Daali Dhananjaya: ಐಷಾರಾಮಿ ಕಾರು ಬಿಟ್ಟು ಮೆಟ್ರೋ ಹತ್ತಿದ ನಟ ಡಾಲಿ ಧನಂಜಯ್
ಬೆಂಗಳೂರು, ಜೂನ್.23: ಸಿನಿಮಾ ನಟರು ಕಾರು ಇಳಿದು ಓಡಾಡುವುದೇ ಕಷ್ಟವಾಗಿದೆ. ಸ್ವಲ್ಪ ಫೇಮಸ್ ಆದರೆ ಮುಗಿಯಿತು ಕಾರಿನ ಗ್ಲಾಸ್ ಕೀಡ ಇಳಿಸುವುದಿಲ್ಲ. ಆದರೆ, ಇಲ್ಲೊಬ್ಬ ನಟ 'ಕೋಟಿ' ಗಳಿಸಿದರೂ ಕೂಡ ಜನ ಸಾಮಾನ್ಯರಂತೆ ಮೆಟ್ರೋ ಹತ್ತಿ ಜಾಲಿ ರೈಡ್ ಮಾಡಿದ್ದಾರೆ. ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
ಹೌದು... ಅವರೇ ನಮ್ಮ ನಟ ರಾಕ್ಷಸ ಡಾಲಿ ಧನಂಜಯ. ಸದ್ಯ 'ಕೋಟಿ' ಸಿನಿಮಾದ ಯಶಸ್ಸಿನಲ್ಲಿರುವ ನಟ ಡಾಲಿ ಧನಂಜಯ ಸರಳತೆಯಿಂದಲೇ ಅಭಿಮಾನಿಗಳ ಮನಗೆದ್ದವರು. ತಮ್ಮ ಕೆಲಸಗಳು, ಮಾತುಗಳಿಂದ ಮತ್ತೆ ಮತ್ತೆ ಕನ್ನಡಿಗರ ಹೃದಯ ಗೆದ್ದ ನಟ ಶನಿವಾರ ಸಂಜೆ ತಮ್ಮ ಕಾರು ಬಿಟ್ಟು ಮೆಟ್ರೋ ರೈಲಿನಲ್ಲಿ ಜಾಲಿ ಟ್ರಿಪ್ ಮಾಡಿದ್ದಾರೆ.

ಮೆಟ್ರೋದಲ್ಲಿ ಜಾಲಿ ಟ್ರಿಪ್ ಹೋದ ಡಾಲಿ
ಐಷಾರಾಮಿ ಕಾರುಗಳಲ್ಲಿ ಓಡಾಡುವ ನಟ ಧನಂಜಯ ಕಾರು ಬಿಟ್ಟು ಮೆಟ್ರೋದಲ್ಲಿ ಓಡಾಡ್ತಿದ್ದಾರೆ. ತಮ್ಮ ಗುರುತು ಸಿಗದಂತೆ ಮಾಸ್ಕ್, ಕನ್ನಡಕ ಮತ್ತು ಟೋಪಿ ಧರಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ನಿಂತಿರುವ ಮತ್ತು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಡಾಲಿ ಧನಂಜಯ ಜೊತೆಗೆ ಯದುನಂದನ್ ಎಂ ಕೂಡ ಇದ್ದಾರೆ.
ಚಂದನವನದಲ್ಲಿ ತಮ್ಮದೆ ಆದ ಕಡಿಮೆ ಬಜೆಟ್, ಕನ್ನಡಿಗರಿಗೆ ಹತ್ತಿರವಾಗುವ, ಕನ್ನಡತನವನ್ನು ಮೆರೆಯುವ ಸಿನಿಮಾಗಳ ಮೂಲಕ ಅಪ್ಪಟ ಕನ್ನಡದ ಹುಡುಗ ಎನ್ನುವಂತೆ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಯಾವುದೇ ದೊಡಸ್ತಿಕೆ ಇಲ್ಲದೆ, ಸಾಮಾನ್ಯರಂತೆ ಮೆಟ್ರೋ ಹತ್ತಿರುವುದನ್ನು ನೋಡಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿಯೂ ಹಲವರಿಗೆ ಇವರ ಗುರುತು ಸಿಕ್ಕಿಲ್ಲ.

ಡಾಲಿ ಹೋಗಿದ್ದು ಎಲ್ಲಿಗೆ?
ನಟ ಡಾಲಿ ಧನಂಜಯರ್ ಅವರು ನೇರಳೆ ಮಾರ್ಗದ ಮೆಟ್ರೋ ಹತ್ತಿದ್ದಾರೆ. ಕೆಂಗೇರಿಯಿಂದ ಕುಂದಲಹಳ್ಳಿಯ ತನಕ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ ಎನ್ನಲಾಗುತ್ತಿದೆ. ಮೆಟ್ರೊ ರೈಲಿನಲ್ಲಿ ಕುಳಿತಿದ್ದ ವೇಳೆ ಬಾಕ್ಸ್ ಹಿಡಿದುಕೊಂಡಿದ್ದಾರೆ. ಮೆಟ್ರೋದಲ್ಲಿ ಫೋಟೋ ತೆಗೆದುಕೊಂಡಿರುವ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು, ಕೆಂಗೇರಿಯಿಂದ ಕುಂದಲಹಳ್ಳಿಯವರೆಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ.
ಧನಂಜಯ್ ಅಭಿನಯದ ಕೋಟಿ ಸಿನಿಮಾ ಜೂನ್ 14ರಂದು ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಪರಮ್ (ಪರಮೇಶ್ವರ ಗುಂಡ್ಕಲ್) ನಿರ್ದೇಶನದ ಈ ಸಿನೆಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಮೋಕ್ಷ, ರಮೇಶ್ ಇಂದಿರಾ, ತಾರಾ, ರಂಗಾಯಣ ರಘು ಸೇರಿ ಹಲವು ಕಲಾವಿದರಿದ್ದಾರೆ.
'ಕೋಟಿ' ಯಶಸ್ಸಿನಲ್ಲಿರುವ ಧನಂಜಯ ಐತಿಹಾಸಿಕ ಪಾತ್ರದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. 'ಅಲ್ಲಮ' ಬಳಿಕ ಟಿಎಸ್ ನಾಗಾಭರಣ ಮತ್ತು ಡಾಲಿ ಧನಂಜಯ ಜೋಡಿಯ ಮತ್ತೊಂದು ಐತಿಹಾಸಿಕ ಸಿನಿಮಾಗೆ ರೆಡಿಯಾಗಿದೆ. 'ನಾಡಪ್ರಭು ಕೆಂಪೇಗೌಡ' ಎನ್ನುವ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications