ಚೆನ್ನೈ ಬಂದರಿನ 100 ಕೂಲಿಗಳಿಗೆ ಒನ್ಇಂಡಿಯಾದಿಂದ "ಕೂಲಿ" ಸಿನಿಮಾ ವೀಕ್ಷಣೆಗೆ ವ್ಯವಸ್ಥೆ
ನಟ ರಜನಿಕಾಂತ್ ಅಭಿನಯದ "ಕೂಲಿ" ಸಿನಿಮಾ ತೆರೆ ಮೇಲೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆ ಒನ್ ಇಂಡಿಯಾ ಇದೇ ಮೊದಲ ಬಾರಿಗೆ ಚೆನ್ನೈ ಬಂದರಿನಲ್ಲಿ ಕೆಲಸ ಮಾಡುವ 100 ಕೂಲಿಗಳನ್ನು ತನ್ನ 50 ಓದುಗರೊಂದಿಗೆ ಬಹುನಿರೀಕ್ಷಿತ "ಕೂಲಿ" ಸಿನಿಮಾದ ವಿಶೇಷ ಪ್ರದರ್ಶನಕ್ಕಾಗಿ ಕರೆತರುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಸಿನಿಮಾ ಪ್ರದರ್ಶನವನ್ನು ನಿಜ ಜೀವನದ ನಾಯಕರ ಸಂಭ್ರಮಾಚರಣೆಯಾಗಿ ಬದಲಾಯಿಸಿದೆ.
"ಚೆನ್ನೈ ಬಂದರಿನಿಂದ ದೊಡ್ಡ ಪರದೆಯವರೆಗೆ" (From Chennai Harbour to the Big Screen) ಎಂಬ ವಿಶೇಷ ಅಭಿಯಾನದ ಮೂಲಕ ತೆರೆಯ ಮೇಲಿನ ಮತ್ತು ನಿಜಜೀವನದ "ಕೂಲಿ"ಗಳನ್ನು ಒಂದು ವೇದಿಕೆಯಡಿ ಒಗ್ಗೂಡಿಸುವ ಪ್ರಯತ್ನ ಮಾಡಿದೆ. ನಿಜವಾದ ಕೂಲಿಗಳು ಹಾಗೂ ತಮ್ಮ ಕುರಿತಾದ ಕೂಲಿ ಸಿನಿಮಾದ ನಡುವೆ ಸೇತುವೆಯಾಗಲು ಈ ಅಭಿಯಾನವನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿನಿತ್ಯವೂ ಶ್ರಮ ಪಡುವ ಕೂಲಿಗಳನ್ನು ಗೌರವಾನ್ವಿತ ಅತಿಥಿಗಳಾಗಿ ಈ ಸಿನಿಮಾ ವೀಕ್ಷಿಸಲು ಆಹ್ವಾನಿಸಲಾಯಿತು. ಸ್ಪರ್ಧೆಯ ಮೂಲಕ 50 ಮಂದಿ ಓದುಗರು ಕೂಡ ಈ ಸಿನಿಮಾ ಪ್ರದರ್ಶನಕ್ಕೆ ಜೊತೆಯಾಗಿದ್ದಾರೆ. ಈ ಅಭಿಯಾನವನ್ನು ಸಂತೋಷ ಮತ್ತು ಗೌರವದ ಕ್ಷಣವಾಗಿ ಯಶಸ್ವಿಯಾಗಿ ಪರಿವರ್ತಿಸಿದರು.

"ಒನ್ಇಂಡಿಯಾದಲ್ಲಿ, ನಾವು ಪರದೆಯ ಮೇಲೆ ಹೇಳಲಾಗುವ ಕಥೆಗಳ ಶಕ್ತಿಯನ್ನು ಮಾತ್ರವಲ್ಲದೆ, ಪ್ರತಿದಿನ ಮೌನವಾಗಿ ಬದುಕುವ ಕಥೆಗಳ ಶಕ್ತಿಯನ್ನು ಕೂಡ ನಂಬುತ್ತೇವೆ. ಚೆನ್ನೈ ಬಂದರಿನ ಕೂಲಿಗಳು ಮತ್ತು ನಮ್ಮ ಓದುಗರನ್ನು ಕೂಲಿ ಸಿನಿಮಾ ಪ್ರದರ್ಶನಕ್ಕಾಗಿ ಒಟ್ಟುಗೂಡಿಸುವ ಮೂಲಕ ಸಿನಿಮಾವನ್ನು ಆಚರಿಸುವಾಗ ನಾವು ಕೂಲಿ ಕೆಲಸ ಮಾಡುವ ನಿಜವಾದ ವೀರರ ಕುರಿತು ಬೆಳಕು ಚೆಲ್ಲಲು ಬಯಸಿದ್ದೇವೆ. ಇದು ನಿಜ ಜೀವನ, ನೈಜ ಹೋರಾಟಗಳು ಮತ್ತು ನೈಜ ಭಾರತವನ್ನು ಗೌರವಿಸುವ ನಮ್ಮ ವಿಧಾನ ಎಂದು ಒನ್ಇಂಡಿಯಾದ ಸಿಇಒ ರಾವಣನ್ ಎನ್. ವಿವರಿಸಿದ್ದಾರೆ.
ಚಿತ್ರಮಂದಿರವು ಕೇವಲ ಚಪ್ಪಾಳೆಗಳೊಂದಿಗೆ ಮಾತ್ರ ಪ್ರತಿಧ್ವನಿಸಲಿಲ್ಲ. ಅದು ಹೃದಯಸ್ಪರ್ಶಿಯಾದ ಪ್ರತಿಕ್ರಿಯೆಗಳು, ಕೃತಜ್ಞತೆಯ ಭಾವನೆಗಳು ಮತ್ತು ಹಬ್ಬದ ಸಂಭ್ರಮವನ್ನು ಹಂಚಿಕೊಂಡ ಸಾಮೂಹಿಕ ಮನೋಭಾವದಿಂದ ತುಂಬಿತ್ತು. ಪ್ರಮುಖ ದೃಶ್ಯಗಳಲ್ಲಿ ಕೇಳಿದ ಹರ್ಷೋದ್ಗಾರಗಳಿಂದ ಹಿಡಿದು ಆ ಪ್ರದರ್ಶನವು ಸಿನಿಮಾ ಮತ್ತು ನಿಜ ಜೀವನದ ಹೀರೋಗಳ ನಡುವಿನ ಆಳವಾದ ಭಾವನಾತ್ಮಕ ಬಾಂಧವ್ಯವನ್ನು ಪ್ರತಿಬಿಂಬಿಸಿತು.

ಈ ವಿಶಿಷ್ಟ ಅಭಿಯಾನದ ಮೂಲಕ ಒನ್ಇಂಡಿಯಾ ಒನ್ಇಂಡಿಯಾ ಮನರಂಜನೆಗೆ ಸಹಾನುಭೂತಿ, ಗೌರವಕ್ಕೆ ವ್ಯಾಪ್ತಿ ಮತ್ತು ಕಥನಕ್ಕೆ ಸಾಮಾಜಿಕ ಪರಿಣಾಮವನ್ನು ಬೆರೆಸುವ ತನ್ನ ಸಾಮರ್ಥ್ಯವನ್ನು ಮತ್ತೆ ತೋರಿಸಿದೆ. ಒಂದು ಸಿನಿಮಾ ಬಿಡುಗಡೆ ಕೇವಲ ಪ್ರಚಾರವಷ್ಟೇ ಅಲ್ಲದೆ, ಸ್ವತಃ ಒಂದು ಕಥೆಯಾಗಿ ರೂಪುಗೊಳ್ಳಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.
-
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
ಲವ್ ಮಾಕ್ಟೇಲ್ 3 ವಿವಾದ: ನನ್ನ ಕಥೆಯ ದ್ವಿತೀಯಾರ್ಧ ನಕಲು: ಸಿನಿಮಾ ಬರಹಗಾರರೇ ಎಚ್ಚರ ಎಂದ ನಿರ್ದೇಶಕ ರಾಘವೇಂದ್ರ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ











Click it and Unblock the Notifications