Job Resignation: ಇರೋ ಕೆಲಸಕ್ಕೆ ರಾಜೀನಾಮೆ ಕೊಡುವ ಮೊದಲು ಕೇಳಿಕೊಳ್ಳಬೇಕಾದ 17 ಪ್ರಶ್ನೆಗಳಿವು
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕರು ಕೆಲಸದ ಒತ್ತಡ, ಕಿರಿಕಿರಿ ಅಥವಾ ಹೆಚ್ಚಿನ ಸಂಬಳದ ಆಸೆಗೆ ತಕ್ಷಣವೇ ರಾಜೀನಾಮೆ ನೀಡಲು ನಿರ್ಧರಿಸುತ್ತಾರೆ. ಆದರೆ, ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಈ 17 ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕ ನಂತರವಷ್ಟೇ ನಿಮ್ಮ ಕೆಲಸಕ್ಕೆ ರಾಜೀನಾಮೆ ಕೊಡುವುದು ಬುದ್ಧಿವಂತರ ಲಕ್ಷಣ. ಆ ಪ್ರಶ್ನೆಗಳು ಹೀಗಿವೆ.
* ನಿಮ್ಮ ಅಸಮಾಧಾನದ ಮೂಲ ಕಾರಣವೇನು?
ರಾಜೀನಾಮೆ ನೀಡುವ ನಿರ್ಧಾರಕ್ಕೆ ಬರುವ ಮೊದಲು, ಪ್ರಸ್ತುತ ಉದ್ಯೋಗದಲ್ಲಿ ನಿಮಗೆ ನಿಖರವಾಗಿ ಏನು ಇಷ್ಟವಾಗುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮೊದಲ ಹೆಜ್ಜೆ. ಇದು ಕೇವಲ ಕೆಲಸದ ಹೊರೆಯೇ? ಅಥವಾ ನಿಮ್ಮ ಸಹೋದ್ಯೋಗಿಗಳು ಮತ್ತು ಮ್ಯಾನೇಜರ್ ಜೊತೆಗಿನ ಕಿರಿಕಿರಿಯೇ? ಎಂಬುದನ್ನು ವಿಶ್ಲೇಷಿಸಿ. ಕೆಲವು ಸಂದರ್ಭಗಳಲ್ಲಿ, ಸಮಸ್ಯೆ ಕೇವಲ ನಿಮ್ಮ ಈಗಿನ ಕೆಲಸದಲ್ಲಿ ಇರದೆ, ನಿಮ್ಮ ವೃತ್ತಿಜೀವನದ ದಿಕ್ಕಿನಲ್ಲೇ ಇರಬಹುದು. ಕಾರಣ ತಿಳಿಯದೆ ಕೆಲಸ ಬಿಟ್ಟರೆ, ಮುಂದಿನ ಉದ್ಯೋಗದಲ್ಲೂ ಅದೇ ಸಮಸ್ಯೆಗಳು ಮರುಕಳಿಸುವ ಸಾಧ್ಯತೆ ಇರುತ್ತದೆ.

* ನಾನು ಇಲ್ಲಿಯೇ ಉಳಿಯುವ ಬಗ್ಗೆ ಯೋಚಿಸಬೇಕೇ?
ಮೊದಲಿಗೆ ನಿಮ್ಮ ಪ್ರಸ್ತುತ ಉದ್ಯೋಗವು ನಿಮ್ಮ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುತ್ತಿದೆಯೇ ಎಂದು ಗಮನಿಸಿ. ಒಂದು ವೇಳೆ ಕಚೇರಿಯಲ್ಲಿ ಕಿರುಕುಳ ಅಥವಾ ಅತಿಯಾದ ಕೆಲಸದ ಒತ್ತಡವು ನಿಮ್ಮನ್ನು ಮನುಷ್ಯನಂತೆ ಬದುಕಲು ಬಿಡುತ್ತಿಲ್ಲ ಎಂದಾದರೆ, ನಿಮ್ಮ ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡುವ ನಿರ್ಧಾರವನ್ನು ನೀವೇ ಮಾಡಬೇಕಾಗುತ್ತದೆ.
* ನಾನು ಇಲ್ಲಿಗೆ ಹೇಗೆ ಬಂದೆ?
ನಿಮ್ಮ ವೃತ್ತಿಜೀವನದ ಹಾದಿಯನ್ನು ಒಮ್ಮೆ ಹಿಂದಿರುಗಿ ನೋಡಿ. ನೀವು ಈ ಕೆಲಸವನ್ನು ಆರಂಭದಲ್ಲಿ ಏಕೆ ಆರಿಸಿಕೊಂಡಿದ್ದಿರಿ? ನಿಮ್ಮ ಈ ಹಿಂದಿನ ವೃತ್ತಿ ಬದಲಾವಣೆಗಳು ನಿಮಗೆ ಏನು ಕಲಿಸಿವೆ? ಹಳೆಯ ನಿರ್ಧಾರಗಳನ್ನು ಅವಲೋಕಿಸುವುದರಿಂದ ಈಗಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಮುಂದಿನ ಹೆಜ್ಜೆಯನ್ನು ಧೈರ್ಯವಾಗಿ ಇರಿಸಲು ಸಹಾಯವಾಗುತ್ತದೆ.
* ನನ್ನ ಅಸಮಾಧಾನಕ್ಕೆ ನಿಖರವಾದ ಕಾರಣವೇನು?
ನಿಮಗೆ ಈ ಕೆಲಸದಲ್ಲಿ ಬೇಸರ ತರಿಸುತ್ತಿರುವ ಅಂಶ ಯಾವುದು ಎಂಬುದರ ಬಗ್ಗೆ ನಿಷ್ಠುರವಾದ ಪ್ರಾಮಾಣಿಕತೆ ಇರಲಿ. ಅದು ಸಂಬಳವೇ? ಬಡ್ತಿಯ ಅವಕಾಶಗಳ ಕೊರತೆಯೇ? ಸಹೋದ್ಯೋಗಿಗಳ ವರ್ತನೆಯೇ? ಅಥವಾ ಕಂಪನಿಯ ಮೌಲ್ಯಗಳೇ? ಕಾರಣ ಏನೆಂದು ನಿಖರವಾಗಿ ತಿಳಿದರೆ ಮಾತ್ರ ನೀವು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ.
* ನನ್ನ ಕೆಲಸದ ಬಗ್ಗೆ ಕಳೆದ 10 ದಿನಗಳಲ್ಲಿ ನಾನು ಏನು ಅನುಭವಿಸಿದೆ?
ತಕ್ಷಣದ ಆವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವ ಬದಲು, ಕನಿಷ್ಠ 10 ದಿನಗಳ ಕಾಲ ನಿಮ್ಮ ಕೆಲಸದ ಬಗ್ಗೆ ನಿಮಗಾಗುವ ಪ್ರತಿ ಆಲೋಚನೆ ಮತ್ತು ಭಾವನೆಯನ್ನು ಬರೆದಿಡಿ. ಇದು ನಿಮ್ಮ ಅಸಮಾಧಾನವು ಕೇವಲ ಒಂದು ದಿನದ ಕೆಟ್ಟ ಘಟನೆಯಿಂದಾಗಿದೆಯೇ ಅಥವಾ ಅದು ದೀರ್ಘಕಾಲದ ಸಮಸ್ಯೆಯೇ ಎಂಬುದನ್ನು ಸ್ಪಷ್ಟಪಡಿಸುತ್ತದೆ.
* ನನ್ನ ಪ್ರಸ್ತುತ ಕಂಪನಿಯಲ್ಲಿ ನಾನು ಸಂತೋಷವಾಗಿರಲು ಏನು ಬದಲಾಗಬೇಕು?
ಒಂದು ವೇಳೆ ನೀವು ಕೆಲಸದಲ್ಲಿಯೇ ಉಳಿಯಬೇಕೆಂದರೆ, ಅಲ್ಲಿ ಯಾವ ಬದಲಾವಣೆಗಳಾಗಬೇಕು ಎಂಬುದನ್ನು ಪಟ್ಟಿ ಮಾಡಿ. ಈ ಬದಲಾವಣೆಗಳು ಸಾಧ್ಯವೇ? ಅಥವಾ ಅವು ನಿಮ್ಮ ನಿಯಂತ್ರಣ ಮೀರಿವೆಯೇ? ಬದಲಾವಣೆ ಸಾಧ್ಯವಿದ್ದರೆ, ಅದನ್ನು ಮ್ಯಾನೇಜರ್ ಜೊತೆ ಚರ್ಚಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
* ಈ ಸಮಸ್ಯೆಗಳನ್ನು ಪರಿಹರಿಸಲು ನಾನು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆಯೇ?
ರಾಜೀನಾಮೆ ನೀಡುವ ಮುನ್ನ, ಪರಿಸ್ಥಿತಿಯನ್ನು ಸುಧಾರಿಸಲು ನೀವು ಮಾಡಬಹುದಾದ ಎಲ್ಲವನ್ನೂ ಮಾಡಿದ್ದೀರಾ? ಎಂದು ಕೇಳಿಕೊಳ್ಳಿ. ಉದಾಹರಣೆಗೆ, ಕೆಲಸದ ಜವಾಬ್ದಾರಿ ಬದಲಿಸಿಕೊಳ್ಳುವುದು ಅಥವಾ ಸಮಯದ ಹೊಂದಾಣಿಕೆಯ ಬಗ್ಗೆ ಚರ್ಚಿಸಿದ್ದೀರಾ? ಈ ಪ್ರಯತ್ನಗಳನ್ನು ಮಾಡಿದ ನಂತರವೂ ಫಲ ಸಿಗದಿದ್ದರೆ ಆಗ ರಾಜೀನಾಮೆ ಅನಿವಾರ್ಯ.
* ಕೆಲಸ ಬಿಡುವುದರಿಂದ ನಾನು ಯಾವ ಸಮಸ್ಯೆಗಳಿಗೆ ಪರಿಹಾರ ನಿರೀಕ್ಷಿಸುತ್ತಿದ್ದೇನೆ?
ಕೆಲಸ ಬಿಡುವುದರಿಂದ ನಿಮ್ಮ ಜೀವನದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಭಾವಿಸಬೇಡಿ. ನಿಮ್ಮ ಅಸಮಾಧಾನವು ವೈಯಕ್ತಿಕ ಕಾರಣಗಳಿಂದಾಗಿದ್ದರೆ, ಕೆಲಸ ಬಿಟ್ಟರೂ ಅದು ಸರಿಹೋಗುವುದಿಲ್ಲ. ನಿಮ್ಮ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿರಲಿ.
* ನನ್ನ ವೃತ್ತಿಜೀವನ ಮತ್ತು ಜೀವನದ ಬಗ್ಗೆ ನನ್ನ ಅಂತಿಮ ಗುರಿ ಏನು?
ನಿಮ್ಮ ಆದ್ಯತೆಗಳನ್ನು ನಿರ್ಧರಿಸಿ. ನೀವು ಹೊಸ ವೃತ್ತಿಜೀವನವನ್ನು ಆರಂಭಿಸಲು ಸಿದ್ಧರಿದ್ದೀರಾ? ಇದಕ್ಕೆ ಬೇಕಾದ ಹೊಸ ಕೌಶಲ್ಯಗಳನ್ನು ಕಲಿಯಲು ಅಥವಾ ಮತ್ತೆ ಮೊದಲಿನಿಂದ ಆರಂಭಿಸಲು ನೀವು ಮಾನಸಿಕವಾಗಿ ಸಿದ್ಧರಿದ್ದೀರಾ ಎಂದು ಯೋಚಿಸಿ.
* ಆರ್ಥಿಕವಾಗಿ ನಾನು ಕೆಲಸ ಬಿಡಲು ಸಿದ್ಧನಿದ್ದೇನೆಯೇ?
ಇದು ಅತ್ಯಂತ ಪ್ರಮುಖ ಪ್ರಶ್ನೆ. ಮುಂದಿನ ಕೆಲಸ ಸಿಗುವವರೆಗೆ ನಿಮ್ಮ ಖರ್ಚುಗಳನ್ನು ನಿಭಾಯಿಸಲು ಬೇಕಾದ ಹಣ ನಿಮ್ಮ ಉಳಿತಾಯ ಖಾತೆಯಲ್ಲಿದೆಯೇ? ಎಷ್ಟು ಸಮಯದವರೆಗೆ ನೀವು ಆದಾಯವಿಲ್ಲದೆ ಬದುಕಬಲ್ಲಿರಿ ಎಂಬ ಲೆಕ್ಕಾಚಾರ ನಿಮ್ಮಲ್ಲಿರಲಿ.

* ನನಗೆ ಕುಟುಂಬ ಮತ್ತು ಸ್ನೇಹಿತರ ಬೆಂಬಲವಿದೆಯೇ?
ಉದ್ಯೋಗ ಬಿಡುವ ನಿರ್ಧಾರವು ನಿಮ್ಮ ಸುತ್ತಮುತ್ತಲ ಜನರ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಸಂಗಾತಿ ಅಥವಾ ಕುಟುಂಬದವರು ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸುತ್ತಾರೆಯೇ? ಅವರ ಬೆಂಬಲವಿದ್ದರೆ ಸವಾಲುಗಳನ್ನು ಎದುರಿಸುವುದು ಸುಲಭವಾಗುತ್ತದೆ.
* ನನ್ನ ಟಾಕ್ಸಿಕ್ ಬಾಸ್ ಕಾರಣಕ್ಕೆ ನಾನು ಕೆಲಸ ಬಿಡಬೇಕೆ?
ವಿಷಕಾರಿ ಕೆಲಸದ ವಾತಾವರಣವು ವ್ಯಕ್ತಿಯ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದು ಅವರು ಹೊಸ ಕೆಲಸಕ್ಕೆ ಸೇರಿದ ಮೇಲೆಯೇ ಅವರಿಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ಜನರಲ್ಲಿ ಆಗುವ ಬದಲಾವಣೆಯನ್ನು ನೀವು ಅಲ್ಲಿ ನೋಡಬಹುದು. ಇದು ಹದಗೆಟ್ಟ ದಾಂಪತ್ಯವನ್ನು ಬಿಟ್ಟು ಬಂದಂತೆ ಇರುತ್ತದೆ. ಜನರು ಕೇವಲ ಸಂಬಳದ ಕಾರಣಕ್ಕಾಗಿ ಎಷ್ಟೊಂದು ಕಿರುಕುಳಗಳನ್ನು ಸಹಿಸಿಕೊಳ್ಳುತ್ತಾರೆ. ಈ ಪ್ರಶ್ನೆಯೂ ಮುಖ್ಯ.
* ಒತ್ತಡದ ಕಾರಣಕ್ಕೆ ನಾನು ಯಾವಾಗ ಕೆಲಸ ಬಿಡಬೇಕು?
ಕೆಲಸದ ಒತ್ತಡವು ನಿಮ್ಮ ಒಟ್ಟಾರೆ ಜೀವನದ ಗುಣಮಟ್ಟದ ಮೇಲೆ ನಿರಂತರವಾಗಿ ಕೆಟ್ಟ ಪರಿಣಾಮ ಬೀರಲು ಶುರುಮಾಡಿದಾಗ ನೀವು ಯೋಚಿಸಬೇಕು. ನಿಮ್ಮ ನಿದ್ರೆಗೆ ಅಡ್ಡಿಯಾಗುತ್ತಿದೆಯೇ? ಕೆಲಸದ ಸಮಯದ ನಂತರ ನಿಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ನಿಮಗೆ ಸಾಧ್ಯವಾಗುತ್ತಿಲ್ಲವೇ? ಸಾಮಾಜಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಿದ್ದೀರಾ ಅಥವಾ ವಾರಾಂತ್ಯದಲ್ಲೂ ಕೆಲಸ ಮಾಡುತ್ತಿದ್ದೀರಾ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಿ. ನೀವು ಪದೇ ಪದೇ ಕಾಯಿಲೆಗೆ ತುತ್ತಾಗುತ್ತಿದ್ದರೆ ಅಥವಾ ರಕ್ತದೊತ್ತಡ ಹೆಚ್ಚಾಗುತ್ತಿದ್ದರೆ ಅದು ಎಚ್ಚರಿಕೆಯ ಗಂಟೆ.
* ಬಾಹ್ಯ ಒತ್ತಡವೇ ಅಥವಾ ಆಂತರಿಕವೇ?
ಕೆಲವೊಮ್ಮೆ ನಮ್ಮ ಸ್ವಂತ ನಂಬಿಕೆಗಳು ನಮಗೆ ಒತ್ತಡ ನೀಡುತ್ತಿರಬಹುದು. ಇನ್ನು ಕೆಲವು ಕಂಪನಿಗಳಲ್ಲಿ ಅತಿಯಾದ ಕೆಲಸ ಅಥವಾ ಕಿರುಕುಳವು ವ್ಯವಸ್ಥಿತವಾಗಿಯೇ ಇರುತ್ತದೆ. ಭಾನುವಾರ ರಾತ್ರಿ ಕೆಲಸದ ವಾರ ಆರಂಭವಾಗುವ ಮುನ್ನ ನೀವು ಯಾವುದಕ್ಕೆ ಅತಿ ಹೆಚ್ಚು ಹೆದರುತ್ತೀರಿ? ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ.
* ನನ್ನ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿವೆಯೇ?
ನೀವು ಇಷ್ಟಪಡುವ ಕೆಲಸವನ್ನು ಮಾಡಿದರೆ, ಜೀವನದಲ್ಲಿ ಒಂದು ದಿನವೂ ಕೆಲಸ ಮಾಡಿದಂತೆ ಅನಿಸುವುದಿಲ್ಲ ಎಂಬ ಮಾತುಗಳು ಸಹಜ. ಆದರೆ ಇದು 'ಪರಿಪೂರ್ಣ ಕೆಲಸ' ಎಂಬ ಸುಳ್ಳನ್ನು ಹರಡಬಹುದು. ಅದರಲ್ಲೂ ಸ್ವಂತ ಉದ್ಯಮ ಮಾಡುವುದು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ ಅದು ಬಹಳ ಕಠಿಣ ಪರಿಶ್ರಮ ಬೇಡುತ್ತದೆ. ಹೊಸ ಕೆಲಸಕ್ಕೆ ಸೇರಿದಾಗ ಆರಂಭದಲ್ಲಿ ಕಲಿಯುವ ಹಂತವು ಹೆಚ್ಚು ಶಕ್ತಿಯನ್ನು ಬೇಡುತ್ತದೆ ಎಂಬುದನ್ನು ಮರೆಯಬೇಡಿ.
* ಆರ್ಥಿಕವಾಗಿ ನಾನು ಸಿದ್ಧನಿದ್ದೇನೆಯೇ?
ಕೆಲಸ ಬಿಟ್ಟು ಅದೇ ರೀತಿಯ ಇನ್ನೊಂದು ಕೆಲಸ ಹುಡುಕುವ ಪ್ಲಾನ್ ಇದ್ದರೆ, ಕನಿಷ್ಠ 3ರಿಂದ 6 ತಿಂಗಳ ಜೀವನೋಪಾಯಕ್ಕೆ ಬೇಕಾದ ಹಣದ ಸುರಕ್ಷತಾ ಜಾಲ ಇರಲಿ. ಒಂದು ವೇಳೆ ವೃತ್ತಿಯನ್ನೇ ಬದಲಾಯಿಸುವುದು ಅಥವಾ ಸ್ವಂತ ಉದ್ಯಮ ಆರಂಭಿಸುವ ಯೋಜನೆಯಿದ್ದರೆ, ಕನಿಷ್ಠ 12 ತಿಂಗಳ ಖರ್ಚು ಮತ್ತು ಸ್ಟಾರ್ಟ್-ಅಪ್ ವೆಚ್ಚಗಳನ್ನು ಸರಿದೂಗಿಸುವಷ್ಟು ಹಣ ಇರಬೇಕು. ಬರಬಹುದಾದ ಅತಿ ಕೆಟ್ಟ ಪರಿಸ್ಥಿತಿ ಯಾವುದು? ಎಂದು ಮುಂಚಿತವಾಗಿಯೇ ಯೋಚಿಸಿ.
* ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಮಯವೇ?
ಹೊಸ ಕೆಲಸ ಸಿಗಲು 6 ತಿಂಗಳವರೆಗೆ ಸಮಯ ಹಿಡಿಯಬಹುದು. ನಿಮ್ಮ ಪ್ರಸ್ತುತ ಪರಿಸ್ಥಿತಿ ತೀರಾ ಕೆಟ್ಟದಾಗಿಲ್ಲದಿದ್ದರೆ, ಹಂತ ಹಂತವಾಗಿ ಮುಂದಿನ ಸಿದ್ಧತೆ ಮಾಡಿಕೊಳ್ಳಿ. ಹೊಸ ಕೌಶಲ್ಯ ಕಲಿಯುವುದು, ಉಳಿತಾಯ ಮಾಡುವುದು ಅಥವಾ ಮಾರ್ಗದರ್ಶಕರನ್ನು ಹುಡುಕುವ ಮೂಲಕ ನಿಮ್ಮ ನಿರ್ಧಾರವನ್ನು ಒಂದು ಆಯ್ಕೆಯನ್ನಾಗಿ ಮಾಡಿಕೊಳ್ಳಿ.
* ನಿರ್ಧಾರ ತೆಗೆದುಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ?
ಎಲ್ಲವೂ ಅಂದುಕೊಂಡಂತೆಯೇ ಆಗುವ ಮತ್ತು ಎಲ್ಲಾ ಪೆಟ್ಟಿಗೆಗಳಿಗೂ ಟಿಕ್ ಮಾರ್ಕ್ ಬೀಳುವಂತಹ ಕ್ಷಣ ಎಂದಿಗೂ ಬರುವುದಿಲ್ಲ. ಒಂದು ನಿರ್ದಿಷ್ಟ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಳ್ಳಿ, ಅಲ್ಲಿಯವರೆಗೆ ಬೇಕಾದಷ್ಟು ಯೋಚಿಸಿ, ನಂತರ ನಿರ್ಧಾರ ಮಾಡಿ. ಒಮ್ಮೆ ನಿರ್ಧಾರ ತೆಗೆದುಕೊಂಡ ಮೇಲೆ ನೀವು ನಿರಾಳರಾಗುತ್ತೀರಿ, ಏಕೆಂದರೆ ಮುಂದಿನ ಹಾದಿಯ ಜವಾಬ್ದಾರಿ ನಿಮ್ಮದಾಗಿರುತ್ತದೆ.
-
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
Virat Kohli: ನಾನೇನು ವಿದೇಶಿ ಆಟಗಾರನಾ?: ಲಂಡನ್ ವಾಸ್ತವ್ಯದ ಬಗ್ಗೆ ಟೀಕಾಕಾರರಿಗೆ ವಿರಾಟ್ ಕೊಹ್ಲಿ ತಿರುಗೇಟು -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
Silk Board: ಹಳದಿ-ನೀಲಿ ಮೆಟ್ರೋ ಲೈನ್ ಪ್ರಯಾಣಿಕರಿಗಾಗಿ 'ಟ್ರಾವೆಲೇಟರ್-ಕನೆಕ್ಟಿಂಗ್ ವಾಕ್ವೇ ಸಂಪರ್ಕ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ!












Click it and Unblock the Notifications