First Lunar Eclipse: ವರ್ಷದ ಮೊದಲ ಚಂದ್ರಗ್ರಹಣ: ಮಾಡುವ ಮಾಡಬಾರದ ಕೆಲಸಗಳು ತಿಳಿಯಿರಿ
ಈ ವರ್ಷ ಹೋಳಿ ಹಬ್ಬದಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಈ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಮೊದಲನೆಯದಾಗಿ ಇದು ಸಂಪೂರ್ಣ ಚಂದ್ರಗ್ರಹಣವಲ್ಲ. ಆದರೆ ಇದು ಪೆನಂಬ್ರಾಲ್ ಚಂದ್ರಗ್ರಹಣವಾಗಿದೆ. ಪೆನಂಬ್ರಾಲ್ ಚಂದ್ರಗ್ರಹಣ ಎಂದರೇನು ಮತ್ತು ಅದು ಯಾವಾಗ ಗೋಚರಿಸುತ್ತದೆ ಎಂದು ತಿಳಿಯೋಣ? ಜೊತೆಗೆ ಇದು ಭಾರತದಲ್ಲಿಯೂ ಗೋಚರಿಸುತ್ತದೆಯೇ? ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಈಗ ನೋಡೋಣ.
ಮಾರ್ಚ್ 25 ರಂದು ಚಂದ್ರಗ್ರಹಣ ಸಂಭವಿಸಲಿದೆ. ಈ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತೀಯ ಕಾಲಮಾನದ ಪ್ರಕಾರ, ಈ ಗ್ರಹಣವು ಬೆಳಿಗ್ಗೆ 10:23 ಕ್ಕೆ ಪ್ರಾರಂಭವಾಗಿ 3:23 ರವರೆಗೆ ಇರುತ್ತದೆ. ಈ ಗ್ರಹಣದ ಒಟ್ಟು ಅವಧಿಯು ಸಂಜೆ 4:39 ರವರೆಗೆ ಇರುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಅದರ ಸೂತಕದ ನಿಯಮಗಳು ಭಾರತದಲ್ಲಿ ಮಾನ್ಯವಾಗುವುದಿಲ್ಲ.

ಪೆನಂಬ್ರಾಲ್ ಚಂದ್ರಗ್ರಹಣ ಎಂದರೇನು?
ಚಂದ್ರನ ಭಾಗ ಅಥವಾ ಎಲ್ಲಾ ಭಾಗವು ಭೂಮಿಯ ಪೆನಂಬ್ರಾಕ್ಕೆ ಹಾದುಹೋದಾಗ ಪೆನಂಬ್ರಾಲ್ ಚಂದ್ರಗ್ರಹಣ ಸಂಭವಿಸುತ್ತದೆ. ಈ ಘಟನೆಯ ಸಮಯದಲ್ಲಿ ಚಂದ್ರನ ಯಾವುದೇ ಭಾಗವು ಭೂಮಿಯ ಅಂಬ್ರಾದಲ್ಲಿ ಇರುವುದಿಲ್ಲ. ಪೆನಂಬ್ರಾವು ಚಂದ್ರನ ಮೇಲ್ಮೈಯ ಸೂಕ್ಷ್ಮವಾದ ಮಬ್ಬಾಗಿಸುವಿಕೆಯನ್ನು ಉಂಟುಮಾಡುತ್ತದೆ. ಇದು ಚಂದ್ರನ ವ್ಯಾಸದ ಸುಮಾರು 70% ಭೂಮಿಯ ಪೆನಂಬ್ರಾದಲ್ಲಿ ಮುಳುಗಿದಾಗ ಬರಿಗಣ್ಣಿಗೆ ಮಾತ್ರ ಗೋಷರಿಸುತ್ತದೆ.
ಚಂದ್ರಗ್ರಹಣವನ್ನು ಎಲ್ಲಿ ನೋಡಬಹುದು?
ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ದಕ್ಷಿಣ, ಪಶ್ಚಿಮ ಯುರೋಪ್, ಆಫ್ರಿಕಾ, ಅಟ್ಲಾಂಟಿಕ್ ಸಾಗರ, ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ, ದಕ್ಷಿಣ ಅಮೆರಿಕಾ, ಪೆಸಿಫಿಕ್ ಮಹಾಸಾಗರ, ದಕ್ಷಿಣ ಧ್ರುವ ಮತ್ತು ಉತ್ತರ ಧ್ರುವದಲ್ಲಿ ಈ ಪೆನಂಬ್ರಾಲ್ ಚಂದ್ರಗ್ರಹಣ ಗೋಚರಿಸುತ್ತದೆ.

ಆದಾಗ್ಯೂ ಇದು ಪೆನಂಬ್ರಾಲ್ ಚಂದ್ರಗ್ರಹಣವಾದ್ದರಿಂದ ಇದರ ಪರಿಣಾಮ ಹೆಚ್ಚು ಗೋಚರಿಸುವುದಿಲ್ಲ. ವಾಸ್ತವವಾಗಿ ಪೆನಂಬ್ರಾಲ್ ಚಂದ್ರಗ್ರಹಣದಲ್ಲಿ ಚಂದ್ರನ ನೆರಳು ಭೂಮಿಯ ಹೊರ ಭಾಗದಲ್ಲಿ ಮಾತ್ರ ಬೀಳುತ್ತದೆ. ಪೆನಂಬ್ರಾಲ್ ಚಂದ್ರ ಗ್ರಹಣದಲ್ಲಿ ಚಂದ್ರನು ಸ್ವಲ್ಪ ಮಸುಕಾಗುತ್ತಾನೆ. ಆದ್ದರಿಂದ ಅದರ ಪರಿಣಾಮ ಅಷ್ಟು ಮಾನ್ಯವಾಗಿರುವುದಿಲ್ಲ. ಹೀಗಾಗಿ ಇದು ಭಾರತದಲ್ಲಿ ಹೋಳಿ ಹಬ್ಬದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು?
*ಸಂಪೂರ್ಣ ಚಂದ್ರಗ್ರಹಣ ಸಂಭವಿಸಿದಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
*ಚಂದ್ರಗ್ರಹಣ ಸಂಭವಿಸಿದಾಗ, ಅದರ ಸೂತಕ ಅವಧಿಯು 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಸೂತಕ ಕಾಲದಲ್ಲಿ ಯಾವುದೇ ಶುಭ ಕಾರ್ಯ, ದೇವರ ಪೂಜೆ ಇತ್ಯಾದಿಗಳನ್ನು ಮಾಡುವುದಿಲ್ಲ.
*ಅಲ್ಲದೆ ಚಂದ್ರಗ್ರಹಣದ ಸಮಯದಲ್ಲಿ ಆಹಾರವನ್ನು ಬೇಯಿಸುವುದು ಮತ್ತು ತಿನ್ನುವುದನ್ನು ತಪ್ಪಿಸಬೇಕು.
*ಗ್ರಹಣ ಕಾಲದಲ್ಲಿ ಯಾವುದೇ ದೇವತೆಯ ವಿಗ್ರಹವನ್ನು ಮುಟ್ಟಬಾರದು. ಹಾಗೆಯೇ ದೇವಸ್ಥಾನವನ್ನು ಪ್ರವೇಶಿಸಬಾರದು.
*ಅಲ್ಲದೆ, ಗ್ರಹಣದ ಸಮಯದಲ್ಲಿ ಚಾಕು, ಸೂಜಿ ಮುಂತಾದ ಯಾವುದೇ ಹರಿತವಾದ ವಸ್ತುಗಳನ್ನು ಬಳಸಬಾರದು.
*ವಿಶೇಷವಾಗಿ ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹೊರಗೆ ಹೋಗಬಾರದು.
*ಚಂದ್ರಗ್ರಹಣದ ಸಮಯದಲ್ಲಿ ನೀವು ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು ಮತ್ತು ದೇವರ ಮಂತ್ರಗಳನ್ನು ಪಠಿಸಬೇಕು.
*ಚಂದ್ರಗ್ರಹಣ ಮುಗಿದ ತಕ್ಷಣ ಬಿಳಿಯ ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಅಶುಭ ಪರಿಣಾಮಗಳನ್ನು ನೀವು ಕಡಿಮೆ ಮಾಡಿಕೊಳ್ಳುವಿರಿ.
-
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Rashmika: ಹೈದರಾಬಾದ್ನಲ್ಲಿ ರಶ್ಮಿಕಾ-ವಿಜಯ್ ಅರತಕ್ಷತೆ: ನವದಂಪತಿಗೆ ಡಿಕೆ ಶಿವಕುಮಾರ್ ವಿಶ್












Click it and Unblock the Notifications