ಸ್ಕ್ರೀನ್ ಮುಂದೆ ಮಕ್ಕಳು ಕಳೆಯುವ ಸಮಯವೆಷ್ಟು ಗೊತ್ತಾ..?
ಮಕ್ಕಳ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಹಾಗೂ ತಮಗೆ ಬೇಕಾದ ಅಂಶವನ್ನು ಅವರು ಪಡೆಯಲು ತಂತ್ರಜ್ಞಾನ ನೆರವು ಅತ್ಯಾಗತ್ಯ. ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ಗಮನ, ಪುನರಾವರ್ತನೆ, ಕಲಿಕೆ ಮತ್ತು ಸ್ಮರಣೆ ಮುಂತಾದ ಸಾಮರ್ಥ್ಯ ಇರುತ್ತದೆ. ತಂತ್ರಜ್ಞಾನ ಮೇಲುಗೈ ಸಾಧಿಸಿರುವ ಈಗಿನ ಯುಗದಲ್ಲಿ ಮಕ್ಕಳು ಸುಲಭವಾಗಿ ಹಲವಾರು ತಂತ್ರಜ್ಞಾನ ಉಪಕರಣಗಳ ಕಡೆಗೆ ಆಕರ್ಷಿತರಾಗುತ್ತಾರೆ. ಇದು ಅವರ ಕಲಿಕೆಗೆ ನೆರವಾಗುತ್ತದೆ. ಆದ್ದರಿಂದ ಈ ದಿನಗಳಲ್ಲಿ ತಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಅಳವಡಿಕೆಯಲ್ಲಿ ಪೋಷಕರು ಮತ್ತು ಶಿಕ್ಷಕರಿಗಿಂತ ಮಕ್ಕಳು ಒಂದು ಹೆಜ್ಜೆ ಮುಂದಿರುವುದು ಕಂಡು ಬರುತ್ತಿರುವ ವಾಸ್ತವವಾಗಿದೆ. ಹಾಗಾದರೆ ಟಿವಿ, ಮೊಬೈಲ್, ಲ್ಯಾಪ್ಟಾಪ್, ಟ್ಯಾಬ್ ನಂತಹ ಪರದೆಯ ಮುಂದೆ ಮಕ್ಕಳು ಎಷ್ಟು ಸಮಯ ಕಳೆಯುತ್ತಾರೆ? ಮಕ್ಕಳು ಡಿಜಿಟಲ್ ಬಳಕೆಯಿಂದ ಪೋಷಕರಿಗೆ ಎದುರಾಗುವ ಸವಾಲುಗಳು ಯಾವುವು? ಚಿಕ್ಕ ಮಕ್ಕಳು ತಮ್ಮ ಪರದೆಯ ಬಳಕೆಯಿಂದ ಪ್ರಯೋಜನ ಪಡೆಯಲು ಸರಳ ಸಲಹೆಗಳೇನು ಎನ್ನುವುದನ್ನು ತಿಳಿಯೋಣ.
ತಜ್ಞರ ಪ್ರಕಾರ ಮೂರನೇ ಎರಡರಷ್ಟು (67%) ಜನರು ಪರದೆಯ ಸಮಯ ಮತ್ತು ಇತರ ಕೆಲಸಗಳ ನಡುವೆ ಉತ್ತಮ ಸಮತೋಲನವನ್ನು ಹೊಂದಿದ್ದಾರೆಂದು ಒಪ್ಪುತ್ತಾರೆ. ಅರ್ಧಕ್ಕಿಂತ ಹೆಚ್ಚು (53%) ಜನರು ತಮ್ಮ ಪರದೆಯ ಸಮಯವನ್ನು ನಿಯಂತ್ರಿಸಲು ಕಷ್ಟಪಡುತ್ತಾರೆ ಎನ್ನುತ್ತಾರೆ. ಹಾಗಾದರೆ ಮಕ್ಕಳು ಸ್ಕ್ರೀನಿಂಗ್ ಟೈಮ್ನಲ್ಲಿ ಎಷ್ಟು ಸಮಯ ಕಳೆಯುತ್ತಾರೆ?
ಪರದೆಯ ಮುಂದೆ ಮಕ್ಕಳು ಎಷ್ಟು ಸಮಯ ಕಳೆಯುತ್ತಾರೆಂದು ಆಫ್ಕಾಮ್ ಅಂಕಿಅಂಶಗಳನ್ನು ನೀಡಿದೆ:

*100%ರಲ್ಲಿ 96%ರಷ್ಟು ಮಕ್ಕಳು ವಾರಕ್ಕೆ 15 ಗಂಟೆಗಳ ಕಾಲ ಟಿವಿ ವೀಕ್ಷಿಸುತ್ತಾರೆ
*100%ರಲ್ಲಿ 40%ರಷ್ಟು ಮಕ್ಕಳು ವಾರಕ್ಕೆ 6 ಗಂಟೆಗಳ ಕಾಲ ಪರದೆಯ ಮೇಲೆ ಆಟಗಳನ್ನು ಆಡುತ್ತಾರೆ
*53%ರಷ್ಟು ಮಕ್ಕಳು ವಾರಕ್ಕೆ 8 ಗಂಟೆಗಳ ಕಾಲ ಆನ್ಲೈನ್ನಲ್ಲಿ ತೊಡಗಿಸಿಕೊಂಡಿರುತ್ತಾರೆ.
*48%ರಷ್ಟು ಮಕ್ಕಳು YouTube ವೀಕ್ಷಿಸುತ್ತಾರೆ
ಮಕ್ಕಳು ಡಿಜಿಟಲ್ ಬಳಕೆಯಿಂದ ಪೋಷಕರಿಗೆ ಎದುರಾಗುವ ಸವಾಲುಗಳು ಯಾವುವು?

*ಮಕ್ಕಳು ಹೆಚ್ಚು ಅಂತರ್ಜಾಲದಲ್ಲಿ ನಿರತರಾಗಬಹುದು
*ಯಾವಾಗಲೂ ಕಂಪ್ಯೂಟರ್,ಟಿವಿ, ಮೊಬೈಲ್ಗಾಗಿ ಬೇಡಿಕೆ ಇಡುವುದು
*ಆಟ-ಪಾಠದ ಕಡೆಗೆ ಗಮನ ಕಳೆದುಕೊಳ್ಳಬಹುದು
*ಮಕ್ಕಳು ಮಾತು ಕೇಳದಂತಾಗಬಹುದು
ಚಿಕ್ಕ ಮಕ್ಕಳು ತಮ್ಮ ಪರದೆಯ ಬಳಕೆಯಿಂದ ಪ್ರಯೋಜನ ಪಡೆಯಲು ಸರಳ ಸಲಹೆಗಳನ್ನು ತಿಳಿಯಿರಿ

ಸಲಹೆ 1 - ಮನೆಯ ಒಳಗೆ ಮತ್ತು ಹೊರಗೆ ಪರದೆಯ ಬಳಕೆಗೆ ನಿಯಮಗಳನ್ನು ಹೊಂದಿಸಿ
ಸಲಹೆ 2 - ಕುಟುಂಬದೊಂದಿಗೆ ಸಮಯ ಮೀಸಲಿಡಿ ಮತ್ತು ನಿದ್ರೆಗೆ ಆದ್ಯತೆ ನೀಡಿ
ಸಲಹೆ 3 - ಒಟ್ಟಿಗೆ ಪ್ಲೇ ಮಾಡಿ, ವೀಕ್ಷಿಸಿ ಮತ್ತು ಅನ್ವೇಷಿಸಿ
ಸಲಹೆ 4 - ಅವರು ಪರದೆಯ ಮೇಲೆ ಏನು ನೋಡುತ್ತಾರೆ ಮತ್ತು ಏನನ್ನು ಮಾಡುತ್ತಾರೆ ಎಂಬುದನ್ನು ಆಯ್ಕೆಮಾಡುವಾಗ ಮುಂದಾಳತ್ವ ವಹಿಸಿ
ಸಲಹೆ 5 - ಅವರು ನೋಡುವ ಪರದೆಯ ಬಳಕೆಯ ಲಾಭ ಮತ್ತು ನಷ್ಟದ ಬಗ್ಗೆ ಉದಾಹರಣೆಯನ್ನು ನೀಡಿ
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications