ದಸರಾ ಹಬ್ಬ ಶುರು, ಗೊಂಬೆ ಹಬ್ಬ ಬಂತು
ನಾವು ಮಕ್ಕಳಾಗಿದ್ದ ದಿನಗಳೇ ಎಷ್ಟು ಚಂದ. ನಾನು ಸಣ್ಣವಳಿದ್ದಾಗ ದಸರಾ ಹಬ್ಬಕ್ಕೆಂದೇ ಕಾಯುತ್ತಿದ್ದೆ. ಒಂದು ತಿಂಗಳು ದಸರಾ ರಜೆ, ಶಾಲೆಗೆ ಟಾಟಾ ಹೇಳಿ ಸ್ವಲ್ಪ ಬ್ರೇಕ್ ತೆಗೆದುಕೊಳ್ಳುವ ಉತ್ಸಾಹ. ಮನೆಯಿಂದ ತಯಾರಾಗಿ ಹೊರಗೆ ಹೊರಟರೆ ಸ್ನೇಹಿತರ ದೊಡ್ಡ ಗುಂಪು. ಆಟ ಆಟ ಆಟ!, ಇದನ್ನು ಬಿಟ್ಟು ಬೇರೆ ಚಿಂತೆ ಆಲೋಚನೆಗಳೇ ಇರುತ್ತಿರಲಿಲ್ಲ.
ಅಮ್ಮ ಕರೆದು 'ಮಗಳೇ ನಾಳೆ ಪಾಡ್ಯ ಇದೆ ಗೊಂಬೆ ಹಬ್ಬ ಶುರು, ಎಲ್ಲ ಗೊಂಬೆಗಳನ್ನು ತೊಳೆದು ರೆಡಿ ಮಾಡು' ಎಂದು ಹೇಳುವುದೇ ತಡ, ಎಲ್ಲಿಲ್ಲದ ಉತ್ಸಾಹದಿಂದ ಬೆಕ್ಕಿನಂತೆ ಮನೆಯ ಅಟ್ಟದ ಮೇಲೆ ಹತ್ತಿ ಕಬ್ಬಿಣದ ಟ್ರಂಕ್ ತೆಗೆದು, ಅದರಲ್ಲಿ ಬಿಳಿಯ ಬಟ್ಟೆಯಲ್ಲಿ ಮೂಟೆ ಕಟ್ಟಿ ಇರಿಸಲಾಗಿದ್ದ ತಾಮ್ರದ ಹಾಗೂ ಮರದ ಹಳೆ ಗೊಂಬೆಗಳನ್ನು ಒಂದೊಂದು ಚೀಲವಾಗಿ ತಂದು ತುಳಸಿ ಕಟ್ಟೆಯ ಪಕ್ಕದಲ್ಲಿ ಕುಳಿತು ಒಂದೊಂದಾಗಿ ತೊಳೆದು ಗೊಂಬೆ ನೋಡುತ್ತಾ ಕನಸು ಕಾಣುತ್ತಾ ಗೊಂಬೆಗಳ ಲೋಕದಲ್ಲಿ ತೇಲಾಡುತ್ತಿದ್ದೆವು.

ಕಪ್ಪು ಟ್ರಂಕಿನಲ್ಲಿದ್ದ ಗೊಂಬೆಗಳಲ್ಲ ತಲೆಮಾರುಗಳಿಂದ ನವರಾತ್ರಿಗಳಲ್ಲಿ ಪೂಜಿಸುತ್ತಾ ಬಂದಿದ್ದಂತವು. ದೇವರ ಗೊಂಬೆ, ಭಜನಾ ಮಂಡಳಿ, ಮದುವೆ ಮಂಟಪ, ಪ್ರಾಣಿಗಳು ಸೇರಿ ಹಲವಾರು ಗೊಂಬೆಗಳಿದ್ದವು. ನಮ್ಮ ಮನೆಯಲ್ಲಿ ಇಷ್ಟು ಪುರಾತನ ಗೊಂಬೆಗಳಿವೆ ಎಂದು ಬೀಗುತ್ತಿದ್ದೆವು. ಜೊತೆಗೆ ಅಪ್ಪ ತೆಗೆದು ಕೊಟ್ಟಿದ್ದ ಎಲ್ಲ ಹೊಸ ಆಟಿಕೆ ಸಾಮಾನುಗಳನ್ನು ಒಟ್ಟು ಹಾಕಿ ಗೊಂಬೆಗಳ ಸಂಖ್ಯೆ ಹೆಚ್ಚಿಸಿ ಸಂತಸಪಡುತ್ತಿದ್ದೆವು. [ಮೈಸೂರು ದಸರಾ ಚಿತ್ರಗಳನ್ನು ನೋಡಿ]
ಅಪ್ಪ ಆಫೀಸ್ನಿಂದ ಬರುವುದನ್ನೇ ಎದುರು ನೋಡುತ್ತಾ ಸಂಜೆ ಮನೆಯ ಬಾಗಿಲಲ್ಲ ಕಾದು ಕುಳಿತುಕೊಳ್ಳುತ್ತಿದ್ದೆವು. ಅಪ್ಪ ಬಂದೊಡನೆ 'ಅಪ್ಪ.. ಅಪ್ಪ.. ಮಂಟಪ ರೆಡಿ ಮಾಡೋಣ ಬಾ' ಎಂದು ಅವರ ಹಿಂದೆ ಓಡುತ್ತಿದ್ದೆವು. ಅಪ್ಪ ಒಂದೊಂದಾಗಿ ಏಳು ಹಂತದ ಮಂಟಪವನ್ನು ಸಿದ್ಧ ಪಡಿಸಿದಮೇಲೆ. ಎಲ್ಲ ಗೊಂಬೆಗಳನ್ನು ಜೋಡಿಸುವ ಕಾರ್ಯಕ್ರಮ ಆರಂಭವಾಗುತ್ತಿತ್ತು.
ದಸರಾದ ಒಂಭತ್ತು ದಿನಗಳು ಗೊಂಬೆಗಳಿಗೆ ಪೂಜೆ ಜೊತೆಗೆ ದಿನಾ ಒಂದೊಂದು ಸಿಹಿ ತಿಂಡಿ. ಸಂಜೆ ಆದರೆ ಎಲ್ಲರ ಮನೆಗೆ ಗೊಂಬೆ ನೋಡಲು ಹೋಗುವ ಸಂಭ್ರಮ, ಸಡಗರ. ಗುಂಪು ಸೇರಿ ಒಂದು ಮನೆಗೆ ಹೋಗಿ ಆ ಗೊಂಬೆಗಳ ಮುಂದೆ ನಮಗೆ ಗೊತ್ತಿರುವ ಎಲ್ಲ ಹಾಡುಗಳ ಗಾಯನ. ಶಾಲೆಯ ಪದ್ಯಗಳಿಂದ ಹಿಡಿದು ದೇವರನಾಮದವರೆಗೆ ಎಲ್ಲ ಹಾಡುಗಳು ಒಂದೊಂದಾಗಿ ಗುಂಪಿನಲ್ಲಿ ಹಾಡುತ್ತಿದ್ದೆವು. ಎಲ್ಲರ ಮನೆಯ ಗೊಂಬೆಗಳನ್ನು ಒಂದೊಂದಾಗಿ ನೋಡುತ್ತಾ ಅದು ಚೆನ್ನಾಗಿದೆ ಅಲ್ವಾ, ಇದು ಚೆನ್ನಾಗಿದೆ ಅಲ್ವಾ ಎಂದು ಮಾತುಕತೆಗಳು ಸಾಗುತ್ತಿದ್ದವು.
ಎಷ್ಟು ಚಂದವಾಗಿತ್ತು ಆ ದಿನಗಳು. ಈಗ ನಮ್ಮ ಮಕ್ಕಳಿಗೆ ಕಂಪ್ಯೂಟರ್, ಲ್ಯಾಪ್ ಟಾಪ್ , ಸ್ಮಾರ್ಟ್ ಫೋನ್ ಗಳೇ ಗೊಂಬೆಗಳು. 'ಕಾಲಾಯ ತಸ್ಮೈ ನಮಃ'
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications