Fact Check: 'ಈಶ್ವರ ಅಲ್ಲಾಹ್ ತೆರೋ ನಾಮ್' ಬದಲಿಗೆ 'ಜೈ ಶ್ರೀರಾಮ್'?, ವಿಡಿಯೋ ಹಿಂದಿನ ಸತ್ಯ
ನವದೆಹಲಿ, ಅಕ್ಟೋಬರ್ 10: ಈ ತಿಂಗಳ ಆರಂಭದಲ್ಲಿ ದೇಶದಲ್ಲಿ ಮಹಾತ್ಮ ಗಾಂಧಿಜಿಯ 152 ನೇಯ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಅಹಿಂಸೆಯ ದಿನವನ್ನಾಗಿ ಆಚರಣೆ ಮಾಡಲಾಗಿದೆ. ಆದರೆ ಇದೀಗ ಈ ದಿನ ಕಾರ್ಯಕ್ರಮದಲ್ಲಿ ಮಾಡಲಾದ ಭಜನೆಯಲ್ಲಿ 'ಈಶ್ವರ ಅಲ್ಲಾ ತೆರೋ ನಾಮ್' ಬದಲಿಗೆ 'ಜೈ ಶ್ರೀರಾಮ್' ಎಂದು ಹೇಳಲಾಗಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಮಹಾತ್ಮ ಗಾಂಧಿಜಿಯ 152 ನೇಯ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಅಹಿಂಸೆಯ ದಿನವನ್ನಾಗಿ ಆಚರಣೆ ಮಾಡಿದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ''ರಘು ಪತಿ ರಾಘವ ರಾಜರಾಮ್" ಭಜನೆಯನ್ನು ಬಿಜೆಪಿ ಲೋಕ ಸಭಾ ಸಂಸದ ಹಾಗೂ ಗಾಯಕ ಹನ್ಸ್ ರಾಜ್ ಹನ್ಸ್ ಅವರು ಹಾಡಿದ್ದಾರೆ.
ಈ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗೆಯೇ 'ಈಶ್ವರ ಅಲ್ಲಾ ತೆರೋ ನಾಮ್' ಎಂಬ ("ಈಶ್ವರ ಹಾಗೂ ಅಲ್ಲಾಹ್ ಎಂಬುವುದು ದೇವರೆ ನಿನ್ನದೆ ಹೆಸರು") ಈ "ವಾಕ್ಯವನ್ನು ಈ ಭಜನೆಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ತೆಗೆದು ಹಾಕಿದೆ," ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ವಾಕ್ಯದ ಬದಲಾಗಿ, "ಜೈ ಶ್ರೀರಾಮ್, ಸೀತಾ ರಾಮ್," ಎಂಬ ವಾಕ್ಯವನ್ನು ಈಗ ಸೇರಿಸಲಾಗಿದೆ ಎಂದು ಕೂಡಾ ನೆಟ್ಟಿಗರು ಹೇಳಿಕೊಂಡಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉಪಾಧ್ಯಕ್ಷ ಎಮ್ ವೆಂಕಯ್ಯ ನಾಯ್ಡು ಕೂಡಾ ಕಂಡು ಬಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶೀತಲ್ ಚೋಪ್ರಾ ಎಂಬವರು, "ಕೊನೆಯದಾಗಿ 'ರಘು ಪತಿ ರಾಘವ ರಾಜರಾಮ್' ಭಜನೆಯಿಂದ 'ಈಶ್ವರ ಅಲ್ಲಾ ತೆರೋ ನಾಮ್' ಅನ್ನು ತೆಗೆದು ಹಾಕಿ ಅದರ ಬದಲಾಗಿ ಈಗ 'ಜೈ ಶ್ರೀರಾಮ್, ಸೀತಾ ರಾಮ್' ಎಂದು ಸೇರಿಸಲಾಗಿದೆ. ಧನ್ಯವಾದಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ," ಎಂದು ಹೇಳಿದ್ದಾರೆ. ಈ ವಿಡಿಯೋದ ಸತ್ಯಾಸತ್ಯತೆಯ ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ಪರಿಶೀಲನೆ ನಡೆಸಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಭಜನೆಯ ವಿಡಿಯೋದ ಸಣ್ಣ ತುಣುಕಿನಲ್ಲಿ 'ಈಶ್ವರ ಅಲ್ಲಾ ತೆರೋ ನಾಮ್' ಇಲ್ಲದಿದ್ದರೂ ನಿಜವಾದ ವಿಡಿಯೋದಲ್ಲಿ ಅಂದರೆ ಸಂಪೂರ್ಣ ವಿಡಿಯೋದಲ್ಲಿ ಬಿಜೆಪಿ ಲೋಕ ಸಭಾ ಸಂಸದ ಹಾಗೂ ಗಾಯಕ ಹನ್ಸ್ ರಾಜ್ ಹನ್ಸ್ ಅವರು 'ಈಶ್ವರ ಅಲ್ಲಾ ತೆರೋ ನಾಮ್' ಎಂದು ಹಾಡಿರುವುದು ಕಂಡು ಬಂದಿದೆ.
ನವದೆಹಲಿಯ ಗಾಂಧಿ ಸ್ಮೃತಿಯಲ್ಲಿ ಪ್ರತಿ ವರ್ಷವೂ ಕುಡಾ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿಜಿ ಅವರ ಜನ್ಮ ದಿನದಂದು ಭಜನೆಯನ್ನು ಮಾಡಲಾಗುತ್ತದೆ. ಹಾಗೆಯೇ ಜನವರಿ 30 ರಂದು ಗಾಂಧಿಜಿಯ ಪುಣ್ಯತಿಥಿಯ ಹಿನ್ನೆಲೆ ಭಜನೆಯನ್ನು ಮಾಡಲಾಗುತ್ತದೆ. ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹಲವಾರು ಜನರು ಮಾಸ್ಕ್ ಅನ್ನು ಧರಿಸಿರುವುದು ನಾವು ಗಮನಿಸಬಹುದಾಗಿದೆ. ಇದರಿಂದಾಗಿ ಈ ವಿಡಿಯೋ ಇತ್ತೀಚಿನದ್ದು ಎಂಬುವುದು ಸ್ಪಷ್ಟವಾಗಿದೆ.
ಕೀ ವರ್ಡ್ ಸರ್ಚ್ ಮಾಡುವ ಮೂಲಕ ಈ ವಿಡಿಯೋ ತುಣುಕಿನ ಸಂಪೂರ್ಣವಾದ ವಿಡಿಯೋವು ಅಕ್ಟೋಬರ್ 4 ರಂದು "Hans Raj Hans Live" ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ಚಾನೆಲ್ನಲ್ಲಿ ನೀಡಿರುವು ವಿವರಣೆ ಪ್ರಕಾರ ಇದು ಮಹಾತ್ಮ ಗಾಂಧಿಜಿಯ 152 ನೇಯ ಜನ್ಮ ದಿನವನ್ನು ಗಾಂಧಿ ಸ್ಮೃತಿಯಲ್ಲಿ ಮಾಡಲಾದ ಭಜನೆ ಆಗಿದೆ.
ಈ ವಿಡಿಯೋದ 1:52 ಹಾಗೂ 2 ನಿಮಿಷದ ನಡುವೆ ಹನ್ಸ್ ರಾಜ್ ಹನ್ಸ್ ಅವರು ಜೈ ಶ್ರೀರಾಮ್ ಅನ್ನು ನಾಲ್ಕು ಬಾರಿ ಹಾಡಿರುವುದು ಕಂಡು ಬಂದಿದೆ. ಆದರೆ ಮಹಾತ್ಮ ಗಾಂಧಿಯ ನಿಜವಾದ ಭಜನೆಯಲ್ಲಿ ಇಷ್ಟು ಬಾರಿ ಜೈ ಶ್ರೀ ರಾಮ್ ಎಂದು ಹೇಳುವುದಿಲ್ಲ. ಏನೇ ಆದರೂ ಈ ವಿಡಿಯೋದಲ್ಲಿ ಹನ್ಸ್ ರಾಜ್ ಹನ್ಸ್ ಅವರು 2:38 ನಿಮಿಷದಿಂದ 3:18 ನಿಮಿಷದ ಸಮಯದಲ್ಲಿ "ಈಶ್ವರ ಅಲ್ಲಾಹ್ ತೆರೋ ನಾಮ್, ಸಬ್ಕೋ ಸನ್ಮತಿ ದೇ ಭಗವಾನ್" (ಈಶ್ವರ ಅಲ್ಲಾಹ್ ನಿನ್ನ ಹೆಸರು, ಎಲ್ಲರಿಗೂ ಒಳ್ಳೆಯ ಬುದ್ಧಿ ನೀಡು ದೇವರೇ) ಎಂಬ ವಾಕ್ಯವನ್ನು ಹಾಡಿದ್ದಾರೆ.
ರಘುಪತಿ ರಾಘವ ರಾಜರಾಮ್ ಭಜನೆಯನ್ನು ಮೊದಲು ಶ್ರೀ ರಾಮ ರಾಮಾಯಣದಲ್ಲಿ ಲಕ್ಷ್ಮಣಾಚಾರ್ಯರು ಬರೆದಿದ್ದಾರೆ. ಬಳಿಕ ಮಹಾತ್ಮ ಗಾಂಧಿ ಇದನ್ನು ಬದಲಾವಣೆ ಮಾಡಿ, "ಈಶ್ವರ ಅಲ್ಲಾಹ್ ತೆರೋ ನಾಮ್, ಸಬ್ಕೋ ಸನ್ಮತಿ ದೇ ಭಗವಾನ್" ಎಂಬುವುದನ್ನು ಸೇರಿಸಿಕೊಂಡಿದ್ದಾರೆ. ಪ್ರಸ್ತುತ ಈ ಭಜನೆಯೇ ಜನಪ್ರಿಯವಾಗಿದೆ.
ಇನ್ನು ಈ ಸಂಪೂರ್ಣ ವಿಡಿಯೋವನ್ನು ನೋಡಿದಾಗ "ಈಶ್ವರ ಅಲ್ಲಾಹ್ ತೆರೋ ನಾಮ್, ಸಬ್ಕೋ ಸನ್ಮತಿ ದೇ ಭಗವಾನ್" ಎಂಬ ವಾಕ್ಯವನ್ನು ಈ ಭಜನೆಯಿಂದ ತೆಗೆದು ಹಾಕಿಲ್ಲ ಎಂಬುವುದು ಸ್ಪಷ್ಟವಾಗಿದೆ. ಹಾಗೆಯೇ ಈ ರೀತಿ ಹನ್ಸ್ ರಾಜ್ ಹನ್ಸ್ ಈ ವಾಕ್ಯವನ್ನು ಬಿಟ್ಟು ಭಜನೆ ಮಾಡಿದ್ದರೆ ದೊಡ್ಡ ಸುದ್ದಿಯಂತೂ ಆಗುತ್ತಿತ್ತು ಎಂಬುವುದು ಸ್ಪಷ್ಟ.
(ಒನ್ಇಂಡಿಯಾ ಸುದ್ದಿ)

Fact Check
ಕ್ಲೇಮು
'ಈಶ್ವರ ಅಲ್ಲಾಹ್ ತೆರೋ ನಾಮ್' ತೆಗೆದು ಹಾಕಲಾಗಿದೆ, 'ಜೈ ಶ್ರೀರಾಮ್, ಸೀತಾ ರಾಮ್' ಎಂದು ಸೇರಿಸಲಾಗಿದೆ.
ಪರಿಸಮಾಪ್ತಿ
'ಈಶ್ವರ ಅಲ್ಲಾಹ್ ತೆರೋ ನಾಮ್' ತೆಗೆದು ಹಾಕಲಾಗಿಲ್ಲ. ಸಂಪೂರ್ಣ ವಿಡಿಯೋದಲ್ಲಿ ಇದನ್ನು ಹಾಡಲಾಗಿದೆ.
Rating
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications