ಪೃಥ್ವಿ ಭಟ್ ಸರಿಗಮಪಗೆ ಆಯ್ಕೆ ಆಗಿದ್ದೇಗೆ: ಸಾಧನೆಗೆ ಸಹಾಯ ಮಾಡಿದ್ದು ಯಾರು?
ಕನ್ನಡದ ಜನಪ್ರಿಯ ಗಾಯಕಿ ಪೃಥ್ವಿ ಭಟ್ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಮದುವೆ ವಿಚಾರದಲ್ಲಿ ಆದ ವಿವಾದದಿಂದ ತೆರೆಮರೆಯಲ್ಲಿದ್ದ ಗಾಯಕಿ ಒಮ್ಮೆಲೆ ಮುನ್ನೆಲೆಗೆ ಬರುವಂತಾಯಿತು. ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿದ್ದ ಗಾಯಕಿ ಪೃಥ್ವಿ ಭಟ್, ಅದೇ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎನ್ನುವವರನ್ನು ಪ್ರೀತಿಸಿ ಮದುವೆಯಾದರು.
ಅಭಿಷೇಕ್ ಅವರನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದ ಪೃಥ್ವಿ ಭಟ್ ತಂದೆ-ತಾಯಿ ವಿರೋಧದ ನಡುವೆಯೇ ಮನೆಬಿಟ್ಟು ಹೋಗಿ ವಿವಾಹವಾದರು. ಮಗಳು ಮನೆಬಿಟ್ಟು ಹೋಗಿರುವ ನೋವಿನಲ್ಲಿ ಪೃಥ್ವಿ ಭಟ್ ತಂದೆ ಆಡಿಯೋವೊಂದನ್ನು ಹರಿಬಿಟ್ಟಿದ್ದರು. ಇದು ವಿವಾದಕ್ಕೆ ಕಾರಣವಾಯ್ತು. ಪೃಥ್ವಿ ಭಟ್ ತಂದೆಯ ಆಡಿಯೋದಲ್ಲಿ ಒಂದಷ್ಟು ಜನರ ವಿರುದ್ಧ ಆರೋಪ ಮಾಡಲಾಗಿದ್ದು, ಈ ಆರೋಪಕ್ಕೆ ಪೃಥ್ವಿ ಭಟ್ ಸೇರಿದಂತೆ ಆಡಿಯೋದಲ್ಲಿ ಹೆಸರು ಕೇಳಿಬಂದವರು ಸ್ಪಷ್ಟನೆ ನೀಡಿದ್ದರು. ಒಟ್ಟಾರೆ ಪೃಥ್ವಿ ಭಟ್ ಹಾಗೂ ಅಭಿಷೇಕ್ ಮದುವೆ ಒಂದಷ್ಟು ಗೊಂದಲವನ್ನು ಹುಟ್ಟುಹಾಕಿತ್ತು.

ಈ ಹಿನ್ನೆಲೆಯಲ್ಲಿ ಪೃಥ್ವಿ ಭಟ್ ಸುದ್ದಿಯಲ್ಲಿದ್ದು, ಅವರ ಹಳೆಯ ಸಂದರ್ಶನದ ವಿಡಿಯೋಗಳು ಈಗ ಮತ್ತೆ ವೈರಲ್ ಆಗುತ್ತಿದೆ. ಈ ಪೈಕಿ SymphoNy Amps - A Shashi's Music Hub ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಪೃಥ್ವಿ ಭಟ್ ತಾವು ಸರಿಗಮಪ ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದೇಗೆ ಎನ್ನುವುದರ ಕುರಿತು ಮಾತನಾಡಿದ್ದಾರೆ.
'ನಾನು ಬಿಕಾಂ ಮೊದಲ ವರ್ಷದಲ್ಲಿ ಇರುವಾಗ ಸರಿಗಮಪಗೆ ಆಯ್ಕೆಯಾದೆ. ಆದರೆ ಎಲ್ಲರಿಗೂ ಗೊತ್ತಿರುವ ಹಾಗೆ ನಾನು ನನ್ನ ಎರಡನೇ ತರಗತಿಯಲ್ಲಿರುವಾಗಿನಿಂದಲೇ ಸರಿಗಮಪ ವೇದಿಕೆಗೆ ಆಯ್ಕೆಯಾಗಲು ಪ್ರಯತ್ನಿಸುತ್ತಿದ್ದೆ. ಅಂದಿನ ಫೋಟೋ ಕೂಡ ಈಗಲೂ ಇದೆ ನನ್ನ ಹತ್ತಿರ. ನನಗಿಂತ ನನ್ನ ಅಪ್ಪ ಅಮ್ಮನಿಗೆ ನಾನು ಈ ಶೋನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಹೆಚ್ಚಾಗಿತ್ತು' ಎಂದರು.
'ನಾನು ಎರಡನೇ ತರಗತಿಯಲ್ಲಿ ಇರುವಾಗ ನನಗೆ ಸರಿಗಮಪ ಕಾರ್ಯಕ್ರಮದ ವೇದಿಕೆಯ ಬೆಲೆ ಗೊತ್ತಿರಲಿಲ್ಲ. ನನ್ನ ಅಪ್ಪ-ಅಮ್ಮನೇ ನನ್ನನ್ನು ಎಲ್ಲಾ ಆಡಿಷನ್ಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಜೊತೆಗೆ ನಾನು ಹಾಡಿನ ಸ್ಪರ್ಧೆಗಳಿಗೆ ಹೋಗುತ್ತಿದ್ದೆ. ನಾನು ಶಾಲೆಗೆ ಹೋಗುತ್ತಿರುವ ದಿನಗಳಿಂದಲೂ ತುಂಬಾ ಸ್ಪರ್ಧೆಗಳಲ್ಲಿ ನಾನು ಭಾಗವಹಿಸಿದ್ದೆ. ನನ್ನ ಶಿಕ್ಷಕಿ ಗಿರಿಜಾ ಹೆಗ್ಡೆ ಅವರು ನನಗೆ ಹಾಡಿನಲ್ಲಿ ಮುಂದುವರಿಯಲು ತುಂಬಾ ಸಹಾಯ ಮಾಡಿದ್ದಾರೆ'.
'ನಾವು ರಾಷ್ಟ್ರ ಮಟ್ಟದ ಹಾಡಿನ ಸ್ಪರ್ಧೆಗಳಿಗೆ ಹೋಗುತ್ತಿದ್ದೇವು. ಗುಜರಾತ್, ದೆಹಲಿಗೆಲ್ಲಾ ಸ್ಪರ್ಧೆಗಳಿಗೆ ಹೋಗುತ್ತಿದ್ದೇವು. ಅದು ನನ್ನಲ್ಲಿರುವ ಭರವಸೆಯನ್ನು ಹೆಚ್ಚಿಸಿತು. ಸ್ಪರ್ಧೆಗಳಿಗೆ ಹೋಗುವುದರಿಂದ ನನ್ನ ಮನಸ್ಸಿನಲ್ಲಿರುವ ಭರವಸೆಯನ್ನು ಹೆಚ್ಚಾಯಿತು. ಸ್ಪರ್ಧೆಗಳಿಗೆ ಹೋದರೆ ಗೆಲ್ಲಬೇಕು ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದಲ್ಲಾ, ಸ್ಪರ್ಧೆಗಳಿಗೆ ಹೋಗುವುದರಿಂದ ನಮ್ಮಲ್ಲಿನ ಭರವಸೆ ಹೆಚ್ಚಾಗುತ್ತದೆ' ಎಂದು ಹೇಳಿದರು.
'ಸಂಗೀತ ತರಗತಿಗೆ ಹೋಗುವುದು ಒಳ್ಳೆಯದು. ನಮ್ಮ ಜೀವನದಲ್ಲಿ ಒಬ್ಬರು ಗುರು ಅಂತಾ ಬೇಕು. ಆದರೆ ಅದರ ಜೊತೆಗೆ ಹೊರಗಡೆ ಸ್ಪರ್ಧೆಗಳಿಗೆ ಹೋಗಿ ನೋಡಿದಾಗ ಅವರಲ್ಲಿಯೂ ನಮಗೆ ಕಲಿಯಲು ಅವಕಾಶ ಸಿಗುತ್ತದೆ. ಸಂಗೀತ ತರಗತಿಯಲ್ಲಿ ಏನು ಕಲಿಯುತ್ತೇವೋ, ಅದೇ ರೀತಿ ಹೊರಗಡೆ ಸ್ಪರ್ಧೆಗಳಲ್ಲಿಯೂ ನಮಗೆ ಕಲಿಯಲು ಸಿಗುತ್ತದೆ. ನಾನು ಎರಡನೇ ತರಗತಿಯಿಂದ ಸರಿಗಮಪ ವೇದಿಕೆಗಾಗಿ ಪ್ರಯತ್ನ ಪಟ್ಟು ಕೊನೆಗೆ ಸೀಸನ್ 15ಕ್ಕೆ ಆಯ್ಕೆಯಾದೆ. ನಾನು ಆಯ್ಕೆಯಾದ ಕ್ಷಣವನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ' ಎಂದು ಪೃಥ್ವಿ ಭಟ್ ಹೇಳಿದ್ದಾರೆ.
-
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ












Click it and Unblock the Notifications