ವಿಡಿಯೋ: ರೈಲು ನಿಲ್ದಾಣದಲ್ಲಿ ಒಡೆದ ಟ್ಯಾಪ್- 'ಆಟೋ ಕ್ಲೀನಿಂಗ್ ಸಿಸ್ಟಮ್' ಎಂದ ನೆಟ್ಟಿಗರು
ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಒಡೆದ ನೀರಿನ ಟ್ಯಾಪ್ ಪ್ರಯಾಣಿಕರಿಗೆ "ಉಚಿತ ಶವರ್" ಅನ್ನು ನೀಡುವ ಉಲ್ಲಾಸದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಕಿರು ಕ್ಲಿಪ್ ಅನ್ನು ಅಭಿ ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಒಡೆದ ಟ್ಯಾಪ್ ನೀರು ರೈಲಿನಲ್ಲಿರುವ ಪ್ರಯಾಣಿಕರ ಮೇಲೆ ಬೀಳುವುದು ತೋರಿಸುತ್ತದೆ. "Indian railways at your service" ಎಂಬ ಶೀರ್ಷಿಕೆಯ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಮತ್ತು 26,000 ಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ.
30 ಸೆಕೆಂಡುಗಳ ತುಣುಕಿನಲ್ಲಿ, ಒಡೆದ ಟ್ಯಾಪ್ನಿಂದ ನೀರು ಫಿರಂಗಿಯಂತೆ ಹೊರಬರುವುದನ್ನು ಕಾಣಬಹುದು. ಕೆಲವು ಕ್ಷಣಗಳ ನಂತರ ನೀರು ಚಿಮ್ಮುತ್ತಿರುವ ಸ್ಥಳಕ್ಕೆ ರೈಲು ಆಗಮಿಸುತ್ತದೆ. ಒಳಬರುವ ರೈಲಿನ ಕಡೆಗೆ ಕ್ಯಾಮೆರಾ ಪ್ಯಾನ್ ಮಾಡುತ್ತಿದ್ದಂತೆ, ಹಾದುಹೋಗುವ ಲೋಕಲ್ ರೈಲಿನ ಬಾಗಿಲಿನ ಬಳಿ ನಿಂತಿದ್ದ ಪ್ರಯಾಣಿಕರ ಮೇಲೆ ನೀರು ಬೀಳುತ್ತದೆ. ನೀರು ಬೀಳುವುದನ್ನು ತಪ್ಪಿಸಲು ರೈಲಿನೊಳಗೆ ಪ್ರಯಾಣಿಕರು ನುಗ್ಗುತ್ತಿರುವುದನ್ನು ನೋಡಬಹುದು.
ಕ್ಲಿಪ್ನಲ್ಲಿನ ಉಲ್ಲಾಸದ ಭಾಗವೆಂದರೆ, ಹಲವಾರು ಇಂಟರ್ನೆಟ್ ಬಳಕೆದಾರರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕಿದ್ದಾರೆ. ರೈಲಿನಲ್ಲಿದ್ದ ಕೆಲ ಪ್ರಯಾಣಿಕರು ಮುರಿದ ಟ್ಯಾಪ್ ನೀರಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರೈಲಿನಲ್ಲಿ ಬರೆದಿರುವ ER (ಪೂರ್ವ ರೈಲ್ವೆ) ಅನ್ನು ಗಮನಿಸಿದರೆ ಈ ರೈಲು ಪಶ್ಚಿಮ ಬಂಗಾಳದ ರೈಲು ನಿಲ್ದಾಣವಾಗಿರಬಹುದು.
Indian railways at your service 😂 pic.twitter.com/fEL65NFjHs
— Abhy (@craziestlazy) October 26, 2022
ಕಾಮೆಂಟ್ ವಿಭಾಗದಲ್ಲಿ, ಇಂಟರ್ನೆಟ್ ಬಳಕೆದಾರರು ಭಾರತೀಯ ರೈಲ್ವೆ ಒದಗಿಸಿದ "ವಿಶೇಷ ಸೇವೆ" ಎಂದು ವ್ಯಂಗ್ಯವಾಗಿ ಹೊಗಳಿದ್ದಾರೆ. ಒಬ್ಬ ಬಳಕೆದಾರ ತಮಾಷೆಯಾಗಿ, "ಹಲವು ಮಂದಿ ಬೆಳಿಗ್ಗೆ ಸ್ನಾನ ಮಾಡಿಲ್ಲ ಎಂದು ರೈಲ್ವೇಗೂ ತಿಳಿದಿದೆ, ಆದ್ದರಿಂದ ಸಹಾಯ ಮಾಡುತ್ತಿದೆ" ಎಂದು ಹಾಸ್ಯ ಮಾಡಿದ್ದಾರೆ. ಮತ್ತೊಬ್ಬರು, "ಅದು ಸ್ವಯಂ ಶುಚಿಗೊಳಿಸುವ ವ್ಯವಸ್ಥೆ" ಎಂದು ಬರೆದಿದ್ದಾರೆ.

ಮೂರನೆಯವರು, "ಇಲ್ಲಿ AI ಅನ್ನು ಸಕ್ರಿಯಗೊಳಿಸಲಾಗಿದೆ. AI ಬಾಯಾರಿದ ಪ್ರಯಾಣಿಕರನ್ನು ಪತ್ತೆಹಚ್ಚುತ್ತದೆ ಮತ್ತು ಕಿಟಕಿಯ ಮೂಲಕ ನೀರನ್ನು ನೇರವಾಗಿ ಲಭ್ಯವಾಗುವಂತೆ ಮಾಡುತ್ತದೆ. ಇದರಿಂದ ಮಾನವ ಸ್ಪರ್ಶದಿಂದ ಕಲುಷಿತವಾಗದಂತೆ ನೇರವಾಗಿ ಬಾಯಿಗೆ ನೀರು ನೀಡಲಾಗುತ್ತದೆ. ಹೈ ಟೆಕ್ಕೀ ಟೆಕ್ಕಿ !!" ಮತ್ತೊಬ್ಬರು "ರೈಲುಗಳಿಗೆ ಸ್ವಯಂ ಶುಚಿಗೊಳಿಸುವ ಸೇವೆಗಳು" ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋವನ್ನು ನೋಡಿ ಜನ ಎಂಜಾಯ್ ಮಾಡಿದ್ದಾರೆ. ಈ ಘಟನೆ ನಡೆದ ಸಮಯ ಮತ್ತು ದಿನಾಂಕ ಇನ್ನೂ ತಿಳಿದುಬಂದಿಲ್ಲ.
-
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
ಬೆಂಗಳೂರಿನ ಸೋಂಪುರ ಕೆರೆ ಉಳಿವಿಗೆ ಜಲಮಂಡಳಿ ಮಾಸ್ಟರ್ ಪ್ಲಾನ್, ಸಂಸ್ಕರಣಾ ಘಟಕಕ್ಕೆ ಕಲುಷಿತ ನೀರು -
ಬೇಸಿಗೆಯ ಸಂಜೀವಿನಿ ಈ ನಿಂಬೆ ಹಣ್ಣು: ಆರೋಗ್ಯದ ದೃಷ್ಟಿಯಿಂದ ಪ್ರಯೋಜನಗಳು ಅಪಾರ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್












Click it and Unblock the Notifications