ಭೂಮಿಗಪ್ಪಳಿಸಲು ಸಜ್ಜಾಗಿದೆ ಸೌರ ಚಂಡಮಾರುತ; ಏನು ಪರಿಣಾಮ ಕಾದಿದೆ?
ಬಲಿಷ್ಠವಾದ ಸೌರ ಚಂಡಮಾರುತವು ಭೂಮಿಗೆ ಅತಿ ಶೀಘ್ರವೇ ಅಪ್ಪಳಿಸಲಿದೆ. ಚಂಡಮಾರುತವು 1.6 ದಶಲಕ್ಷ ಕಿಲೋ ಮೀಟರ್ ವೇಗದಲ್ಲಿ ಭೂಮಿ ಸಮೀಪಿಸುತ್ತಿದೆ ಎಂದು ನಾಸಾ ತಿಳಿಸಿದೆ.
ಸೂರ್ಯನಲ್ಲಿ ಸೃಷ್ಟಿಯಾಗುವ ಈ ಚಂಡಮಾರುತವು ಭೂಮಿಯ ಕಾಂತಕ್ಷೇತ್ರದ ಪ್ರಾಬಲ್ಯವಿರುವ ಬಾಹ್ಯಾಕಾಶ ಪ್ರದೇಶದ ಮೇಲೆ ಪರಿಣಾಮ ಬೀರಲಿದೆ. ಇದು ಸೋಮವಾರ, ಅಂದರೆ ಜುಲೈ 12ಗೆ ಅಪ್ಪಳಿಸಬಹುದು ಎಂದು ಅಂದಾಜಿಸಿದೆ. ಈ ಸಮಯದಲ್ಲಿ ಸಂವಹನ ವ್ಯವಸ್ಥೆ, ಎಂದರೆ ಜಿಪಿಎಸ್ ಸಿಗ್ನಲ್ಗಳ ಮೇಲೆ ಪರಿಣಾಮ ಬೀರಬಹುದು ಎಂದು ನಾಸಾ ಹೇಳಿದೆ. ಈ ಸೌರ ಬಿರುಗಾಳಿ ಉಪಗ್ರಹ ಸಂಕೇತಗಳನ್ನು ಅಡ್ಡಿಪಡಿಸಬಹುದು ಎಂದು ನಾಸಾ ಹೇಳಿದೆ. ಮುಂದೆ ಓದಿ...

ಏನಿದು ಸೌರ ಚಂಡಮಾರುತ?
ಭೂಮಿಯ ಕಾಂತಕ್ಷೇತ್ರವು ಸೂರ್ಯನಿಂದ ಹೊರಹೊಮ್ಮುವ ಅಪಾಯಕಾರಿ ಕಿರಣಗಳಿಂದ ಮಾನವನನ್ನು ರಕ್ಷಿಸುತ್ತದೆ. ಈ ಕಿರಣಗಳು ಹೆಚ್ಚಿನ ವೇಗದಲ್ಲಿ ಭೂಮಿಯೆಡೆ ಬಂದಾಗ ಕಾಂತೀಯ ಮೇಲ್ಮೈಗೆ ಡಿಕ್ಕಿ ಹೊಡೆಯುತ್ತವೆ. ನಂತರ ಈ ಸೌರ ಮಾರುತದ ಕಣಗಳು ಧ್ರುವಗಳಿಗೆ ಚಲಿಸುತ್ತವೆ. ಇದರಿಂದ ಭೂಮಿಯ ಮೇಲ್ಮೈನಲ್ಲಿ ಸೌರ ಚಂಡಮಾರುತ ಸಂಭವಿಸುತ್ತದೆ. ಇದರ ಪ್ರಭಾವ 12 ಗಂಟೆಗಳ ಕಾಲ ಉಳಿಯಬಹುದು. ಕೆಲ ದಿನಗಳ ನಂತರ ಈ ಮೇಲ್ಮೈ ಚೇತರಿಸಿಕೊಳ್ಳುತ್ತದೆ.

ಸೌರ ಚಂಡಮಾರುತದ ಪ್ರಭಾವವೇನು?
ಸೌರ ಚಂಡಮಾರುತದ ಸಮಯದಲ್ಲಿ ಭೂಮಿಯ ಮೇಲ್ಮೈನಲ್ಲಿ ಶಾಖದಿಂದಾಗಿ ವಿದ್ಯುತ್ ಪ್ರವಾಹ ಹೆಚ್ಚಿರುತ್ತದೆ. ಹೀಗಾಗಿ ಉಪಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಜಿಪಿಎಸ್ ನೇವಿಗೇಶನ್, ಮೊಬೈಲ ಫೋನ್ ಸಿಗ್ನಲ್ ಹಾಗೂ ಸ್ಯಾಟಲೈಟ್ ಟಿವಿಯಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ವಿದ್ಯುತ್ ಲೈನ್ಗಳಲ್ಲಿ ಪ್ರವಾಹ ಅಧಿಕವಾಗಿ ಟ್ರಾನ್ಸ್ಫಾರ್ಮರ್ಗಳು ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಉತ್ತರ, ದಕ್ಷಿಣ ಧ್ರುವದಲ್ಲಿ ಸುಂದರ ನೋಟ
"ಈ ಸೌರ ಚಂಡಮಾರುತ ಸಂಭವಿಸುವ ಸಮಯದಲ್ಲಿ ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರಿಗೆ ಸುಂದರವಾದ ನೋಟ ಸಿಗಬಹುದಾಗಿದೆ. ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರು ರಾತ್ರಿ ಸಮಯದಲ್ಲಿ ಈ ಬೆಳಕನ್ನು ನೋಡಲು ಸಾಧ್ಯವಾಗಲಿದೆ" ಎಂದು ಸ್ಪೇಸ್ ವೆದರ್ ಉಲ್ಲೇಖಿಸಿದೆ.

ಭೂಕಾಂತೀಯ ಚಂಡಮಾರುತ ಎನ್ನಬಹುದು
ಸೌರ ಜ್ವಾಲೆಯು ಸೂರ್ಯನ ವಾತಾವರಣದಲ್ಲಿ ಉಂಟಾಗುವ ಬೃಹತ್ ಸ್ಫೋಟವಾಗಿದ್ದು, ಇದು ಸೂರ್ಯನ ಕಾಂತಕ್ಷೇತ್ರದ ರೇಖೆಗಳ ಮರುಸಂಘಟನೆಯಿಂದ ಉಂಟಾಗುತ್ತದೆ. ಸೂರ್ಯನಲ್ಲಿ ಉಂಟಾಗುವ ಈ ಅಡಚಣೆ ಪರಿಣಾಮ ಭೂಮಿ ಮೇಲೆಯೂ ಗೋಚರಿಸುತ್ತದೆ. ಇದನ್ನು ಭೂಕಾಂತೀಯ ಚಂಡಮಾರುತ ಎಂದೂ ಕರೆಯಲಾಗುತ್ತದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications