"ಸಿನಿಮಾ ನೋಡಿ ನಿಮ್ಮ ಗಂಟೇನೂ ಹೋಗಲ್ಲ": ರವಿಚಂದ್ರನ್ ಹತಾಶೆ ಬಗ್ಗೆ ಅನುಕಂಪವಿದೆ ಎಂದ ಕನ್ನಡಿಗರು
ನಟ, ನಿರ್ದೇಶಕ ರವಿಚಂದ್ರನ್ ಅವರು ಕನ್ನಡಿಗರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡದೆ ಇರುವ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರವಿಚಂದ್ರನ್ ಅವರ ಹೇಳಿಕೆಯು ಹಲವು ಆಯಾಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ರವಿಚಂದ್ರನ್ ಅವರು ಹೇಳಿದ್ದೇನು, ಇದಕ್ಕೆ ಕನ್ನಡಿಗರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ನಟಿ ರವಿಚಂದ್ರನ್ ಅವರು, ಸಿನಿಮಾಗಳು ಬಿಡುಗಡೆ ಆಗುತ್ತಲ್ಲೇ ಇವೆ. ಆದರೆ, ಒಳ್ಳೆ ಸಿನಿಮಾಗಳನ್ನು ನೀವು (ಜನರು) ಗೆಲ್ಲಿಸುತ್ತಿಲ್ಲ. ಎಲ್ಲರೂ ಮೊಬೈಲ್ಗಳಲ್ಲಿ ಕಳೆದು ಹೋಗಿದ್ದೀರ. ಅದನ್ನ ಬಿಟ್ಟು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ. ಒಬ್ಬ ಪ್ರೇಕ್ಷಕನಿಗೆ 100 ರೂಪಾಯಿ ಕೊಟ್ಟು ಸಿನಿಮಾ ನೋಡುವುದಕ್ಕೆ ಆಗಲ್ವಾ. ನಿಮಗೆ ಸಿನಿಮಾಗೋಸ್ಕರ ನೂರು ರೂಪಾಯಿ ಖರ್ಚು ಮಾಡೋಕೆ ಆಗುವುದಿಲ್ಲವೇ ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ 100 ರೂಪಾಯಿ ಕೊಟ್ಟು ಸಿನಿಮಾ ನೋಡಿ, ಅದರಿಂದ ನಿಮ್ಮ ಗಂಟೇನೂ ಹೋಗಲ್ಲ ಅಂತನೂ ಅವರು ಹೇಳಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿರುವ ವಿಚಾರ. ಇದಕ್ಕೆ ಕನ್ನಡಿಗರು ತುಸು ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಅಮರನಾಥ್ ಶಿವಶಂಕರ್ ಎನ್ನುವವರು, ನಟ ನಿರ್ದೇಶಕ ಕನಸುಗಾರ ರವಿಚಂದ್ರನ್ ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬಂದು ಸಿನಿಮಾ ನೋಡಿ, 100 ರೂಪಾಯಿ ತಾನೇ ಖರ್ಚು ಮಾಡಿ, ಏನು ಗಂಟು ಹೋಗಲ್ಲ ಅಂತ ಹೇಳಿದ್ದಾರೆ. ಅವರ ಮಾತಿನ ಒಳಾರ್ಥ ನಮಗೆ ತಿಳಿಯುತ್ತದೆ. ಚಿತ್ರರಂಗವನ್ನು ಪ್ರೇಕ್ಷಕರು ಬೆಂಬಲಿಸದೆ ಹೋದರೆ ಚಿತ್ರರಂಗ ನೆಲಕಚ್ಚುತ್ತದೆ ಅನ್ನುವುದು ಅವರ ಮಾತಿನ ಅರ್ಥ.
ಆದರೆ ವರ್ಷಕ್ಕೆ 200 ಚಿತ್ರಗಳು ಬಂದಾಗ ಪ್ರೇಕ್ಷಕರು ಅಷ್ಟೂ ಚಿತ್ರಗಳನ್ನು ಬೆಂಬಲಿಸುವುದು ಕಷ್ಟ. ಸಿನಿಮಾ ಅಭಿಮಾನಿಗಳು ವರ್ಷಕ್ಕೆ 10-15 ಸಿನಿಮಾಗಳು ನೋಡುವುದು ಸಹಜ. ಅದಕ್ಕೆ ಅವರು ಖರ್ಚು ಮಾಡುವ ಸಮಯಕ್ಕೆ, ಹಣಕ್ಕೆ ತಕ್ಕ ಮನರಂಜನೆ ಬೇಕಿರುತ್ತದೆ. ಸಾಲು ಸಾಲು ಕೆಟ್ಟ ಚಿತ್ರಗಳು ಬಂದಾಗ ಮಧ್ಯದಲ್ಲಿ ಒಂದೊಳ್ಳೆ ಚಿತ್ರ ಕಳೆದುಹೋಗುವುದು ನೋವುಂಟು ಮಾಡಿದರೂ ಹಾಗಾಗುವುದಕ್ಕೆ ಪ್ರೇಕ್ಷರಲ್ಲಿಯೂ ಆಗಿರುವ ನಿರಾಸೆ ಕಾರಣ.
ರವಿಚಂದ್ರನ್ ಅವರನ್ನೇ ತೆಗೆದುಕೊಂಡರೆ ದೃಶ್ಯ ಭಾಗ 1 ಮತ್ತು 2 ಅವರ ಇತ್ತೀಚಿನ ವರ್ಷಗಳಲ್ಲಿ ಬಂದ ಉತ್ತಮ ಕೌಟುಂಬಿಕ ಚಿತ್ರಗಳು. ಅವೆರಡೂ ರೀಮೇಕ್ ಚಿತ್ರಗಳು ಅನ್ನುವುದು ಬೇರೆ ವಿಚಾರ. ಉಳಿದೆಲ್ಲವೂ ಪ್ರೇಕ್ಷರನ್ನು ಸೆಳೆಯಲು ಸೋತಿವೆ. ನಿರ್ಮಾಪಕರ ಸ್ಥಿತಿ ಕೇಳುವಂತಿಲ್ಲ. ಪ್ರೇಕ್ಷಕರಿಗೆ ಮನೆಯಲ್ಲೇ ಕೂತು ಪ್ರಯೋಗ ಮಾಡುವ ಅವಕಾಶ ಇಂದಿದೆ. ಒಂದು ಚಿತ್ರ ಓಟಿಟಿ ಯಲ್ಲಿ ಶುರು ಮಾಡಿ ಇಷ್ಟವಾಗಿಲ್ಲವೆಂದರೆ ತಕ್ಷಣ ಬದಲಿಸುವ ಆಯ್ಕೆ ಇದೆ. ಹೀಗಿದ್ದಾಗ ಚಿತ್ರಮಂದಿರಕ್ಕೆ ಕರೆದೊಯ್ಯಲು ನಿಜಕ್ಕೂ ಉತ್ತಮ ಚಿತ್ರ, ಅತ್ಯುತ್ತಮ ವರ್ಡ್ ಆಫ್ ಮೌತ್ ಬೇಕಿದೆ. ಭಾವನಾತ್ಮಕವಾಗಿ ಪ್ರೇಕ್ಷರನ್ನು ಕರೆಸುವ ಕಾಲ ಇದಲ್ಲ. ರವಿಚಂದ್ರನ್ ಅವರ ಹತಾಶೆಯ ಬಗ್ಗೆ ಅನುಕಂಪವಿದೆ. ಆದರೆ ಚಿತ್ರರಂಗದವನ್ನು ಮತ್ತೆ ಜೀವಂತವಾಗಿಸಲು ಉತ್ತಮ ಚಿತ್ರಗಳಷ್ಟೇ ಬೇಕಿರುವುದು.
ಹೋಟೆಲ್ನಲ್ಲಿ ಊಟ ಚೆನ್ನಾಗಿಲ್ಲ, ಹೋಟೆಲ್ ಮಾಲೀಕರ ಧೋರಣೆ ಸರಿಯಿಲ್ಲ ಎಂದರೆ ಎಷ್ಟೇ ಹೊಟ್ಟೆ ಹಸಿಸಿದಿದ್ದರೂ ಜನ ಅಲ್ಲಿಗೆ ಹೋಗುವುದಿಲ್ಲ. ನಮ್ಮ ಅಡುಗೆ ಇರುವುದೇ ಹೀಗೆ ಸುಮ್ಮನೆ ಬಂದು ತಿಂದು ನಮ್ಮನ್ನು ಬೆಂಬಲಿಸಿ ಅಂದರೆ ಯಾರು ತಾನೇ ಬೆಂಬಲಿಸಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ರವಿಚಂದ್ರನ್ ಅವ್ರೇ,
— ಅಲ್ಪಸಂಖ್ಯಾತ (@alpasankhyata) February 18, 2026
ಸಿನಿಮಾ ಚೆನ್ನಾಗಿದ್ರೆ ಪ್ರೇಕ್ಷಕ 100 ರೂಪಾಯಿ ಅಲ್ಲಾ, 1000 ಕೊಟ್ಟೂ ಕೂಡ ಥಿಯೇಟರ್ ಗೆ ಬರ್ತಾನೆ,
ಕಥೆ ಹಾಗೂ ನಟನೆ ಇಷ್ಟ ಆದ್ರೆ ತನ್ನ ಸ್ವಂತ ದುಡ್ಡಲ್ಲಿ ಕಟೌಟ್ ನಿಲ್ಲಿಸ್ತಾನೆ, ಹಾಲಿನ ಅಭಿಷೇಕ ಮಾಡ್ತಾನೆ
ಆದರೆ ಸಿನಿಮಾ ಇಷ್ಟ ಆಗಿಲ್ಲ ಅಂದ್ರೆ ಫ್ರೀ ಆಗಿ ಟಿಕೆಟ್ ಕೊಟ್ರೂ ಬರಲ್ಲ... ಇದು ರಿಯಾಲಿಟಿ #KFI pic.twitter.com/0ujxjQ8Yrx
ರವಿಚಂದ್ರನ್ ಅವರೇ ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕ 100 ರೂಪಾಯಿ ಅಲ್ಲಾ, 1000 ಕೊಟ್ಟೂ ಕೂಡ ಥಿಯೇಟರ್ಗೆ ಬರ್ತಾನೆ. ಕಥೆ ಹಾಗೂ ನಟನೆ ಇಷ್ಟವಾದರೆ ತನ್ನ ಸ್ವಂತ ದುಡ್ಡಲ್ಲಿ ಕಟೌಟ್ ನಿಲ್ಲಿಸ್ತಾನೆ. ಹಾಲಿನ ಅಭಿಷೇಕ ಮಾಡ್ತಾನೆ. ಆದರೆ ಸಿನಿಮಾ ಇಷ್ಟ ಆಗಿಲ್ಲ ಎಂದರೆ ಫ್ರೀ ಆಗಿ ಟಿಕೆಟ್ ಕೊಟ್ಟರೂ ಬರಲ್ಲ. ಇದು ರಿಯಾಲಿಟಿ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ













Click it and Unblock the Notifications