Allu Arjun: ಅಲ್ಲು ಅರ್ಜುನ್ ಭೇಟಿಗೆ 1600 ಕಿಮೀ. ಸೈಕಲ್ನಲ್ಲಿ ಬಂದ ಅಭಿಮಾನಿ, ನಟ ಮಾಡಿದ್ದೇನು?
ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ತೆಲುಗಿನ ನಟ ಅಲ್ಲು ಅರ್ಜುನ್ (Allu Arjun) ಅವರು 'ಪುಪ್ಪ' ಸಿನಿಮಾ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ದಕ್ಷಿಣ ಭಾರತ ನಟ ಇಡೀ ಭಾರತಾದ್ಯಂತ ಅಭಿಮಾನಿ ಸಂಪಾದಿಸಿದ್ದಾರೆ. ಈ ಕಾರಣದಿಂದ ಅವರೊಬ್ಬ ಅಭಿಮಾನಿಯು ಬರೋಬ್ಬರಿ 1600 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಬಂದು ನೆಚ್ಚಿನ ನಟನನ್ನು ಭೇಟಿ ಮಾಡಿದ್ದಾರೆ.
ಹೌದು, ಅಚ್ಚರಿ ಎನ್ನಿಸಿದರೂ ಇದು ಸತ್ಯ. ಈ ಕುರಿತು ವಂಸಿ ಕಾಕಾ ಎಂಬುವವರು ಅಲ್ಲು ಅರ್ಜುನ್ ಅವರನ್ನು ಟ್ಯಾಗ್ ಮಾಡಿ, ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅಭಿಮಾನಿಯು ನೆಚ್ಚಿನ ನಟನನ್ನು ನೋಡಲು ಬಂದ ವಿಡಿಯೋ ಇದೆ. ಹಾಗಾದರೆ ಬಹುದೂರದಿಂದ ಬಂದ ಅಭಿಮಾನಿ ಕಂಡು ಅಲ್ಲು ಅರ್ಜುನ್ ಅವರು ಮಾಡಿದ್ದೇನು? ಇಲ್ಲಿದೆ ಮಾಹಿತಿ.

ಈ ಅಭಿಮಾನಿಯು ಉತ್ತರ ಪ್ರದೇಶದ ಅಲಿಗರ್ನಿಂದ ಹೈದರಾಬಾದ್ಗೆ ನಟ ಅಲ್ಲು ಅರ್ಜುನ್ ನೋಡಲು ಸೈಕಲ್ ಮೂಲಕ ಆಗಮಿಸಿದ್ದಾರೆ. ರಸ್ತೆ, ಹೆದ್ದಾರಿಗಳ ಮೂಲಕ ಸಾಗಿ, ಹೈದರಾಬಾದ್ಗೆ ಆಗಮಿಸಿದ ಫ್ಯಾನ್ ಅಲ್ಲು ಅರ್ಜುನ್ ಅವರನ್ನು ಕಂಡು ಖುಷಿಪಟ್ಟಿದ್ದಾರೆ.
ವಿಶೇಷ ಅಭಿಮಾನಿಯೊಂದಿಗೆ ನಟ ಆದರದ ಮಾತು
ಉತ್ತರ ಪ್ರದೇಶದಿಂದ ಸೈಕಲ್ನಲ್ಲಿ ಬಂದ ವಿಶೇಷ ಅಭಿಮಾನಿಯನ್ನು ಬಲು ಆದರದಿಂದ ಅಲ್ಲು ಅರ್ಜುನ್ ಅವರು ಬರೆಮಾಡಿಕೊಂಡಿದ್ದಾರೆ. ನಗುಮೊಗದಿಂದ ಅಭಿಮಾನಿ ಜೊತೆಗೆ ಮಾತನಾಡಿ ಕಳುಹಿಸಿದ್ದಾರೆ.
A fan cycled over 1600 km from Aligarh, Uttar Pradesh, to Hyderabad to meet his hero, Icon Star @alluarjun. pic.twitter.com/CYYudDHOJ8
— Vamsi Kaka (@vamsikaka) October 16, 2024
ನನಗೆ ಅಲ್ಲು ಅರ್ಜುನ್ ಅವರನ್ನು ನೋಡಿ ಮಾತೆ ಬರುತ್ತಿಲ್ಲ. ನಿಜಕ್ಕೂ ಅವರು ಉತ್ತಮ, ವಿನಯವಂತ ಸ್ಟಾರ್ ನಟ. ಅವರನ್ನು ಸಿನಿಮಾದಲ್ಲಿ ನೋಡಿದ್ದಕ್ಕಿಂತ ಇಲ್ಲಿ ನೋಡಿದ್ದೆ ಅತ್ಯಂದ ವಿಶೇಷ ಎನ್ನಿಸಿತು. ತಂದೆ ತಾಯಿ ಆಶೀರ್ವಾದಿಂದ ನಾನು ಅವರನ್ನು ಮುಖಾ ಮುಖಿಯಾಗಿ ನೋಡಿದ್ದೇನೆ ಎಂದು ಆ ಅಭಿಮಾನಿ ಭಾವುಕರಾಗಿದ್ದಾರೆ.
ಅಲ್ಲು ಅರ್ಜುನ್ 'ಪುಷ್ಪಾ 2' ನಲ್ಲಿ ಬ್ಯೂಸಿ
ಸದ್ಯ ನಟ ಅಲ್ಲು ಅರ್ಜುನ್ ಅವರು ಪುಷ್ಪಾ 2 ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ನಾಯಕಿ ಆಗಿ ನಟಿಸಿದ್ದಾರೆ. ಪುಷ್ಪಾ ಮೊದಲ ಭಾಗದ ಸಿನಿಮಾ ಹಿಟ್ ಆಗಿತ್ತು. ಇದೀಗ ಅದರ ಮುಂದುವರಿದ ಭಾಗವು ಇದೇ ಡಿಸೆಂಬರ್ ಗೆ ಬಿಡುಗಡೆ ಆಗಲಿದೆ. ನವೆಂಬರ್ನಿಂದ ಚಿತ್ರತಂಡ ಪ್ರಚಾರ ಕಾರ್ಯ ಶುರು ಮಾಡಲಿದೆ..
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications