ಕಾಯ್ದೆಗೆ ತಿದ್ದುಪಡಿ: 24 ವಾರಗಳ ನಂತರವೂ ಗರ್ಭಪಾತಕ್ಕೆ ಕೇಂದ್ರ ಸರ್ಕಾರದ ಅನುಮತಿ
ನವದೆಹಲಿ, ಅಕ್ಟೋಬರ್ 14: ಕೇಂದ್ರ ಸರ್ಕಾರದ ಹೊಸ ನಿಯಮಗಳ ಪ್ರಕಾರ, ಭಾರತದಲ್ಲಿ ಕೆಲವು ನಿರ್ದಿಷ್ಠ ಸಂದರ್ಭಗಳಲ್ಲಿ ಮಹಿಳೆಯರ ಗರ್ಭಪಾತದ ಅವಧಿಯನ್ನು 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಲಾಗಿದೆ.
ಗರ್ಭಧಾರಣೆಯ ವೈದ್ಯಕೀಯ ತಿದ್ದುಪಡಿ (ತಿದ್ದುಪಡಿ) ನಿಯಮಗಳು, 2021ರ ಅಡಿಯಲ್ಲಿ ಈ ಮಿತಿ ಹೆಚ್ಚಿಸಲಾಗಿದೆ. ಮಹಿಳೆಯರಲ್ಲಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಅಥವಾ ಸಂಭೋಗ, ಅಪ್ರಾಪ್ತ ವಯಸ್ಕರು, ಗರ್ಭಾವಸ್ಥೆಯಲ್ಲಿ ವೈವಾಹಿಕ ಸ್ಥಿತಿ ಬದಲಾಗುವವರು (ವಿಧವೆ ಮತ್ತು ವಿಚ್ಛೇದನ) ಮತ್ತು ದೈಹಿಕ ಅಂಗವೈಕಲ್ಯ ಹೊಂದಿರುವವರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.
ಹೊಸ ನಿಯಮಗಳಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯರು, ಭ್ರೂಣದ ದೋಷಪೂರಿತ ಪ್ರಕರಣಗಳು, ದೈಹಿಕ ಅಥವಾ ಮಾನಸಿಕ ವೈಪರೀತ್ಯಗಳು ಮತ್ತು ಸರ್ಕಾರ ಘೋಷಿಸಿದಂತೆ ವಿಪತ್ತು ಅಥವಾ ತುರ್ತು ಪರಿಸ್ಥಿತಿಗಳಲ್ಲಿ ಗಣನೀಯ ಅಪಾಯವನ್ನು ಎದುರಿಸಬೇಕಾಗುತ್ತದೆ. ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ (ತಿದ್ದುಪಡಿ) ಕಾಯ್ದೆ, 2021ರ ಅಡಿಯಲ್ಲಿ ಬರುವ ಹೊಸ ನಿಯಮಗಳನ್ನು 2021ರ ಮಾರ್ಚ್ ತಿಂಗಳಿನಲ್ಲಿ ಸಂಸತ್ತು ಅಂಗೀಕರಿಸಿದೆ.

ಒಬ್ಬರು ಅಥವಾ ಇಬ್ಬರು ವೈದ್ಯರ ಅಭಿಪ್ರಾಯ
ಭಾರತದಲ್ಲಿ ಈ ಮೊದಲು ಗರ್ಭ ಧರಿಸಿದ 12 ವಾರಗಳಲ್ಲಿ ಗರ್ಭಪಾತ ಮಾಡುವುದಕ್ಕೆ ಒಬ್ಬ ವೈದ್ಯರು ಹಾಗೂ 20 ವಾರಗಳ ನಂತರದಲ್ಲಿ ಗರ್ಭಪಾತಕ್ಕೆ ಇಬ್ಬರು ವೈದ್ಯರ ಅಭಿಪ್ರಾಯವನ್ನು ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿತ್ತು. ಹೊಸ ನಿಯಮಗಳ ಪ್ರಕಾರ, ಜೀವನ, ದೈಹಿಕ ಅಥವಾ ಮಾನಸಿಕ ಸಮಸ್ಯೆ ಅಥವಾ ಅಂಗವೈಕಲ್ಯಗಳೊಂದಿಗೆ ಗಣನೀಯವಾಗಿ ಹೊಂದಿಕೆಯಾಗದ ಹಾಗೂ ಅಪಾಯವಿರುವ ಭ್ರೂಣದ ವಿರೂಪತೆ ಪ್ರಕರಣಗಳಲ್ಲಿ 24 ವಾರಗಳ ನಂತರ ಗರ್ಭಧಾರಣೆಯನ್ನು ಕೊನೆಗೊಳಿಸಬಹುದೇ ಎಂದು ನಿರ್ಧರಿಸಲು ರಾಜ್ಯ ಮಟ್ಟದ ವೈದ್ಯಕೀಯ ಮಂಡಳಿಗಳನ್ನು ರಚಿಸಲಾಗುವುದು.

ಗರ್ಭಪಾತದ ಕುರಿತು ರಾಜ್ಯ ಮಟ್ಟದ ಮಂಡಳಿ ನಿರ್ಧಾರ
ರಾಜ್ಯ ಮಟ್ಟದ ವೈದ್ಯಕೀಯ ಮಂಡಳಿಗಳು ಗರ್ಭಿಣಿ ಮತ್ತು ಆಕೆ ಸಲ್ಲಿಸಿದ ವರದಿಗಳನ್ನು ಮೊದಲು ಪರೀಕ್ಷಿಸಬೇಕು. ನಂತರ ವಿನಂತಿಯನ್ನು ಸ್ವೀಕರಿಸಿದ ಮೂರು ದಿನಗಳಲ್ಲಿ ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯದ ಪ್ರಸ್ತಾಪವನ್ನು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು. ಅಲ್ಲದೇ ಮಂಡಳಿಗಳು ಸಲಹೆ ನೀಡಿದಾಗ ಗರ್ಭಪಾತ ಪ್ರಕ್ರಿಯೆಯನ್ನು ಸಮಾಲೋಚನೆಯೊಂದಿಗೆ ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ಕೈಗೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಮಂಡಳಿಯು ವಿನಂತಿಯನ್ನು ಸ್ವೀಕರಿಸಿದ ಐದು ದಿನಗಳವರೆಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಸೀಮಿತ ವರ್ಗದ ಮಹಿಳೆಯರಿಗಷ್ಟೇ ನಿಯಮ ಸಲ್ಲದು
"ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ನಾವು ಸ್ವಾಗತಿಸುತ್ತೇವೆ. ಆದಾಗ್ಯೂ, ವೈಜ್ಞಾನಿಕ ಮತ್ತು ವೈದ್ಯಕೀಯ ತಂತ್ರಜ್ಞಾನದ ಪ್ರಗತಿಯನ್ನು ಗಮನಿಸಿದರೆ, ಪ್ರಪಂಚ ಸಾಕಷ್ಟು ಮುಂದಿದೆ. ಹೀಗಿರುವಾಗ ಗರ್ಭಪಾತದ ವಿಸ್ತರಣೆ ಅವಧಿಯನ್ನು 24 ವಾರಗಳಿಗೆ ಹೆಚ್ಚಿಸಿರುವ ಹೊಸ ನಿಯಮಗಳು ಕೇವಲ ವಿಶೇಷ ವರ್ಗಗಳ ಮಹಿಳೆಯರಿಗಷ್ಟೇ ಅಲ್ಲದೇ ಎಲ್ಲ ಮಹಿಳೆಯರಿಗೂ ಅನ್ವಯವಾಗುವಂತೆ ಇರಬೇಕು," ಎಂದು ಭಾರತದ ಜನಸಂಖ್ಯಾ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕಿ ಪೂನಂ ಮುತ್ರೇಜಾ ಹೇಳಿದ್ದಾರೆ.
"ರಾಜ್ಯ ವೈದ್ಯಕೀಯ ಮಂಡಳಿಗಳ ರಚನೆಯು ಗರ್ಭಪಾತದ ಸೇವೆಗಳಿಗೆ ಮಹಿಳೆಯರ ಪ್ರವೇಶಕ್ಕೆ ಸಂಭಾವ್ಯ ಅಡೆತಡೆಗಳನ್ನು ಉಂಟುಮಾಡಬಹುದು, ಏಕೆಂದರೆ ಅನೇಕ ಮಹಿಳೆಯರು ನಂತರದ ಹಂತದಲ್ಲಿ ಗರ್ಭಿಣಿಯಾಗಿದ್ದಾರೆ," ಎಂದು ಅವರು ತಿಳಿಸಿದ್ದಾರೆ.

ತಿದ್ದುಪಡಿ ಬಗ್ಗೆ ತಜ್ಞರ ಅಭಿಪ್ರಾಯ?
ಇದು ಫಲಾನುಭವಿಗಳು ಮತ್ತು ಸ್ತ್ರೀರೋಗತಜ್ಞರ "ಬಹುನಿರೀಕ್ಷಿತ, ಸೂಕ್ಷ್ಮ ಮತ್ತು ಭವಿಷ್ಯದ ತಿದ್ದುಪಡಿ" ಎಂದು ರೇನ್ಬೋ IVF ಸಂಸ್ಥಾಪಕರು ಮತ್ತು ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಡಾ. ಜೈದೀಪ್ ಮಲ್ಹೋತ್ರಾ ಹೇಳಿದ್ದಾರೆ.
"ಹೊಸ ನಿಯಮಗಳು ಮಹಿಳೆಯರ ಸಂತಾನೋತ್ಪತ್ತಿ ಆಯ್ಕೆಗಳಿಗೆ ಮುಂದಾಗಿದೆ," ಎಂದು ಹಿರಿಯ ಸ್ತ್ರೀರೋಗ ತಜ್ಞೆ ಡಾ ಲವ್ಲೀನಾ ನಾದಿರ್ ಹೇಳಿರುವ ಬಗ್ಗೆ ಪಿಟಿಐ ಉಲ್ಲೇಖಿಸಿದೆ. "ಇದು ಎಲ್ಲಾ ಮಹಿಳೆಯರಿಗೆ ಸುರಕ್ಷಿತ ಗರ್ಭಪಾತಕ್ಕೆ ಮೊದಲ ಹೆಜ್ಜೆಯೆಂದು ನಾನು ಭಾವಿಸುತ್ತೇನೆ. ಕೇವಲ ವಿಶೇಷ ವರ್ಗಗಳಲ್ಲಿ ಮಹಿಳೆಯರಿಗೆ ಸೀಮಿತವಾಗಿಲ್ಲ. ಇದು ಮಹಿಳೆಯರನ್ನು ಸಬಲೀಕರಣಗೊಳಿಸುವುದರ ಜೊತೆಗೆ ಭಾರತವನ್ನು ಉದಾರವಾದಿ ಮಹಿಳೆ ಬೆಂಬಲಿಸುವ ದೇಶವನ್ನಾಗಿ ಮಾಡುತ್ತದೆ" ಎಂದು ಹೇಳಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications