ಸರಿಗಮಪ ಪ್ರೇರಣೆ: ಯುವ ಗಾಯಕರಿಗೆ ಗುಡ್ನ್ಯೂಸ್ ಕೊಟ್ಟ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್
ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರು ಬೆಂಗಳೂರಿನಲ್ಲಿ ಸಂಗೀತ ಕ್ಲಬ್ ಪ್ರಾರಂಭಿಸಿದ್ದಾರೆ. ವಿಪಿ ಕಲ್ಚರ್ ಕ್ಲಬ್ ಎಂದು ಕರೆಯಲ್ಪಡುವ ಈ ಕೇಂದ್ರವು ಬೆಂಗಳೂರಿನ ಬನಶಂಕರಿಯಲ್ಲಿದೆ. ಇದು ಯುವಕರಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ದೇವರನಾಮಗಳು (ಹರಿದಾಸ ಸಂಪ್ರದಾಯದ ಸಂಯೋಜನೆಗಳು) ಕುರಿತು ಮೊದಲ ಕಾರ್ಯಾಗಾರವು ನಡೆದಿದ್ದು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಇಂದು ನಾನು ಗಳಿಸಿರುವುದೆಲ್ಲವೂ ಸಂಗೀತ ಮತ್ತು ಕಲೆಯಿಂದಾಗಿ. ನಾನು ಕಲಿತಿರುವುದನ್ನು ಸಮಾಜಕ್ಕೆ ಮರಳಿಸುವ ಸಮಯ ಬಂದಿದೆ ಎಂದು ನಾನು ಭಾವಿಸಿದೆ. ಆ ಸಂದರ್ಭದಲ್ಲಿ ನನ್ನ ಪತ್ನಿ ಮಹತಿ (ಗಾಯಕಿಯೂ ಹೌದು) ಮತ್ತು ನಾನು ಕಲೆಯನ್ನು ಕಲಿಯಲು ಮತ್ತು ಕಲಿಸಲು ಉತ್ಸಾಹ ಹೊಂದಿರುವ ಯುವಕರಿಗಾಗಿ ಒಂದು ಕ್ಲಬ್ ಪ್ರಾರಂಭಿಸಲು ನಿರ್ಧರಿಸಿದೆವು ಎಂದು ವಿಜಯ್ ಪ್ರಕಾಶ್ ಅವರು ಹೇಳಿದ್ದಾರೆ ಎಂದು DH ವರದಿ ಮಾಡಿದೆ.

ಇನ್ನು ಈ ಕ್ಲಬ್ 15 ರಿಂದ 20ರ ಗುಂಪುಗಳಿಗೆ ವಿವಿಧ ಪ್ರಕಾರಗಳ ಸಂಗೀತ ಕಾರ್ಯಾಗಾರಗಳನ್ನು ಆಯೋಜಿಸಲಿದೆ. ದಾಖಲಾತಿ ಹೆಚ್ಚಾಗಿ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ನಿಗದಿ ಮಾಡಲಾಗಿದೆ. ಆದ್ಯಾಗೂ ಕೆಲವು ಸಂದರ್ಭಗಳಲ್ಲಿ ಅರ್ಜಿದಾರರನ್ನು ಅವರು ಸಲ್ಲಿಸುವ ಆಡಿಯೊ ಮಾದರಿಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ನಾವು ಈ ಸಂಗೀತ ಕ್ಲಬ್ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಸೀಮಿತ ಅಥವಾ ನಿರ್ದಿಷ್ಟ ಜನರಿಗೆ ಸೀಮಿತವಾಗಿರಿಸಲು ಇಚ್ಛಿಸುತ್ತೇವೆ. ಈ ರೀತಿ ಮಾಡುವುದರಿಂದ ಪ್ರತಿಯೊಬ್ಬರ ಗಾಯಕರಿಗೂ ಸಮಯ ಕೊಡಲು ಸಾಧ್ಯವಾಗಲಿ. ವೈಯಕ್ತಿಕವಾಗಿ ಗಮನ ಕೊಡುವುದಕ್ಕೂ ಸಮಯ ಸಿಗಲಿದೆ ಎಂದು ವಿಜಯ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಯುವ ಗಾಯಕ / ಗಾಯಕಿಯರಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಕ್ಲಬ್ ನೃತ್ಯ ಹಾಗೂ ಇನ್ನಿತರ ಕಲಾ ಪ್ರಕಾರಗಳನ್ನು ಪ್ರಾರಂಭಿಸುವ ಉದ್ದೇಶ ಇದೆ. ಇನ್ನು ಈ ಕಾರ್ಯಾಗಾರಗಳನ್ನು ನಡೆಸಲು ಪರಿಣಿತರನ್ನು ಆಹ್ವಾನಿಸಲಿದ್ದೇವೆ. ಈ ಕಾರ್ಯಾಗಾರಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಉದ್ದೇಶವನ್ನೂ ಹೊಂದಿದೆ.
"ಸ ರಿ ಗ ಮ ಪ" ಕಾರ್ಯಕ್ರಮದ ಜಡ್ಜ್ ಆದ ಸಂದರ್ಭದಲ್ಲಿ ಕರ್ನಾಟಕದಾದ್ಯಂತ ಪ್ರತಿಭಾವಂತ ಗಾಯಕರು ಇದ್ದಾರೆ ಎನ್ನುವ ವಿಷಯವನ್ನು ನಾನು ತಿಳಿದುಕೊಂಡಿದ್ದೇನೆ. ಆದರೆ ಹಲವರಿಗೆ ಸಂಗೀತ ಶಾಲೆಗಳು ಅಥವಾ ಕಲಿಯಲು ಆನ್ಲೈನ್ ಸೌಲಭ್ಯಗಳು ಇಲ್ಲ. ಈ ಕಾರಣಕ್ಕಾಗಿಯೇ ನನ್ನ ಅನುಭವಗಳನ್ನು ಮತ್ತು ಹಿರಿಯರಿಂದ ನಾನು ಕಲಿತದ್ದನ್ನು ಹಂಚಿಕೊಳ್ಳಲು ಕಾರ್ಯಾಗಾರಗಳನ್ನು ನಡೆಸಲು ಮುಂದಾಗಿದ್ದೇನೆ ಎಂದು ಈ ಕ್ಲಬ್ನ ಹಿಂದಿನ ಉದ್ದೇಶವನ್ನು ವಿಜಯ್ ಅವರು ಹಂಚಿಕೊಂಡಿದ್ದಾರೆ.
ಕೃತಕ ಬುದ್ಧಿಮತ್ತೆ (ಎಐ) ಎಲ್ಲವನ್ನೂ ಸಾಧ್ಯವಾಗಿಸುತ್ತಿರುವ ಈ ಸಮಯದಲ್ಲಿ, ಕ್ಲಬ್ ಮೂಲಕ ಜನರು ಭೇಟಿಯಾಗುವ ಮತ್ತು ಸಂಗೀತ ಮತ್ತು ಕಲೆಯ ಕುರಿತು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವ ಹಾಗು ಮುಖ್ಯವಾಗಿ ಜನ ಸಂಪರ್ಕ ಸಾಧಿಸುವುದಕ್ಕೆ ಪ್ರಯತ್ನಿಸುತ್ತಿರುವುದಾಗಿ ವಿಜಯ್ ಪ್ರಕಾಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ತಂತ್ರಜ್ಞಾನ ಮುಖ್ಯ, ಆದರೆ ವೈಯಕ್ತಿಕವಾಗಿ ಮಾತನಾಡಿದಾಗ ಅಥವಾ ವಿಚಾರ ವಿನಿಮಯ ಮಾಡಿಕೊಂಡ ಸಂದರ್ಭದಲ್ಲಿ ಕಲೆ ಹೆಚ್ಚು ಸುಂದರವಾಗಿರುತ್ತದೆ ಎಂದಿದ್ದಾರೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications