ಸಂಸದರಿಗೆ 10 ರುಗೆ ಬೋಂಡಾ, 100 ರುಗೆ ಚಿಕನ್ ಬಿರಿಯಾನಿ
ನವದೆಹಲಿ, ಜನವರಿ 27: ಸಂಸತ್ತಿನಲ್ಲಿ ಸಬ್ಸಿಡಿ ದರದಲ್ಲಿ ಕ್ಯಾಂಟೀನ್ ಊಟ, ತಿಂಡಿ ಸಿಗುತ್ತಿದ್ದ ಅವಧಿ ಮುಕ್ತಾಯವಾಗಿದೆ. ಸಬ್ಸಿಡಿ ದರದಲ್ಲಿ ಉಪಹಾರ ಪಡೆಯದಿರಲು 2019ರಲ್ಲಿ ಸಂಸದರೆಲ್ಲರೂ ಪಕ್ಷಬೇಧ ಮರೆತು ತೆಗೆದುಕೊಂಡ ನಿರ್ಣಯ ಇದೀಗ ಸಂಪೂರ್ಣವಾಗಿ ಜಾರಿಗೆ ಬರುತ್ತಿದೆ.
ಬಜೆಟ್ 2021 ಅಧಿವೇಶನದಲ್ಲಿ ಯಾವುದೇ ಲಾಭ ಯಾವುದೇ ನಷ್ಟ ಇಲ್ಲದ ಮಾದರಿಯಲ್ಲಿ ಸಬ್ಸಿಡಿ ರಹಿತವಾಗಿ ಊಟ ತಿಂಡಿ ಲಭಿಸಲಿದೆ. ಸಂಸತ್ ಕ್ಯಾಂಟೀನ್ ಕಡಿಮೆ ದರ ಊಟ -ತಿಂಡಿ ಪ್ರತಿ ವರ್ಷದ ಚರ್ಚೆಯ ವಿಷಯವಾಗಿತ್ತು. ತೆರಿಗೆದಾರರ ಹಣ ಈ ರೀತಿ ಏಕೆ ಪೋಲು ಮಾಡುತ್ತೀರಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನೆಗಳು ಎದ್ದಿದ್ದವು. ಸಂಸದರಲ್ಲದೆ, ಸಂಸತ್ ಭವನ ಸಿಬ್ಬಂದಿ, ಅಂಗರಕ್ಷಕರು, ಭದ್ರತಾ ಸಿಬ್ಬಂದಿ, ಕಾರು ಚಾಲಕರು ಕ್ಯಾಂಟೀನ್ ಊಟ ಮಾಡುತ್ತಾರೆ.
ಕ್ಯಾಂಟೀನ್ ಸಬ್ಸಿಡಿ ಊಟದ ಖರ್ಚು ಸುಮಾರು 15 ರಿಂದ 18 ಕೋಟಿ ರು ಎಂದು ಲೋಕಸಭೆ ಸಚಿವಾಲಯ ಮಾಹಿತಿ ನೀಡಿತ್ತು. ಉತ್ತರ ರೈಲ್ವೆ ನಿರ್ವಹಣೆಯಲ್ಲಿದ್ದ ಕ್ಯಾಂಟೀನ್ ಈಗ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ನಿಭಾಯಿಸುತ್ತಿದೆ.

ಜನವರಿ 27ರಿಂದ ಹೊಸ ವ್ಯವಸ್ಥೆ
2019ರಲ್ಲಿ ಸ್ಪೀಕರ್ ಓಂ ಬಿರ್ಲಾ ಮನವಿಯಂತೆ ಜನಪ್ರತಿನಿಧಿಗಳು ಸಬ್ಸಿಡಿ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದರು. ಅದರಂತೆ, ಈಗ ವೆಜ್-ನಾನ್ ವೆಜ್ ಸೇರಿ 58 ಆಹಾರ ಪದಾರ್ಥಗಳು ಮೆನುವಿನಲ್ಲಿವೆ. ಬಫೆ 70 ರು ತಗುಲಿದೆ. ಆಲೂಗೆಡ್ಡೆ ಬೋಂಡಾ ಬೆಲೆ 10 ರು ಎಂದು ಆಂತರಿಕ ಪ್ರಕಟಣೆ ಹೊರಡಿಸಲಾಗಿದೆ.

ಬಿರಿಯಾನಿ ಬೆಲೆ ಎಷ್ಟು
ಸಂಸದರು ಸಬ್ಸಿಡಿ ಆಹಾರ ಬಿಟ್ಟಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಕೋಟ್ಯಂತರ ಹೊರೆ ಕಡಿಮೆಯಾಗಲಿದೆ. ಹಾಲಿ ಹೊಸ ಮೆನುವಿನಂತೆ ದರ ಪಟ್ಟಿ ಹೀಗಿದೆ: ವೆಜಿಟೇಬಲ್ ಬಾತ್/ಬಿರಿಯಾನಿ ಬೆಲೆ 50 ರು ಇದ್ದರೆ ಚಿಕನ್ ಬಿರಿಯಾನಿ 100 ರು ಆಗಿದೆ. ಈ ಮುಂಚೆ 65 ರು ಗೆ ಸಿಗುತಿತ್ತು. ಮಟನ್ ಬಿರಿಯಾನಿ ಬೆಲೆ 150 ರು ಆಗಿದೆ. ವೆಜ್ ಊಟ(ಥಾಲಿ) 100 ರು, ಫಿಶ್ ಹಾಗೂ ಚಿಪ್ಸ್ ಬೆಲೆ 110 ರು, ಹಸಿರು ಸಲಾಡ್ 25 ರು.

1968ರಿಂದ ಉತ್ತರ ರೈಲ್ವೆ ನಿರ್ವಹಣೆ
1968ರಿಂದ ಉತ್ತರ ರೈಲ್ವೆ ನಿರ್ವಹಣೆಯಲಿದ್ದ ಸಂಸತ್ ಕ್ಯಾಂಟೀನ್ ಈಗ ಐಟಿಡಿಸಿ ತೆಕ್ಕೆಗೆ ಬಿದ್ದಿದೆ. ಸಾಧಾರಣ ಸಂಸತ್ ಅಧಿವೇಶನದ ವೇಳೆ ಸರಾಸರಿ 4,500 ಮಂದಿ ಪ್ರತಿ ದಿನ ಊಟ -ತಿಂಡಿಗೆ ಬರುತ್ತಾರೆ, 2019-20 ರ ಅವಧಿಯಲ್ಲಿ ವಾರ್ಷಿಕ 17 ಕೋಟಿ ರು ಸಬ್ಸಿಡಿ ಹಾಗೂ ಸಂಸದರಿಗಾಗಿ 24 ಲಕ್ಷ ರು ವೆಚ್ಚ ಮಾಡಲಾಗಿತ್ತು.

ಕ್ಯಾಂಟೀನ್ ಮೆನು ಹಳೆ ದರ ಎಷ್ಟಿತ್ತು?
2019ರಲ್ಲಿ ಸಬ್ಸಿಡಿ ಸಿಗುತ್ತಿದ್ದ ವೇಳೆ ಸಂಸತ್ ಕ್ಯಾಂಟೀನ್ ನಲ್ಲಿ ಇದ್ದ ದರ ಹೀಗಿದೆ: ಬ್ರೆಡ್ ಮತ್ತು ಬೆಣ್ಣೆ 6 ರೂ., ಚಪಾತಿ 2 ರೂ., ಚಿಕನ್ ಕರಿ 50 ರೂ., ಚಿಕನ್ ಕಟ್ಲೆಟ್ 41 ರೂ., ತಂದೂರಿ ಚಿಕನ್ 60 ರೂ., ಕಾಫಿ 5 ರೂ. ದರವಿದೆ.
ಸಂಸತ್ ಭವನದ ಕ್ಯಾಂಟೀನ್ನಲ್ಲಿ ಪ್ಲೇನ್ ದೋಸೆ 12 ರೂ., ಫಿಶ್ ಕರಿ 40 ರೂ., ಹೈದರಾಬಾದಿ ಚಿಕನ್ ಬಿರಿಯಾನಿ 65 ರೂ., ಮಟನ್ ಕರಿ 45 ರೂ., ಅನ್ನ 7 ರೂ., ಸೂಪ್ 14 ರೂ. ದರವಿತ್ತು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications