Mokshitha Pai: ಟ್ರಿಪ್ ಮೂಡ್ನಲ್ಲಿ ಮೋಕ್ಷಿತಾ ಪೈ: ಹೋಗಿದ್ದು ಎಲ್ಲಿಗೆ?
ಬಿಗ್ಬಾಸ್ ಕನ್ನಡ ಸೀಸನ್ 11 ಖ್ಯಾತಿಯ ಮೋಕ್ಷಿತಾ ಪೈ ಸದ್ಯ ಟ್ರಿಪ್ ಮೂಡ್ನಲ್ಲಿ ಇದ್ದಾರೆ. ಬೇಸಿಗೆ ಬಿಸಿಲಿಗೆ ಕೂಲ್ ಆಗಿರುವ ರೆಸಾರ್ಟ್ಗೆ ತೆರಳಿ ಮಜಾ ಮಾಡುತ್ತಿದ್ದಾರೆ. ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಮೋಕ್ಷಿತಾ. ಹಾಗಾದರೆ ಮೋಕ್ಷಿತಾ ಹೋಗಿದ್ದು ಎಲ್ಲಿಗೆ?
ಮೋಕ್ಷಿತಾ ಪೈ ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ತನ್ನ ಗೆಳತಿ ಮಾನ್ಸಿ ಜೋಷಿ ಮದುವೆ ಕಾರ್ಯಕ್ರಮದಲ್ಲಿ ತುಂಬಾನೇ ಬ್ಯೂಸಿ ಆಗಿದ್ದರು. ಮನೆ, ಸಿನಿಮಾ ಅಂತ ಬಿಡುವಿಲ್ಲದೆ ಕೆಲಸದಲ್ಲಿ ನಿರತರಾಗಿದ್ದ ಮೋಕ್ಷಿತಾ ಬಿಗ್ಬಾಸ್ ಸಹ ಸ್ಪರ್ಧಿ ರಂಜಿತ್ ನಿಶ್ಚಿತಾರ್ಥದಲ್ಲಿ ಭಾಗಿಯಾಗಿ ಸರ್ಪೈಸ್ ಕೊಟ್ಟಿದ್ದರು. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಅವರು ಪ್ರವಾಸಕ್ಕೆ ತೆರಳಿದ್ದು ಪ್ರವಾಸದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

ಹೌದು.. ಬಿಗ್ಬಾಸ್ ಮನೆಯಲ್ಲಿ ಗೆಲ್ಲುವ ಕುದುರೆ ಆಗಿ ಜನಮನ ಗೆದ್ದ ಮೋಕ್ಷಿತಾ ಪೈ ತಮ್ಮ ಸ್ನೇಹಿತರೊಂದಿಗೆ ಕೇರಳ ತೆರಳಿದ್ದಾರೆ. ಕೇರಳದಲ್ಲಿ ಒಂದೊಳ್ಳೆ ನೇಚರ್ ಇರುವ ರೆಸಾರ್ಟ್ನಲ್ಲಿ ಸ್ಟೈ ಮಾಡಿ, ಅಲ್ಲಿ ಫೋಟೋ ಶೂಟ್ ಮಾಡಿ ಖುಷಿ ಪಟ್ಟಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರೊಂದಿಗೆ ಟ್ರಕ್ಕಿಂಗ್ ಹೋಗಿ ನೇಚರ್ ಅನ್ನು ಎಂಜಾಯ್ ಮಾಡಿದ್ದಾರೆ ಮೋಕ್ಷಿತಾ.
ಮೋಕ್ಷಿತಾ ಪೈ ಮುಂದಿನ ಸಿನಿಮಾ
ಇನ್ನೂ ಮೋಕ್ಷಿತಾ ಪೈ ಪಾರು ಧಾರಾವಾಹಿ ಮೂಲಕ ಮನೆಮಾತಾದ ನಟಿ. ಇದೀಗ ಅವರು ಸಿನಿಮಾವೊಂದರಲ್ಲಿ ನಾಯಕ ನಟಿಯಾಗಿ ಪಾತ್ರ ಮಾಡುತ್ತಿದ್ದಾರೆ. ಅವರ ಮೊದಲ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರೀ ಕುತೂಹಲ ಮೂಡಿದೆ. 'ಮಿಡಲ್ ಕ್ಲಾಸ್ ರಾಮಾಯಣ' ಸಿನಿಮಾ ಮೂಲಕ ಮೊದಲ ಬಾರಿಗೆ ಮೋಕ್ಷಿತಾ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಈ ಸಿನಿಮಾದಲ್ಲಿ ಮೋಕ್ಷಿತಾ ಕಪ್ಪು ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರ ತಂಡ ಯಾವುದೇ ಅಪ್ಡೇಟ್ ಕೊಟ್ಟಿಲ್ಲ.

ಇತ್ತೀಚೆಗೆ ಮೋಕ್ಷಿತಾ ಐಶ್ವರ್ಯ ಹಾಗೂ ಶಶಿರ್ ಶಾಸ್ತ್ರಿ ಜೊತೆಗೆ ಮೋಕ್ಷಿತಾ ಪ್ರವಾಸ ಕೈಗೊಂಡಿದ್ದರು. ಅಲ್ಲದೆ ಇತ್ತೀಚೆಗಷ್ಟೇ ತಮ್ಮ ಸಂಬಂಧಿಕರೊಬ್ಬರ ಮದುವೆಗೆ ನಟಿ ಮೋಕ್ಷಿತಾ ಪೈ ಭೇಟಿ ಮಾಡಿದ್ದರು. ಕಸಿನ್ ವೆಡ್ಡಿಂಗ್ನಲ್ಲಿ ಮಿಂಚಿನ ಮೋಕ್ಷಿತಾ ಪೈ ಅವರಿಗೆ 'ನಿಮ್ಮ ಮದುವೆ ಯಾವಾಗ?' ಎಂದು ಫ್ಯಾನ್ಸ್ ಕಾಮೆಂಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದರು.
ಆದರೆ ಈ ಬಗ್ಗೆ ಮೋಕ್ಷಿತಾ ಯಾವುದೇ ಅಪ್ಡೇಟ್ ಕೊಟ್ಟಿಲ್ಲ. ಯಾಕೆಂದರೆ ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ನೀಡಿದ ಸಂದರ್ಶನದಲ್ಲೂ ಮೋಕ್ಷಿತಾ ಪೈಗೆ ಮದುವೆ ಬಗ್ಗೆ ಕೇಳಿದಾಗ ಅವರು, 'ತಮಗೆ ಸಾಕಷ್ಟು ಹೊಣೆಗಾರಿಕೆ ಇದೆ. ನನ್ನ ಸಹೋದರ, ಕುಟುಂಬ ಎಲ್ಲವನ್ನು ನಿಭಾಯಿಸಬೇಕು. ಹೀಗಾಗಿ ನಾನು ಸದ್ಯ ಮದುವೆ ಬಗ್ಗೆ ಯೋಚನೆ ಮಾಡಿಲ್ಲ' ಎಂದಿದ್ದರು.
ಅಲ್ಲದೆ ತಮಗೆ ತಮ್ಮನ್ನು ಮದುವೆ ಆಗುವ ಹುಡುಗ ತಮ್ಮನ್ನು ಅರ್ಥ ಮಾಡಿಕೊಳ್ಳುವರು ಆಗಿರಬೇಕು. ತಮ್ಮ ಎಲ್ಲಾ ವಿಚಾರಗಳನ್ನು ಹುಡುಗ ತಿಳಿದಿರಬೇಕು. ಇದಿಷ್ಟೆ ನನಗಿರುವ ಆಸೆ ಎಂದು ಮೋಕ್ಷಿತಾ ಸಂದರ್ಶನವೊಂದರಲ್ಲಿ ಹೇಳಿದ್ದರು.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications