿ'ಯ ಪ್ರತಿಪಾದಕ ಮಧ್ವರ ದೃಷ್ಟಿ ಎಲ್ಲವೂ ಜೀವ-ಜೀವನದ ಸತ್ಯಾರ್ಥಶೋಧದೆಡೆಗೇ ಹರಿದಿದ್ದವು.

'ಸತ್ಯಂ ವದ, ಧರ್ಮಂ ಚರ' (ಸತ್ಯವನ್ನು ಹೇಳು, ಧರ್ಮವನ್ನು ಆಚರಿಸು) ಎಂಬ ಸಕಲ ವೇದೋಪನಿಷದ್ಸಾರವನ್ನೇ ಈ ಮೂವರು ಪರಮಾಚಾರ್ಯರೂ ಜಗತ್ತಿಗೆ ಬೋಧಿಸಿದರು. ಇವರ ಬೋಧನೆಯಂತೆ ನಾವಿಂದು ಸತ್ಯ-ಧರ್ಮದ ಮಾರ್ಗದಲ್ಲಿ ನಡೆಯಬೇಕಾಗಿದೆ. ಅದಕ್ಕಾಗಿ ನಮ್ಮೊಳಗಿನ ಭೇದಭಾವವನ್ನು ತೊರೆಯಬೇಕಾಗಿದೆ.

'ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್‌ಸಾಕ್ಷಿಣೀ
ನೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇತ್
........ಗುರುರಿತ್ಯೇಷಾ ಮನೀಷಾ ಮಮ' (ಮನೀಷಾಪಂಚಕ), ಅಂದರೆ,

'ಎಚ್ಚರ, ಕನಸು, ನಿದ್ರೆ ಈ ಮೂರರಲ್ಲೂ ಏಕಸೂತ್ರವನ್ನು ಯಾವ ಚೇತನವು ಸಾಧಿಸಿದೆಯೋ, ಯಾವ ಚಿತ್‌ಪ್ರಕಾಶವು ಬ್ರಹ್ಮನಿಂದ ಹಿಡಿದು ಇರುವೆಯವರೆಗಿನ ಎಲ್ಲ ಜೀವಸಂಕುಲದಲ್ಲಿಯೂ ಒಂದೇ ರೀತಿಯಲ್ಲಿ ಹಾಸುಹೊಕ್ಕಾಗಿದೆಯೋ, ಆ ಚಿತ್‌ಸ್ವರೂಪವೇ ನಾನು, ನೋಟದ ವಸ್ತು ನಾನಲ್ಲ', ಎಂಬ ದೃಢವಾದ ಅರಿವು ಯಾರಿಗುಂಟೋ ಆ ವ್ಯಕ್ತಿ ನನ್ನ ಗುರು, ಎಂದ ಆದಿಶಂಕರರ ಮಾತಿನಂತೆ ನಾವಿಂದು ಸತ್ ಚಿತ್ ಸ್ವರೂಪರಾಗಿ ಬಾಳಬೇಕಾಗಿದೆ.

'ನಿಯಮ, ಬದ್ಧತೆ, ಏಕರೂಪ (ಒಂದೇ ಗುಣ) ಹೊಂದಿರುವವನು, ಹಾಗೂ, ತಾನು ದೈವಾಂಶಸಂಭೂತ (ಆದ್ದರಿಂದ ತನಗೆ ದುರ್ಗುಣಗಳು ಸಲ್ಲವು) ಎಂಬುದನ್ನರಿತು ಅದರಂತೆ ಮುನ್ನಡೆಯುವವನು ಅವನೇ ಶ್ರೇಷ್ಠನು' ಎಂಬ ಆದಿಶಂಕರರ ನುಡಿಗನುಗುಣವಾಗಿ ನಮ್ಮನ್ನು ನಾವಿಂದು ರೂಪಿಸಿಕೊಳ್ಳಬೇಕಾಗಿದೆ.

ಈ ಆಚಾರ್ಯತ್ರಯರ ತತ್ತ್ವಸಾರವನ್ನರಿತು ಅದರನುಸಾರ ಜೀವನವನ್ನು ರೂಪಿಸಿಕೊಳ್ಳಬೇಕಾದ ಅವಶ್ಯಕತೆ ನಮಗೆ ಇಂದಿನ ವಿಷಮ ಸಾಮಾಜಿಕ ಸನ್ನಿವೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಇದೆ. ಆಚಾರ್ಯತ್ರಯರು ಹೇಳಿರುವ ಶ್ರೇಷ್ಠಗುಣಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳೋಣ, ಶ್ರೇಷ್ಠರೂ ಸುಖಿಗಳೂ, ಮತ್ತು ತನ್ಮೂಲಕ, ಜೀವನಸಾರ್ಥಕ್ಯ ಹೊಂದಿದ ಜೀವಾತ್ಮರೂ ನಾವಾಗೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+