Ayodhya: ಕನ್ನಡ ಕಿರುತೆರೆಯಲ್ಲಿ ಮೊದಲ ಪ್ರಯೋಗ: ಅಯೋಧ್ಯೆ ರಾಮಮಂದಿರದಲ್ಲಿ ಈ ಧಾರಾವಾಹಿ ತಂಡ
ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಒಂದಕ್ಕಿಂತ ಒಂದು ಉತ್ತಮ ಧಾರಾವಾಹಿಗಳು ಬರುತ್ತಿದ್ದು, ವೀಕ್ಷಕರನ್ನು ಸೆಳೆಯಲು ಧಾರಾವಾಹಿ ತಂಡ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ವಿಭಿನ್ನವಾದ ಕಥೆ, ಪ್ರೇಕ್ಷಕರಿಗೆ ಪ್ರಿಯವಾಗುವ ನಟ-ನಟಿಯರು, ವಿಶೇಷ ಸಂಚಿಕೆಗಳು, ಮಹಾ ಸಂಚಿಕೆಗಳು, ಎರಡು ಧಾರಾವಾಹಿಗಳ ಸಮ್ಮಿಲನ, ವಿಶೇಷ ಸ್ಥಳಗಳಲ್ಲಿ ಚಿತ್ರೀಕರಣ ಹೀಗೆ ಒಂದಾದ ಮೇಲೊಂದು ಹೊಸ ಪ್ರಯತ್ನ ಮಾಡುತ್ತಿದ್ದಾರೆ.
ರಿಯಾಲಿಟಿ ಶೋಗಳ ಅಬ್ಬರದ ನಡುವೆ ಧಾರಾವಾಹಿಗಳು ಕೂಡ ಅತ್ಯಾಕರ್ಷಕವಾಗಿ ಮೂಡಿ ಬರುತ್ತಿದ್ದು, ಕಿರುತೆರೆ ಪ್ರೇಕ್ಷಕರಿಗೆ ಪ್ರತಿ ದಿನವೂ ಹಬ್ಬದೂಟ. ಹೀಗಾಗಿ ಟಿಆರ್ಪಿ ಜಿದ್ದಾಜಿದ್ದಿಯಲ್ಲಿ ಅನೇಕ ಧಾರಾವಾಹಿಗಳಿದ್ದು, ಮೊದಲಿನಂತೆ ಒಂದೇ ಧಾರಾವಾಹಿ ಹೆಚ್ಚಿನ ಟಿಆರ್ಪಿ ಗಳಿಸುತ್ತಿಲ್ಲ, ಬದಲಿಗೆ ಟಿಆರ್ಪಿ ಪಟ್ಟಿಯಲ್ಲಿ ಧಾರಾವಾಹಿಗಳ ಹೆಸರು ಬದಲಾಗುತ್ತಲೇ ಇರುತ್ತದೆ. ಇದಕ್ಕೆ ಧಾರಾವಾಹಿ ತಂಡದ ವಿಭಿನ್ನ ಪ್ರಯತ್ನ ಹಾಗೂ ಶ್ರಮವೇ ಕಾರಣ.

ಪ್ರತಿ ವಾಹಿನಿಯಲ್ಲೂ ಹೊಸತನ ತನದ ಧಾರಾವಾಹಿಗಳು ಬರುತ್ತಿದ್ದು, ಇದೀಗ ಖಾಸಗಿ ವಾಹಿನಿಯಲ್ಲಿ ಬರುವ ಧಾರಾವಾಹಿ ತಂಡ ವಿನೂತನ ಪ್ರಯತ್ನ ನಡೆಸಿದೆ. ಕನ್ನಡ ಕಿರುತೆರೆಯ ಕನ್ಯಾದಾನ ಧಾರಾವಾಹಿ ತಂಡವು, ಇತ್ತೀಚಿಗಷ್ಟೆ ಲೋಕಾರ್ಪಣೆಗೊಂಡ ದೇಶದ ಅತ್ಯುನ್ನತ ದೇವಸ್ಥಾನ ಅಯೋಧ್ಯೆಯ ಶ್ರೀರಾಮನ ಮಂದಿರದಲ್ಲಿ ಚಿತ್ರೀಕರಣ ಮಾಡುವ ಮೂಲಕ ಕಿರುತೆರೆಯಲ್ಲೇ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಕನ್ಯಾದಾನ ಧಾರಾವಾಹಿ ಇತ್ತೀಚಿಗೆ ಬಹಳ ವಿಶೇಷವಾಗಿ ಮೂಡಿ ಬರುತ್ತಿದ್ದು, ಧಾರಾವಾಹಿ ಚಿತ್ರೀಕರಣವನ್ನು ರಾಜ್ಯದ ವಿಶೇಷ ಧಾರ್ಮಿಕ ಸ್ಥಳಗಳಲ್ಲಿ ಚಿತ್ರೀಕರಿಸಿ ವಿಶೇಷವಾದ ಸಂಚಿಕೆಗಳ ಮೂಲಕ ಜನರನ್ನು ರಂಜಿಸಿತ್ತು. ಇದೀಗ ಅಯೋಧ್ಯೆಯ ಶ್ರೀರಾಮನ ಮಂದಿರದಲ್ಲಿ ಚಿತ್ರೀಕರಣ ಮಾಡುವ ಮೂಲಕ ಮತ್ತೊಂದು ಪ್ರಯೋಗ ಮಾಡಿದೆ. ಅಯೋಧ್ಯೆಯಲ್ಲಿ ಚಿತ್ರೀಕರಣಗೊಂಡ ಪ್ರೋಮೋಗಳು ಈಗಾಗಲೇ ಪ್ರಸಾರವಾಗುತ್ತಿದೆ.
ಕನ್ಯಾದಾನ ಧಾರಾವಾಹಿಯ ರಾಮನವಮಿಯ ದಿನ ಈ ವಿಶೇಷವಾದ ಸಂಚಿಕೆ ಪ್ರಸಾರವಾಗಲಿದೆ. ಅಂದು ಈ ಧಾರಾವಾಹಿಯ ತಂಡ ಅಯೋಧ್ಯೆಯ ಭವ್ಯತೆಯನ್ನು ಹಾಗೂ ಐತಿಹಾಸಿಕ ಕ್ಷಣವನ್ನು ಕಿರುತೆರೆ ಪ್ರೇಕ್ಷಕರಿಗೆ ತೋರಿಸಲಿದೆ. ಈ ವಿಶೇಷ ಸಂಚಿಕೆಯನ್ನು ವೀಕ್ಷಿಸಲು ವೀಕ್ಷಕರು ಕೂಡ ಕಾತುರರಾಗಿದ್ದಾರೆ.ಕನ್ಯಾದಾನ ಐದು ಹೆಣ್ಣು ಮಕ್ಕಳು ಹಾಗೂ ತಂದೆಯ ಬಾಂಧವ್ಯದ ಬಗ್ಗೆ ವಿಶೇಷವಾದಂತಹ ಕತೆ ಹೊಂದಿರುವ ಧಾರಾವಾಹಿಯಾಗಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications