Viral Video: ಚಲಿಸುವ ರೈಲಿನಿಂದ ಕಸ ಬಿಸಾಡಿದ ಅಧಿಕಾರಿಗೆ ಗೇಟ್ ಪಾಸ್! ರೈಲ್ವೆ ಇಲಾಖೆ
Indian Railways: ಭಾರತೀಯ ರೈಲ್ವೆಯು ಕೋಟ್ಯಾಂತರ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ರೈಲು ಟ್ರ್ಯಾಕ್, ರೈಲು ನಿಲ್ದಾಣ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸುತ್ತಲೆ ಇದೆ. ಹೀಗಿದ್ದರೂ ರೈಲ್ವೆ ಹಿರಿಯ ಸಿಬ್ಬಂದಿಯೇ ರೈಲೊಳಗಿನ ಕಸವನ್ನು ಟ್ರ್ಯಾಕ್ ಮೇಲೆ ಎಸೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇತ್ತ ತ್ವರಿತವಾಗಿ ಸ್ಪಂದಿಸಿದ ರೈಲ್ವೆ ಇಲಾಖೆಯು ಆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿ ಕ್ರಮ ಕೈಗೊಂಡಿದೆ.
ಹಿರಿಯ ರೈಲ್ವೆ ಸಿಬ್ಬಂದಿಯೊಬ್ಬರು ಚಲಿಸುತ್ತಿದ್ದ ರೈಲಿನ ಒಳಗೆ ಡೋರ್ ಪಕ್ಕದಲ್ಲಿದ್ದ ಕಸದ ಬುಟ್ಟಿಯಿಂದ ತಿಂಡಿ ಬಾಟಲಿ, ಇತರ ಪ್ಲಾಸ್ಟಿಕ್ ಕಸವನ್ನು ಎತ್ತಿ ಬಾಗಿಲಿನಿಂದ ಟ್ರ್ಯಾಕ್ ಮೇಲೆ ಕಸ ಬಿಸಾಕಿದ್ದ ಘಟನೆ ನಡೆದಿದೆ. ಇದನ್ನು ಅದೇ ಬೋಗಿಯಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ವಿಡಿಯೋ ರಿಟ್ವೀಟ್ ಮಾಡಿದ ರೈಲ್ವೆ ಇಲಾಖೆ ಸಿಬ್ಬಂದಿಯನ್ನು ವಜಾಗೊಳಿಸಿದ್ದಾಗಿ ತಿಳಿಸಿದೆ. ದಂಡವನ್ನು ವಿಧಿಸಲಾಗಿದೆ.

ರೈಲ್ವೆ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗೆ ಸೂಚನೆ
ಈ ಕೃತ್ಯ ನೋಡಿದ ಪ್ರಮಾಣಿಕರು ಹತಾಶ ವ್ಯಕ್ತಪಡಿಸಿದ್ದಾರೆ. ದೇಶದ ರೈಲ್ವೆ ವ್ಯವಸ್ಥೆಯಲ್ಲಿ ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಇದೆ. ಹೀಗಿದ್ದರೂ ಇಲ್ಲಿ ನಿಯಮ ಉಲ್ಲಂಘನೆ ಆಗಿದೆ. ಹೀಗಾಗಿ ಸಿಬ್ಬಂದಿ ಮೆಲೆ ಭಾರೀ ದಂಡ ವಿಧಿಸಲಾಗಿದೆ. ಈ ಘಟನೆ ಬೆನ್ನಲ್ಲೆ ರೈಲ್ವೆ ಪ್ಲಾಟ್ಫಾಮ್, ರೈಲು ನಿಲ್ದಾಣಗಳಲ್ಲಿ ಕಸ ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವರದಿ ಆಗಿದೆ.
ಇದು ಒಂದು ದಿನದ ಕಹಿ ಘಟನೆ ಅಲ್ಲ. ಕೋಟ್ಯಾಂತರ ಜನರು ನಿತ್ಯ ಪ್ರಯಾಣಿಸುತ್ತಾರೆ. ಅವರೆಲ್ಲರಿಂದ ನೀರಿನ ಖಾಲಿ ಬಾಟಲಿ, ಪ್ಲಾಸ್ಟಿಕ್ ಕವರ್, ಹಸಿ ಮತ್ತು ಒಣ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅವರಲ್ಲಿ ಕೆಲವರು ಚಲಿಸುವ ರೈಲಿನಿಂದ ಹೊರಕ್ಕೆ ಬಿಸಾಡುತ್ತಾರೆ. ಟ್ರ್ಯಾಕ್ ಅಕ್ಕಪಕ್ಕ ನೀವು ನೋಡದರೆ ಉದ್ದಕ್ಕೂ ಪ್ಲಾಸ್ಟಿಕ್ ಸೇರಿ ಸಾಕಷ್ಟು ಕಸ ಕಂಡು ಬರುತ್ತಿದೆ. ಇದರಿಂದ ನಾಡಿಗೆ ನಾವೆಲ್ಲರು ಏನು ಕೊಡುಗೆ ನಿಡುತ್ತಿದ್ದೇವೆ ಎಂಬುದನ್ನು ಗಮನಿಸಿದೆ. ಪರಿಸರ ಕಾಳಜಿ ಮೆರೆಯುವುದು ಅಗತ್ಯವಿದೆ.
ಒಟ್ಟು 49 ಸೆಕೆಂಡುಗಳ ಈ ವೈರಲ್ ವೀಡಿಯೊ ಸಾಕಷ್ಡು ಟೀಕೆಗೆ ಗುರಿಯಾಗಿದೆ. ರೈಲ್ವೆ ವ್ಯಾಪ್ತಿಯಲ್ಲಿನ ಸ್ವಚ್ಛತೆ ಕುರಿತು ಕಳವಳ ಹುಟ್ಟುಹಾಕಿದೆ. ಈ ಘಟನೆ ನಡೆದಿರುವುದು ಕಳೆದ ತಿಂಗಳೂ ಮಾರ್ಚ್ 27ರಂದು ವರದಿ ಆಗಿದೆ. ಕೃತ್ಯ ಎಸಗಿದೆ ಅಧಿಕಾರಿ ಅದೇ ದಿನ ಕೆಲಸ ಕಳೆದುಕೊಂಡಿದ್ದಾರೆ.
This staff was removed on 27/2, the same day on which he committed this act. https://t.co/WbPHkmC4DE
— Ministry of Railways (@RailMinIndia) March 6, 2025
ವಿಡಿಯೋ ರೆಕಾರ್ಡ್ ವೇಳೆ ಪ್ರಯಾಣಿಕರು ಕಸವನ್ನು ಏಕೆ ಹೊರ ಚೆಲ್ಲುತ್ತಿದ್ದೀರಿ ಎಂದು ಕೂಗಿದ್ದಾರೆ. ಅದಕ್ಕೆ ಆ ಸಿಬ್ಬಂದಿ ಸಬೂಬು ಹೇಳುತ್ತಲೇ ಬಾಗಿಲು ತೆರೆದು ಕಸದ ಬುಟ್ಟಿ ಖಾಲಿ ಆಗುವವರೆಗೂ ಹೊಸಕ್ಕೆ ಕಸ ಚೆಲ್ಲಿದ್ದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಆದರೆ ಅವರ ಕೃತ್ಯ ತಡೆಯಲು ಸಾಧ್ಯವಾಗಲಿಲ್ಲ. ರೈಲ್ವೆ ಅಧಿಕಾರಿಯ ದುರಹಂಕಾರ ಮತ್ತು ಆತ್ಮವಿಶ್ವಾಸ ಎಲ್ಲಿಂದ ಬರುತ್ತದೆ? ಎಂದು ಪ್ರಶ್ನಿಸಲಾಗಿದೆ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications