Udit Narayan: ಅದು ನನ್ನ ಅಭಿಮಾನಿ ನಡುವಿನ ಪ್ರೀತಿಯಷ್ಟೇ: ಲಿಪ್ಲಾಕ್ ಬಗ್ಗೆ ಗಾಯಕ ಸಮರ್ಥನೆ
ಖ್ಯಾತ ಗಾಯಕ ಉದಿತ್ ನಾರಾಯಣ್ ಅವರು ಲೈವ್ ಶೋ ವೇಳೆ ಸೆಲ್ಫಿ ತೆಗೆದುಕೊಳ್ಳಲು ಬಂದ ಮಹಿಳಾ ಅಭಿಮಾನಿಯ ತುಟಿಗೆ ಚುಂಬಿಸಿ ವಿವಾದಕ್ಕೆ ಕಾರಣವಾಗಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿ ಉದಿತ್ ಅವರ ಈ ನಡೆ ಬಗ್ಗೆ ಹಲವು ಟೀಕೆಗಳು ವ್ಯಕ್ತವಾಗಿ ಈಗಲೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉದಿತ್ ನಾರಾಯಣ್ ಅವರು ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ.
ಈ ಸಂಗೀತ ಕಾರ್ಯಕ್ರಮ ನಡೆದು ಬಹಳ ತಿಂಗಳು ಕಳೆದಿದೆ. ಆದರೆ, ಇದಕ್ಕಿದ್ದಂತೆ ಏಕೆ ವೈರಲ್ ಆಯಿತು ಗೊತ್ತಿಲ್ಲ ಎಂದು ಆಶ್ಚರ್ಯಪಟ್ಟಿದ್ದಾರೆ. ಈ ವಿಡಿಯೋ ಬಗ್ಗೆ ನನಗೆ ವುದೇ ಮುಜುಗರ ಅಥವಾ ಅವಮಾನವನ್ನು ಅನುಭವಿಸುವುದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ನನ್ನ ನಡೆಯು ಶುದ್ಧ ವಾತ್ಸಲ್ಯದಿಂದ ಕೂಡಿದ್ದು, ಯಾವುದೇ ಕೊಳಕು ನಡವಳಿಕೆಯಲ್ಲ. ಈ ವಿವಾದವು ನನ್ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.

ನಾನು ನನ್ನ ಕುಟುಂಬಕ್ಕೆ ಅಥವಾ ನನ್ನ ದೇಶಕ್ಕೆ ಅವಮಾನ ಮಾಡುವ ಕೆಲಸ ಎಂದಾದರೂ ಏನಾದರೂ ಮಾಡಿದ್ದೇನೆಯೇ?ಹಾಗಾದರೆ ನಾನು ಎಲ್ಲವನ್ನೂ ಸಾಧಿಸಿರುವಾಗ ನನ್ನ ಜೀವನದ ಈ ಹಂತದಲ್ಲಿ ನಾನು ಏಕೆ ಹಾಗೆಲ್ಲ ಮಾಡುತ್ತೇನೆ? ನನ್ನ ಅಭಿಮಾನಿಗಳು ಮತ್ತು ನನ್ನ ನಡುವೆ ಆಳವಾದ ಶುದ್ಧ ಮತ್ತು ಮುರಿಯಲಾಗದ ಬಾಂಧವ್ಯವಿದೆ. ನೀವು ಹೇಳುತ್ತಿರುವ ವೈರಲ್ ವೀಡಿಯೊದಲ್ಲಿ ನೀವು ನೋಡಿರುವುದು ನನ್ನ ಅಭಿಮಾನಿಗಳು ಮತ್ತು ನನ್ನ ನಡುವಿನ ಪ್ರೀತಿಯ ಅಭಿವ್ಯಕ್ತಿಯಾಗಿದೆ. ಅಭಿಮಾನಿಗಳು ನನ್ನ ಪ್ರೀತಿಸುತ್ತಾರೆ, ನಾನು ಅವರನ್ನ ಮತ್ತೆ ಮತ್ತೆ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.
ಈ ವಿಡಿಯೋದಿಂದ ನನಗೆ ಮುಜುಗರವೋ ಅಥವಾ ನಾಚಿಕೆಯೋ ಇಲ್ಲವೇ ಇಲ್ಲ, ನಾನೇಕೆ ನಾಚಿಕೆ ಪಡಬೇಕು? ನನ್ನ ಧ್ವನಿಯಲ್ಲಿ ಯಾವುದೇ ವಿಷಾದ ಅಥವಾ ದುಃಖವಿಲ್ಲ. ಇದು ಕೊಳಕು ಅಥವಾ ರಹಸ್ಯವೂ ಅಲ್ಲ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ. ನನ್ನ ಹೃದಯ ಶುದ್ಧವಾಗಿದೆ. ಕೆಲವು ಜನರು ನನ್ನ ಶುದ್ಧ ಪ್ರೀತಿಯ ನಡೆಯಲ್ಲಿ ಏನಾದರೂ ಕೊಳಕು ಕಾಣಲು ಬಯಸಿದರೆ, ನಾನು ಅವರ ಬಗ್ಗೆ ವಿಷಾದಿಸುತ್ತೇನೆ. ನಾನು ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಈಗ ಅವರು ನನಗಿಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ ಎಂದು ತಮ್ಮ ಮೇಲಿನ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ನಾನು ಹಲವಾರು ಫಿಲ್ಮ್ಫೇರ್ ಪ್ರಶಸ್ತಿಗಳು, ರಾಷ್ಟ್ರೀಯ ಪ್ರಶಸ್ತಿಗಳು, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇನೆ. ಲತಾ ಮಂಗೇಶ್ಕರ್ ಅವರಂತೆ ನನಗೂ ಭಾರತ ರತ್ನ ಸಿಗಬೇಕು ಎಂಬ ಆಸೆ ಇದೆ. ಅವರು ನನ್ನ ಆರಾಧ್ಯ ದೈವ. ನನ್ನ ತಲೆಮಾರಿನ ಗಾಯಕರಲ್ಲಿ ನಾನು ಲತಾ ಜೀ ಅವರ ನೆಚ್ಚಿನ ಸಹ-ಗಾಯಕ. ನನ್ನ ಪೀಳಿಗೆಯ ಗಾಯಕರ ಪೈಕಿ ನಾನು ಅವರೊಂದಿಗೆ ಹಲವು ಹಾಡುಗಳನ್ನ ಹಾಡಿದ್ದೇನೆ. ನನಗೆ ಸರಸ್ವತಿ ಮಾತೆಯ ಆಶೀರ್ವಾದ ಇರುವಾಗ, ಇತರರ ಯಶಸ್ಸನ್ನು ಸಹಿಸದ ಜನರ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳುತ್ತೇನೆ? ಎಂದೂ ಅವರು ಟಾಂಗ್ ನೀಡಿದ್ದಾರೆ.
ಈ ಸಂಗೀತ ಕಾರ್ಯಕ್ರಮ ನಡೆದು ಹಲವು ತಿಂಗಳು ಕಳೆದಿದೆ. ಆದರೆ ಈಗ ದಿಢೀರನೆ ವಿಡಿಯೋ ಹೇಗೆ ವೈರಲ್ ಆಗಿದೆ ಎಂಬುದು ಅನುಮಾನ ಮೂಡಿಸುತ್ತಿದೆ. ಇದು ಅಮೇರಿಕಾದಲ್ಲೋ ಕೆನಡಾದಲ್ಲೋ ನಡೆದಿದ್ದಿರುವುದು ಈಗ ಏಕೆ ಹೊರಬಂದಿದೆ ತಿಳಿಯುತ್ತಿಲ್ಲ. ನಾನು ಕಿಡಿಗೇಡಿಗಳಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನೀವು ನನ್ನನ್ನು ಕೆಳಕ್ಕೆ ಎಳೆಯಲು ಪ್ರಯತ್ನಿಸಿದರೆ, ನಾನು ಇನ್ನೂ ಮೇಲಕ್ಕೆ ಹೋಗುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ವಿಡಿಯೋದಲ್ಲಿ ಉದಿತ್ ನಾರಾಯಣ್ ಅವರು ಮಹಿಳಾ ಅಭಿಮಾನಿಗಳ ತುಟಿಗೆ ಚುಂಬಿಸಿದ್ದರು. ಇದಕ್ಕೆ ಮಹಿಳಾ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications