ತುಪ್ಪ-ಹಾಲಿನ ಜುಗಲ್ ಬಂದಿಯ ಶಾವಿಗೆ ಪಾಯಸ
ಬೆಂಗಳೂರು, ಅಕ್ಟೋಬರ್, 16 : ನಮ್ಮ ಕನ್ನಡ ನಾಡು ಹೇಗೆ ರಮಣೀಯವಾದ ಪ್ರಕೃತಿ ಸೌಂದರ್ಯಗಳಿಗೆ ಪ್ರಸಿದ್ದವೋ ಹಾಗೆ ವಿಭಿನ್ನ, ವಿಶೇಷ ಸಂಸ್ಕೃತಿ, ಹಬ್ಬ ಆಚರಣೆಗಳಿಗೂ ಎತ್ತಿದ ಕೈ. ಹಬ್ಬ ಹರಿದಿನಗಳಿಗೆ ಕನ್ನಡ ನಾಡಿನಲ್ಲಿ ಸುಮಾರು 15 ಅಥವಾ ಒಂದು ವಾರದಿಂದಲೇ ತಯಾರಿ ನಡೆದಿರುತ್ತದೆ. ಸ್ವಚ್ಚತೆ ಕಾರ್ಯದಿಂದ ಹಿಡಿದು ಪೂಜೆ , ಅಡುಗೆ ಮಾಡುವವರೆಗೂ ಸಂಬಂಧಿಕರೆಲ್ಲಾ ಹಾಡು ಹರಟೆಯಲ್ಲಿ ಮಿಂದೇಳುತ್ತಾ ಹಬ್ಬವನ್ನು ಬಹಳ ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ.
ಮುಂಜಾನೆಯ ತೋರಣ ಕಟ್ಟುವುದರಿಂದ, ರಂಗೋಲಿ ಹಾಕುವುದರಿಂದ ಆರಂಭವಾಗುವ ಹಬ್ಬಗಳಲ್ಲಿ ಪೂಜೆ ಹವನಾದಿಗಳ ನಂತರದ ಸ್ಥಾನ ಸಿಗುವುದು ಹೆಂಗಳೆಯರು ಮಾಡುವ ವಿವಿಧ ರುಚಿ ರುಚಿಯಾದ ವಿಶೇಷ ವಿಭಿನ್ನವಾದ ಖಾದ್ಯಗಳಿಗೆ. ಹೌದು ಪ್ರತಿಯೊಂದು ಹಬ್ಬಗಳಿಗೆ ಅದರದೇ ಆದ ಅಡುಗೆ ವಿಶೇಷಗಳಿರುತ್ತವೆ. ಒಟ್ಟಿನಲ್ಲಿ ಅಂದು ದೇವರಿಗೆ ನೈವೇದ್ಯ ಮಾಡುವ ಹೆಸರಿನಲ್ಲಿ ಎಲ್ಲಾ ಖಾದ್ಯಗಳು ನಮ್ಮ ಹೊಟ್ಟೆಯೊಳಗೆ ಸೇರುತ್ತವೆ.
ಹೌದು ಗಣಪತಿಗೆ ಮೋದಕ, ಲಡ್ಡು, ದಸರಾಕ್ಕೆ ಪಾಯಸ (ಗೋಧಿ ಪಾಯಸ, ಗಸೆಗಸೆ ಪಾಯಸ, ಶಾವಿಗೆ ಪಾಯಸ, ಸೀಬಕ್ಕಿ ಪಾಯಸ) ದೀಪಾವಳಿಗೆ ಸೌತೆಕಾಯಿ ಕಡ್ಬು, ಹೋಳಿಗೆ, ಸಂಕ್ರಾಂತಿಗೆ ಪೊಂಗಲ್ (ಮಲೆನಾಡಿನಲ್ಲಿ ದೋಸೆ), ಹೀಗೆ ಹಬ್ಬಕ್ಕೆ ತಕ್ಕಂತೆ ಅಚ್ಚುಕಟ್ಟಾದ ಅಡುಗೆಯ ಮೆನೂ ಕೂಡ ಮನೆಯಲ್ಲಿ ಬದಲಾವಣೆಯಾಗುತ್ತಾ ಸಾಗುತ್ತದೆ. ಒಟ್ಟಿನಲ್ಲಿ ಆಹಾರ ಪ್ರಿಯರಿಗಂತೂ ಹಬ್ಬ ಯಾಕೆ ಮುಗಿದು ಹೋಗುತ್ತದೋ ಎಂದು ಅನಿಸದೇ ಇರದು. ಯಾಕೆಂದರೆ ಅಷ್ಟೊಂದು ಖಾದ್ಯಗಳು ಪ್ರತಿಯೊಬ್ಬರ ಮನೆಯಲ್ಲಿ ಅರಳುತ್ತವೆ.[ಹಬ್ಬಕ್ಕೆ ಸ್ಪೆಷಲ್ ಆಲೂ ಮಸಾಲಾ ಪಲ್ಯ]

ಕಳೆದ ಒಂದು ತಿಂಗಳ ಹಿಂದೆಯಷ್ಟೇ ಗಣಪತಿ ಹಬ್ಬಮಾಡಿ ಮೋದಕ, ಲಡ್ಡು ಹೀಗೆ ಇನ್ನು ಏನೇನೋ ವಿಶೇಷ ಖಾದ್ಯಗಳನ್ನು ತಿಂದ ರುಚಿ ಬಾಯಿಯಲ್ಲೇ ಇದೆ. ಅಷ್ಟರಲ್ಲೇ ದಸರಾ ಬಂದಿದ್ದು ಪಾಯಸದ ರುಚಿ ನೋಡುವ ಗಳಿಗೆಗೆ ಲೆಕ್ಕ ಹಾಕುವಂತಾಗಿದ್ದು, ಪಾಯಸ ಆಹಾ...ಪಾಯಸ ಓಹೋ ಎಂದು ಬಾಯಿ ಚಪ್ಪರಿಸಲು ತಯಾರಾಗಿ. ದಸರಾದ ಸಂಭ್ರಮದಲ್ಲಿರೋ ನಿಮಗೆ ಪಾಯಸ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ದಸರಾ ಹಬ್ಬಕ್ಕೆ ಪಾಯಸ ಮಾಡಿ ತಿನ್ನಿ. ಮತ್ತೆ ಹಬ್ಬ ಹರಿದಿನಕ್ಕೆಂದೂ ಕಾಯಬೇಡಿ ಹಬ್ಬ ಮುಗಿದ ನಂತರವೂ ಮಾಡಿಕೊಂಡು ಪಾಯಸದ ರುಚಿ ಸವಿಯಿರಿ.
ಪಾಯಸದ ವಿಧಗಳು :
ಪಾಯಸದಲ್ಲಿ ಗಸೆ ಗಸೆ ಪಾಯಸ, ಶಾವಿಗೆ ಪಾಯಸ, ಗೋಧಿ ಪಾಯಸ, ಸಾಬಕ್ಕಿ ಪಾಯದ, ಬಾಳೆಹಣ್ಣಿನ ಪಾಯಸ ಹೀಗೆ ಪಾಯಸವನ್ನು ವೈವಿಧ್ಯವಾಗಿ ಮಾಡಬಹುದು. ಈ ಹಬ್ಬದ ವಿಶೇಷವಾಗಿ ಶಾವಿಗೆ ಪಾಯಸ ಮಾಡುವುದು ಹೇಗೆ ಓದಿರಿ..ಮಾಡಿ ಸವಿಯಿರಿ
ಬೇಕಾದ ಸಾಮಾಗ್ರಿಗಳು :
ಪಾಯಸದ ಶಾವಿಗೆ, ತುಪ್ಪ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಲವಂಗ, ಸಕ್ಕರೆ, ಹಾಲು.[ದಸರಾ ಸಿಹಿ ಸ್ಪೆಷಲ್ : ಗಸಗಸೆ ಪಾಯಸ]

ಮಾಡುವುದು ಹೇಗೆ :
ಮೊದಲು ಪಾಯಸದ ಶಾವಿಗೆಯನ್ನು ತೆಗೆದುಕೊಂಡು, ನಿಧಾನವಾದ ಬೆಂಕಿಯಲ್ಲಿ ಶಾವಿಗೆ ಕೆಂಪಾಗುವವರೆಗೂ ತುಪ್ಪದಲ್ಲಿ ಹುರಿದುಕೊಳ್ಳಬೇಕು. ಶಾವಿಗೆ ಕೆಂಪು ಬಣ್ಣಕ್ಕೆ ತಿರುಗಿದ ಮೇಲೆ ಶಾವಿಗೆ ಬೇರೆಯಾಗಿ ತೆಗೆದಿಟ್ಟುಕೊಳ್ಳಬೇಕು..
ಬಳಿಕ ಬೇರೊಂದು ಪಾತ್ರೆಯಲ್ಲಿ 200 ಗ್ರಾಂನಷ್ಟು ತುಪ್ಪ ಹಾಕಿ ಅದಕ್ಕೆ ಗೋಡಂಬಿ, ದ್ರಾಕ್ಷಿ, ಬಾದಾಮಿ ಹಾಕಿ ಅದು ಸಹ ಕೆಂಪು ಬಣ್ಣಕ್ಕೆ ತಿರುಗುವವರೆಗೂ ಹುರಿದುಕೊಂಡು ಅದನ್ನು ಬೇರೆಯಾಗಿ ಎತ್ತಿಟ್ಟುಕೊಳ್ಳಬೇಕು.
ನಂತರ ಒಂದೆರಡು ಚಮಚ ತುಪ್ಪಹಾಕಿ ಹುರಿದ ಶಾವಿಗೆ, ಗೋಡಂಬಿ, ದ್ರಾಕ್ಷಿ, ಬಾದಾಮಿ ಎಲ್ಲವನ್ನು ಒಟ್ಟಾಗಿ ಹಾಕಿ ಒಂದು ಲೀಟರ್ ಹಾಲು ಹಾಗೂ ಸಕ್ಕರೆ ಬೆರೆಸಿ ತುಪ್ಪದ ಘಮಲು ಬರುವವರೆಗೂ ನಿಧಾನವಾದ ಬೆಂಕಿಯಲ್ಲಿ ಕುದಿಯಲು ಬಿಡಬೇಕು. ಬಳಿಕ ಲವಂಗವನ್ನು ಪುಡಿಮಾಡಿ ಪಾಯಸಕ್ಕೆ ಬೆರೆಸಬೇಕು. ಹೀಗೆ ಮಾಡಿದರೆ ಹದವಾದ, ರುಚಿಯಾದ, ಸಿಹಿಯಾದ ಪಾಯಸ ಸವಿಯಲು ಸಿದ್ಧ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications