Video: ಬಿಸಿಲಿಗೆ ಕಂಗೆಟ್ಟು 'ಆಟೋ ರಿಕ್ಷಾ' ಮೇಲೆ ಹುಲ್ಲು ಬೆಳೆಸಿದ ಚಾಲಕ: ಜನರು ಫಿದಾ
ತೆಲಂಗಾಣ, ಮೇ 05: ಪ್ರಸಕ್ತ ಬೇಸಿಗೆಯಲ್ಲಿ ಬಿಸಿಲಿನ ಶಾಖಕ್ಕೆ ನಲುಗದ ರಾಜ್ಯಗಳು, ಹಳ್ಳಿಗಳೇ ಇಲ್ಲ. ಇದೇ ರೀತಿ ತೆಲಂಗಾಣದಲ್ಲಿ ಆಟೋ ಚಾಲಕನೊಬ್ಬ ಅಧಿಕ ತಾಪಮಾನದ ಝಳಕ್ಕೆ ತಪ್ಪಿಸಿಕೊಳ್ಳಲು ಕಂಡುಕೊಂಡ ಐಡಿಯಾ ನೆಟ್ಟಿಗರು ಫೀದಾ ಆಗಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಈ ವರ್ಷದ ಫೆಬ್ರವರಿಯಿಂದ ಈ ವರೆಗೆ ತೀವ್ರ ತಾಪಮಾನ ದಾಖಲಾತಿಯಿಂದ ಜನರು ಹೈರಾಣಾಗಿದ್ದರು. ಇದಕ್ಕೆ ವಾಹನ ಸವಾರರು ಹೊರತಾಗಿಲ್ಲ. ಬಿಸಿಲ ಝಳಕ್ಕೆ ಬೇಸತ್ತ ಆಟೋ ತೆಲಂಗಾಣದಲ್ಲಿ ಆಟೋ ಚಾಲಕರೊಬ್ಬರು ತಮ್ಮ ಆಟೋ ರಿಕ್ಷಾ ಮೇಲೆ ಹುಲ್ಲು ಬೆಳೆಸುವ ಮೂಲಕ ಕೂಲ್ ಸಂಚಾರ ಮಾಡುತ್ತಿದ್ದಾರೆ.

ಅಚ್ಚರಿ ಅನಿಸಿದರೂ ಇದು ಸತ್ಯ. ಆಟೋ ಮೇಲೆ ಹುಲ್ಲು ಬೆಳೆಸಿ, ಅದಕ್ಕೆ ನೀರು ಹಾಕುವ ಮೂಲಕ ಆಟೋದ ಒಳಗೆ ತಣ್ಣನೆಯ ವಾತಾವರಣ ಕಾಪಾಡಿಕೊಂಡಿದ್ದಾರೆ ಈ ಚಾಲಕ.
ನಿರಂತರ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಈ ಆಟೋ ಡ್ರೈವರ್ ತಮ್ಮ ಆಟೋ ಮೇಲೆ ತುಂಬಲೂ ಗೋಣಿ ಚೀಲ ಹಾಕಿದ್ದಾರೆ. ಅದರ ಮೇಲೆ ಹುಲ್ಲು ಬೆಳೆಸಿದ್ದಾರೆ. ಆಗಾಗ ಆ ಗೋಣಿಚೀಲದ ಮೇಲೆ ನೀರು ಹಾಕುತ್ತಾರೆ. ಇದರಿಂದ ಆಟೋದ ಒಳಗೆ ಬಿಸಲಿನ ಝಳ ಕಡಿಮೆ ಮಾಡಿಕೊಂಡು ಕೂಲ್ ಆಗಿ ಅವರು ಆಟೋ ಓಡಿಸುತ್ತಿದ್ದಾರೆ.
ಆಟೋ ಹತ್ತುವವರ ಸಂಖ್ಯೆ ಕೊಂಚ ಏರಿಕೆ
ಆಟೋ ನೋಡಿದ ಜನರು ಫೀದಾ ಆಗಿದ್ದಾರೆ. ಇವರ ಆಟೋ ಹತ್ತುವ ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚಾಗಿದೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಬಿಸಿಲಿನ ವಿರುದ್ಧ ಡ್ರೈವರ್ ಒಳ್ಳೆಯ ಐಡಿಯಾ ಕಂಡುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಆಟೋ ಸಂಚಾರದಲ್ಲಿ ಬಿಡುವು ಮಾಡಿಕೊಂಡು ಹುಲ್ಲಿಗೆ ನೀರು ಹಾಕುವ ಮೂಲಕ ಕೂಲ್ ಆಗಿ ಆಟೋ ರೀಕ್ಷಾ ಓಡಿಸುತ್ತಿದ್ದಾರೆ. ಈ ಐಡಿಯಾಗೆ ಜನರು ಮನಸೋತಿದ್ದಾರೆ.
An auto driver in #Mahabubabad turns his auto-rickshaw into a moving garden.
— Sudhakar Udumula (@sudhakarudumula) January 31, 2024
Auto driver Anji from Mahabubabad installed a small garden on his auto-rickshaw. He decorated his auto-rickshaw uniquely by switching the seat covers with artificial grass.#GreenIndia #Telangana pic.twitter.com/zkF4Su5ydm
ಆಟೋ ಮೇಲೆ ಮಿನಿ ಗಾರ್ಡನ್
ಇದೇ ರೀತಿ ತೆಲಂಗಾಣದಲ್ಲಿ ಆಟೋ ಮೇಲೆ ಮಿನಿ ಗಾರ್ಡ್ ಮಾಡಿದ್ದ ವಿಡಿಯೋ, ಫೋಟೋಗಳು ಕಳೆದ ಜನವರಿ ತಿಂಗಳಲ್ಲಿ ವೈರಲ್ ಆಗಿತ್ತು. ತೆಲಂಗಾಣದ ಮಹಬೂಬಾಬಾದ್ನಲ್ಲಿ ಆಟೋ ಚಾಲಕನೊಬ್ಬ ತನ್ನ ಆಟೋ ರಿಕ್ಷಾವನ್ನು ಚಲಿಸುವ ಉದ್ಯಾನವನ್ನಾಗಿ ಮಾಡಿದ್ದಾನೆ.
ಆಟೋ ಚಾಲಕ ಅಂಜಿ ಎಂಬುವವರು ತನ್ನ ಆಟೋ-ರಿಕ್ಷಾದಲ್ಲಿ ಸಣ್ಣ ಉದ್ಯಾನವನ್ನು ಸ್ಥಾಪಿಸಿದ್ದಾರೆ. ಅವರು ತಮ್ಮ ಆಟೋ ರಿಕ್ಷಾವನ್ನು ಕೃತಕ ಹುಲ್ಲಿನಿಂದ ಸೀಟ್ ಕವರ್ಗಳನ್ನು ಬದಲಾಯಿಸುವ ಮೂಲಕ ಆಟೋ ಟಾಪ್ಅನ್ನು ಅಲಂಕರಿಸಿದ್ದಾರೆ. ಆಗಾಗ ನೀರು ಹಾಕುವ ಮೂಲಕ ಉದ್ಯಾನ ರಕ್ಷಿಸುತ್ತಾರೆ. ಈ ಫೋಟೊ ಸಹ ಭಾರೀ ವೈರಲ್ ಆಗಿದ್ದವು.
-
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
Bengaluru: 1 ಲೀಟರ್ಗೆ 180 ರೂ.! ಸಿಲಿಕಾನ್ ಸಿಟಿಯಲ್ಲಿ ಲೀಟರ್ ಲೆಕ್ಕದಲ್ಲಿ ಎಳನೀರು ಮಾರಾಟ, ಫೋಟೋ Viral -
Vaibhav Suryavanshi: ವೈಭವ್ ಸೂರ್ಯವಂಶಿಗೆ ಯುವರಾಜ್ ಸಿಂಗ್ ಮಹತ್ವದ ಸಲಹೆ: ಟೀಮ್ ಇಂಡಿಯಾ ಪ್ರವೇಶದ ಬಗ್ಗೆ ಭವಿಷ್ಯವಾಣಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ












Click it and Unblock the Notifications