ಕಿತ್ತೋದ್ ನನ್ನ ಮಕ್ಳು, ಪ್ಯಾಂಟ್ ಬಿಚ್ಚಿ ತೋರಿಸೋಕೆ ಆಗುತ್ತಾ?: ನಟ ಕಿಚ್ಚ ಸುದೀಪ್
Kiccha Sudeep: ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರ ನಟನೆಯ ಮಾರ್ಕ್ ಸಿನಿಮಾ ಡಿಸೆಂಬಂರ್ 25ರಂದು ರಾಜ್ಯಾದ್ಯಂತ ತೆರೆ ಕಂಡಿದೆ. ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಯಶಸ್ಸಿಯ ಹಾದಿಯಲ್ಲಿ ಹೊರಟಿದೆ. ಈ ನಡುವೆಯೇ ಇದೀಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಟೀಕೆಗಳ ಕುರಿತು ರಗಡ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ, ಏನೆಲ್ಲಾ ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಗೂ ಮಗಳ ಮೇಲೆ ಬಂದಿರುವ ಟೀಕೆಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುದೀಪ್ ಅವರು, "ಟೀಕೆ ಮಾಡುವವರ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಮಗಳು ನನಗಿಂತಲೂ ಹೆಚ್ಚು ಸ್ಟ್ರಾಂಗ್. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾಳೆ. ನಾನು ಜೀವನದಲ್ಲಿ ಎದುರಿಸಿದ ಸಮಸ್ಯೆಗಿಂತ ಹೆಚ್ಚು ಫೇಸ್ ಮಾಡುತ್ತಾಳೆ ಎಂಬ ವಿಶ್ವಾಸ ನನಗಿದೆ. ಅವಳಿಗೆ ನನಗಿಂತ ಹತ್ತು ಪಟ್ಟು ಒಳ್ಳೆಯ ಮನಸಿದೆ," ಎಂದು ಹೇಳಿದರು.

ಸಮಯ ವ್ಯರ್ಥ ಮಾಡೋದು ಬೇಡ: "ಈಗಾಗಲೇ ಅವರು ಚಿತ್ರದಲ್ಲಿ ಹಾಡಿರುವ ಹಾಡನ್ನು ಅಭಿಮಾನಿಗಳು, ಸ್ನೇಹಿತರು ಇಷ್ಟ ಪಟ್ಟಿದ್ದಾರೆ. ಇನ್ನೂ ಕಿತ್ತೋದ್ ನನ್ ಮಕ್ಕಳ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ. ಬದಲಾಗಿ ಬಾಳಿ, ಬದುಕಬೇಕಿರುವ ಒಳ್ಳೊಳ್ಳೆ ಕನ್ನಡಿಗರ ಬಗ್ಗೆ ಮಾತನಾಡೋಣ," ಎಂದು ನಟ ಕಿಚ್ಚ ಸುದೀಪ್ ಅವರು ಹೇಳಿದರು.
ಟೀಕೆಗಳ ಬಗ್ಗೆ ಪ್ರತಿಕ್ರಿಯೆ: ಇಂಟಲಿಜೆನ್ಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, "ಬಿಟ್ಟುಕೊಡೋದೇ ದಡ್ಡತನ. ನನ್ ಇಂಟೆಲಿಜೆನ್ಸ್ ಬಗ್ಗೆ ನಾನು ಯಾಕೆ ಮಾತನಾಡಲಿ. ನಮ್ಮ ಟ್ರೂಫ್ಗೆ ನಾವು ಇಂಟಲಿಜೆನ್ಸ್ ಅಂತಾ ಕರೆಯುತ್ತೇವೆ. ಹಾಗಂತ ಇಂಟೆಲಿಜೆನ್ಸ್ ಬಗ್ಗೆ ಸಿಲ್ಲಿಯಾಗಿ ಮಾತನಾಡುವುದಿಲ್ಲ. ಟೀಕೆ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರೋ ಒಬ್ಬರು ಹೇಳುತ್ತಾರೆ ಸುದೀಪ್ ಅವರು ಪ್ಯಾಂಟ್ ಬಿಟ್ಟು ಬೇರೆ ಏನು ಹಾಕುವುದಿಲ್ಲ ಅಂತಾ. ಬಿಚ್ಚಿ ತೋರಿಸುವುದಕ್ಕೆ ಆಗುತ್ತಾ? ಹಾಗೇಯೇ ಯಾವುದೇ ಟೀಕೆಗಳಿಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ," ಎಂದು ಹೇಳಿದರು.
ದಾಖಲೆ ಇಲ್ಲದಿದ್ರೆ ಆರೋಪ ಮಾಡ್ಬೇಡಿ: "ನನ್ನ ಕಾರಲ್ಲಿ ಇಂಟಲಿಜೆಂಟ್ ಜನರಿದ್ದರು. ಇಂಟಲಿಜೆನ್ಸ್ ಅಲ್ಲ, ಇಂಟೆಲಿಜೆನ್ಸ್ ಬಂದಿರುವುದು ಮಾಧ್ಯಮದಿಂದನೇ ಇರಬಹುದು. ನಿಮ್ಮಲ್ಲೇ ಕೂತಿರುವ ಯಾರಾದರೂ ವ್ಯಕ್ತಿ ನನ್ನ ವಿರುದ್ಧ ಆರೋಪ ಮಾಡಬೇಕಾದರೆ, ದಾಖಲೆ ಸಮೇತ ಇರಬೇಕು. ನಾವು ಯಾವುದೇ ಟೀಕೆಗಳ ಬಗ್ಗೆ ಮಾತಾಡದೇ, ಸರಿಯಾದ ಸೆಲೆಬ್ರೇಶನ್, ಸಿನಿಮಾ, ಪ್ರೋತ್ಸಾಹ ಕೊಡುವವರ ಕುರಿತು ಮಾತನಾಡೋಣ," ಎಂದು ಹೇಳಿದರು.
ಪೈರಸಿ ಕುರಿತು ಮಾತನಾಡಿದ ಅವರು, "ಮೊದಲ ದಿನ ಮತ್ತು ಎರಡನೇ ದಿನ ಸೇರಿ ಸುಮಾರು 4,000ಕ್ಕೂ ಅಧಿಕ ಪೈರಸಿ ಲಿಂಕ್ಗಳನ್ನು ಡಿಲೀಟ್ ಮಾಡಿಸಿದ್ದೇವೆ. ಒಟ್ಟಾರೆ 9,000ಕ್ಕೂ ಅಧಿಕ ಲಿಂಕ್ಗಳನ್ನು ಡಿಲೀಟ್ ಮಾಡಿಸಲಾಗಿದೆ. ಕಳೆದ ಬಾರಿ ಕೆಲವು ವ್ಯಕ್ತಿಗಳನ್ನು ಹಿಡಿದಿದ್ದೆವು. ಈ ಬಾರಿ ಬಿಡುವ ಮಾತೇ ಇಲ್ಲ. ಮೊದಲು ಪೈರಸಿ ಅಡಗಿಕೊಂಡು ನಡೆಯುತ್ತಿತ್ತು, ಈಗ ಚಾಲೆಂಜ್ ಹಾಕಿಕೊಂಡೇ ಮಾಡುತ್ತಿದ್ದಾರೆ. ಪೈರಸಿ ಎನ್ನುವ ವಿಚಾರ ಬಂದಾಗ ಸರ್ಕಾರವೂ ಮಧ್ಯಪ್ರವೇಶ ಮಾಡಬೇಕು. ಇದಕ್ಕೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವದು ಅಗತ್ಯವಿದೆ," ಎಂದು ಹೇಳಿದರು.
ಮಾರ್ಕ್ ಚಿತ್ರ ಸೇಫ್ ಆಗಿದ್ದು, ನಿರ್ಮಾಪಕರು ಸೇಫ್ ಆಗಿದ್ದಾರೆ. ಇದರಿಂದ ಎಲ್ಲರೂ ಸಂತಸಗೊಂಡಿದ್ದಾರೆ. ಹಾಗಂತ ವಿತರಕರ ಕಾರ್ತಿಕ್ ಮುಖ ನೋಡಿ ಜಡ್ಜ್ ಮಾಡಬೇಡಿ. ಅವರ ಮುಖ ಇರುವುದೇ ಇದೆ. ಚಿತ್ರ ಸಕ್ಸಸ್ ಆದರೂ ಆಗಿಯೇ ಇರುತ್ತದೆ. ಸೋತರೂ ಅದೇ ರೀತಿಯೇ ಇರುತ್ತದೆ. ಬಿಡುಗಡೆಗೂ ಮುನ್ನವೇ ಎಲ್ಲರೂ ಸೇಫ್ ಆಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಸುದೀಪ್ ಅವರು ಪ್ರೆಸ್ ಮೀಟ್ನಲ್ಲಿ ಹೇಳಿದ್ದಾರೆ. ಈ ಮೂಲಕ ಚಿತ್ರದ ಯಶಸ್ಸನ್ನು ಬಿಚ್ಚಿಟ್ಟಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications