Vijay Sethupathi: ವರ್ಷಗಳಿಂದ ಯುವತಿ ಬಳಸಿಕೊಂಡ ವಿಜಯ್ ಸೇತುಪತಿ: ಗಂಭೀರ ಆರೋಪ
Vijay Sethupathi News: ಹೊರಗಿನಿಂದ ಸುಂದರವಾಗಿ ಕಾಣುವ ಬಣ್ಣದ ಲೋಕದ ಒಳಗಿರುವ ಅನೇಕರು ಸಾಕಷ್ಟು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗಳಲ್ಲಿ ಆಗಾಗ ಸದ್ದು ಮಾಡುವ ಕಾಸ್ಟಿಂಗ್ ಕೌಚ್ ವಿಚಾರ ಇದೀಗ ಕಾಲಿವುಡ್ ಖ್ಯಾತ ನಟ ವಿಜಯ್ ಸೇತುಪಥಿಗೆ ಉರುಳಾಗುವ ನಿರೀಕ್ಷೆ ಇದೆ. ಕ್ಯಾರವಾನ್ ಪೇವರ್ಗಾಗಿ ಹಣ ನೀಡಿ ಮಹಿಳೆ ಬಳಸಿಕೊಂಡಿದ್ದಾರೆ ಎಂಬ ಕಾಸ್ಟಿಂಗ್ ಕೌಚ್ ಆರೋಪ ವಿಜಯ್ ಸೇತುಪಥಿ ವಿರುದ್ಧ ಕೇಳಿ ಬಂದಿದೆ. ಹಾಗಾದ್ರೆ ಯಾರು ಈ ಆರೋಪ ಹೊರಿಸಿದ್ದು, ಕಾಲಿವುಡ್ನಲ್ಲಿ ಏನೆಲ್ಲ ನಡೆಯುತ್ತಿದೆ. ವಿಜಯ್ ಮೇಲಿನ ಆರೋಪಗಳ ಪೂರ್ಣ ಮಾಹಿತಿ ಇಲ್ಲಿದೆ.
ನಟ ವಿಜಯ್ ಸೇತುಪಥಿ ಮೇಲೆ ರಮ್ಯಾ ಮೋಹನ್ ಎಂಬುವವರು ಇಂಥದ್ದೊಂದು ಗಂಭೀರ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವೀಟ್ (ಎಕ್ಸ್) ಪೋಸ್ಟ್ ಶೇರ್ ಮಾಡಿಕೊಂಡು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಕಾಲಿವುಡ್, ಲೈಂಗಿಕ ದೌರ್ಜನ್ಯ, ನಶೆ, ಡ್ರಗ್ಸ್, ಕಾಸ್ಟಿಂಗ್ ಕೌಚ್ ಸೇರಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದರು. ಮಹಿಳೆ ಮೇಲಿನ ದೌರ್ಜನ್ಯ ವಿಚಾರದಲ್ಲಿ ನಟ ವಿಜಯ್ ಸೇತುಪಥಿ ಹೆಸರು ಉಲ್ಲೇಖಿಸಿ ಆರೋಪಿಸಿದ್ದರು.

ನಿರಂತರ ಯುವತಿ ಬಳಸಿಕೊಂಡಿದ್ದ ನಟ ವಿಜಯ್: ಆರೋಪ
ಸಿನಿಮಾ ಜಗತ್ತಿಗೆ ವಿಷಕಾರಿಯಾದ ಕಾಸ್ಟಿಂಗ್ ಕೌಚ್ನಲ್ಲಿ ವಿಜಯ್ ಸೇತುಪಥಿ ಸಹ ಇದ್ದಾರೆ ಎಂದಿದ್ದಾರೆ. ನನಗೆ ಗೊತ್ತಿರುವ ಯುವತಿ ಮೇಲೆ ನಿರಂತರ ದೌರ್ಜನ್ಯ ನಡೆಸಿದ್ದಾರೆ. ಆಕೆ ಈಗ ಪುನರ್ವಸತಿ ಕೇಂದ್ರದಲ್ಲಿ ನೆಲೆಸಿದ್ದಾರೆ. ರಮ್ಯಾ ಮೋಹನ್ ಅವರ ಪೋಸ್ಟ್ ಚರ್ಚೆ ಆಗುತ್ತಿದ್ದಂತೆ ಅವರು ಪೋಸ್ಟ್ ಅಳಿಸಿಹಾಕಿದ್ದಾರೆ.
ಆ ಯುವತಿಯನ್ನು ಪರಿಚಯವೇ ಇಲ್ಲದೇ ಸಿನಿಮಾದ ಈ ಜಗ್ಗತ್ತಿಗೆ ಕರೆತರಲಾಯಿತು. ಇಲ್ಲಿ ಡ್ರಗ್ಸ್, ದುರ್ಬಲರ ಶೋಷಣೆ, ಕಾಸ್ಟಿಂಗ್ ಕೌಚ್ ಸಾಮಾನ್ಯವಾಗಿಬಿಟ್ಟಿದೆ. ಇದೆಲ್ಲವು ತಮಾಷೆಯ ವಿಷಯವಲ್ಲ. ವಿಜಯ್ ಸೇತುಪಥಿ ಕ್ಯಾರವಾನ್ ಪೇವರ್ಸ್ಗಾಗಿ ಎರಡು ಲಕ್ಷ ರೂಪಾಯಿ ನೀಡಿದ್ದರು. ಅಲ್ಲದೇ ವರ್ಷಗಳಿಂದ ಆಕೆಯನ್ನು ಬಳಸಿಕೊಂಡಿದ್ದಾರೆ. ಇದೀಗ ಆಕೆ ಪುನರ್ವಸತಿಯಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ. ಇಷ್ಟೆಲ್ಲ ಆದರೂ ಸಹಿತ ಈ ನಟನನ್ನು ಉತ್ತಮ ಭಾವನೆಯಿಂದ, ಸಂತನಂತೆ ಗೌರಿವಸಲಾಗುತ್ತದೆ ಎಂದು ಅವರು ದೂರಿದ್ದಾರೆ.
ಲೈಂಗಿಕತೆ-ಮಾದಕ ವ್ಯಸನ, ಸಿನಿಮಾ ರಂಗಕ್ಕೆ ನಂಟಿದೆ ಎಂದು ಕಾಲಿವುಡ್ ಮೇಲೂ ಆರೋಪಿಸುತ್ತಿದ್ದಂತೆ ಈ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಯಿತು, ವಿವಾದ ಹುಟ್ಟಿಕೊಂಡಿತು. ಪೋಸ್ಟ್ಗೆ ಸಾಕಷ್ಟು ಕಾಮೆಂಟ್ಗಳು ಬಂದವು. ವ್ಯಾಪಕ ಚರ್ಚೆಗಳು ಶುರುವಾಗುತ್ತಿದ್ದಂತೆ ರಮ್ಯಾ ಮೋಹನ್ ತಮ್ಮ ಟ್ವಿಟ್ ಡಿಲೀಟ್ ಮಾಡಿದರು. ಸದ್ಯ ವಿಜಯ್ ಸೇತುಪಥಿ ಅವರು ಈ ಬಗ್ಗೆ ಪ್ರತಿಕ್ರಿಯ ನೀಡಿಲ್ಲ ಎಂದು ವರದಿ ಆಗಿದೆ.
-
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ












Click it and Unblock the Notifications