NITI ಆಯೋಗ; 'ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ 2021; ಕರ್ನಾಟಕಕ್ಕೆ ಅಗ್ರಸ್ಥಾನ, ಬೇರೆ ರಾಜ್ಯಗಳ ಪಟ್ಟಿ ನೋಡಿ
ನವದೆಹಲಿ, ಜುಲೈ 21: ಕರ್ನಾಟಕ, ತೆಲಂಗಾಣ ಮತ್ತು ಹರಿಯಾಣ ಈ ರಾಜ್ಯಗಳಲ್ಲಿ NITI ಆಯೋಗದ ಮೂರನೇ ಆವಿಷ್ಕಾರ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ. ಈ ಸೂಚ್ಯಂಕವನ್ನು ಎನ್ಐಟಿಐ ಆಯೋಗದ ಉಪಾಧ್ಯಕ್ಷ ಸುಮನ್ ಬೆರ್ರಿ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರನ್ ಅಯ್ಯರ್ ಅವರ ಸಮ್ಮುಖದಲ್ಲಿ ಗುರುವಾರ ಬಿಡುಗಡೆ ಮಾಡಿದರು. ಈ ಸೂಚ್ಯಂಕದಲ್ಲಿ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣ ಎರಡನೇ ಸ್ಥಾನದಲ್ಲಿದೆ.
ನೀತಿ (NITI)ಆಯೋಗವು 'ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ 2021' ಉಪ-ರಾಷ್ಟ್ರೀಯ ಮಟ್ಟದಲ್ಲಿ ನಾವೀನ್ಯತೆ ಸಾಮರ್ಥ್ಯಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಪರಿಶೀಲಿಸಲಾಗಿದ್ದು, ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯ ಸತತ ಮೂರನೇ ವರ್ಷವೂ ಪ್ರಥಮ ಸ್ಥಾನ ಗಳಿಸಿಕೊಂಡಿದೆ.
ಸೂಚ್ಯಂಕದ ಮೂರನೇ ಆವೃತ್ತಿಯು ದೇಶದಲ್ಲಿ ನಾವೀನ್ಯತೆ ವಿಶ್ಲೇಷಣೆಯ ವ್ಯಾಪ್ತಿಯನ್ನು ಬಲಪಡಿಸುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಹಿಂದಿನ ಆವೃತ್ತಿಗಳಲ್ಲಿ ವಿಶ್ಲೇಷಣೆಯು 36 ಸೂಚಕಗಳನ್ನು ಆಧರಿಸಿದೆ ಆದರೆ ಈ ಬಾರಿ 66 ಸೂಚಕಗಳನ್ನು ಬಳಸಲಾಗಿದೆ. ಸಮಗ್ರ ಚೌಕಟ್ಟಿನ ಮೂಲಕ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಾವೀನ್ಯತೆಯ ಕಾರ್ಯಕ್ಷಮತೆಯನ್ನು ಸೂಚ್ಯಂಕವು ಮೌಲ್ಯಮಾಪನ ಮಾಡುತ್ತದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ ಕಾರ್ಯಕ್ಷಮತೆಯ ಪರಿಣಾಮಕಾರಿ ಹೋಲಿಕೆಗಾಗಿ 17 ಪ್ರಮುಖ ರಾಜ್ಯಗಳು, 10 ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರ ರಾಜ್ಯಗಳಾಗಿ ವರ್ಗೀಕರಿಸಲಾಗಿದೆ.

ಅಗ್ರ-10 ರಾಜ್ಯಗಳು
1 ಕರ್ನಾಟಕ
2 ತೆಲಂಗಾಣ
3 ಹರಿಯಾಣ
4 ಮಹಾರಾಷ್ಟ್ರ
5 ತಮಿಳುನಾಡು
6 ಪಂಜಾಬ್
7 ಉತ್ತರ ಪ್ರದೇಶ
8 ಕೇರಳ
9 ಅಂಧ್ರ ಪ್ರದೇಶ
10 ಜಾರ್ಖಂಡ್

ಈಶಾನ್ಯ ಭಾಗದ ರಾಜ್ಯಗಳ ಸ್ಥಿತಿ?
1 ಮಣಿಪುರ್
2 ಉತ್ತರಾಖಂಡ
3 ಮೇಘಾಲಯ
4 ಅರುಣಾಚಲ ಪ್ರದೇಶ
5 ಹಿಮಾಚಲ್ ಪ್ರದೇಶ
6 ಸಿಕ್ಕಿಂ
7 ಮಿಜೋರಾಂ
8 ತ್ರಿಪುರಾ
9 ಅಸ್ಸಾಂ
10 ನಾಗಾಲ್ಯಾಂಡ್

ಕೇಂದ್ರಾಡಳಿತ ರಾಜ್ಯಗಳ ರ್ಯಾಂಕಿಂಗ್
1 ಚಂಡಿಗಢ
2 ದೆಹಲಿ
3 ಅಂಡಮಾನ್ ಮತ್ತು ನಿಕೋಬಾರ್
4 ಪುಧೀಚೇರಿ
5 ಗೋವಾ
6 ಜಮ್ಮು ಮತ್ತು ಕಾಶ್ಮೀರ

ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ ಎಂದರೇನು?
ನೀತಿ (NITI) ಆಯೋಗವು ಮತ್ತು ಇನ್ಸ್ಟಿಟ್ಯೂಟ್ ಫಾರ್ ಸ್ಪರ್ಧಾತ್ಮಕತೆ ಸಿದ್ಧಪಡಿಸಿದ ಭಾರತ ನಾವೀನ್ಯತೆ ಸೂಚ್ಯಂಕವು ದೇಶದ ನಾವೀನ್ಯತೆ ಪರಿಸರ ವ್ಯವಸ್ಥೆಯ ಮೌಲ್ಯಮಾಪನ ಮತ್ತು ಅಭಿವೃದ್ಧಿಗೆ ಒಂದು ಸಮಗ್ರ ಸಾಧನವಾಗಿದೆ. ಇದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ನಿರ್ಮಿಸಲು ಅವರ ನಾವೀನ್ಯತೆಯ ಕಾರ್ಯಕ್ಷಮತೆಯ ಮೇಲೆ ಶ್ರೇಣೀಕರಿಸುತ್ತದೆ.
2017 ರಲ್ಲಿ 60ನೇ ಸ್ಥಾನದಿಂದ, ಭಾರತವು 2021 ರಲ್ಲಿ 46 ನೇ ಸ್ಥಾನವನ್ನು ತಲುಪಿತು. ಭಾರತವು ಮಧ್ಯ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ 1 ನೇ ಸ್ಥಾನದಲ್ಲಿದೆ ಮತ್ತು ಕಡಿಮೆ ಮಧ್ಯಮ-ಆದಾಯದ ದೇಶಗಳಲ್ಲಿ 2 ನೇ ಸ್ಥಾನದಲ್ಲಿದೆ ಎಂದು ಅದು ಹೇಳಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications