ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರ ಸಜ್ಜು

ಚಾಮುಂಡಿ ಬೆಟ್ಟದಲ್ಲಿ ದಸರಾ ಕಾರ್ಯಕ್ರಮಗಳು ಆರಂಭವಾಗುತ್ತಿದ್ದಂತೆ ಇತ್ತ ಅರಮನೆಯಲ್ಲಿ ಮೈಸೂರು ರಾಜಮನೆತನದವರ ಖಾಸಗಿ ದರ್ಬಾರ್ ಸಹ ಆರಂಭವಾಗಲಿದೆ. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಶನಿವಾರದಿಂದ ಖಾಸಗಿ ದರ್ಬಾರ್ ಆರಂಭಿಸುವರು. ಜಂಭು ಸವಾರಿ ಮೂಲಕ ಒಂಭತ್ತು ದಿನಗಳ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಶ್ರೀರವಿಶಂಕರ್ ಗುರೂಜಿ ಅವರು ಇಂದು ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರು ಕಳೆದ ಎರಡು ದಿನಗಳಿಂದ ಇಲ್ಲಿಯೇ ವಾಸ್ತವ್ಯ ಹೂಡಿದ್ದು ಸಿದ್ಧತೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತ್ತಿದ್ದಾರೆ.
ದಸರಾ ಮಹೋತ್ಸವ ಮುಕ್ತಾಯವಾಗುವವರೆಗೂ ಪ್ರತಿ ದಿನವೂ ಅವರಮನೆ ದೀಪಗಳಿಂದ ಕಂಗೊಳಿಸಲಿದೆ. ಚಿನ್ನದ ಸಿಂಹಾಸನ ನೋಡುವ ಸೌಭಾಗ್ಯ ಈ ಸಮಯದಲ್ಲಷ್ಟೇ ಲಭ್ಯವಾಗಲಿದೆ. ಏರ್ ಶೋ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಯವದಸರಾ ವಿಶೇಷವಾಗಿ ಆಕರ್ಷಿಸಲಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications