Viral Video: ಭಾರೀ ಮಳೆಗೆ ಪುಣೆ ರಸ್ತೆಗಳಲ್ಲಿ ಪ್ರವಾಹ, ಅದರಲ್ಲೇ ಯುವಕನ ಸರ್ಫಿಂಗ್: ಭಾರೀ ವೈರಲ್
ದೇಶಾದ್ಯಂತ ಮುಂಗಾರು ವ್ಯಾಪಿಸಿದೆ. ಜೋರು ಮಳೆಗೆ ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ತಾಪಮಾನ ಇಳಿಕೆಯಾಗಿದೆ. ಇದು ಖಷಿ ಕೊಡುವ ಸಂಗತಿಯಾದರೂ ಸಹ ಸದ್ಯ ಬರುತ್ತಿರುವ ಮುಂಗಾರು ಮಳೆಯು ಅವಾಂತರ ಸೃಷ್ಟಿಸಿದೆ. ಅನೇಕ ಪ್ರದೇಶಗಳು ಜಲಾವೃತವಾಗಿವೆ. ವಿದ್ಯುತ್ ಕಡಿತ ಇನ್ನಿತರ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಕೆರೆಯಂತಾದ ರಸ್ತೆಯಲ್ಲಿ ಯುವಕನೊಬ್ಬ 'ಸರ್ಫಿಂಗ್' ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು, ಈ ಯುವಕ ಪುಣೆಯ ನಿವಾಸಿ ಎನ್ನಲಾಗಿದೆ. ಮಳೆಗೆ ಜಲಾವೃತಗೊಂಡಿರುವ ರಸ್ತೆಗಳಲ್ಲಿಯೇ ಕಾರು, ಬೈಕುಗಳ ಸಂಚರಿಸುತ್ತಿವೆ. ಈ ಮಧ್ಯೆ ಯುವಕ ಬೆಡ್ ರೀತಿಯ ತೆಲುವ ಹಾಸಿಗೆ ಮೇಲೆ ಮಲಗಿ ರಸ್ತೆಯಲ್ಲಿ ಸಂಚರಿಸಿದ (ಸರ್ಫಿಂಗ್ ಮಾಡಿದ) ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಉರ್ಮಿ ಎಂಬುವವರು ಹಂಚಿಕೊಂಡಿದ್ದಾರೆ.

ಈ ವಿಡಿಯೋ ಸದ್ಯದ ಪುಣೆ ಪರಿಸ್ಥಿತಿಯನ್ನು ತಿಳಿಸುವ ಜೊತೆಗೆ ಆಡಳಿತ ಸರ್ಕಾರದ ಬೇಜವಾಬ್ದಾರಿ ಎಂಥದ್ದು ಎಂದು ತೋರಿಸುತ್ತಿದೆ. ಸ್ಥಳೀಯ ನಾಗರಿಕ ಸಂಸ್ಥೆಗಳ ಜವಾಬ್ದಾರಿಯನ್ನು ಬಡಿದೆಬ್ಬಿಸುವಂತಿದೆ.
ವಿಡಿಯೋದಲ್ಲಿ ಏನಿದೆ? ನೆಟ್ಟಿಗರು ಏನಂದ್ರು?
ಪ್ರವಾಹದ ರಸ್ತೆಯಲ್ಲಿ ತೆಲುವ ಬೆಡ್ ಮೇಲೆ ಮಲಗಿಕೊಂಡು ಯುವಕ ಸಂಚರಿಸಿದ ವಿಡಿಯೋ ಇದಾಗಿದೆ. ಇದರಲ್ಲಿ ತನ್ನ ಅಕ್ಕ- ಪಕ್ಕ ಬರುವ ಬೈಕ್, ಎದುರಿಗೆ ರಸ್ತೆಯಲ್ಲಿ ಓಡಾಡುವ ಆಟೋಗಳಿಗೆ ತನ್ನ ಮುಂದೆ ಬರದಂತೆ ಯುವಕ ಕೈ ಸನ್ನೆ ಮಾಡುವುದನ್ನು ನೀವು ನೋಡಬಹುದು.
ಕಾರುಗಳು ಇನ್ನಿತರ ವಾಹನಗಳು ಈ ಜಲಾವೃತದ ರಸ್ತೆಗಳಲ್ಲಿ ಸಂಚರಿಸಲು ಪರದಾಡುತ್ತಿವೆ. ಆದರೆ ಈತ ಮಾತ್ರ ಚಿಲ್ ಆಗಿ ಹಾಸಿಗೆ ಮೇಲೆ ಮಲಗಿ ಹವಾಮಾನವನ್ನು ಆನಂದಿಸಿದ್ದಾನೆ. ನೋಡುಗರಿಗೆ ಇದೊಂದು ಮನರಂಜನಾತ್ಮಕ ದೃಶ್ಯದಂತೆ ಕಂಡಿದೆ.
ವಿಡಿಯೋಗೆ ಕ್ಷಣಗಳಲ್ಲೇ 47,000 ವಿವ್ಸ್
ಈ ವಿಡಿಯೋವನ್ನು ಶುಕ್ರವಾರ ಉರ್ಮಿ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ. ಪುಣೆ ರೈನ್ (#PuneRains) ಎಂದು ಹ್ಯಾಷ್ ಟ್ರ್ಯಾಗ್ ಹಾಕಿದ್ದಾರೆ. ಇದರಕ್ಕೆ ನೀಡಲಾದ ಶಿರ್ಷಿಕೆಯನ್ನು ಓದುವ ಬರೀ 15-ಸೆಕೆಂಡ್ ಈ ವಿಡಿಯೋ ಕ್ಲಿಪ್ 47,000 ವಿವ್ಸ್ ಪಡೆದಕೊಂಡಿದೆ. 500 ಕ್ಕೂ ಹೆಚ್ಚು ಲೈಕ್ಸ್ಗಳು ಈ ವಿಡಿಯೋಗೆ ಬಂದಿವೆ.
Pune people got no chill? Naah, they got all the chul. #PuneRains pic.twitter.com/Im6e9ey4uR
— Urrmi (@Urrmi_) June 7, 2024
ವಿಡಿಯೋ ನೋಡಿದವರು ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ಸರ್ಫಿಂಗ್ ವೀಡಿಯೋ ವೈರಲ್ ಆಗುತ್ತಿದ್ದ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದರು. ಮಳೆಗಾಲದಲ್ಲಿ ಪುಣೆ ಹೆಚ್ಚು ಪರಿಸರ ಸ್ನೇಹಿ ಆಗುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ಈ ಯುವಕನಿಗೆ ಅಸೈನ್ ಮೆಂಟ್ ಬಾಕಿ ಇದೆ. ಅದನ್ನು ಪೂರ್ಣಗೊಳಿಸಲು ಹೊರಟಿದ್ದಾನೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು 'ಮ್ಯಾಜಿಕ್ ಕಾರ್ಪೆಟ್ ಮೇಲೆ ಪುಣೆಯ ಅಲ್ಲಾದೀನ್" ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೂ ಕೆಲವರು ಯುವಕರ ಸೃಜನಶೀಲತೆಯನ್ನು ಕೊಂಡಾಡಿದ್ದಾರೆ. ಇಂತಹ ಪ್ರವಾಹ ಸ್ಥಿತಿಯನ್ನು ಯುವಕ ಸದ್ಭಳಕೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಪುಣೆ-ಮುಂಬೈ ಪ್ರದೇಶಗಳಲ್ಲಿ ಬೇರೆ ಬೇರೆ ಕಡೆ ತೆರಳು ಮಾಲಿನ್ಯವೇ ಇಲ್ಲದ ಇಂತಹ ಪ್ರಯಾಣ ಸೂಕ್ತ ಎಂದು ಮತ್ತೊಬ್ಬರು #MumbaiRain ಹ್ಯಾಷ್ ಟ್ಯಾಗ್ ಹಾಕಿ ಟೀಕಿಸಿದ್ದಾರೆ. ಇಷ್ಟೆಲ್ಲ ನಾನ್ಸೆನ್ಸ್ ನಡೆದರೂ ಟ್ರಾಫಿಕ್ ಎಲ್ಲಿ? ಎಂದು ಇನ್ನೊಬ್ಬ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ












Click it and Unblock the Notifications