ತಮ್ಮ ಸಮಾಧಿಯ ನಿರ್ಮಾಣಕ್ಕೆ ತಾವೇ ಅಡಿಗಲ್ಲು ಹಾಕಿದ್ದ ಸಿದ್ದಗಂಗಾಶ್ರೀಗಳು!
Recommended Video

ಬೆಂಗಳೂರು, ಜನವರಿ 22: ತುಮಕೂರಿನ ಸಿದ್ದಗಂಗಾಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಸಮಾಧಿ ಸ್ಥಳವನ್ನು ಗುರುತಿಸಿ, ಸಮಾಧಿ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದ್ದರು.
ಸುಮಾರು 37ವರ್ಷಗಳ ಹಿಂದೆ ಆರಂಭವಾದ ಕ್ರಿಯಾ ಸಮಾಧಿ ಕಟ್ಟಡ ನಿರ್ಮಾಣ, ಇಂದು(ಜನವರಿ 22) ಪೂರ್ಣಗೊಳ್ಳಲಿದೆ. ಲಿಂಗಾಯತ ವೀರಶೈವ ಸಂಪ್ರದಾಯದಲ್ಲಿ ಸ್ವಾಮೀಜಿಗಳು, ಮಠಾಧೀಶರು ಲಿಂಗೈಕ್ಯರಾದ ಸಂದರ್ಭದಲ್ಲಿ ಕ್ರಿಯಾ ಸಮಾಧಿ ಸ್ಥಾಪಿಸುವುದು ಸಾಮಾನ್ಯ.
In Pics: ಕೈಲಾಸಕ್ಕೆ ಹೊರಟರು ಶಿವ ಶರಣ ಶಿವಕುಮಾರ ಸ್ವಾಮಿ
1930ರ ಜನವರಿ 16ರಂದು ಮರುಳಾಧ್ಯರು ಲಿಂಗೈಕ್ಯರಾದ ಬಳಿಕ ಸಿದ್ದಗಂಗಾ ಮಠ ಉತ್ತರಾಧಿಕಾರಿಯಾಗಿ, ಉದ್ದಾನ ಶಿವಯೋಗಿಗಳ ಆಶಯದಂತೆ ಮಠವನ್ನು ಕಟ್ಟಿ ಬೆಳೆಸಿ, ನಾಡಿನ ಅನೇಕರಿಗೆ ಬೆಳಕಾದವರು ಶಿವಕುಮಾರ ಸ್ವಾಮೀಜಿಗಳು.
ಶಿವಕುಮಾರ ಸ್ವಾಮೀಜಿಗಳು ತಮ್ಮ ಉತ್ತರಾಧಿಕಾರಿ ಗುರುತಿಸುವ ಮೊದಲು ಸಮಾಧಿ ಸ್ಥಳವನ್ನು ಗುರುತಿಸಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು. 1988ರಲ್ಲಿ ಸಿದ್ದಲಿಂಗ ಸ್ವಾಮಿಗಳು ಶಿಷ್ಯರಾದರು. 2011ರಲ್ಲಿ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾದರು.
'ನಡೆದಾಡುವ ದೇವರು' ಶಿವಕುಮಾರ ಸ್ವಾಮೀಜಿಗಳು(111) ಸೋಮವಾರ ಬೆಳಗ್ಗೆ 11.44ರ ಸುಮಾರಿಗೆ ಇಹಲೋಕ ವ್ಯವಹಾರ ಮುಗಿಸಿ ಕಾಣದ ದೇವರ ಕಡೆಗೆ ತೆರಳಿದರು. ಮಂಗಳವಾರ ಸಂಜೆ 4 ಗಂಟೆ ನಂತರ ಅಂತಿಮ ವಿಧಿ ವಿಧಾನ ನೆರವೇರಲಿದೆ.

ಕ್ರಿಯಾ ಕರ್ಮದ ಬಗ್ಗೆ ಉಯಿಲಿನಲ್ಲಿ ಉಲ್ಲೇಖ
ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿಗೆ 37 ವರ್ಷಗಳ ಹಿಂದೆಯೇ ಜಾಗ ನಿಗದಿ ಮಾಡಿದ ಸ್ಥಳದಲ್ಲಿ ಈಗ ಸಮಾಧಿ ನಿರ್ಮಾಣಗೊಂಡಿದೆ. ಇದೇ ಸಮಾಧಿ ಭವನದಲ್ಲಿ ಈಗಾಗಲೇ ಅಂತಿಮ ವಿಧಿ ವಿಧಾನ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಧ್ಯಾಹ್ನ 3 ಗಂಟೆಯವರೆಗೆ ಪಾರ್ಥೀವ ಶರೀರ ದರ್ಶನಕ್ಕೆ ಗೋಸಲ ವೇದಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಂತರ ಸಮಾಧಿ ಸ್ಥಳದ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಬಳಿಕ ಶ್ರೀಗಳ ಅಪೇಕ್ಷೆಯಂತೆ ಕ್ರಿಯಾ ವಿಧಾನ ನಡೆಯಲಿದೆ. ಹಿಂದೆಯೇ ಶ್ರೀಗಳು ಕ್ರಿಯಾ ವಿಧಾನವನ್ನು ಬರೆದಿದ್ದು, ಅವರು ಬರೆದಿರುವ ಕ್ರಿಯಾ ಸಮಾಧಿ ಮಾಡಲಾಗುವುದು ಎಂದು ಸಿದ್ದಲಿಂಗ ಶ್ರೀಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ 4 ಗಂಟೆ ನಂತರ ಅಂತಿಮ ವಿಧಿ ವಿಧಾನ ನೆರವೇರಲಿದೆ. ಸೂರ್ಯಾಸ್ತದ ಸಮಯದೊಳಗೆ ವಿಧಿ ವಿಧಾನಗಳನ್ನು ಪೂರ್ಣಗೊಳಿಸಲಾಗುತ್ತದೆ.

ಕ್ರಿಯಾ ಸಮಾಧಿಯಲ್ಲಿ ಅಂತ್ಯ ಸಂಸ್ಕಾರ
ಸಮಾಧಿ ಭವನದಲ್ಲಿ ಪೂಜಾ ವಿಧಿ ವಿಧಾನಗಳು ಆರಂಭವಾಗಿದ್ದು, ಕ್ರಿಯಾ ಸಮಾಧಿಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಈಗಾಗಲೇ ಗದ್ದುಗೆ ಮಾದರಿಯನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಅದರಲ್ಲಿದ್ದ ಮರಳನ್ನು ಹೊರ ತೆಗೆದು ಅಂತಿಮ ಕಾರ್ಯಕ್ಕೆ ಸ್ವಚ್ಛಗೊಳಿಸಲಾಗಿದೆ. ಶ್ರೀಗಳ ಪಾರ್ಥೀವ ಶರೀರಕ್ಕೆ ಮಂಗಳ ಸ್ನಾನ ನಂತರ ಭಸ್ಮಾರಾಧನೆ ನಡೆಯಲಿದೆ. 5 ಗಂಟೆ ಸುಮಾರಿಗೆ ಐವತ್ತು ವಿಭೂತಿ ಗಟ್ಟಿಗಳನ್ನು ಬಳಸಲಾಗುವುದು. ಸಮಾಧಿಯಲ್ಲಿ ಶರೀರವನ್ನು ಸ್ಥಾಪಿಸಿದ ಬಳಿಕ ಬಿಲ್ವಪತ್ರೆ, ಭಸ್ಮ, ವಿಭೂತಿಗಳಿಂದ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಈ ಸಂದರ್ಭದಲ್ಲಿ ಶಿವಸ್ತುತಿ, ರುದ್ರ ಪಠಣ ಮಾಡಲಾಗುತ್ತದೆ.

ಸ್ವಾಮೀಜಿ ಜೀವಂತ ಸಮಾಧಿಗೆ ಬಯಸಿದ್ದರು.
ಜೀವಂತ ಸಮಾಧಿಯಾಗಲು ಸಿದ್ದಗಂಗಾ ಶ್ರೀಗಳು ಇಚ್ಛಿಸಿದ್ದರು. ಆದರೆ, ಕಾನೂನಿಗೆ ವಿರುದ್ಧವಾದುದು, ಸಮಾಜ ಒಪ್ಪುದಿಲ್ಲ, ಭಕ್ತರ ವಿರೋಧದ ಭಾವನೆ ಬಂದಿದ್ದರಿಂದ 37 ವರ್ಷಗಳ ಹಿಂದೆಯೇ ಗದ್ದುಗೆ ನಿರ್ಮಿಸಲು ಸೂಚಿಸಿದ್ದರು.ವೀರಶೈವ ಲಿಂಗಾಯತ ಪರಂಪರೆಯಲ್ಲಿ ಈ ರೀತಿ ಬದುಕಿದ್ದಾಗಲೇ ಸಮಾಧಿ ಸ್ಥಳ ಗುರುತಿಸಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬಹುದಾಗಿದೆ. ಅಲ್ಲದೆ, ಅಂತಿಮ ವಿಧಿ ವಿಧಾನವನ್ನು ಶ್ರೀಗಳು ಬಯಸಿದಂತೆ ನಡೆಸಲು ಸಿದ್ದಗಂಗಾ ಮಠ ನಿರ್ಧರಿಸಿದ್ದಾರೆ. ಸಿದ್ದಲಿಂಗೇಶ್ವರ ಸ್ವಾಮಿ ಬೆಟ್ಟದ ಮುಂಭಾಗದ ಗದ್ದುಗೆಯಲ್ಲಿ ಹಾಲಿ ಮಠಾಧ್ಯಕ್ಷ ಸಿದ್ದಲಿಂಗಶ್ರೀಗಳ ನೇತೃತ್ವದಲ್ಲಿ ಎಲ್ಲಾ ಪೂಜೆ, ಕೈಂಕರ್ಯಗಳು ಮುಂಜಾನೆ 5 ರಿಂದ ಆರಂಭವಾಗಿವೆ. ಕ್ರಿಯಾ ಸಮಾಧಿ ಬಳಿಯ ವಿಧಿ ವಿಧಾನವನ್ನು ಆಗಮಿಕರು ನೆರವೇರಿಸಲಿದ್ದಾರೆ.

ಹತ್ತು ಹಲವು ಸ್ವಾಮೀಜಿಗಳ ನೇತೃತ್ವ
ಕನಕಪುರದ ಮುಮ್ಮಡಿ ಶ್ರೀಗಳು, ಸುತ್ತೂರು ಶ್ರೀಗಳು, ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು, ಕಾಡುಸಿದ್ದೇಶ್ವರ ಮಠ ಕರಿವೃಷಭೇಂದ್ರ ಸ್ವಾಮಿ ಸೇರಿದಂತೆ 15 ರಿಂದ 20 ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದಾರೆ.
* ಗೋಸಲ ಮಂಟಪ ವೇದಿಕೆಯಿಂದ ಕ್ರಿಯಾ ಸಮಾಧಿ ಭವನದ ತನಕ ಮೆರವಣಿಗೆ.
* ಗದ್ದುಗೆ ಶುದ್ಧೀಕರಣ, ಕಲಶ ಪೂಜೆ, ಹೊಸ್ತಿಲ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಸಪ್ತಋಷಿಗಳ ಪೂಜೆ ನೆರವೇರಲಿದೆ.
* ಸಿದ್ದಗಂಗಾಶ್ರೀಗಳ ಬಳಿ ಇದ್ದ ಬೆಳ್ಳಿ ಇಷ್ಟಲಿಂಗಕ್ಕೆ ಪೂಜೆ, ಅಭಿಷೇಕ, ರುದ್ರಪಠಣದ ಬಳಿಕ, ರುದ್ರಾಕ್ಷಿ ಪೀಠದಲ್ಲಿ ಸಿದ್ದಗಂಗಾಶ್ರೀಗಳನ್ನು ಕುಳ್ಳರಿಸಿ, ಮಂಗಲ ಸ್ನಾನ, ಅಭಿಶೇಕ, ಪೂಜೆ ಸಲ್ಲಿಸಲಾಗುತ್ತದೆ.
* ಅಂತಿಮವಾಗಿ ಮಣ್ಣು, ಮರಳು, ಉಪ್ಪು ಮಿಶ್ರಿತ ಕ್ರಿಯಾಸಮಾಧಿಯಲ್ಲಿ ಪೂಜಿತ ಶರೀರವನ್ನು ಕುಳ್ಳರಿಸಿ, ಭಸ್ಮಾದಿ,ವಿಭೂತಿಗಳಿಂದ, ಬಿಲ್ವಪತ್ರೆಗಳಿಂದ ತುಂಬಲಾಗುತ್ತದೆ
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications