256 ವರ್ಷಗಳ ಹಿಂದಿನ ದುರ್ಗಾ ದೇವಿ ವಿಗ್ರಹ: ಮಾಸದ ಹೊಳಪು; ಕಾರಣ ಗೊತ್ತೇ?
ಶಕ್ತಿ ಸ್ವರೂಪ ಮಾತೆ ದುರ್ಗೆಯ ಒಂಬತ್ತು ದಿನಗಳ ಆರಾಧನೆ ಆರಂಭವಾಗಿದೆ. ಪ್ರತಿದಿನ ಮಾತೆಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ಕೆಲವೆಡೆ ವಿವಿಧ ಕಾರ್ಯಕ್ರಮಗಳು, ದಾಂಡಿಯಾ ಆಯೋಜಿಸುವ ಮೂಲಕ ಹಬ್ಬ ಆಚರಣೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾತೆ ದುರ್ಗೆಗೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಗಳೂ ಲಭ್ಯವಾಗಿವೆ.
ಇಂತಹ ಒಂದು ಕುತೂಹಲಕಾರಿ ಸುದ್ದಿ ಏನೆಂದರೆ, ಇನ್ನೂರೈವತ್ತು ವರ್ಷಗಳ ಹಿಂದೆ ಜೇಡಿಮಣ್ಣಿನಿಂದ ಮಾಡಿದ ದುರ್ಗೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ಅದರ ಹೊಳಪು ಇಂದಿಗೂ ಮಾಸದೆ ಹಾಗೆಯೇ ಉಳಿದುಕೊಂಡಿದೆ. ಇದು ಜನರನ್ನು ಬೆರಗುಗೊಳಿಸಿದೆ. ಹಾಗಾದರೆ ಈ ಮೂರ್ತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ಪ್ರತಿಮೆ ಎಲ್ಲಿದೆ?
ಶಿವನ ನಗರವಾದ ಕಾಶಿ ಪ್ರಪಂಚದ ಅತ್ಯಂತ ಹಳೆಯ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ಕಾಶಿಯನ್ನು ಮೊದಲು ಬನಾರಸ್ ಎಂದು ಕರೆಯಲಾಗುತ್ತಿತ್ತು. ಪುರಾಣ ದುರ್ಗ ಬರಿ ಎಂಬ ಸ್ಥಳದಲ್ಲಿ ಇನ್ನೂರೈವತ್ತು ವರ್ಷಗಳ ಹಿಂದೆ ಸ್ಥಾಪಿಸಲಾದ ಮಾತಾ ದುರ್ಗೆಯ ಜನಪ್ರಿಯ ವಿಗ್ರಹವಿದೆ.
ಈ ವಿಗ್ರಹದ ವಿಶೇಷತೆ ಏನೆಂದರೆ ಇಷ್ಟ ವರ್ಷಗಳು ಕಳೆದರು ಈ ವಿಗ್ರಹದ ಹೊಳಪು ಮಾತ್ರ ಮಾಸಿಲ್ಲ. ಜೇಡಿಮಣ್ಣು ಮತ್ತು ಒಣಹುಲ್ಲಿನಿಂದ ವಿಗ್ರಹವನ್ನು ಮಾಡಲಾಗಿದ್ದರೂ ಇನ್ನೂರೈವತ್ತು ವರ್ಷಗಳ ನಂತರವೂ ವಿಗ್ರಹವು ಹಾಗೆಯೇ ಇದೆ. ವಿಶೇಷವಾಗಿ ನವರಾತ್ರಿಯ ಸಮಯದಲ್ಲಿ ಇಲ್ಲಿ ಅಪಾರ ಸಂಖ್ಯೆಯ ಭಕ್ತರು, ಮಾತೃದೇವತೆಯ ದರ್ಶನ ಪಡೆಯಲು ಬರುತ್ತಾರೆ.
ಪ್ರತಿಮೆ ಯಾವಾಗ ಸ್ಥಾಪಿಸಲಾಯಿತು?
ಈ ಪ್ರತಿಮೆಯನ್ನು 1767 ರಲ್ಲಿ ಸ್ಥಾಪಿಸಲಾಯಿತು. ಕಥೆಯ ಪ್ರಕಾರ ತಾಯಿಯೇ ಈ ಸ್ಥಾನವನ್ನು ತೊರೆಯಲು ಬಯಸಿರಲಿಲ್ಲ ಎಂದು ಹೇಳಲಾಗುತ್ತದೆ. ತಾಯಿಗೆ ಶಿವನ ನಗರವಾದ ಕಾಶಿಯನ್ನು ಬಿಡಲು ಮನಸ್ಸಾಗುತ್ತಿಲ್ಲ. ಹೀಗಾಗಿ ಇಲ್ಲಿ ನೆಲೆಸಿದಳು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಈವರೆಗೂ ಪ್ರತಿಮೆ ಗಟ್ಟಿಯಾಗಿದೆ ಎಮದು ಹೇಳಲಾಗುತ್ತದೆ.
ಮಣ್ಣಿನ ಸವಕಳಿ ತಡೆಯಲು ಯಾವುದೇ ರಾಸಾಯನಿಕ ಲೇಪನ ಮಾಡಿಲ್ಲ ಎಂಬುದು ಅತ್ಯಂತ ಅಚ್ಚರಿಯ ಸಂಗತಿ. ಆದರೂ ಇಲ್ಲಿಯವರೆಗೂ ಮಣ್ಣಿನ ಸವಕಳಿಯಾಗಿಲ್ಲ. ಈ ಅದ್ಭುತ ಕಲೆಯನ್ನು ನೋಡಲು ದೂರದೂರುಗಳಿಂದ ಜನ ಬರುತ್ತಿದ್ದಾರೆ.
ಈ ಪ್ರತಿಮೆಯನ್ನು ಯಾರು ಸ್ಥಾಪಿಸಿದರು?
ಈ ಪ್ರತಿಮೆಯನ್ನು ಮುಖರ್ಜಿ ಕುಟುಂಬದವರು ಸ್ಥಾಪಿಸಿದ್ದಾರೆ. ಪ್ರತಿಮೆಯನ್ನು ನಿಮಜ್ಜನಕ್ಕೆ ಎತ್ತುವ ಪ್ರಯತ್ನ ನಡೆಸಿದಾಗ ಅದು ಸ್ಥಳದಿಂದ ಕದಲಲಿಲ್ಲ. ಇದಾದ ಬಳಿಕ ಕೆಲವರಿಂದ ಸಹಾಯ ಪಡೆದರೂ ತಾಯಿ ಸ್ಥಳದಿಂದ ಕದಲಲಿಲ್ಲ. ಆಗ ಮುಖರ್ಜಿ ಕುಟುಂಬದ ಯಜಮಾನನ ಕನಸಿನಲ್ಲಿ ಮಾತೃದೇವತೆಯೇ ಕಾಣಿಸಿಕೊಂಡಳು ಮತ್ತು ಅವನ ಸೇವೆಯಿಂದ ನಾನು ತುಂಬಾ ಸಂತೋಷಪಟ್ಟಿದ್ದೇನೆ. ಹೀಗಾಗಿ ಇಲ್ಲಿಯೇ ಇರಲು ಬಯಸುತ್ತೇನೆ ಎಂದು ಹೇಳಿದಳಂತೆ. ಹೀಗಾಗಿ ಈ ದೇವಿಯನ್ನು ಇಲ್ಲಿ ಪೂಜಿಸುವುದನ್ನು ಮುಂದುವರೆಸಿಕೊಂಡು ಬರಲಾಗಿದೆ. ಪ್ರತಿ ವರ್ಷ ಪೂಜೆಯ ವೇಳೆ ದೂರದೂರುಗಳಿಂದ ಇಲ್ಲಿಗೆ ಬಂದು ದುರ್ಗೆಯ ದರ್ಶನ ಪಡೆಯುತ್ತಾರೆ.
(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ತಜ್ಞರ ಸಲಹೆಯನ್ನು ಪಡೆಯಿರಿ)
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications