ಯೋಗಿ ಆದಿತ್ಯನಾಥ್ ಸಂಪುಟದ ಒಬ್ಬೊಬ್ಬರೇ ರಾಜೀನಾಮೆ: ಅಸಲಿ ಪ್ರಹಸನ ಏನು ಗೊತ್ತಾ?
ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿರುವ ಉತ್ತರ ಪ್ರದೇಶದ ಅಸೆಂಬ್ಲಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುತ್ತಾ ಅಥವಾ ಅಖಿಲೇಶ್ ಯಾದವ್ ಮೋಡಿ ಮಾಡ್ಯಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳಿಗೆ ನಿಯತ್ತು ಬದಲಾವಣೆಯಾಗುವ ಪರ್ವ ಕಾಲ. ಅದೇ ರೀತಿ ಉತ್ತರ ಪ್ರದೇಶದಲ್ಲೂ ನಡೆಯುತ್ತಿದೆ. ಸಾಮಾನ್ಯವಾಗಿ ಬೇರೆ ಪಕ್ಷದವರು ಬಿಜೆಪಿಯತ್ತ ಬರುವುದನ್ನು ಇತ್ತೀಚೆಗೆ ನಾವು ಕಂಡಿದ್ದೇವೆ, ಆದರೆ ಅಪರೂಪ ಎನ್ನುವಂತೆ ಬಿಜೆಪಿಯನ್ನು ಅದರಲ್ಲೂ ಸಚಿವರೇ ಪಕ್ಷ ತೊರೆಯುತ್ತಿರುವ ವಿದ್ಯಮಾನ ಅಲ್ಲಿ ನಡೆಯುತ್ತಿದೆ.
ಸಚಿವರು, ಶಾಸಕರು ಬಿಜೆಪಿಯನ್ನು ತೊರೆಯುತ್ತಿದ್ದಾರೆ ಮತ್ತು ಅಖಿಲೇಶ್ ಯಾದವ್ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಈಗಾಗಲೇ ಮೂವರು ಸಚಿವರು ಬಿಜೆಪಿಗೆ ರಾಜೀನಾಮೆ ನೀಡಿ, ಸೈಕಲ್ ಏರಿದ್ದಾಗಿದೆ. ಸೈಕಲ್ ಪಂಚರ್ ಆಗುತ್ತೋ, ನಿರಾಯಾಸವಾಗಿ ಲಕ್ನೋ ತಲುಪುತ್ತೋ ಎನ್ನುವುದನ್ನು ಅರಿತುಕೊಳ್ಳಲು ಮಾರ್ಚ್ ಹತ್ತರವರೆಗೆ ಕಾದರೆ ಉತ್ತರ ಸಿಕ್ಕಿ ಬಿಡುತ್ತದೆ.
ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ರಾಜಕೀಯ ವಿಶ್ಲೇಷಕರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ತಿರುವನ್ನು ಪಡೆಯುತ್ತಿದೆ. ಇಂತಹ ಸಮಯದಲ್ಲಿ ಶಾಸಕರು, ಅಸೆಂಬ್ಲಿ ಮಟ್ಟದ ಮುಖಂಡರು ಇನ್ನೊಂದು ಪಾರ್ಟಿಗೆ ಪಕ್ಷಾಂತರಗೊಳ್ಳುವುದು ಓಕೆ, ಆದರೆ ಸಚಿವರೇ, ಯೋಗಿ ಆದಿತ್ಯನಾಥ್ ಅವರಿಂದ ದೂರ ಹೋಗುತ್ತಿದ್ದಾರೆ ಎಂದರೆ ಇದಕ್ಕೆ ಕಾರಣ ಏನಿರಬಹುದು? ಬಿಜೆಪಿಯ ಹೈಕಮಾಂಡ್ ಇದನ್ನು ನಿರೀಕ್ಷಿಸಿತ್ತೇ?

ಆಡ್ವಾಣಿ, ವಾಜಪೇಯಿ ಇದ್ದ ಬಿಜೆಪಿ ಬೇರೆ, ಮೋದಿ ಮತ್ತು ಶಾ ಇರುವ ಬಿಜೆಪಿ ಬೇರೆ
ರಾಜಕೀಯ ವಿಚಾರಕ್ಕೆ ಬಂದಾಗ ಜನಸಾಮಾನ್ಯರಲ್ಲಿ ಬರುವ ಮಾತೆಂದರೆ, ಆಡ್ವಾಣಿ, ವಾಜಪೇಯಿ ಇದ್ದ ಬಿಜೆಪಿ ಬೇರೆ, ಮೋದಿ ಮತ್ತು ಶಾ ಇರುವ ಬಿಜೆಪಿಯೇ ಬೇರೆ. ಆಗಲೂ, ಈಗಲೂ, ಬೇಕೆಂದರೂ, ಬೇಡವೆಂದರೂ ನಡೆಯುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಫರ್ಮಾನೇ ಅಂತಿಮ. ಚುನಾವಣೆಯ ಈ ಸಮಯದಲ್ಲಿ ಕ್ಯಾಬಿನೆಟ್ ದರ್ಜೆಯ, ಒಬಿಸಿ ಸಮುದಾಯದ ಪ್ರಮುಖ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ನೀಡಿ, ಅಖಿಲೇಶ್ ಬತ್ತಳಿಕೆಗೆ ಸೇರಿಕೊಂಡಿದ್ದಾರೆ.

ಒಬಿಸಿ ಸಮುದಾಯದ ಪ್ರಮುಖ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ
ಪಕ್ಷ ಬಿಟ್ಟಾಗ ಒಂದು ಕಾರಣ ಹೇಳಬೇಕಲ್ಲಾ ಅದನ್ನೇ ಸ್ವಾಮಿ ಪ್ರಸಾದ್ ಹೇಳಿದ್ದಾರೆ. ಆದರೆ, ಇವರು ಮೂಲ ಬಿಜೆಪಿಯವರಲ್ಲ, ಬದಲಿಗೆ ಮಾಯಾವತಿಗೆ ಬೆನ್ನುಕೊಟ್ಟು ಕಳೆದ ಚುನಾವಣೆಯ ವೇಳೆ ಬಂದವರು. ಬಿಜೆಪಿ ಸೇರಬೇಕಾದರೂ ಕಂಡೀಷನ್, ಬಿಡುವ ಮುನ್ನವೂ ಕಂಡೀಷನ್ ಹಾಕಿದವರೇ ಸ್ವಾಮಿ ಪ್ರಸಾದ್. ತನ್ನ ಮಗನಿಗೆ, ಸೊಸೆಗೆ ಟಿಕೆಟ್ ನೀಡಬೇಕು ಎನ್ನುವ ಕಂಡೀಷನಿಗೆ ಅಮಿತ್ ಶಾ ಒಪ್ಪದೇ ಇದ್ದಿದ್ದರಿಂದ ಬಿಜೆಪಿ ದಲಿತ ವಿರೋಧಿ ಎಂದು ಇವರು ಪಕ್ಷ ತೊರೆದರು ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಬಿಜೆಪಿಯ ಹೈಕಮಾಂಡ್ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ
ಈಗಾಗಲೇ ಪಕ್ಷ ಬಿಟ್ಟ ಇನ್ನಿಬ್ಬರು ಸಚಿವರು ಮತ್ತು ಶಾಸಕರದ್ದು ಇದೇ ಸಮಸ್ಯೆ ಎಂದು ಹೇಳಲಾಗುತ್ತಿದೆ. ಒಂದೋ ತಮಗೆ ಅಥವಾ ತಾವು ಶಿಫಾರಸು ಮಾಡಿರುವ ಮುಖಂಡರಿಗೆ ಟಿಕೆಟ್ ಸಿಗುವುದು ಖಾತ್ರಿಯಾಗದೇ ಇರುವುದರಿಂದ ಬಿಜೆಪಿಯ ಮೇಲೆ ಇವರಿಗೆ ನಿಯತ್ತು ಬದಲಾವಣೆಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಾಗಾಗಿಯೇ, ಪಕ್ಷ ತೊರೆಯುವವರು ಬಿಟ್ಟೋಗಲಿ ಎಂದು ಬಿಜೆಪಿಯ ಹೈಕಮಾಂಡ್ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ
ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ ಎನ್ನುವುದು ದಿನದಿಂದ ದಿನಕ್ಕೆ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ. ಜಾತಿ ರಾಜಕಾರಣಕ್ಕೆ ಎತ್ತಿದ ಕೈಯಂತಿರುವ ಇಲ್ಲಿ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಅಳೆದುತೂಗಿ ಬಿಡುಗಡೆ ಮಾಡಿದೆ. ಅಖಿಲೇಶ್ ದಲಿತ ವಿರೋಧಿ ಎಂದು ಭೀಮ್ ಆರ್ಮಿಯವರು ಹೇಳುತ್ತಿದ್ದರೆ, ರೈತ ಮುಖಂಡ ಟಿಕಾಯತ್ ಅವರು ಎಸ್ಪಿಗೆ ಬೆಂಬಲ ಎಂದಿದ್ದರು. ಈಗ, ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ದೆಹಲಿ ಗಡಿಯನ್ನು ಹಂಚಿಕೊಂಡಿರುವ ಕ್ಷೇತ್ರಗಳಿಗಳಲ್ಲಿ ಟಿಕಾಯತ್ ಮಾತು ಮುಖ್ಯವಾಗಬಹುದು. ಒಟ್ಟಿನಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಉತ್ತರ ಪ್ರದೇಶ ಚುನಾವಣೆ ಹಾವು ಏಣಿ ಆಟದಂತೆ ಸಾಗಬಹುದು.
Recommended Video
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications